AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology: ಯಾವುದೇ ತಿಂಗಳಿನ 9, 18 ಹಾಗೂ 27ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

ಯಾವುದೇ ತಿಂಗಳಿನ 9, 18, ಅಥವಾ 27ನೇ ತಾರೀಕಿನಂದು ಹುಟ್ಟಿದವರ ಜನ್ಮಸಂಖ್ಯೆ 9 ಆಗುತ್ತದೆ. ಇವರ ಅಧಿಪತಿ ಕುಜ ಆಗುತ್ತದೆ. ಈ 9ರ ಸಂಖ್ಯೆಯ ಜನರ ಸ್ವಭಾವ, ಗುಣ, ಮಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದ.

Numerology: ಯಾವುದೇ ತಿಂಗಳಿನ 9, 18 ಹಾಗೂ 27ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?
ಸಾಂದರ್ಭಿಕ ಚಿತ್ರ
TV9 Web
| Updated By: Skanda|

Updated on: Jun 26, 2021 | 6:50 AM

Share

ಯಾವುದೇ ತಿಂಗಳಿನ 9, 18 ಹಾಗೂ 27ನೇ ತಾರೀಕಿನಂದು ಹುಟ್ಟಿದ್ದಲ್ಲಿ ಅಂಥವರ ಜನ್ಮಸಂಖ್ಯೆ 9 ಆಗುತ್ತದೆ. ಇವರನ್ನು ಆಳುವಂಥ ಗ್ರಹ ಕುಜ. ಈ ಪೈಕಿ 9ನೇ ತಾರೀಕಿನಂದು ಹುಟ್ಟಿದವರ ಮೇಲೆ ಕುಜ ಗ್ರಹದ ಪ್ರಭಾವ ಮಾತ್ರ ಇರುತ್ತದೆ. ಆದರೆ 18ನೇ ತಾರೀಕಿನಂದು ಹುಟ್ಟಿದವರ ಮೇಲೆ ರವಿ, ಶನಿ ಹಾಗೂ ಕುಜ ಮತ್ತು 27ನೇ ತಾರೀಕಿನಂದು ಹುಟ್ಟಿದವರ ಮೇಲೆ ಚಂದ್ರ, ಕೇತು ಹಾಗೂ ಕುಜ ಗ್ರಹದ ಪ್ರಭಾವ ಇರುತ್ತದೆ. ಈ ಸಂಖ್ಯೆಯನ್ನು ಪರಿಪೂರ್ಣತೆಯ ಸಂಕೇತ ಎಂದು ಕರೆಯಲಾಗುತ್ತದೆ. ಆದರೆ ಇದು ಅಂತಿಮ ಅಲ್ಲ. ಈ ಸಂಖ್ಯೆಯವರು ಒಂದು ಕೆಲಸ ಮುಗಿಯುತ್ತಿದ್ದಂತೆ ಮತ್ತೊಂದಕ್ಕೆ ಸಿದ್ಧತೆ ಮಾಡತೊಡಗುತ್ತಾರೆ. ಆ ಕೆಲಸವೇ ಇವರ ಪಾಲಿನ ಬಿಡುವು. ಒಂದು ವೇಳೆ ಬಿಡುವು ಸಿಕ್ಕರೆ ಅದು ಶಿಕ್ಷೆಯಂತೆ ಕಾಣುತ್ತದೆ. ಧಾರ್ಮಿಕ ಸಂಗತಿಗಳಲ್ಲೂ ಆಸಕ್ತಿ ಇರುವ ಇವರು ವಿವಿಧ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಲೇ ಇರುತ್ತಾರೆ. ಹಾಗೆ ತಮಗೆ ಸಿಕ್ಕ ಉತ್ತರವನ್ನು ಇಡೀ ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಾರೆ.

ಈ ಸಂಖ್ಯೆಯಲ್ಲಿ ಹುಟ್ಟಿದವರ ಹೃದಯದಲ್ಲಿ ಮಾನವೀಯತೆ ಇರುತ್ತದೆ. ಇತರರ ಬಗ್ಗೆ ಅನುಕಂಪ, ಔದಾರ್ಯ ಮತ್ತು ತಮ್ಮೆಲ್ಲ ಶ್ರಮವನ್ನೂ ಹಾಕಿ ಒಳ್ಳೆಯದನ್ನು ಮಾಡಬೇಕು ಎಂಬ ಉದ್ದೇಶ ಸಹ ಇರುತ್ತದೆ. ಬಹಳ ಬುದ್ಧಿವಂತ, ಬಲಶಾಲಿ ಹೀಗೆ ಎರಡೂ ಬಗೆಯ ಕಾಂಬಿನೇಷನ್​ನಲ್ಲಿ ಸಿಗುವಂಥ ಸಂಖ್ಯೆ ಇದು. ಹಾಗಂತ ಈ ಗುಣಗಳು ಇವರಿಗೆ ಹಾಗೇ ಸುಮ್ಮನೆ ಬರುವುದಿಲ್ಲ. ಇವರು ರೂಢಿಸಿಕೊಳ್ಳುತ್ತಾರೆ. ಅದೆಂಥದ್ದೇ ಸಂಕಷ್ಟವೇ ಆದರೂ ತಾವೇ ಎದುರಿಸುತ್ತಾರೆ. ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಜಾಯಮಾನ ಇವರದಲ್ಲ.

ಇವರ ಜೀವನ ಅನುಭವದ ಮೂಲಕ ಜ್ಞಾನದ ಮೌಲ್ಯವನ್ನು ತುಂಬ ಚೆನ್ನಾಗಿ ಅರಿತಿರುತ್ತಾರೆ. ಇತರರಿಗೆ ಉತ್ತಮ ಸ್ಥಾನಕ್ಕೆ ಏರಲು ತಮ್ಮಿಂದಾದ ಸಹಾಯವನ್ನೂ ಮಾಡುತ್ತಾರೆ. ಇತರರಿಗೆ ಕೆಲಸ ಹೇಳುವ ಬದಲಿಗೆ ಅದನ್ನು ಮೊದಲು ತಾವೇ ಮಾಡಲು ಶುರು ಮಾಡುತ್ತಾರೆ. ಕಷ್ಟದ ಸನ್ನಿವೇಶವನ್ನು ಹೇಗೆ ಎದುರಿಸುವುದು ಎಂಬುದನ್ನು ಇವರನ್ನು ನೋಡಿ ಕಲಿಯಬೇಕು ಎಂದಿರುತ್ತದೆ ಇವರ ನಡೆ- ನುಡಿ. ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ. ಯಾರೋ ಒಬ್ಬರ ಪರವಾಗಿ ವಾಲುವ ಜಾಯಮಾನ ಇವರದಲ್ಲ. ಪ್ರತಿಯೊಬ್ಬರನ್ನೂ ಗೌರವಯುತವಾಗಿ ಕಾಣುವ ಇವರು, ವ್ಯಕ್ತಿಗತವಾದ ಸ್ನೇಹವನ್ನೂ ಕಾಪಾಡಿಕೊಳ್ಳುತ್ತಾರೆ. ಯಾರಿಗಾದರೂ ಸಹಾಯದ ಅಗತ್ಯ ಇದ್ದಲ್ಲಿ ಮೊದಲಿಗೆ ನೆನಪಾಗುವ ಹೆಸರು ಇವರದು ಎಂಬಂತೆ ಬದುಕುತ್ತಾರೆ. ಸಮಯಕ್ಕೆ ಸರಿಯಾದ ಸಲಹೆ, ಕಷ್ಟದ ಸಮಯದಲ್ಲಿ ನೆರವು ನೀಡುವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಆದರೆ, ಇವರನ್ನು ಇತರರು ಮೇಲಿಂದ ಮೇಲೆ ಘಾಸಿಗೆ ಒಳಪಡಿದುತ್ತಾರೆ. ಅವಮಾನಕ್ಕೆ ಗುರಿ ಮಾಡುತ್ತಾರೆ. ಆ ಕಾರಣಕ್ಕೆ ಕೆಲವು ಸಲ ಏಕಾಂಗಿಯಾಗಿ ಇರುವುದಕ್ಕೆ ಇಷ್ಟಪಡುತ್ತಾರೆ. ತಮ್ಮ ಬಗ್ಗೆಯೇ ಕಾಳಜಿ ತೆಗೆದುಕೊಳ್ಳದೆ ಕೆಲವು ತ್ಯಾಗ ಮಾಡುತ್ತಾರೆ. ಆ ಕಾರಣಕ್ಕೆ ತಮ್ಮ ಜೀವನದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಬಹಳ ಶ್ರಮಿಸಬೇಕಾಗುತ್ತದೆ. ಇವರ ಜೀವನದಲ್ಲಿ ಸುಖವಾಗಿ ಕಳೆಯುವುದಕ್ಕಿಂತ ಹೆಚ್ಚಾಗಿ ಸವಾಲು, ನೋವುಗಳು ಹೆಚ್ಚಾಗಿರುತ್ತದೆ. ಸಂಬಂಧಗಳನ್ನು ಸರಿತೂಗಿಸಲು ಶ್ರಮ ಹಾಕುತ್ತಾರೆ. ಪದೇಪದೇ ಬರುವ ಕಷ್ಟಗಳಿಗೆ ಇವರು ಒಗ್ಗಿಹೋಗಿ, ಸ್ವಲ್ಪ ಮಟ್ಟಿಗಿನ ನಕಾರಾತ್ಮಕ ಚಿಂತನೆಯಾದರೂ ಇದ್ದೇ ಇರುತ್ತದೆ.

ಇದನ್ನೂ ಓದಿ: Numerology: ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಹುಟ್ಟಿದವರು ಬಹಳ ವಿಶೇಷ ಏಕೆ ಗೊತ್ತಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?

(People born on any month 9th, 18th or 27th are ruled by number 9, planet Mars. Here is the nature and characteristics of number 9 people according to numerology)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ