ರಾಹುವಿನ ಸ್ಥಾನ ಬದಲಾವಣೆ ಯಾವ ರಾಶಿಗೆ ಅಶುಭ? ಪರಿಹಾರವೇನು?

| Updated By: Digi Tech Desk

Updated on: Jul 11, 2024 | 10:15 AM

ಸಿಂಹಿಕೆಯ ಗರ್ಭದಿಂದ ಜನಿಸಿದ ರಾಕ್ಷಸನೇ ರಾಹು ಕೇತುವಾಗಿ ಗ್ರಹಗಳ ಸ್ಥಾನವನ್ನು ಅಲಂಕರಿಸಿದ್ದಾರೆ.‌ ಇವರು ಅಶುಭಗ್ರಹರೆಂದೇ ಪ್ರಸಿದ್ಧರಾಗಿದ್ದು, ಪಾಪಕರ್ಮಗಳನ್ನು ಸೂಚಿಸುವ ಗ್ರಹಗಳಾಗಿವೆ. ಚಂದ್ರ ಮತ್ತು ರವಿಯರಿಗೆ ಸದಾಕಾಲ ತೊಂದರೆ ಕೊಡವವರು ಇವರೇ. ಈ ಎರಡೂ ಗ್ರಹರಿಂದ ಮಾತ್ರ ಸೂರ್ಯ ಚಂದ್ರರಿಗೆ ಗ್ರಹಣವಾಗುತ್ತದೆ.

ರಾಹುವಿನ ಸ್ಥಾನ ಬದಲಾವಣೆ ಯಾವ ರಾಶಿಗೆ ಅಶುಭ? ಪರಿಹಾರವೇನು?
ರಾಹುವಿನ ಸ್ಥಾನ ಬದಲಾವಣೆ
Follow us on

ಸದ್ಯ ಮೀನ ರಾಶಿ ಇರುವ ರಾಹುವುದು ಅಪ್ರದಕ್ಷಿಣ ಕ್ರಮದಲ್ಲಿ ಸುತ್ತುವನು. ಹಾಗಾಗಿ ರೇವತೀ ನಕ್ಷತ್ರದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ವಾಸಮಾಡಿ ಅನಂತರ ಉತ್ತರಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿಯಾಗಿದೆ. ಈ ನಕ್ಷತ್ರಗಳ ಅಧಿಪತಿ ಶನಿ. ಶನಿ ರಾಹು ಇಬ್ಬರೂ ನೋಡಲು ಬೇರೆಬೇರೆಯಾದರೂ ಸ್ವಭಾವದಲ್ಲಿ ಹೋಲಿಕೆ ಹೆಚ್ಚು. ಹಾಗಾಗಿ ಶನಿಗೆ ಹೇಳಿದ ಫಲಗಳು ರಾಹುವಿಗೂ ಬರುತ್ತದೆ. ಇನ್ನು ಪರಿವರ್ತನೆಯಿಂದ ಅಶುಭಫಲವನ್ನು ರಾಹುವು ಯಾವ ರಾಶಿಯವರಿಗೆ ಕೊಡುತ್ತಾನೆ ಎನ್ನುವುದನ್ನು ನೋಡಬೇಕಿದೆ.

ಮೇಷ ರಾಶಿ :ಈ ರಾಶಿಯಲ್ಲಿ ಜನಿಸಿದ ಎಲ್ಲರಿಗೂ ಅಶುಭವಲ್ಲ. ಕೃತ್ತಿಕಾ ನಕ್ಷತ್ರದವರಿಗೆ ಮಾತ್ರ ರಾಹುವಿನ ಕೆಟ್ಟ ದೃಷ್ಟಿ ಬೀಳಲಿದೆ. ಕುಟುಂಬದಲ್ಲಿ ಮನಸ್ತಾಪಗಳು ಸಣ್ಣ ವಿಚಾರಕ್ಕೂ ಬರುತ್ತವೆ. ತಂದೆ ಹಾಗೂ ಮಕ್ಕಳಿಗೆ ಹೊಂದಾಣಿಕೆ ಕಷ್ಟ.

ವೃಷಭ ರಾಶಿ :ಈ ರಾಶಿಯಲ್ಲಿ ಜನಿಸಿದವರಿಗೆ ರಾಹುವಿನ ಅಶುಭ ದೃಷ್ಟಿ ಇರಲಿದೆ. ಮನಸ್ಸು ಚಂಚಲವಾಗಿ ಯಾವ ಕಾರ್ಯಕ್ಕೂ ಸ್ಥಿರವಾಗದು. ಒಂದನ್ನು ಮಾಡಲು ಹೋದರೆ, ಮತ್ತೊಂದು ಚೆನ್ನಾಗಿ ಕಾಣಿಸುವುದು. ಹೀಗೆ ಪ್ರತಿಯೊಂದು ಕಾರ್ಯದಲ್ಲಿಯೂ ಪೂರ್ಣವಾಗಿ ತೊಡಗಲು ಆಗದು.

ಮಿಥುನ ರಾಶಿ :ಮೃಗಶಿರ ರಾಶಿಯಲ್ಲಿ ಜನಿಸಿದವರಿಗೆ ಅಶುಭಯೋಗ. ಕೈ ಹಾಕಿದ ಕಾರ್ಯದಿಂದ ಕೈ ಸುಟ್ಟುಕೊಳ್ಳುವಿರಿ. ಯಂತ್ರಜ್ಞರು ಮಹಳ ಸಂಕಟಪಡಬೇಕಾದ ಸ್ಥಿತಿ ಬದಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭಕ್ಕೆ ತೃಪ್ತಿಪಡಬೇಕಾಗುವುದು.

ಸಿಂಹ ರಾಶಿ :ಈ ರಾಶಿಯವರಿಗೆ ತಂದೆಯಿಂದ ಯಾವುದೇ ಸಹಕಾರ ಸಿಗುವುದು ಅಸಾಧ್ಯ. ಉತ್ತರಾ ನಕ್ಷತ್ರದಲ್ಲಿ ಜನಿಸಿದವರು ತಂದೆಯ ಜೊತೆ ನಿರಂತರ ವೈಮನಸ್ಸಿಂದ ಇರುಬೇಕಾಗುತ್ತದೆ. ಸರ್ಕಾರ ಕಾರ್ಯದಲ್ಲಿ ಹಿನ್ನಡೆಯಾಗಲಿದೆ.

ಕನ್ಯಾ ರಾಶಿ :ಸಂಗಾತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ಅನುಮಾನದ ಸ್ವಭಾವ ಹೆಚ್ಚಾಗುವುದು. ನಂಬಿಕೆಯನ್ನು ಗಳಿಸಲು, ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲೂ ಕಷ್ಟವಾಗುವುದು.

ತುಲಾ ರಾಶಿ :ಸ್ವಂತ ಉದ್ಯೋವನ್ನು ಇಟ್ಟವರಿಗೆ ಯಂತ್ರಕ್ಕೆ ಸಂಬಂಧಿಸಿದ ಕಾರ್ಯವನ್ನು ಮಾಡುವವರು ಎಚ್ಚರಿಕೆಯಿಂದ ಇರಬೇಕು. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಔಚಿತ್ಯಕ್ಕೆ ಭಂಗ ಬರುವುದು.

ಧನು ರಾಶಿ :ಈ ರಾಶಿಯವರಿಗೆ ತೊಂದರೆಗಳಿದ್ದರೂ ಯಾರದೋ ಮೂಲಕ ಅದರ ನಿವಾರಣೆಯಾಗುತ್ತದೆ. ಕಷ್ಟ ಪಕ್ಕಾ ಚಿಂತೆಗೆಡಬಾರದು.

ಮಕರ ರಾಶಿ : ಈ ರಾಶಿಯವರಿಗೆ ಬರಬೇಕಾದ ಹಣವು ಸಕಾಲಕ್ಕೆ ಸಿಗದೇ ಕಷ್ಟವಾಗುವುದು. ಇದರಿಂದ ಮಾನಸಿಕ ಒತ್ತಡ ಬೇಸರ, ಕೆಲಸ ಆಗಿಲ್ಲ ಎಂಬ ಸಿಟ್ಟು ನಿಮ್ಮನ್ನು ಬಾಧಿಸುವುದು. ನಿಮ್ಮ ಶ್ರಮಕ್ಕೆ ಪೂರ್ಣಫಲ ಸಿಗದು. ದಾರಿಯನ್ನು ಬದಲಿಸುವ ತೀರ್ಮಾನಕ್ಕೆ ಬರುವಿರಿ.

ಕುಂಭ ರಾಶಿ : ಇದು ಶನಿಯ ಮೂಲತ್ರಿಕೋಣವು ಆದುದರಿಂದ ರಾಹುವಿನ ಬಾಧದೆ ತಟ್ಟದು. ಆದರೆ ಧನಿಷ್ಠಾ ನಕ್ಷತ್ರದವರಿಗೆ ಸಣ್ಣ ಧನನಷ್ಟದ ನೋವನ್ನೂ ಸಹಿಸುವುದು ಕಷ್ಟವಾಗುವುದು. ರಾಹುವಿನಿಂದ ಪ್ರತಿಕೂಲವನ್ನು ಅನುಭವಿಸುವವರು ನಾಗಾರಾಧನೆ, ಪಿತೃಗಳ ಆರಾಧನೆ, ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ, ಬರುವ ಸಂಕಷ್ಟವನ್ನು ದೂರ ಮಾಡಿಕೊಳ್ಳಬಹುದು.

ಲೋಹಿತ ಹೆಬ್ಬಾರ್ – 8762924271

Published On - 10:39 pm, Wed, 10 July 24