AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ವಾರ ಭವಿಷ್ಯ: ವಾರಭವಿಷ್ಯ, ಸೆಪ್ಟೆಂಬರ್ 10 ರಿಂದ 16 ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ

ವಾರಭವಿಷ್ಯ: 2023ರ ಸೆಪ್ಟೆಂಬರ್ 10 ರಿಂದ 16 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರ ಭವಿಷ್ಯ: ವಾರಭವಿಷ್ಯ, ಸೆಪ್ಟೆಂಬರ್ 10 ರಿಂದ 16 ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 10, 2023 | 1:00 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಸೆಪ್ಟೆಂಬರ್ 10 ರಿಂದ 16 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : ಈ ವಾರವು ಸಪ್ಟೆಂಬರ್ ತಿಂಗಳ ಎರಡನೇ ವಾರವಾಗಿದ್ದು ಮಿಶ್ರಫಲವು ಇರಲಿದೆ. ಕುಟುಂಬ ಸೌಖ್ಯವು ಶತ್ರುಗಳ ನಾಶವೂ ಮಕ್ಕಳಿಂದ ಕೀರ್ತಿಯೂ ಲಭಿಸುವುದು. ಏಕಾದಶದ ಶನಿಯು ನಿಮಗೆ ಕಾರ್ಯದಲ್ಲಿ ಏಳ್ಗೆಯಾಗುವಂತೆ ನೋಡಿಕೊಳ್ಳುವನು. ಈ ವಾರ ನಿಮ್ಮ ಬಗೆಗಿನ ಗೌರವ ಆದರಗಳು ಜನರಲ್ಲಿ ಹೆಚ್ಚಿರುವುದು. ಅದನ್ನು ಇನ್ನೊಬ್ಬರ ಬಳಿಯೂ ಹೇಳುವರು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಕಾರ್ತಿಕೇಯನ ಧ್ಯಾನವನ್ನು ಮಾಡಿ. ಬರುವ ಕತ್ತನ್ನು ಬೆಳಕಾಗಿಸುವನು.

ವೃಷಭ ರಾಶಿ : ಇದು ಸಪ್ಟೆಂಬರ್ ನ ಎರಡನೇ ವಾರವಾಗಿದ್ದು ಚತುರ್ಥದ ಬುಧನ ಕಾರಣ ಮನೆಯಲ್ಲಿ ಹೆಚ್ಚು ಬಂಧುಗಳು ಇರುವರು.‌ ಅತಿಥಿ ಸತ್ಕಾರವನ್ನು ಹೆಚ್ಚು ಮಾಡುವಿರಿ. ಸಹೋದರ ಜೊತೆ ಉತ್ತಮ‌ ಬಾಂಧವ್ಯವು ಉಂಟಾಗಬಹುದು. ಈ ವಾರ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಾಫಲಗಳು ದೊರೆಯುವುದು ಕಷ್ಡವಾದೀತು. ಮಾತು ಎಷ್ಟೇ ಆರ್ದ್ರವಾಗಿದ್ದರೂ ಅದನ್ನು ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ನಿಮ್ಮ ಸಂಕಟವನ್ನು ನೀವೇ ನುಂಗಿಕೊಳ್ಳಬೇಕಾದೀತು. ಗುರುದರ್ಶನದಿಂದ ನಿಮಗೆ ಸಮಾಧಾನವು ಸಿಗಲಿದೆ.

ಮಿಥುನ ರಾಶಿ : ಈ ತಿಂಗಳ ಎರಡನೇ ವಾರದಲ್ಲಿ ಗ್ರಹಗತಿಗಳು‌ ಕೊಂಚ‌ ಬದಲಾಗಿದ್ದು ನಿಮಗೆ ಶುಭಫಲವನ್ನೇ ಕೊಡುವರು. ದ್ವಿತೀಯದಲ್ಲಿ ಶುಕ್ರನಿದ್ದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವನ್ನೂ ಅನುಕೂಲವನ್ನೂ ಮಾಡಿಕೊಡುವನು. ತೃತೀಯದಲ್ಲಿ ಬುಧನಿರುವುದರಿಂದ ನಿಮ್ಮ‌ ಜ್ಞಾನದ ಪ್ರದರ್ಶನವಾಗುವುದು. ಈ ವಾರ ದೂರದ ಊರಿನಿಂದ ಬಂದ ಬಂಧುಗಳು ನಿಮ್ಮ ಜೊತೆ ವಾಗ್ವಾದವನ್ನು ಮಾಡಬಹುದು.‌ ತಂದೆಯ ಯಜಮಾನತ್ವದಲ್ಲಿ ಕುಟುಂಬವು ಬಹಳ ಚಂದವಾಗಿ ಇರುವುದು.

ಕಟಕ ರಾಶಿ : ಈ ವಾರ ಶುಭಾಶುಭಫಲಗಳೆರಡೂ ಅಲ್ಪವೇ ಇರುವುವು. ಅಷ್ಟಮದಲ್ಲಿ ಇರುವ ಶನಿಯು ಕಂಟಕಗಳನ್ನು ತಪ್ಪಿಸಿ ನಿಮ್ಮ ಆಯುಸ್ಸನ್ನು ಹೆಚ್ಚು ಮಾಡುವನು. ಆರೋಗ್ಯದ ಕಡೆ ಗಮನಬೇಕಾಗುವುದು. ಈ ವಾರ ನೀವು ಕುಟುಂಬದಲ್ಲಿ ತನ್ನ ನಿರ್ಧಾರವೇ ಅಂತಿಮವಾಗಬೇಕು ಎಂಬ ಪಟ್ಟು ಹಿಡಿಯುವಿರಿ. ಅಹಂಕಾರ ಪಡುವ ಸನ್ನಿವೇಶಗಳು ಎದುರಾಗಬಹುದು. ಕುಟುಂಬದಲ್ಲಿ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕುಲದೇವರ ಆರಾಧನೆಯಿಂದ ಆರೋಗ್ಯವು ಸುಧಾರಿಸುವುದು.

ಸಿಂಹ ರಾಶಿ : ಶುಭಾಶುಭಗಳು ಎರಡೂ ಈ ವಾರದಲ್ಲಿ ನಿಮಗೆ ಇರಲಿದೆ. ಸಪ್ತಮದಲ್ಲಿ ಶನಿಯು ಇದ್ದು ಸಂಗಾತಿಯ ಜೊತೆ ವೈಮನಸ್ಯ ಬರುವುದು. ಹಿರಿಯರ ಮೇಲೆ‌ ಅನಾದರವು ಇರುವುದು. ಮಾತಿನಲ್ಲಿ ಸಿಟ್ಟಿರುವುದು. ಈ ವಾರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ಮಾರ್ಗವು ಸಿಗಲಿದೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವಿರಿ. ಧಾರ್ಮಿಕ ಕಾರ್ಯಗಳು ನಿಮ್ಮ ನೇತೃತ್ವದಲ್ಲಿ ನಡೆಯುವುದು. ಮಹಾಲಕ್ಷ್ಮಿಯ ಕೃಪೆಯನ್ನು ಪಡೆಯಿರಿ.

ಕನ್ಯಾ ರಾಶಿ : ಸಪ್ಟೆಂಬರ್ ತಿಂಗಳ ಎರಡನೇ ವಾರವು ಶುಭಶುಭಾಫಲಗಳು ಇರಲಿದ್ದು ಸ್ವಲ್ಪ ಸಂತೋಷವಾಗುವುದು. ಗುರು ಹಾಗೂ ರಾಹುಗಳು ಅಷ್ಟಮದಲ್ಲಿ ಇರುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ, ಅಪಮಾನವನ್ನು ಅನುಭವಿಸಬೇಕಾಗುವುದು. ಈ ವಾರ ಅಂತರಂಗ ಮತ್ತು ಬಹಿರಂಗಗಳನ್ನು ಸಮತೋಲನದಿಂದ ಇರಿಸಿಕೊಳ್ಳಬೇಕಾದೀತು. ಆರ್ಥಿಕ ವಿಚಾರದಲ್ಲಿ ಲೆಕ್ಕ ಪರಿಶೋಧಕರ ಮಾರ್ಗದರ್ಶನ ಪಡೆಯಿರಿ. ವಿಪತ್ತು ಬರುವ ಸೂಚನೆ ಇರಲಿದ್ದು ಬೇಕಾದ ತಯಾರಿ ಮಾಡಿಕೊಳ್ಳಿ. ದೋಷಪರಿಹಾರಾರ್ಥವಾಗಿ ನೀವು ಗೋಗ್ರಾಸವನ್ನು ನೀಡಿ.

ತುಲಾ ರಾಶಿ : ಈ ವಾರವು ಮಿಶ್ರಫಲವೇ ಇರುವುದು. ಸೂರ್ಯ ಹಾಗೂ ಕುಜರು ದ್ವಾದಶಸ್ಥಾನದಲ್ಲಿ ಇದ್ದು ನಿಮ್ಮ ಸಂಪತ್ತನ್ನು ವ್ಯಯಗೊಳಿಸುವರು. ಶನಿಯು ಪಂಚಮದಲ್ಲಿ ಇರುವ ಕಾರಣ ನಿಮ್ಮ ಪ್ರತಿಭೆಗಳು ಸಕಾಲಕ್ಕೆ ಪ್ರದರ್ಶನವಾಗದೇ ಹೋಗಬಹುದು. ಈ ವಾರ ಕೆಲವು ವಿಚಾರಗಳ ಬಗ್ಗೆ ಅತಿಯಾದ ಆಲೋಚನೆಯನ್ನು ಮಾಡುವುದು ಬೇಡ. ಇದರಿಂದ ಕಾಲಾನಂತರ ನೋವೇ ಸಿಗಬಹುದು. ಕಳೆದ ವಿಚಾರಗಳನ್ನು ಮತ್ತೆ ನೆನಪಿಸಿಕೊಳ್ಳುವುದು ಬೇಡ.‌ ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.

ವೃಶ್ಚಿಕ ರಾಶಿ : ಈ ಮಾಸದ ಎರಡನೇ ವಾರವು ಹೆಚ್ಚು ಶುಭಫಲದಿಂದ ಕೂಡಿದ್ದು ನಿಮಗೆ ಉತ್ಸಾಹವು ಹೆಚ್ಚಾಗುವುದು. ನವಮದಲ್ಲಿ ಶುಕ್ರನಿದ್ದು ನಿಮ್ಮ ಸಂಪತ್ತು ವರ್ಧಿಸುವಂತೆ ಮಾಡುವನು. ಬರಬೇಕಾದ ಹಣವೂ ನಿಮಗೆ ಯಾವುದೇ ಚಿಂತೆ ಇಲ್ಲದೇ ಬರುವುದು. ಈ ವಾರ ಸರಿಯಾದ ಕ್ರಮದಲ್ಲಿ ಕಾರ್ಯವನ್ನು ಮತ್ತು ಅದರ ಪ್ರಸ್ತುತಿಯನ್ನು ಮಾಡಿದರೆ ನಿಮ್ಮ ಬೆಳವಣಿಗೆಯು ಸಾಧ್ಯವಾಗಬಹುದು. ಸರ್ಕಾರದ‌ ಕಡೆಯಿಂದ‌ ಆಗಬೇಕಾದ ಕಾರ್ಯಗಳು ಬೇಗನೆ ಆಗುವುದು. ಕುಟುಂಬದಲ್ಲಿ ಏನಾದರೂ ಮನಸ್ತಾಪಗಳು ಬರುತ್ತ ಇರಬಹುದು. ಶನೈಶ್ಚರಿಗೆ ಎಳ್ಳಿನ‌ ದೀಪವನ್ನು ಬೆಳಗಿ.

ಧನು ರಾಶಿ : ಸಪ್ಟೆಂಬರ್ ಮಾಸದ ಎರಡನೇ ವಾರವು ನಿಮಗೆ ಹೆಚ್ಚು ಶುಭಪ್ರದವಾಗಿದೆ. ಅಷ್ಟಮದಲ್ಲಿ ಇರುವ ಶುಕ್ರನು ಪತ್ನಿಯ ಆರೋಗ್ಯವನ್ನು ಕೆಡಬಹುದು. ಉಳಿದಂತೆ ಎಲ್ಲರ ಗ್ರಹರೂ ಉತ್ತಮಸ್ಥಾನದಲ್ಲಿದ್ದು ಮಂಗಲವನ್ನು ಮಾಡುವರು. ಈ ವಾರ ಹಳೆಯ ಅನಗತ್ಯ ದಾಖಲೆಗಳನ್ನು ತೆಗೆದು ಹಾಕಿ ಅಗತ್ಯವಾದುದನ್ನು‌ ಮಾತ್ರ ಇಟ್ಟುಕೊಳ್ಳುವಿರಿ. ಕಬ್ಬಿಣದ‌ ಮಾರಾಟವನ್ನು ಮಾಡುವವರು ಆದಷ್ಟು ಜಾಗರೂಕರಾಗಿರಬೇಕಾದೀತು. ವಾಹನ ಸಂಚಾರವನ್ನು ಕಡಿಮೆ ಮಾಡಿಕೊಳ್ಳುವುದು ಉಚಿತ. ಕುಲದೇವರ ಆರಾಧನೆಯನ್ನು ಮಾಡಬೇಕಾಗುವುದು.

ಮಕರ ರಾಶಿ : ಈ ವಾರವು ಹೆಚ್ಚು ಶುಭವಿರುವ ವಾರವಾಗಲಿದೆ. ಸಪ್ತಮದಲ್ಲಿ ಶುಕ್ರನು ನಿಮಗೆ ವಿವಾಹಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡುವನು. ಅಷ್ಟಮದಲ್ಲಿರುವ ಬುಧನಿಂದ ಅರೋಗ್ಯದಲ್ಲಿ ವ್ಯತ್ಯಾಸವಾಗುವುದು. ಈ ವಾರ ಅನವಶ್ಯಕ ವಿಷಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗವನ್ನು ಕೊಡಿಸುವುದಾಗಿ ಹಣವನ್ನು ಕೇಳಬಹುದು. ತಂತ್ರಜ್ಞರಿಗೆ ಈ ವಾರವು ಅನುಕೂಲಕರವಾಗಿದೆ. ಮಹಾವಿಷ್ಣುವಿನ ಅವತಾರವಾದ ಧನ್ವಂತರಿಯನ್ನು ಉಪಾಸನೆ ಮಾಡಿ. ಆರೋಗ್ಯದ ಸಮಸ್ಯೆಯು ದೂರಾಗಬಹುದು.

ಕುಂಭ ರಾಶಿ : ಇದು ಎರಡನೇ ವಾರವಾಗಿದ್ದು ಗ್ರಹಗಳು ಶುಭಾಶುಭಗಳನ್ನು ಮಿಶ್ರಣ ಮಾಡಿ ಕೊಡುವರು. ನಿಮ್ಮ ರಾಶಿಯಲ್ಲಿ ಶನಿಯು ಇರುವುದರಿಂದ ದೇಹಾಲಸ್ಯವು ಅಧಿಕವಾಗಿ ಇರುವುದು. ಈ ವಾರ ವಿರಸದ ಸನ್ನಿವೇಶಗಳು ಅಧಿಕವಾಗಿ ಬರಬಹುದು. ಎಲ್ಲರ ಜೊತೆ ಸ್ನೇಹದಿಂದ ಮಾತನಾಡಿ. ನಿಮ್ಮ ಗುಣಗಳಿಂದ ನೀವು ದೊಡ್ಡವರಾಗುವಿರಿ. ಈ ವಾರವು ನೀವು‌ ಅಂದುಕೊಂಡಷ್ಟು ಆರ್ಥಿಕ‌ಸುಧಾರಣೆ ಸಾಧ್ಯವಾಗದಿದ್ದರೂ ತಕ್ಕಮಟ್ಟಿಗೆ ನೆಮ್ಮದಿಯು ಸಿಗುವುದು. ಆದಿತ್ಯಹೃದಯವನ್ನು ಪಠಿಸಿರಿ.

ಮೀನ ರಾಶಿ : ಸಪ್ಟೆಂಬರ್ ತಿಂಗಳ ಎರಡನೇ ವಾರವು ಇದಾಗಿದ್ದು ಮಿಶ್ರಫಲವು ನಿಮಗೆ ಇರಲಿದೆ. ಸೂರ್ಯನು ಸಪ್ತಮದಲ್ಲಿ ಇರುವನು. ಕುಜನೂ ಇರುವುದರಿಂದ ದಾಂಪತ್ಯದಲ್ಲಿ ವೈಮನಸ್ಯವು ಬರಬಹುದು. ಈ ವಾರ ನಿಮ್ಮ ಕುರಿತು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಬೇಕಾಗುವುದು. ಇದರಿಂದ ನಿಮಗೆ ಅನುಕೂಲವಿರಲಿದೆ. ಈ ವಾರ ಮನೆಯ ಸದಸ್ಯರು ನಿಮಗೆ ಬೇಕಾದ ಸಹಕಾರವನ್ನು ನೀಡುವರು. ಮಹಾವಿಷ್ಣುವಿನ ಉಪಾಸನೆಯಿಂದ ಆರೋಗ್ಯವು ಸುಧಾರಿಸುವುದು.

-ಲೋಹಿತಶರ್ಮಾ 8762924271 (what’s app only)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ