AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Simha Yearly Horoscope 2024: ಸಿಂಹ ರಾಶಿ ವರ್ಷ ಭವಿಷ್ಯ; ಸಂತೋಷ, ನೆಮ್ಮದಿ, ಪ್ರೀತಿ ಕುರಿತು ವಾರ್ಷಿಕ ಭವಿಷ್ಯ ಇಲ್ಲಿದೆ

ಸಿಂಹ ರಾಶಿ ವರ್ಷ ಭವಿಷ್ಯ 2024: ಈ ರಾಶಿಯವರಿಗೆ ಮಧ್ಯದ ಸ್ಥಿತಿ ಇರಲಿದೆ. ಗುರುವು ವರ್ಷದ ಮಧ್ಯದಲ್ಲಿ ದಶಮಕ್ಕೆ ಇರಲಿದ್ದು ಇಷ್ಟು ದಿನಗಳ ಸಂತೋಷ, ನೆಮ್ಮದಿ, ಪ್ರೀತಿ ಎಲ್ಲವೂ ಕಡಿಮೆ ಆಗುವುದು. ಅಷ್ಟಮದಲ್ಲಿ ರಾಹುವಿರುವ ಕಾರಣ ಆರೋಗ್ಯದ ಬಗ್ಗೆ ಗಮನ, ಅನಾರೋಗ್ಯದಲ್ಲು ಕಾಳಜಿಯ ಅವಶ್ಯಕತೆ ಇರಲಿದೆ.

Simha Yearly Horoscope 2024: ಸಿಂಹ ರಾಶಿ ವರ್ಷ ಭವಿಷ್ಯ; ಸಂತೋಷ, ನೆಮ್ಮದಿ, ಪ್ರೀತಿ ಕುರಿತು ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 15, 2023 | 6:23 PM

Share

ಸಿಂಹವು ರಾಶಿ ಚಕ್ರದ ಐದನೇ ರಾಶಿ. ಈ ರಾಶಿಯ ಅಧಿಪತಿ ಸೂರ್ಯ. ವರ್ಷಾರಂಭದಲ್ಲಿ ಪಂಚಮದಲ್ಲಿ ಕುಜನ ಜೊತೆ ಇರುವನು. ಇವನ ಉಚ್ಚ ರಾಶಿ ಮೇಷವಾಗಿದ್ದು ನೀಚ ಸ್ಥಾನ ತುಲಾ ಆಗಿದೆ. ಉಚ್ಚಸ್ಥಾನಕ್ಕೆ ಬಂದಾಗ ಅನೇಕ ಲಾಭಗಳನ್ನು ಉಂಟುಮಾಡುವನು.

2024ರ ಸಿಂಹ ರಾಶಿಯ ಭವಿಷ್ಯ

ಈ ರಾಶಿಯವರಿಗೆ ಮಧ್ಯದ ಸ್ಥಿತಿ ಇರಲಿದೆ. ಗುರುವು ವರ್ಷದ ಮಧ್ಯದಲ್ಲಿ ದಶಮಕ್ಕೆ ಇರಲಿದ್ದು ಇಷ್ಟು ದಿನಗಳ ಸಂತೋಷ, ನೆಮ್ಮದಿ, ಪ್ರೀತಿ ಎಲ್ಲವೂ ಕಡಿಮೆ ಆಗುವುದು. ಅಷ್ಟಮದಲ್ಲಿ ರಾಹುವಿರುವ ಕಾರಣ ಆರೋಗ್ಯದ ಬಗ್ಗೆ ಗಮನ, ಅನಾರೋಗ್ಯದಲ್ಲು ಕಾಳಜಿಯ ಅವಶ್ಯಕತೆ ಇರಲಿದೆ.

ಧನಾಗಮನ :

ದ್ವಿತೀಯದಲ್ಲಿ ಕೇತುವಿರುವ ಕಾರಣ ಸಂಪತ್ತಲ್ಲಿ ನಿಮಗೆ ಲಭಿಸುವುದು ಕಷ್ಟವಾದೀತು. ಅಧಿಕ ಸಂಪತ್ತಿನ ನಿರೀಕ್ಷೆಯನ್ನು ನೀವು ಮಾಡುವುದು ಬೇಡ. ದ್ವಿತೀಯಾಧಿಪತಿಯಾದ ಬುಧನು ದಶಮಸ್ಥಾನಕ್ಕೆ ಬಂದಾಗ ಧನವೃದ್ಧಿಯು ಇರುವುದು.

ಪ್ರೀತಿ ಮತ್ತು ವಿವಾಹ :

ಗುರುವು ನಿಮ್ಮ ದಶಮಸ್ಥಾನದಲ್ಲಿ ಇರವುದರಿಂದ‌ ಗುರುಬಲವು ಪೂರ್ಣವಾಗಿ ಇರದು. ಪ್ರೇಮವು ಉಂಟಾಗಬಹುದು. ಅದು ತಾತ್ಕಾಲಿಕವಾಗಿ ಇರಬಹುದು. ವಿವಾಹವು ಬೇರೆ ಬೇರೆ ಕಾರಣಗಳಿಂದ ಮುಂದೆ ಹೋಗುವುದು.

ವೃತ್ತಿ :

ಚಿತ್ರಕಲೆಯಲ್ಲಿ‌ ಆಸಕ್ತಿ ಇಟ್ಟುಕೊಂಡವರು, ಕಲಾವಿದರು ಉತ್ತಮ ಸ್ಥಾನವನ್ನು ಪಡೆದುಕೊಳ್ಳುವಿರಿ. ವಿಶೇಷವಾಗಿ ಇಂಜಿನಿಯರ್ ಗಳು ಹೆಚ್ಚಿನ ಆದಾಯ, ಹೊಸ ಯೋಜನೆಯನ್ನು ಪಡೆಯುವುದು, ಹಣದ ಹರಿವು ಅಧಿಕವಾಗುವುದು. ಕೃಷಿಯಲ್ಲಿಯೂ ಶ್ರಮಕ್ಕೆ ಯೋಗ್ಯವಾದ ಫಲವನ್ನು ಪಡೆಯುವಿರಿ.

ಆರೋಗ್ಯಸ್ಥಿತಿ :

ದ್ವಿತೀಯಾಧಿಪತಿಯಾದ ಬುಧನು ನಿಮ್ಮ ಆರೋಗ್ಯವನ್ನು ಕಾಪಾಡುವನು‌. ವರ್ಷದ ಮಧ್ಯಾವಧಿಯಲ್ಲಿ ಆರೋಗ್ಯದ ಮೇಲೆ ಗಮನ ಅವಶ್ಯಕ.‌ ಯಾವುದಾದರೂ ರೋಗವು ಕಾಣಿಸಿಕೊಂಡೀತು. ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.

ಲೋಹಿತ ಹೆಬ್ಬಾರ್, ಇಡುವಾಣಿ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?