ಈ ನಕ್ಷತ್ರದವರು ಎತ್ತರದ ಸ್ಥಾನಕ್ಕೆ ಹೋಗುವ ಕಾಲ ಬಂದಿದೆ, ಅಂದುಕೊಂಡ ಕಾರ್ಯದಲ್ಲಿ ಸಫಲತೆ
ಧನುರಾಶಿಯಲ್ಲಿ ಬರುವ ಈ ನಕ್ಷತ್ರ ಈ ವರ್ಷ ಭಾರೀ ಅದೃಷ್ಟ ಕ್ಷಣಗಳನ್ನು ಕಾಣಲಿದೆ ಎಂದು ಹೇಳಲಾಗಿದೆ. ಹೊಸ ಮನೆಯ ಪ್ರವೇಶಕ್ಕೆ ಯೋಗ್ಯವಾದುದುದು. ಈ ನಕ್ಷತ್ರದವರು ವಜ್ರವನ್ನು ಮಾಲೆಯಲ್ಲಿ ಅಥವಾ ಉಂಗುರವಾಗಿಯೂ ಬಳಸಬಹುದು. ಹೀಗೆ ಅನೇಕ ಕಾರ್ಯಗಳನ್ನು ಮಾಡಲಿದ್ದಾರೆ. ಇನ್ನು ಈ ನಕ್ಷತ್ರದವರು ಮಾಡಬೇಕಾದ ಕಾರ್ಯಕ್ರಮಗಳೇನು? ಯಾವೆಲ್ಲ ಒಳ್ಳೆಯ ಕೆಲಸಗಳು ನಡೆಯಲಿದೆ ಎಂಬುದನ್ನು ಇಲ್ಲಿತಿಳಿಸಲಾಗಿದೆ.

ಇಪ್ಪತ್ತನೇ ನಕ್ಷತ್ರ ಪೂರ್ವಾಷಾಢಾ. ಇದರ ದೇವತೆ ಜಲ. ಧನೂರಾಶಿಯಲ್ಲಿರುವ ಈ ನಕ್ಷತ್ರ ಮನುಷ್ಯ ಗಣಕ್ಕೆ ಸೇರಿದ್ದು. ಆನೆಯ ದಂತ ಅಥವಾ ಮೊರದ ಆಕೃತಿಯಲ್ಲಿ ಖಗೋಳದಲ್ಲಿ ನಾಲ್ಕು ನಕ್ಷತ್ರಗಳು ಹೊಳೆಯುತ್ತವೆ. ಮಧ್ಯ ನಾಡಿಯಾಗಿರುವ ನಕ್ಷತ್ರದಲ್ಲಿ ಬು ಧ ಭ ಢ ಎನ್ನುವುದು ನಕ್ಷತ್ರಾಕ್ಷರವಾಗಿದೆ. ಇದು ಅನೇಕ ಶುಭ ಕರ್ಮಗಳಿಗೆ ಉಪಯುಕ್ತ. ವಿಶೇಷವಾಗಿ ನೀರಿಗೆ ಸಂಬಂಧಿಸಿದ ಕಾರ್ಯವನ್ನು ಮಾಡಲು ಖ್ಯಾತವಾಗಿದೆ. ಬಾವಿ ತೆಗೆಯಲು ಇದು ಪ್ರಶಸ್ತ ನಕ್ಷತ್ರ. ಹೊಸ ಮನೆಯ ಪ್ರವೇಶಕ್ಕೆ ಯೋಗ್ಯವಾದುದುದು. ಈ ನಕ್ಷತ್ರದವರು ವಜ್ರವನ್ನು ಮಾಲೆಯಲ್ಲಿ ಅಥವಾ ಉಂಗುರವಾಗಿಯೂ ಬಳಸಬಹುದು. ಈ ನಕ್ಷತ್ರದಲ್ಲಿ ಹುಣ್ಣಿಮೆಯಾದರೆ ಆಷಾಢ ಮಾಸವಾಗುತ್ತದೆ.
ಇನ್ನು ಈ ರಾಶಿಯಲ್ಲಿ ಜನಿಸಿದವರು ಅಥವಾ ಜನಿಸುವವರು ಹೇಗಲ್ಲ ಇರಬಹುದು ಎನ್ನುವುದನ್ನು ನೋಡೋಣ.
ಭಾಗ್ಯವಾನ್ :
ಪೂರ್ವಪುಣ್ಯದ ಫಲವನ್ನು ಈ ನಕ್ಷತ್ರದವರು ಅನುಭವಿಸುವರು. ಸುಖ, ನೆಮ್ಮದಿ, ಅಂದುಕೊಂಡ ಕಾರ್ಯದ ಸಫಲತೆ ಇದೆಲ್ಲ ಇರಲಿದೆ. ದೈವ ಇವರ ಕೈಬಿಡದು.
ಜಲಪಾನ :
ಇದು ನೀರಿನ ನಕ್ಷತ್ರವಾದ ಕಾರಣ ಅದನ್ನು ಹೆಚ್ಚು ಇಷ್ಟಪಡುವರು. ನೀರನ್ನು ಅಧಿಕವಾಗಿ ಪಾನ ಮಾಡುವರು. ನೀರಿನ ಬಳಕೆ ಅಧಿಕ. ನದಿ, ಸಮುದ್ರ ಸರೋವರದಲ್ಲಿ ಆಸಕ್ತಿ.
ವಿಚಾರಚಿತ್ತ :
ಯಾವುದನ್ನೂ ಹಾಗೆಯೇ ಸ್ವೀಕರಿಸುವುದಿಲ್ಲ, ನಂಬುವುದಿಲ್ಲ ಕೂಡ. ವಿವೇಕವನ್ನು ಬಳಸಿ, ಬೇಕು ಬೇಡಗಳನ್ನು ನಿರ್ಧರಿಸುವರು. ವೈಚಾರಿಕ ಮನೋಭಾವ ಇವರಲ್ಲಿ ಕಾಣಿಸುತ್ತದೆ. ಆದರೆ ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತರಾಗಿ ಕೆಲಸವನ್ನು ಮಾಡುವರು ಅಥವಾ ಮಾಡಿಸಿಕೊಳ್ಳುವರು.
ಅರ್ಥಿಕತಜ್ಞ :
ಈ ನಕ್ಷತ್ರದಲ್ಲಿ ಜನಿಸಿದವರ ವಿಶೇಷತೆ ಆರ್ಥಿಕ ವಿಚಾರದಲ್ಲಿ ಚಾಣಾಕ್ಷ ಮತಿವರು. ಲಾಭ ನಷ್ಟಗಳನ್ನು ಗ್ರಹಿಸಿ, ಎಲ್ಲ ಕಡೆಯಿಂದ ಲಾಭ ಬರುವಂತೆ ಮಾಡುವರು. ಲಾಭದ ಯೋಜನೆಯನ್ನು ಹಾಕಿಕೊಳ್ಳುವರು ಮತ್ತು ಯಶಸ್ಸು ಕಾಣುವರು.
ಜನಪ್ರಿಯ :
ಕಲೆ, ರಾಜಕೀಯ, ಉದ್ಯೋಗ, ಸಾಹಿತ್ಯ, ಉದ್ಯಮ, ಆರ್ಥಿಕ, ಸಮಾಜಸೇವೆ ಹೀಗೆ ಯಾವುದಾದರೂ ಒಂದು ವಿಭಾಗದಲ್ಲಿ ಜನಪ್ರಿಯರಾಗುವರು.
ಸುಸಂಗಾತಿ :
ಪರಸ್ಪರ ಇಷ್ಟವಾಗುವ ಹಾಗೂ ಆನಂದದಿಂದ ಇರುವ ಸಂಗಾತಿಯ ಪ್ರಾಪ್ತಿಯಾಗಲಿದೆ. ಒಳ್ಳೆಯ ದಾಂಪತ್ಯ ಜೀವನ ಇರುವುದು.
ಇದನ್ನೂ ಓದಿ: ಈ ರಾಶಿಯವರು ವ್ಯಾಪಾರವನ್ನ ವಿಸ್ತರಿಸಲು ಕುಟುಂಬದ ಸಹಾಯ ತೆಗೆದುಕೊಳ್ಳಬಹುದು
ಮಾನೀ ಮತ್ತು ಸುಖಿ :
ಈ ನಕ್ಷತ್ರದವರು ಎಲ್ಲರಿಂದ ಗೌರವಕ್ಕೆ ಅರ್ಹರಾಗುವರು, ಪರರನ್ನೂ ಗೌರವಿಸುವರು. ನಿತ್ಯವಾದ ಆನಂದದ ಜೊತೆ ಇರಲಿದ್ದಾರೆ. ದುಃಖ ಉಂಟಾಗುವುದು ಕಡಿಮೆ.
ಬೋಧನೆ :
ಬೋಧಕರಾಗಿ ಅಥವಾ ಸಲಹಾಗಾರರ ಸ್ಥಾನವನ್ನು ಪಡೆಯುವರು ಮತ್ತು ಉತ್ತಮ ಸಲಹೆಗಳನ್ನು ಕಾಲಕ್ಕೆ ಸರಿಯಾಗಿ ಕೊಡುವರು. ಇವರು ಸಾಂತ್ವನ ಕೇಂದ್ರವನ್ನು ನಡೆಸುವರು.
ಹೀಗೇ ಅನೇಕ ಅಪರೂಪದ ವಿಶೇಷ ಲಕ್ಷಣಗಳಿಂದ ಕೂಡಿದ ನಕ್ಷತ್ರ ಪೂರ್ವಾಷಾಢಾ.
– ಲೋಹಿತ ಹೆಬ್ಬಾರ್ – 8762924271
ಜ್ಯೋತಿಷ್ಯಅ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ