ಸ್ವಾತಿ ನಕ್ಷತ್ರದ ಗುಣ ಇದು, ನೀರಿನಿಂದ ಮೊಸರು ಮಾಡಲು ಈ ನಕ್ಷತ್ರದಲ್ಲಿ ಮಳೆಯಾಗಬೇಕು

ಇದು ಮಳೆ ನಕ್ಷತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದಾಗಿದೆ. ಸೂರ್ಯ ಈ ನಕ್ಷತ್ರವನ್ನು ಪ್ರವೇಶಿಸಿದಾಗ ಸುರಿದ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದರೆ ಅದೇ ಮುತ್ತಾಗುತ್ತದೆ ಎನ್ನುವುದು ಕವಿಸಮಯ. ಸ್ವಾತಿಯ ಮಳೆಯಿಂದ ವರ್ಷದ ಮೊಸರನ್ನು ಮಾಡುತ್ತಾರೆ. ಹೊಸ ಮೊಸರು ತಯಾರಾಗುವುದು ಸ್ವಾತಿ ಮಳೆಯ ನೀರಿನಿಂದ ಎಂದರೆ ಅಚ್ಚರಿಯಾದೀತು. ಎಷ್ಟೋ ಕಡೆಗಳಲ್ಲಿ ಈ ಕ್ರಮ ಇನ್ನೂ ಇದೆ.

ಸ್ವಾತಿ ನಕ್ಷತ್ರದ ಗುಣ ಇದು, ನೀರಿನಿಂದ ಮೊಸರು ಮಾಡಲು ಈ ನಕ್ಷತ್ರದಲ್ಲಿ ಮಳೆಯಾಗಬೇಕು
ಸಾಂದರ್ಭಿಕ ಚಿತ್ರ
Edited By:

Updated on: Feb 22, 2025 | 3:38 PM

ಖಗೋಳದಲ್ಲಿ ಕ್ರಾಂತಿವೃತ್ತದ ಸಮೀಪದಲ್ಲಿ ಕುಂಕುಮದ ಬಣ್ಣದಲ್ಲಿ ಒಂದು ನಕ್ಷತ್ರ ಮಿನುಗುತ್ತಿದ್ದರೆ ಅದು ಸ್ವಾತೀ. ಇದು ನಕ್ಷತ್ರ ಚಕ್ರದ ಐದನೇ ನಕ್ಷತ್ರ. ವಾಯು ಇದರ ಅಧಿದೇವತೆ. ಇದು ಮಳೆ ನಕ್ಷತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದಾಗಿದೆ. ಸೂರ್ಯ ಈ ನಕ್ಷತ್ರವನ್ನು ಪ್ರವೇಶಿಸಿದಾಗ ಸುರಿದ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದರೆ ಅದೇ ಮುತ್ತಾಗುತ್ತದೆ ಎನ್ನುವುದು ಕವಿಸಮಯ. ಸ್ವಾತಿಯ ಮಳೆಯಿಂದ ವರ್ಷದ ಮೊಸರನ್ನು ಮಾಡುತ್ತಾರೆ. ಹೊಸ ಮೊಸರು ತಯಾರಾಗುವುದು ಸ್ವಾತಿ ಮಳೆಯ ನೀರಿನಿಂದ ಎಂದರೆ ಅಚ್ಚರಿಯಾದೀತು. ಎಷ್ಟೋ ಕಡೆಗಳಲ್ಲಿ ಈ ಕ್ರಮ ಇನ್ನೂ ಇದೆ. ಅಂತಹ ಶ್ರೇಷ್ಠ ನಕ್ಷತ್ರ ಇದು. ದೇವಗಣಕ್ಕೆ ಸೇರಿದ ನಕ್ಷತ್ರವಿದು. ರೂ ರೇ ರೋ ತಾ ನಾಮಾಕ್ಷರಗಳನ್ನು ಇಟ್ಟುಕೊಂಡಿರುವ ಇದು ಅಂತ್ಯನಾಡಿ. ಸ್ತ್ರೀಲಿಂಗ ಹಾಗೂ ಸ್ಥಿರನಕ್ಷತ್ರ.

ದಾನಿ :

ಈ ನಕ್ಷತ್ರದವರಲ್ಲಿ ದಾನದ ಸ್ವಾಭಾವವಿದ್ದು, ತಮ್ಮ ಕೈಲಾಯದ ಸಹಕಾರವನ್ನು ಮಾಡುವರು. ಏನಿದೆಯೋ ಅದನ್ನು ಇನ್ನೊಬ್ಬರಿಗೆ ನೀಡುವ ಗುಣ ಇವರಲ್ಲಿ ಇರುವುದು.

ವ್ಯಾಪಾರಿ :

ಇದು ತುಲಾ ರಾಶಿಯಲ್ಲಿ ಪೂರ್ಣವಾಗಿ ಬರುವ ನಕ್ಷತ್ರವಾಗಿದ್ದು ತುಲಾರಾಶಿಗೆ ಹೇಳಿದ ಎಲ್ಲ ಸ್ವಭಾವವೂ ಇರುವುದು. ಅದರಲ್ಲಿ ವ್ಯಾಪಾರವೂ ಒಂದಾಗಿದ್ದು, ಕ್ರಯ ವಿಕ್ರಯಗಳ ಬಗ್ಗೆ ವಿಶೇಷ ಮಾಹಿತಿ, ಆಲೋಚನೆ, ಯೋಜನೆಗಳನ್ನು ಹಾಕಿಕೊಳ್ಳುವರು. ಲಾಭ ನಷ್ಟಗಳ ಬಗೆಗೂ ವಿವೇಚನೆ ಇರಲಿದೆ.

ಕರುಣೆ :

ಕಠೋರತೆ ಇವರಲ್ಲಿ ಇರದು. ತುಂಬ ಮೃದು ಹೃದಯ ಇವರದ್ದು. ಅನ್ಯರ ಸಂಕಟಕ್ಕೆ ಕರಗುವರು, ಸಹಾಯವನ್ನೂ ನೀಡುವರು.

ಪ್ರಿಯವಾದ ಮಾತು :

ಇವರ ಮಾತು ಪ್ರಿಯವಾಗಲಿದೆ. ಅಂದರೆ ಹೇಳಬೇಕಾದ ರೀತಿಯಲ್ಲಿ ಹೇಳಿ, ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುತ್ತಾರೆ ಅಥವಾ ಆಗಬೇಕಾದ ಕೆಲಸವು ಆಗಲಿದೆ.

ಧರ್ಮದ ಆಶ್ರಯ :

ಧರ್ಮವನ್ನು ಬಿಟ್ಟು ಅಧರ್ಮದ ಕಾರ್ಯವನ್ನು ಮಾಡಲು ಮನಸ್ಸು ಒಪ್ಪದು. ಒಮ್ಮತದಿಂದ ಮಾಡಿದರೂ ಪಾಪಪ್ರಜ್ಞೆ ಕಾಡುವುದು.

ವಿದಗ್ಧ :

ಕಾರ್ಯದಲ್ಲಿ ಕುಶಲತೆಯೇ ವಿದಗ್ಧತೆ. ಎಂತಹ ಕೆಲಸವನ್ನು ಬುದ್ಧಿಶಕ್ತಿಯಿಂದ ಸ್ಮಾರ್ಟ್ ಆಗಿ ಮಾಡುವ ತಜ್ಞತೆ ಇರಲಿದೆ.

ಪ್ರಿಯವಲ್ಲಭ :

ಹೆಂಡತಿಗೆ ಪ್ರೀತಿಪಾತ್ರನಾಗಿ ಇರುವನು. ಸ್ವತಂತ್ರವಾಗಿ ಮಾಡಿದರೂ ಸಂಗಾತಿಗೆ ಪ್ರಿಯವಾದುದನ್ನೇ ಮಾಡಿ ಸಂತೋಷಪಡಿಸುವನು.

ದೇವಭಕ್ತ :

ದೇವರಲ್ಲಿ ನಂಬಿಕೆ, ಶ್ರದ್ಧೆ ಇರಲಿದೆ. ದೇವತೋಪಾಸನೆ, ದೇವಾಲಯ, ಪುಣ್ಯಸ್ಥಳಗಳ ಭೇಟಿ ಪ್ರಿಯವಾಗಲಿದೆ. ಧಾರ್ಮಿಕ ಕಾರ್ಯವನ್ನು ಹೆಚ್ಚು ಮಾಡುವಿರಿ ಅಥವಾ ಪಾಲ್ಗೊಳ್ಳುವಿರಿ.

ಹೀಗೆ ಅಪರೂಪದ ನಕ್ಷತ್ರ ಈ ಸ್ವಾತಿ. ಸೃಷ್ಟಿಯ ವಿಸ್ಮಯವನ್ನು ತೆರೆಯುತ್ತ ಹೋದರೆ, ಮುಗಿದ ಒರತೆ. ಒಂದನ್ನು ಹಿಡಿದರೆ, ಅದು ಆಳಕ್ಕೆ ಸೆಳೆದು ಮತ್ತೆಲ್ಲಿಗೋ ಕೊಂಡೊಯ್ಯುತ್ತದೆ. ಇಂತಹ ಖಗೋಲಕ್ಕೆ ಏನೆಂದರೂ ಕಡಿಮೆ.

ಲೋಹಿತ ಹೆಬ್ಬಾರ್ – 8762924271

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us