AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದಾ ಸಿಟ್ಟಿನಲ್ಲಿ‌ ಅಥವಾ ಎಲ್ಲದಕ್ಕೂ ಸಿಟ್ಟು‌ ಮಾಡುವವರ ನಕ್ಷತ್ರ ಇದು…!!

ರಾತ್ರಿಯ ಸಮಯದಲ್ಲಿ ಖಗೋಳವನ್ನು ಕಂಡರೆ ಆಶ್ಲೇಷಾ ನಕ್ಷತ್ರವು ಐದು‌ ನಕ್ಷತ್ರಗಳ ಗುಂಪಿನಿಂದ ಕೂಡಿರಲಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಅವಗುಣಗಳೇ ಹೆಚ್ಚು ಎಂಬ ಮಾತೂ ಇದೆ. ಹೇಗಿರುತ್ತಾರೆ ಅವರು ನೋಡೋಣ

ಸದಾ ಸಿಟ್ಟಿನಲ್ಲಿ‌ ಅಥವಾ ಎಲ್ಲದಕ್ಕೂ ಸಿಟ್ಟು‌ ಮಾಡುವವರ ನಕ್ಷತ್ರ ಇದು...!!
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 26, 2024 | 10:44 AM

Share

ನಕ್ಷತ್ರ ಪುಂಜಗಳಲ್ಲಿ ಒಂಭತ್ತನೇ ನಕ್ಷತ್ರವಿದು. ಇದರ ದೇವತೆ ಸರ್ಪ. ಈ ನಕ್ಷತ್ರದಲ್ಲಿ ನಾಗದೋಷದ‌ ನಿವಾರಣೆ ಸಂಬಂಧಪಟ್ಟ ಆಚರಣೆ ಮಾಡಿದರೆ ಶೀಘ್ರವಾಗಿ ಫಲವು ಪ್ರಾಪ್ತಿಯಾಗುವುದು. ಆದರೆ ಇದು ಅತಿ ವಿಚಿತ್ರವೂ ವಿಶಿಷ್ಟವೂ ಆದ ನಕ್ಣತ್ರ. ಕರ್ಕಾಟಕ ರಾಶಿಯಲ್ಲಿ ಬರುವ ಕೊನೆಯ ನಕ್ಷತ್ರ ಇದು. ರಾಮಾಯಣದಲ್ಲಿ ಲಕ್ಷ್ಮಣನ ನಕ್ಷತ್ರವೂ ಇದೇ ಆಗಿತ್ತು.

ರಾತ್ರಿಯ ಸಮಯದಲ್ಲಿ ಖಗೋಳವನ್ನು ಕಂಡರೆ ಆಶ್ಲೇಷಾ ನಕ್ಷತ್ರವು ಐದು‌ ನಕ್ಷತ್ರಗಳ ಗುಂಪಿನಿಂದ ಕೂಡಿರಲಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಅವಗುಣಗಳೇ ಹೆಚ್ಚು ಎಂಬ ಮಾತೂ ಇದೆ. ಹೇಗಿರುತ್ತಾರೆ ಅವರು ನೋಡೋಣ

ಹಠಮಾರಿ :

ಇವರಿಗೆ ಅನ್ಯರ ಮಾತು, ಅನ್ಯರು‌ ಮಾಡಿದ ತೀರ್ಮಾನಗಳು‌ ಸರಿಯಾಗದು. ತಾವು ಮಾತ್ರ ಸರಿ,‌ ತಮ್ಮದು ಮಾತ್ರವೇ ಸರಿ ಎನ್ನುವ ಹಠದ ಸ್ವಭಾವವಿರಲಿದೆ. ಅದನ್ನು ಬದಲಿಸದ ಹೊರತೂ ಸಮಾಧಾನವಿರದು.

ಎಲ್ಲವನ್ನೂ ತಿನ್ನುವರು :

ಆರೋಗ್ಯದ ಬಗ್ಗೆ ಕಾಳಜಿ‌ ಕಡಿಮೆ. ಎಲ್ಲವನ್ನೂ ತಿನ್ನಬೇಕು ಎನ್ನುವ ಚಪಲತೆ ಹೆಚ್ಚು. ಅಷ್ಟೇ ಅಲ್ಲ ತಾವು ಮಾತ್ರ ತಿನ್ನಬೇಕು, ಬೇರೆ ಯಾರಿಗೂ ಪ್ರವೇಶ ಕೊಡಬಾರದು ಎನ್ನುವುದು ಇವರ ಮುಖ್ಯ ಉದ್ದೇಶ.

ಪಾಪಕಾರ್ಯ :

ಇನ್ನೊಬ್ಬರಿಗೆ ನೋವನ್ನು ಕೊಡತ್ತ ಸದಾ ಪಾಪ‌ಕಾರ್ಯದಲ್ಲಿ ಇರುವವರು. ಒಳ್ಳೆಯ ಕೆಲಸಗಳು ಇವರ ಬುದ್ಧಿಗೆ ಬರದು.‌ ಬೇರೆಯವರಿಂದ ಒಳ್ಳೆಯ ಪ್ರೇರಣೆಯನ್ನೂ ಪಡೆಯಲಾರರು.

ಕೃತಘ್ನತೆ :

ಉಪಕಾರ ಸ್ಮರಣೆಯಿಂದ ಇವರು ಎಂದಿಗೂ ದೂರ. ಇವರಾಗಿಯೇ ಯಾರಿಗೂ ಉಪಕಾರವನ್ನು ಮಾಡುವರಲ್ಲ ಮತ್ತು ಉಪಕಾರ ಮಾಡಿದವರಿಗೂ ಪ್ರತ್ಯುಪಕಾರ ಮಾಡುವವರಲ್ಲ.

ಧೂರ್ತ :

ಮಾತಿನಿಂದಲೋ ಕೃತಿಯಿಂದಲೋ ಹೇಗೋ ಇನ್ನೊಬ್ಬರಿಗೆ ವಂಚನೆ ಮಾಡುವುದು ಇವರ ನಿರಂತರ ಕಾರ್ಯ. ದುರಭ್ಯಾಸದಲ್ಲಿ ಆಸಕ್ತಿ ಅಧಿಕ.

ನಿಷ್ಠೆ :

ಯಾವುದಾದರೂ ಒಂದನ್ನು ಒಪ್ಪಿದರೆ, ಅವರನ್ನು ಬದಲಿಸಲಾಗದು. ಕಪಿಮುಷ್ಟಿಯಂತೆ ಯಾವ ಕಾಲಕ್ಕೂ ಬದಲಾಗರು. ವಿಶೇಷ ಗುಣಗಳಲ್ಲಿ‌ ಇದು ಒಂದು.

ಗೌಪ್ಯ ಗುರಿ :

ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಆದರೆ ಅದನ್ನು ಎಲ್ಲರೆದುರೂ ಹೇಳುತ್ತ ಇರಲಾರರು.‌ ಗೌಪ್ಯವಾಗಿ ತಮ್ಮ ಗುರಿಯನ್ನು ಸಾಧಿಸಿ, ಅನಂತರ‌ ಹೇಳುವರು. ಸರ್ಪವೂ ಕೂಡ ಹಾಗೆಯೇ. ಎಲ್ಲಯೂ ತನ್ನನ್ನು ತೋರಿಸಿಕೊಳ್ಳದು.‌ ಸಮಯ ಬಂದಾಗ ಅದರಿಂದ‌ ಆಗುವ ದುಃಖ‌ ಸುಖಗಳು ಗೊತ್ತಾಗುತ್ತವೆ.

ಇದು ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರ ವಿಶೇಷ.

ಲೋಹಿತ ಹೆಬ್ಬಾರ್ – 8762924271

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ