AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಈ 4 ರಾಶಿಯವರ ಪ್ರೇಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ

ಜನವರಿ 18-24ರ ಈ ವಾರ ಶುಕ್ರನ ಸ್ಥಾನದಿಂದ ಪ್ರೇಮ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಪ್ರತಿಯೊಂದು ರಾಶಿಫಲವೂ ಪ್ರೀತಿ, ಸಂಬಂಧಗಳಲ್ಲಿ ಸವಾಲು, ಸಾಹಸ ಅಥವಾ ಸಂತೋಷವನ್ನು ತರಬಹುದು. ಭಾವನಾತ್ಮಕ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಮಾತುಕತೆ ಮತ್ತು ತಾಳ್ಮೆಯಿಂದ ಯಾವುದೇ ಅಸಮಾಧಾನಗಳನ್ನು ನಿವಾರಿಸಿ, ಈ ವಾರವನ್ನು ಪ್ರೀತಿಮಯವಾಗಿಸಿಕೊಳ್ಳಿ.

Weekly Love Horoscope: ಈ 4 ರಾಶಿಯವರ ಪ್ರೇಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 15, 2026 | 10:31 AM

Share

ಜನವರಿ 18ರಿಂದ ಜನವರಿ 24ರ ವರೆಗೆ ಮೂರನೇ ವಾರವಾಗಿದ್ದು ಶುಕ್ರನು ಶನಿಯ ರಾಶಿಯಲ್ಲಿ ಬುಧ, ರವಿ, ಕುಜ, ಬುಧ ಈ ನಾಲ್ಕು ಗ್ರಹರ ಜೊತೆ ಇರುವನು. ಪ್ರೇಮ ಕೆಲವರಿಗೆ ಸವಾಲು, ಸಾಹಸ, ಸಂತೋಷ, ಸಿಹಿ, ಸಂಕಟ ಎಲ್ಲವೂ ಆಗಲಿದೆ. ಯಾವ ಸನ್ನಿವೇಶವನ್ನೂ ಅತಿಯಾದ ಹಂತಕ್ಕೆ ಕೊಂಡೊಯ್ಯದೇ ಮನೋ ಬುದ್ಧಿಗಳನ್ನು ನಿಮ್ಮ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿ.

ಮೇಷ:

ಮೂರನೇ ವಾರದಲ್ಲಿ ಹೃದಯ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಪ್ರೇಮದಲ್ಲಿ ವೇಗ ಜಾಸ್ತಿ. ತಾಳ್ಮೆ ಕಳೆದುಕೊಂಡರೆ ಮಾತುಗಳು ನೋವು ನೀಡಬಹುದು. ಮೃದುತನವೇ ಪರಿಹಾರವಾಗುತ್ತದೆ ಈ ವಾರ.

ವೃಷಭ:

ಜನವರಿಯ ಈ ವಾರ ಪ್ರೇಮಕ್ಕೆ ಸ್ಥಿರತೆ ಬೇಕೆಂಬ ಆಸೆ ಹೆಚ್ಚುತ್ತದೆ. ಸಂಗಾತಿಯಿಂದ ಭರವಸೆ ನಿರೀಕ್ಷೆ. ಸಣ್ಣ ಅಸಮಾಧಾನಗಳು ಮಾತುಕತೆಯಿಂದ ನಿವಾರಣೆಯಾಗುತ್ತವೆ. ಭಾವನಾತ್ಮಕ ಬಂಧನ ಗಟ್ಟಿಯಾಗುತ್ತದೆ.

ಮಿಥುನ:

ವರ್ತನೆಯಿಂದ ಈ ವಾರ ಪ್ರೇಮದಲ್ಲಿ ಚಂಚಲತೆ. ಮಾತುಗಳು ಹತ್ತಿರ ತರುತ್ತವೆ. ಆದರೆ ನಿರ್ಧಾರ ಬದಲಾವಣೆ ಗೊಂದಲ ಸೃಷ್ಟಿಸಬಹುದು. ಸ್ಪಷ್ಟತೆ ಇದ್ದರೆ ಹೊಸ ಸಂಬಂಧ ಶುಭಾರಂಭವಾಗುತ್ತದೆ.

ಕರ್ಕಾಟಕ:

ಮನಸ್ಸು ಪ್ರೇಮದ ಆಳಕ್ಕೆ ಇಳಿಯಲು ಪ್ರಯತ್ನಿಸುವುದು. ಈ ವಾರ ಭದ್ರತೆ ಬೇಕೆಂಬ ಭಾವನೆ ಹೆಚ್ಚುತ್ತದೆ. ಅನುಮಾನ ಕಡಿಮೆ ಮಾಡಿದರೆ ಸಂಬಂಧದಲ್ಲಿ ನಂಬಿಕೆ ಮತ್ತು ನೆಮ್ಮದಿ ಲಭಿಸುತ್ತದೆ.

ಸಿಂಹ:

ನಿಮಗೆ ಈ ವಾರ ಪ್ರೇಮದಲ್ಲಿ ಗಮನ, ಗೌರವ ಸಿಗುತ್ತದೆ. ಆಕರ್ಷಣೆ ನಿಮ್ಮತ್ತ. ಆದರೆ ಅತಿಯಾದ ಸ್ವಾಭಿಮಾನ ಸಂಘರ್ಷ ತರಬಹುದು. ಪ್ರೀತಿಯನ್ನು ಆಜ್ಞೆಯಾಗಿ ಅಲ್ಲ, ಭಾವನೆಯಾಗಿ ಬಳಸಿ.

ಕನ್ಯಾ:

ಈ ವಾರ ನಿಮ್ಮ ಹೃದಯಕ್ಕಿಂತ ಬುದ್ಧಿ ಹೆಚ್ಚು ಕೆಲಸ ಮಾಡುತ್ತದೆ. ಪ್ರೇಮದಲ್ಲಿ ಲೆಕ್ಕಾಚಾರ ಹೆಚ್ಚಾಗುತ್ತದೆ. ಭಾವನೆಗಳನ್ನು ಮುಚ್ಚಿಡದೆ ಹೇಳಿದರೆ ಸಂಬಂಧದಲ್ಲಿ ಸಮಾಧಾನ ತರುವ ಬದಲಾವಣೆ ಕಾಣಿಸುತ್ತದೆ.

ತುಲಾ:

ಎಷ್ಟೇ ಪ್ರಯತ್ನಿಸಿದರೂ ಪ್ರೇಮ ಜೀವನದಲ್ಲಿ ಅಸಮತೋಲನ ಎಂದು ಅನಿಸುತ್ತದೆ. ಅರಿರೇಕ ಮಾಡದೇ ಇದ್ದರೆ ಅಸಮಾಧಾನಗಳು ನಿಧಾನವಾಗಿ ಕರಗುತ್ತವೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂಬಂಧಕ್ಕೆ ಹೊಸ ಉಸಿರು ನೀಡುತ್ತದೆ.

ವೃಶ್ಚಿಕ:

ಅತಿಯಾಗಿ ಇಳಿದರೆ ಪ್ರೇಮದಲ್ಲಿ ತೀವ್ರತೆ, ಆಕರ್ಷಣೆ ಗಾಢವಾದ ಅನುಭವ. ರಹಸ್ಯ ಭಾವನೆಗಳು ಮನಸ್ಸಿನಲ್ಲಿ ಚಲನೆ ಉಂಟುಮಾಡುತ್ತವೆ. ಕಪಿಮುಷ್ಟಿಯಂತಿರುವ ಹಿಡಿತ ತಪ್ಪಿಸಿದರೆ ಪ್ರೀತಿ ಸುಂದರವಾಗುತ್ತದೆ.

ಧನು:

ಸಂಗಾತಿಯ ನಡವಳಿಮೆಯಿಂದ ಪ್ರೇಮಕ್ಕಿಂತ ಸ್ವಾತಂತ್ರ್ಯ ಮುಖ್ಯವೆನಿಸುತ್ತದೆ. ಈ ವಾರ ಸಂಗಾತಿಗೆ ನೀವು ಸಮಯ ಕಡಿಮೆಯಾಗಬಹುದು. ಮನದಾಳದ ಭಾವನೆ ಹಂಚಿಕೊಂಡರೆ ದೂರದ ಭಯ ನಿವಾರಣೆಯಾಗುತ್ತದೆ ಈ ವಾರ.

ಮಕರ:

ಕೆಲವು ಮಾತುಗಳಿಂದ ಪ್ರೇಮ ಗಂಭೀರ ದಿಕ್ಕಿಗೆ ಸಾಗುತ್ತದೆ. ಭವಿಷ್ಯದ ಚಿಂತನೆಗಳು ಹೆಚ್ಚಾಗುತ್ತವೆ. ಆದರೆ ಕೆಲಸದ ಒತ್ತಡ ಹೃದಯವನ್ನು ಕಠಿಣಗೊಳಿಸಬಹುದು. ಪೂರ್ವನಿರ್ಧಾರದಲ್ಲಿ ವ್ಯತ್ಯಾಸ, ಸಮತೋಲನ ಕಾಪಾಡಿಕೊಳ್ಳುವಲ್ಲಿ ಅಲ್ಪ ವಿಫಲ.

ಕುಂಭ:

ಅನ್ಯರ ಮೇಲೆ ಅನಿರೀಕ್ಷಿತ ಭಾವನೆಗಳು ಮೂಡುತ್ತವೆ. ಈ ವಾರ ಸಹವಾಸ ಅತಿಯಾಗಿ ಸ್ನೇಹವೇ ಪ್ರೇಮದ ರೂಪ ಪಡೆಯಬಹುದು. ಬಂಧನಕ್ಕಿಂತ ಸಹಭಾಗಿತ್ವ ಬೇಕೆನಿಸುತ್ತದೆ. ಸ್ಪಷ್ಟತೆ ಇದ್ದರೆ ಸಂಬಂಧ ಸುಗಮವಾಗುತ್ತದೆ.

ಮೀನ:

ಹಠದಿಂದ ಪಡೆಯಲಾಗದ್ದನ್ನು ಪ್ರೀತಿಯಲ್ಲಿ ತ್ಯಾಗ, ಮೃದುತ್ವದಿಂದ ಸಾಧ್ಯ. ಹಳೆಯ ನೋವುಗಳು ಕರಗುತ್ತವೆ. ಸಂಗಾತಿಯೊಂದಿಗಿನ ಆತ್ಮೀಯ ಕ್ಷಣಗಳು ಮನಸ್ಸಿಗೆ ಆಳವಾದ ತೃಪ್ತಿ ನೀಡುತ್ತವೆ. ಸಮಯವಿದೆ ಎಂದು ಕಿರಿಕಿರಿ ಮಾಡಲು ಹೋಗುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಕುಟುಂಬದೊಂದಿಗೆ ಗಾಳಿಪಟ ಹಾರಿಸಿದ ಗೃಹ ಸಚಿವ ಅಮಿತ್ ಶಾ
ಕುಟುಂಬದೊಂದಿಗೆ ಗಾಳಿಪಟ ಹಾರಿಸಿದ ಗೃಹ ಸಚಿವ ಅಮಿತ್ ಶಾ