AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ‌ ಜನಿಸಿದವರು ಹೇಗಿರಬಹುದು? ಇವರಿಗೆ ಪರಸ್ತ್ರೀಯರ ಸಹವಾಸ ಹೆಚ್ಚು

ನಿಮ್ಮ ನಕ್ಷತ್ರದ ಹಸ್ತ ನಕ್ಷತ್ರ ಆಗಿದ್ದರೆ, ನೀವು ಈ ಗುಣಗಳನ್ನು ಹೊಂದಿರುತ್ತೀರಾ, ಸೂರ್ಯನು ಹೇಗೆ ನಿತ್ಯೋತ್ಸಾಹಿಯಾಗಿ ಪ್ರತಿದಿನ ಪ್ರತಿಕ್ಷಣ ಖಗೋಳದಲ್ಲಿ ನಿಗಿನಿಗಿಯುತ್ತಿರುವನೋ ಅದೇ ರೀತಿಯಲ್ಲಿ ಎಲ್ಲ ಕಾರ್ಯದಲ್ಲಿ ಉತ್ಸಾಹವನ್ನು ಕಾಣಬಹದು. ಇದು ಹಸ್ತದ ಆಕಾರದಲ್ಲಿ ಕಾಣುವ ಐದು ನಕ್ಷತ್ರಗಳ ಸಮೂಹ. ಇದರ ದೇವತೆ ಸಾಕ್ಷಾತ್ ಸೂರ್ಯ. ಈ ನಕ್ಷತ್ರವು ಕನ್ಯಾರಾಶಿಗೆ ಸೇರಿದುದಾಗಿದೆ. ಇದರ ಅಕ್ಷರಗಳು ಪು ಷ ಣ ಠ. ಇದು ಮಹಿಷ ಯೋನಿಗೆ ಸೇರಿದ ನಕ್ಷತ್ರ. ಹಾಗಾಗಿ ನೀವು ಈ ಗುಣಗಳನ್ನು ಹೊಂದಿರಬಹುದು, ಆ ಗುಣಗಳು ಯಾವುವು ಇಲ್ಲಿದೆ ನೋಡಿ.

ಈ ನಕ್ಷತ್ರದಲ್ಲಿ‌ ಜನಿಸಿದವರು ಹೇಗಿರಬಹುದು? ಇವರಿಗೆ ಪರಸ್ತ್ರೀಯರ ಸಹವಾಸ ಹೆಚ್ಚು
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 01, 2025 | 4:37 PM

Share

ಹಸ್ತ ನಕ್ಷತ್ರ ಹದಿಮೂರನೇ ನಕ್ಷತ್ರ. ಇದು ಹಸ್ತದ ಆಕಾರದಲ್ಲಿ ಕಾಣುವ ಐದು ನಕ್ಷತ್ರಗಳ ಸಮೂಹ. ಇದರ ದೇವತೆ ಸಾಕ್ಷಾತ್ ಸೂರ್ಯ. ಈ ನಕ್ಷತ್ರವು ಕನ್ಯಾರಾಶಿಗೆ ಸೇರಿದುದಾಗಿದೆ. ಇದರ ಅಕ್ಷರಗಳು ಪು ಷ ಣ ಠ. ಇದು ಮಹಿಷ ಯೋನಿಗೆ ಸೇರಿದ ನಕ್ಷತ್ರ. ದೇವಗಣಕ್ಕೆ ಸೇರಿದ್ದು, ಆದಿ ನಾಡಿಯಾಗಿರುವುದು. ಈ ನಕ್ಷತ್ರವು ಅನೇಕ ಸಂಸ್ಕಾರಕರ್ಮಗಳಿಗೆ ಯೋಗ್ಯವಾದುದೇ ಆಗಿದೆ. ಇಂತಹ ನಕ್ಷತ್ರದಲ್ಲಿ‌ ಜನಿಸಿಸವರು ಹೇಗಿರಬಹುದು.

ಉತ್ಸಾಹ :

ಇವರ ಗುಣದಲ್ಲಿ ಮೊದಲು ಕಾಣುವುದೇ ಉತ್ಸಾಹ. ಸೂರ್ಯನು ಹೇಗೆ ನಿತ್ಯೋತ್ಸಾಹಿಯಾಗಿ ಪ್ರತಿದಿನ ಪ್ರತಿಕ್ಷಣ ಖಗೋಳದಲ್ಲಿ ನಿಗಿನಿಗಿಯುತ್ತಿರುವನೋ ಅದೇ ರೀತಿಯಲ್ಲಿ ಎಲ್ಲ ಕಾರ್ಯದಲ್ಲಿ ಉತ್ಸಾಹವನ್ನು ಕಾಣಬಹದು.

ನಿರ್ಲಜ್ಜೆ :

ನಾಚಿಕೆಯ ಸ್ವಭಾವ ಇವರ ಬಳಿ ಸುಳಿಯದು. ಎಲ್ಲವನ್ನೂ ನಿರ್ಬಿಡೆಯಿಂದ ಪೂರೈಸುವರು. ಇದು ಧೈರ್ಯ ಎನಿಸಿಕೊಳ್ಳದು, ಮಾಡಬಾರದ್ದನ್ನು ಮಾಡಲು ಮನಸ್ಸಿಗೆ ಸಂಕೋಚವಿರದು ಎಂದರ್ಥ.

ಪಾನಮತ್ತ :

ಪಾನಮತ್ತತೆ ಅಧಿಕವಾಗಿರುವುದು ಅಥವಾ ಮತ್ತಿನ ಪದಾರ್ಥಗಳನ್ನು ಸೇವಿಸುವರು. ಧೈರ್ಯವನ್ನು ಅಥವಾ ಶಕ್ತಿಯನ್ನು ಕೊಡಲು ಯಾವುದಾದರೂ ಪದಾರ್ಥಗಳನ್ನು ಸೇವಿಸುವರು.

ಅಕಾರುಣ್ಯ :

ಯಾರ ಬಗ್ಗೆಯೂ ಕರುಣೆ ಇರದು. ಎಲ್ಲರ ಜೊತೆ ಬಹಳ ಕಠೋರವಾಗಿ ವರ್ತಿಸುವರು. ಮಾತುಗಳೂ ಕೂಡ ತೀಕ್ಷ್ಣವಾಗಿ ಇರುವುದು.

ಕಳ್ಳತನ :

ಪರರ ಒಳ್ಳೆ ಸ್ವತ್ತನ್ನು ಅಸೆಪಟ್ಟು, ಅದು ತಮ್ಮ ಸ್ವತ್ತಾಗಿ ಮಾಡಿಕೊಳ್ಳುವವರು ಇವರು. ಒಳ್ಳೆಯ ಮನಸ್ಸನ್ನೂ ಪರಿವರ್ತಿಸುವ ಕುಶಲಿಗಳು.

ಸುಳ್ಳಾಡುವುದು :

ಮಾತಿನಲ್ಲಿ ಸತ್ಯ ಕಾಣಿಸುವುದು ಬಹಳ ಕಡಿಮೆ. ಎಲ್ಲ ವಿಚಾರಕ್ಕೂ ಸುಳ್ಳು ಹೇಳಿ ಅವರಿಗೆ ಆಗಬೇಕಾದುದನ್ನು ಮಾಡಿಸಿಕೊಳ್ಳುವರು. ಇವರ ಮಾತು ನಂಬಿಕೆಗೆ ಅರ್ಹವಾದಂತೆ ಕಾಣಿಸುವುದು.

ಬಂಧುವರ್ಜಿತ :

ಇವರು ಬಂಧುಗಳಿಂದ ದೂರವಿರುವರು ಅಥವಾ ಇವರ ನಡತೆಯಿಂದ ಬಂಧುಗಳೇ ಇವರನ್ನು ದೂರವಿರಿಸಬಹುದು.

ಪರದಾರರತ :

ಪರಸ್ತ್ರೀಯರ ಸಹವಾಸವನ್ನು ಹೆಚ್ಚು ಮಾಡುವರು. ಬಹುಪತ್ನಿತ್ವಕ್ಕೆ ಈ ನಕ್ಷತ್ರವರು ಆಸಕ್ತಿಯುಳ್ಳವರಾಗುವರು. ಬಹುಪತ್ನೀತ್ವದ ಸಂದರ್ಭವೂ ಬರಬಹುದು.

ಗಾಂಧರ್ವರತ :

ವಿವಿಧ ಕಲೆಗಳಲ್ಲಿ ಆಸಕ್ತಿಯನ್ನು ಇಟ್ಡುಕೊಂಡವರು.‌ ಪ್ರಸಿದ್ಧಿಯನ್ನು ಪಡೆಯುವವರೂ ಆಗುವರು.

ಪೂಜೆಯಲ್ಲಿ ಆಸಕ್ತಿ :

ಇವರಿಗೆ ದೇವರ ಪೂಜೆಯಲ್ಲಿ ಹಾಗೂ ಅತಿಥಿಗಳ ಸತ್ಕಾರದಲ್ಲಿ ಆಸಕ್ತಿ ಇರುವುದು. ಧಾರ್ಮಿಕ ಆಚರಣೆ ಅಥವಾ ಪುಣ್ಯಸ್ಥಳಗಳಿಗೆ ಪ್ರವಾಸಗಳನ್ನೂ ಮಾಡುವರು.

ಕ್ರೀಡಾಸಕ್ತಿ :

ಹಸ್ತಾ ನಕ್ಷತ್ರವಾದ್ದರಿಂದ ಕೈಯಿಂದ ಆಡುವ ಆಟಗಳು ಇಷ್ಟವಾಗುವುದು ಮಾತ್ರವಲ್ಲ, ಉತ್ತಮ ಸ್ಥಾನವನ್ನೂ ಪಡೆಯಬಹುದು. ಉನ್ನತ ಸಾಧನೆಗೆ ಇವರು ಪ್ರಯತ್ನಮಾಡಬಹುದು.

ಗುಣ ಮತ್ತು ಅವಗುಣಗಳಿಂದ ಮಿಶ್ರಣಗೊಂಡ ಸ್ವಭಾವ ಇದಾಗಿದೆ.

– ಲೋಹಿತ ಹೆಬ್ಬಾರ್ – 8762924271

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಯಜ್ಞ-ಯಾಗಾದಿಗಳಲ್ಲಿ ಯಾವ ಸಮಿತ್ತುಗಳನ್ನು ಅರ್ಪಿಸಿದರೆ ಏನು ಫಲ?
ಯಜ್ಞ-ಯಾಗಾದಿಗಳಲ್ಲಿ ಯಾವ ಸಮಿತ್ತುಗಳನ್ನು ಅರ್ಪಿಸಿದರೆ ಏನು ಫಲ?
ರಾಜ್​​ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಬಗ್ಗೆ ದೊಡ್ಡಣ್ಣ ಮಾತು
ರಾಜ್​​ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಬಗ್ಗೆ ದೊಡ್ಡಣ್ಣ ಮಾತು
ನಾಯಕತ್ವ ಬದಲಾದರೂ ಕೋಲಾರ ಕಾಂಗ್ರೆಸ್​ನಲ್ಲಿ ಮುಗಿಯದ ಬಣ ಬಡಿದಾಟ
ನಾಯಕತ್ವ ಬದಲಾದರೂ ಕೋಲಾರ ಕಾಂಗ್ರೆಸ್​ನಲ್ಲಿ ಮುಗಿಯದ ಬಣ ಬಡಿದಾಟ
ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಅನಂತ್ ಅಂಬಾನಿ ಭೇಟಿ
ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಅನಂತ್ ಅಂಬಾನಿ ಭೇಟಿ
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ