AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಯ ಸಂಕ್ರಮಣದಿಂದ ಯಾವ ರಾಶಿಯವರಿಗೆ ಸಂಕಟ?

ಗ್ರಹಗಳ ನಾಯಕನಾದ ಸೂರ್ಯನು ಇನ್ನೇನು ಕೆಲವೇ ದಿನಗಳಲ್ಲಿ ಸ್ಥಾನವನ್ನು ಬದಲಿಸುವನು. ಸೂರ್ಯನು ಸಂಚರಿಸಲಿರುವ ರಾಶಿಯ ಅಧಿಪತಿಯು ಚಂದ್ರನಾಗಿದ್ದಾನೆ. ಹೀಗಾಗಿ ರವಿಯ ಸಂಕ್ರಮಣದಿಂದ ಯಾವ ರಾಶಿಯವರಿಗೆ ಸಂಕಟ? ಎನ್ನುವುದನ್ನು ತಿಳಿದುಕೊಳ್ಳಿ

ರವಿಯ ಸಂಕ್ರಮಣದಿಂದ ಯಾವ ರಾಶಿಯವರಿಗೆ ಸಂಕಟ?
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 12, 2024 | 9:39 PM

Share

ಗ್ರಹಗಳ ನಾಯಕನಾದ ಸೂರ್ಯನು ಇನ್ನೇನು ಕೆಲವೇ ದಿನಗಳಲ್ಲಿ ಸ್ಥಾನವನ್ನು ಬದಲಿಸುವನು. ಮಿಥುನ ರಾಶಿಯಲ್ಲಿ ಕಳೆದ ಒಂದು ತಿಂಗಳಿನಿಂದ ಇದ್ದಾನೆ. ಇನ್ನು ಕರ್ಕಾಟಕ ರಾಶಿಯನ್ನು ಪ್ರವೇಶಿಸುವನು. ಇದನ್ನು ಅಯನ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಉತ್ತರ ದಿಕ್ಕಿನ ಕಡೆ ಸಂಚಾರ ಮಾಡುತ್ತಿದ್ದ ಸೂರ್ಯನು ಇನ್ನು ಮೇಲೆ ದಕ್ಷಿಣದ ಕಡೆ ಸಂಚಾರವನ್ನು ಆರಂಭಿಸುವನು. ಹಬ್ಬಗಳು ಇನ್ನು ಒಂದೊಂದಾಗಿ ಆರಂಭವಾಗುತ್ತವೆ.

ಸೂರ್ಯನು ಸಂಚರಿಸಲಿರುವ ರಾಶಿಯ ಅಧಿಪತಿಯು ಚಂದ್ರನಾಗಿದ್ದಾನೆ. ಸೂರ್ಯ ಚಂದ್ರರಿಬ್ಬರೂ ಮುಖ್ಯ ಗ್ರಹರಾಗಿದ್ದು ಹಲವು ಪರಿಣಾಮಗಳನ್ನು ಪರಿವರ್ತನೆಗಳನ್ನು ಇವರು ಉಂಟುಮಾಡುವರು. ಇಲ್ಲಿ ಗಜಕೇಸರೀ ಯೋಗ ರಾಜಯೋಗಗಳೂ ಸಂಭವಿಸುವುವು.

ವೃಷಭ ರಾಶಿ :ಈ ರಾಶಿಯವರಿಗೆ ಚಂದ್ರನು ಈ ರಾಶಿಗೆ ಬಂದ ಸಂದರ್ಭದಲ್ಲಿ ನಿರ್ಧಾರವನ್ನು ಸರಿಯಾಗಿ ತೆಗದುಕೊಳ್ಳಲು ಸಾಧ್ಯವಾಗುವುದು. ಅಲ್ಲಿಯವರೆಗೆ ಗೊಂದಲದಲ್ಲಿಯೇ ನೀವು ಇರುವಿರಿ. ಬೇರೆಯವರ ಸಲಹೆಗಳನ್ನು ನಿಮ್ಮನ್ನು ಚಿಂತೆಗೀಡುಮಾಡುವುದು.

ಕರ್ಕಾಟಕ ರಾಶಿ :ಕರ್ಕಾಟಕವು ಗುರುವಿನ ಉಚ್ಚರಾಶಿಯೂ ಆಗಿದ್ದು, ಸದ್ಯ ಗುರುವಿನ ಉಪಸ್ಥಿತಿಯು ವೃಷಭದಲ್ಲಿ ಇದೆ. ವೃಷಭವೂ ಚಂದ್ರ ರಾಶಿಯಾದ ಕಾರಣ ಅನೇಕ ಶುಭಫಲವು ಈ ರಾಶಿಯವರಿಗೆ ಇದೆ. ಆಗಬೇಕಾದ ಕಾರ್ಯವನ್ನು ಸುಲಭವಾಗಿ ಮಾಡಿಮುಗಿಸುವಿರಿ. ಆರ್ಥಿಕತೆಯು ಉತ್ತಮವಾಗಲಿದೆ. ಬೇರೆ ಬೇರೆ ಮೂಲಗಳಿಂದ ಧನಲಾಭವಾಗುವುದು. ಗೌರವಾದರಗಳು ಈ ರಾಶಿಯವರ ಪಾಲಿಗೆ ಇದೆ. ದಾಂಪತ್ಯದಲ್ಲಿ ಉಂಟಾದ ಕಲಹವು ಸರಿಯಾಗುವ ಸಂದರ್ಭವು ಬರುವುದು.

ಈ ರಾಶಿಯವರಿಗೆ ಚಂದ್ರನು ವೃಷಭರಾಶಿಗೆ ಅಥವಾ ಕರ್ಕಾಟಕ ರಾಶಿಗೆ ಬಂದಾಗ ಹೆಚ್ಚಿನ ಉತ್ತಮ ಫಲದ ನಿರೀಕ್ಷೆ ಇರುವುದು.

ಮಕರ ರಾಶಿ :ಈ ರಾಶಿಯವರಿಗೆ ಸೂರ್ಯನ ಸಂಕ್ರಮಣದ ಫಲವು ಪ್ರಾಪ್ತವಾಗಲಿದೆ. ಮಕ್ಕಳ ನಡುವಣ ವೈಮನಸ್ಯ ಸರಿಯಾಗಿ, ಸಂಬಂಧವು ಸಹಜವಾಗಲಿದೆ.

ಮೀನ ರಾಶಿ :ಸಾಮಾಜಿಕ ಕ್ಷೇತ್ರದಲ್ಲಿ ಸಾಧಿಸಿದವರಿಗೆ ಸಮ್ಮಾನಗಳು ಸಿಗುವುದು. ಕೃಷಿ, ಶಿಕ್ಷಣ, ವೈದ್ಯರಿಗೆ ವಿಶೇಷ ಸ್ಥಾನವನ್ನು ಪಡೆಯಲು ಸಾಧ್ಯವಾಗುವುದು.

ಪುನರ್ವಸು ನಕ್ಷತ್ರದ ಗ್ರಹವೂ ಗುರುವೇ ಆಗಿರುವ ಕಾರಣ ಅದೇ ರಾಶಿಯಲ್ಲಿ ಸೂರ್ಯನ ಸಂಚಾರವೂ ಇದೆ. ಹಾಗಾಗಿ ಮೀನ ರಾಶಿಗೆ ವಿಶೇಷ ಲಾಭವೂ ಸ್ಥಾನಮಾನಗಳ ಅಪೇಕ್ಷೆಗಳೂ ಪೂರ್ಣವಾಗುವುದು. ರಾಜನಿಗೆ ಸಮಾನವಾದ ಅವಕಾಶಗಳು ಸೌಕರ್ಯಗಳು ಸಿಗಲಿವೆ. ಅದರ ಜೊತೆಗೆ ವೃಶ್ಚಿಕ, ಧನು ರಾಶಿಗಳಿಗೂ ಸೂರ್ಯನ ಪರಿವರ್ತನೆಯಿಂದ ಅಲ್ಪ ಪರಿಣಾಮ ಇರಲಿದೆ.

– ಲೋಹಿತ ಹೆಬ್ಬಾರ್ – 8762924271

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ