Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರಮ್ ಇನ್ಸ್ಟಿಟ್ಯೂಟ್ ಆಯ್ತು, ಇದೀಗ ನಕಲಿ ವಾಟ್ಸ್ ಆ್ಯಪ್ ಮೆಸೆಜ್ ನಂಬಿ 1 ಕೋಟಿ ಕಳೆದುಕೊಂಡ ಜೆಬಿಎಂ ಗ್ರೂಪ್

ಈ ಹಿಂದೆ ಸೀರಮ್ ಇನ್​ಸ್ಟಿಟ್ಯೂಟ್​ಗೆ ವಂಚಕರು 1 ಕೋಟಿ ರೂ. ವಂಚಿಸಿದ್ದರು. ಇದೀಗ ಜೆಬಿಎಂ ಗ್ರೂಪ್​ಗೆ ನಕಲಿ ವಾಟ್ಸ್ ಅ್ಯಪ್ ಸಂದೇಶ ಕಳುಹಿಸಿ 1 ಕೋಟಿ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಸೀರಮ್ ಇನ್ಸ್ಟಿಟ್ಯೂಟ್ ಆಯ್ತು, ಇದೀಗ ನಕಲಿ ವಾಟ್ಸ್ ಆ್ಯಪ್ ಮೆಸೆಜ್ ನಂಬಿ 1 ಕೋಟಿ ಕಳೆದುಕೊಂಡ ಜೆಬಿಎಂ ಗ್ರೂಪ್
ಜೆಬಿಎಂ ಗ್ರೂಪ್​ಗೆ ನಕಲಿ ವಾಟ್ಸ್ ಆ್ಯಪ್ ಮೆಸೆಜ್ ಕಳುಹಿಸಿ 1 ಕೋಟಿ ರೂ. ವಂಚನೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on:Sep 19, 2022 | 3:45 PM

ವಾಟ್ಸ್ ಆ್ಯಪ್ ಬಳಕೆದಾರರೇ ನಿಮಗೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಬರುವ ಮೆಸೆಜ್​ಗಳ ಬಗ್ಗೆ ಎಚ್ಚರವಾಗಿರಿ. ಏಕೆಂದರೆ ಈ ನಕಲಿ ವಾಟ್ಸ್ ಆ್ಯಪ್ ಸಂದೇಶ (Fake WhatsApp Message) ಕಳುಹಿಸಿ ನಿಮ್ಮಿಂದ ಹಣ ಲಪಟಾಯಿಸುವ ಜಾಲವೊಂದು ಸಕ್ರಿಯವಾಗಿದೆ. ಇದಕ್ಕೆ ದೊಡ್ಡದೊಡ್ಡ ಸಂಸ್ಥೆಗಳು ಕೂಡ ಬಲಿಯಾಗಿವೆ. ಈ ಹಿಂದೆ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ವಂಚಕರ ಬಲೆಗೆ ಬಿದ್ದು 1 ಕೋಟಿ ಕಳೆದುಕೊಂಡಿತ್ತು. ಇದೀಗ ಜೆಬಿಎಂ ಗ್ರೂಪ್ (JBM Group) ಕೂಡ ವಂಚನೆಗೆ ಒಳಗಾಗಿದೆ. ಜೆಬಿಎಂ ಗ್ರೂಪ್ ಹೆಸರಿನ ಆಟೋಮೊಬೈಲ್ ಕಂಪನಿಯ ಉಪಾಧ್ಯಕ್ಷರ ಹೆಸರಿನಲ್ಲಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಗೆ ನಕಲಿ ವಾಟ್ಸ್ ಆ್ಯಪ್ ಸಂದೇಶ ರವಾನಿಸಿ 7 ಬ್ಯಾಂಕ್ ಖಾತೆಗಳಿಂದ 1 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಸಿ ವಂಚಿಸಲಾಗಿದೆ.

ಮಾಹಿತಿ ಪ್ರಕಾರ, ಸಿಎಫ್​ಒ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್​ಐಆರ್ ದಾಖಲಾಗಿದೆ. ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ವಿವೇಕ್ ಗುಪ್ತಾ ಅವರು ನಕಲಿ ವಾಟ್ಸ್ ಆ್ಯಪ್ ಸಂದೇಶ ರವಾನಿಸಲಾಗಿದೆ. ನಕಲಿ ಸಂದೇಶದಲ್ಲಿ ಸೂಚಿಸಲಾದ ಬ್ಯಾಂಕ್ ಖಾತೆಗಳಿಗೆ ನಿರ್ದಿಷ್ಟ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಸಂದೇಶವನ್ನು ಗುಪ್ತಾ ಅವರು ಸ್ವೀಕರಿಸಿದ್ದಾರೆ. ಅದರಂತೆ ಒಟ್ಟು ಎಂಟು ವಹಿವಾಟುಗಳ ಮೂಲಕ ಏಳು ವಿವಿಧ ಬ್ಯಾಂಕ್ ಖಾತೆಗಳಿಂದ 1,11,97,696 ರೂಪಾಯಿ ವರ್ಗಾವಣೆ ಮಾಡಲಾಗಿದೆ.

“ವಂಚಕನು ತಾನು ಜೆಬಿಎಂ ಗ್ರೂಪ್ ಉಪಾಧ್ಯಕ್ಷ ನಿಶಾಂಕ್ ಆರ್ಯ ಎಂದು ಹೇಳಿಕೊಂಡಿದ್ದಾನೆ. ಕರೆ ಮಾಡಿದ ನಂಬರ್​ನ ವಾಟ್ಸ್​ ಆ್ಯಪ್​ ಪ್ರೊಫೈಲ್​ನಲ್ಲಿ ಆರ್ಯ ಅವರದ್ದೇ ಫೋಟೋ ಪ್ರದರ್ಶಿಸಿದೆ. ಟ್ರೂಕಾಲರ್​ನಲ್ಲಿ ಸಂಖ್ಯೆಯನ್ನು ಪರಿಶೀಲಿಸಿದಾಗಲೂ ಅದು ಆರ್ಯ ಅವರ ನಂಬರ್ ಎಂದು ತೋರಿಸಿದೆ. ಅವರು ಮಹತ್ವದ ಸಭೆಯಲ್ಲಿ ನಿರತರಾಗಿದ್ದಾರೆ ಎಂದು ಸಂದೇಶ ಕಳುಹಿಸುವವರು ನನಗೆ ತಿಳಿಸಿದ್ದರಿಂದ ಯಾವುದೇ ಹೆಚ್ಚಿನ ವಿಚಾರಣೆ ಮಾಡಲು ನಾನು ನೇರವಾಗಿ ಕರೆ ಮಾಡಲು ಸಾಧ್ಯವಾಗಲಿಲ್ಲ” ಎಂದು ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಜೆಬಿಎಂ ಗ್ರೂಪ್​ನ ಜೆಬಿಎಂ ಇಂಡಸ್ಟ್ರೀಸ್ ಮತ್ತು ಜೆಬಿಎಂ ಆಟೋ ಎಂಬ ಎರಡು ಘಟಕಗಳಿಂದ ಮೊತ್ತವನ್ನು ವರ್ಗಾಯಿಸಲಾಗಿದೆ. ಕೋರಿಕೆಯ ಮೇರೆಗೆ ಅಂತಹ ವರ್ಗಾವಣೆಗಳನ್ನು ದೃಢೀಕರಿಸುವ ಯುಟಿಆರ್ ಸಂಖ್ಯೆಯನ್ನು ಅದೇ ವಾಟ್ಸ್​ ಆ್ಯಪ್ ಚಾಟ್​ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಗುಪ್ತಾ ಅವರು ಹೇಳಿದ್ದಾರೆ.

ಸೈಬರ್ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?

  • ನಿಮಗೆ ತಿಳಿದಿರುವವರ ಅಥವಾ ಇನ್ಯಾರದ್ದೋ ಹೆಸರನ್ನು ಹೇಳಿಕೊಂಡು ಅಪರಿಚಿತ ನಂಬರ್​ನಲ್ಲಿ ವಾಟ್ಸ್​ ಆ್ಯಪ್ ಮೆಜೆಜ್​ಗಳು ಬಂದರೆ ಅದರ ಮೂಲದ ಬಗ್ಗೆ ಪರಿಶೀಲನೆ ನಡೆಸಬೇಕು.
  • QR ಕೋಡ್ ಅನ್ನು ಅದರ ಮೂಲವನ್ನು ಸಂಪೂರ್ಣವಾಗಿ ತಿಳಿಯದ ಹೊರತು ಅಥವಾ ಅನುಮಾನಗಳಿದ್ದರೆ ಸ್ಕ್ಯಾನ್ ಮಾಡಲು ಮುಂದಾಗಬೇಡಿ.
  • ನಿಮ್ಮ ಬ್ಯಾಂಕ್ ಖಾತೆಯ ಬಳಕೆದಾರ ಹೆಸರು ಅಥವಾ ಪಾಸ್​ವರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯಾಂಕ್​ನಿಂದ ಕರೆ ಈ ರೀತಿಯಾಗಿ ಮಾಹಿತಿಗಳನ್ನು ಪಡೆಯುವುದಿಲ್ಲ ಎಂಬುದನ್ನು ನೆನಪಿಡಬೇಕು.
  • ಅಪರಿಚಿತರು ಕಳುಹಿಸುವ ಯಾವುದೇ ಲಿಂಕ್ ಅನ್ನು ತೆರೆಯಬೇಡಿ. ನಿಮ್ಮ ಪಾಸ್​ವರ್ಡ್ ವಂಚಕರ ಕೈಸೇರಬಹುದು. ಈ ಎಲ್ಲದರ ಬಗ್ಗೆ ಎಚ್ಚರವಾಗಿರಿ.

ಮತ್ತಷ್ಟು ಉದ್ಯಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Mon, 19 September 22

ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ
ವಿಜಯೇಂದ್ರ ಫೋರ್ಜರಿ ಮಾಡಿದ್ದು ಸತ್ಯ ಅಂತ ಈಗಲೂ ಹೇಳುತ್ತೇನೆ: ಯತ್ನಾಳ್
ವಿಜಯೇಂದ್ರ ಫೋರ್ಜರಿ ಮಾಡಿದ್ದು ಸತ್ಯ ಅಂತ ಈಗಲೂ ಹೇಳುತ್ತೇನೆ: ಯತ್ನಾಳ್