AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata Motors: ಟಾಟಾ ಮೋಟಾರ್ಸ್​ನ ಈ ಎಲೆಕ್ಟ್ರಿಕ್ ಕಾರಿಗೆ ಸಂಸ್ಕೃತ ಹೆಸರು; 30 ನಿಮಿಷ ಚಾರ್ಜ್ ಮಾಡಿದರೆ 500 ಕಿ.ಮೀ. ಚಲಿಸುತ್ತದೆ

ಟಾಟಾ ಮೋಟಾರ್ಸ್​ನ ಅವಿನ್ಯಾ ಅನಾವರಣಗೊಳಿಸಲಾಗಿದೆ. ಇದು ಎಲೆಕ್ಟ್ರಿಕ್ ಕಾರು. 30 ನಿಮಿಷ ಚಾಋ್ಜ್ ಮಾಡಿದರೆ 500 ಕಿಲೋಮಿಟರ್ ಚಲಿಸಬಹುದು.

Tata Motors: ಟಾಟಾ ಮೋಟಾರ್ಸ್​ನ ಈ ಎಲೆಕ್ಟ್ರಿಕ್ ಕಾರಿಗೆ ಸಂಸ್ಕೃತ ಹೆಸರು; 30 ನಿಮಿಷ ಚಾರ್ಜ್ ಮಾಡಿದರೆ 500 ಕಿ.ಮೀ. ಚಲಿಸುತ್ತದೆ
ಅವಿನ್ಯಾ ಕಾರು
TV9 Web
| Edited By: |

Updated on: Apr 30, 2022 | 4:32 PM

Share

ಇನ್ನೂ ಮುಂದುಮುಂದೆ ಎಂಥೆಂಥ ಕಾರುಗಳ ಬರುತ್ತವೋ! ಈಗ ಟಾಟಾ ಮೋಟಾರ್ಸ್​ನವರು (Tata Motors) ಶುಕ್ರವಾರ ಶುದ್ಧಾನುಶುದ್ಧ ಎಲೆಕ್ಟ್ರಿಕ್ ಎಸ್​ಯುವಿ ಕಲ್ಪನೆಯ ಕಾರು ಅನಾವರಣಗೊಳಿಸಿದ್ದಾರೆ, ಅದರ ಹೆಸರು ಅವಿನ್ಯಾ (Avinya). ಕಂಪೆನಿ ಹೇಳಿಕೊಂಡಿರುವ ಪ್ರಕಾರ, 30 ನಿಮಿಷಗಳಷ್ಟು ರೀಚಾರ್ಜ್ ಮಾಡಿದರೆ 500 ಕಿಲೋಮೀಟರ್ ಚಲಿಸುತ್ತದೆ. 2025ನೇ ಇಸವಿಯಲ್ಲಿ ಈ ವಾಹನ ರಸ್ತೆಗೆ ಇಳಿಯುವ ಸಾಧ್ಯತೆ ಇದೆ. ಎಲೆಕ್ಟ್ರಿಕ್ ವಾಹನವು ಶುದ್ಧ EV GEN 3 ಮೇಲೆ ಆಧಾರವಾಗಿದೆ. ಅಲ್ಟ್ರಾ ಫಾಸ್ಟ್ ಚಾರ್ಜ್ ಸಾಮರ್ಥ್ಯವನ್ನು ಬ್ಯಾಟರಿ ಬೆಂಬಲಿಸುತ್ತದೆ. ಟಾಟಾ ಮೋಟಾರ್ಸ್ ಅಂಗಸಂಸ್ಥೆ ಟಾಟಾ ಪ್ರಯಾಣಿಕರ ಎಲೆಕ್ಟ್ರಿಕ್ ಮೊಬಿಲಿಟಿ ಜಾಗತಿಕವಾಗಿ ಅವಿನ್ಯಾವನ್ನು ಅನಾವರಣಗೊಳಿಸಲಾಗಿದೆ.

“ಅವಿನ್ಯಾ ಕಲ್ಪನೆಯನ್ನು ಸಾಕಾರಗೊಳಿಸುವಾಗ ಬೇರೆ ಯಾವುದೇ ಸಾಫ್ಟ್​ವೇರ್​ ಕಾರುಗಳಲ್ಲಿ ಇಷ್ಟು ಚೆನ್ನಾಗಿ ರೂಪುಗೊಂಡಿರದಂತೆ ಅಭಿವೃದ್ಧಿ ಮಾಡಲಾಗುವುದು, ಸುಸ್ಥಿರವಾಗಿ ಇರಲಿದೆ, ಜತೆಗೆ ಭೂಮಿ ಮೇಲಿನ ಕಾರ್ಬನ್ ಪ್ರಮಾಣ ಕಡಿಮೆ ಮಾಡಲಿದೆ,” ಎಂದು ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್​ನ ಮುಖ್ಯಸ್ಥ ಎನ್​.ಚಂದ್ರಶೇಖರನ್ ಹೇಳಿದ್ದಾರೆ.

ಈ ಕಾರಿನಲ್ಲಿ ಹಗುರ ತೂಕದ ವಸ್ತುಗಳನ್ನು ಬಳಸಲಾಗುವುದು. ಒಟ್ಟಾರೆಯಾಗಿ ತೂಕವನ್ನು ಕನಿಷ್ಠ ಮಟ್ಟಕ್ಕೆ ತಂದು, ಉತ್ತಮ ತೂಕದ ನಿರ್ವಹಣೆ ಮಾಡಲಾಗುವುದು. ಅಂದಹಾಗೆ ಈ ಕಾರಿನ ಹೆಸರು ಅವಿನ್ಯಾ. ಇದು ಸಂಸ್ಕೃತ ಪದ. ಇದರ ಅರ್ಥ ಆವಿಷ್ಕಾರ.

ಈ ಕಾರು ಹೊಸ ತಲೆಮಾರಿನ ತಂತ್ರಜ್ಞಾನದೊಂದಿಗೆ ಬರಲಿದೆ. ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಕಾರ್ಯ ನಿರ್ವಹಿಸಲಿದೆ. ಪ್ರಯಾಣದ ವೇಳೆ ಇದರ ಅನುಕೂಲ ಅನುಭವಕ್ಕೆ ಬರಲಿದೆ. ಈ ತಿಂಗಳ ಆರಂಭದಲ್ಲಿ ಟಾಟಾ ಮೋಟಾರ್ಸ್​ನಿಂದ ಮಧ್ಯಮ ಗಾತ್ರದ Curvv ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಾಯಿತು. ಇದು ಕಂಪೆನಿಯ ಲೈನ್​-ಅಪ್​ನಲ್ಲಿ ನೆಕ್ಸಾನ್ ಇವಿಗಿಂತ ಮೇಲೆ ಇರಲಿದೆ.

ಹೆಚ್ಚಿನ ಉದ್ಯಮ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು