AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸಣ್ಣಂಗೆ ಪಂಚಾಯತಿ ನಂಟು ಅಷ್ಟಿಷ್ಟಲ್ಲ..! 6ನೇ ಬಾರಿ ಅಖಾಡಕ್ಕೆ ಇಳಿದ ಸೋಲಿಲ್ಲದ ಅಣ್ಣ

ಪರಸಣ್ಣಂದು ರಾಜಕೀಯ ಕುಟುಂಬ. 50ವರ್ಷಗಳ ಹಿಂದೆ ಗ್ರೂಪ್​ ಪಂಚಾಯಿತಿ ವ್ಯವಸ್ಥೆಯಿದ್ದಾಗ ಇವರ ಅಜ್ಜ ಚೇರ್​ಮೆನ್​ ಆಗಿದ್ದರು. ತಾಯಿ ಹಾಲಮ್ಮ  2005ರಲ್ಲಿ ದಾವಣಗೆರೆ ಜಿಪಂ ಚುನಾವಣೆಯಲ್ಲಿ ಕಡ್ಲೇಬಾಳು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಅಧ್ಯಕ್ಷೆಯಾಗಿದ್ದರು.

ಪರಸಣ್ಣಂಗೆ ಪಂಚಾಯತಿ ನಂಟು ಅಷ್ಟಿಷ್ಟಲ್ಲ..! 6ನೇ ಬಾರಿ ಅಖಾಡಕ್ಕೆ ಇಳಿದ ಸೋಲಿಲ್ಲದ ಅಣ್ಣ
ಬಿ.ಕೆ.ಪರಶುರಾಮ್
Lakshmi Hegde
| Edited By: |

Updated on:Dec 21, 2020 | 3:06 PM

Share

ದಾವಣಗೆರೆ: ಇಲ್ಲಿನ ಮಾಗಾನಹಳ್ಳಿ ಸುತ್ತಮುತ್ತ ಪರಸಣ್ಣ ಎಂದರೆ ಚಿಕ್ಕಮಕ್ಕಳಿಗೂ ಗೊತ್ತು.. ಅಷ್ಟು ಹೆಸರುವಾಸಿ ಇವರು. ಎಲ್ಲರಿಂದಲೂ ಅಣ್ಣ ಎಂದೇ ಕರೆಸಿಕೊಳ್ಳುವ ಪರಸಣ್ಣಂಗೂ-ಪಂಚಾಯಿತಿಗೂ ಎಲ್ಲಿಲ್ಲದ ನಂಟು. ಎಷ್ಟೆಂದರೆ ಪಂಚಾಯತಿ​ ಪರಸಣ್ಣ ಎಂದೇ ಕರೆಯಲ್ಪಡುವಷ್ಟು !

ಸತತವಾಗಿ ಐದು ಬಾರಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿ.. ಇದೀಗ 6ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಹೊರಟಿರುವ ವಿಶೇಷ ವ್ಯಕ್ತಿ ಪರಸಣ್ಣನ ಬಗ್ಗೆ ಒಂದಷ್ಟು ಕುತೂಹಲಕರಾಗಿ ಮಾಹಿತಿಗಳು ಇಲ್ಲಿವೆ..

ಪರಸಣ್ಣನ ನಿಜವಾದ ಹೆಸರು ಬಿ.ಕೆ.ಪರಶುರಾಮ್​. ಮಾಗಾನಹಳ್ಳಿ ನಿವಾಸಿಯಾಗಿರುವ ಇವರು ಕಡ್ಲೇಬಾಳು ಗ್ರಾ.ಪಂ.ಗೆ ಸತತ ಐದು ಬಾರಿ ಆಯ್ಕೆಯಾಗಿದ್ದಾರೆ. ಒಟ್ಟು ಐದು ಬಾರಿ ಗ್ರಾ.ಪಂ.ಗೆ ಆಯ್ಕೆಯಾದ ಇವರು, 2000-2003, 2007-2010 ಹಾಗೂ 2015-2020ರ ಅವಧಿಯಲ್ಲಿ ಅಂದರೆ ಮೂರು ಬಾರಿ ಗ್ರಾ.ಪಂ. ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಕಡ್ಲೇಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ರಾಜಕೀಯ ಕುಟುಂಬ ಪರಸಣ್ಣಂದು ರಾಜಕೀಯ ಕುಟುಂಬ. 50 ವರ್ಷಗಳ ಹಿಂದೆ ಗ್ರೂಪ್​ ಪಂಚಾಯಿತಿ ವ್ಯವಸ್ಥೆಯಿದ್ದಾಗ ಇವರ ಅಜ್ಜ ಚೇರ್​ಮೆನ್​ ಆಗಿದ್ದರು. 1995ರ ಅವಧಿಯಲ್ಲಿ ದಾವಣಗೆರೆ ಚಿತ್ರದುರ್ಗ ಜಿಲ್ಲೆಯ ಭಾಗವೇ ಆಗಿತ್ತು. ಆ ವೇಳೆ ಪರಸಣ್ಣನವರ ತಂದೆ ಕೆಂಚಪ್ಪ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಇನ್ನು ತಾಯಿ ಹಾಲಮ್ಮ  2005ರಲ್ಲಿ ದಾವಣಗೆರೆ ಜಿಪಂ ಚುನಾವಣೆಯಲ್ಲಿ ಕಡ್ಲೇಬಾಳು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಅಧ್ಯಕ್ಷೆಯಾಗಿದ್ದರು.

ಹೀಗೆ ತಲೆತಲಾಂತರದಿಂದಲೂ ಪರಸಣ್ಣ ಕುಟುಂಬ ರಾಜಕೀಯದಲ್ಲಿ ಸಕ್ರಿಯವಾಗಿದೆ. ಒಂದು ವಿಶೇಷವೆಂದರೆ ಪರಸಣ್ಣನವರಿಗೂ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಸ್ಪರ್ಧಿಸುವಂತೆ ಆಹ್ವಾನ ಬಂದಿತ್ತು. ಆದರೆ ಅದನ್ನವರು ನಿರಾಕರಿಸಿದ್ದಾರೆ. ಗ್ರಾ.ಪಂ. ಎಂದರೆ ನನಗೆ ಬಲು ಇಷ್ಟ ಎನ್ನುವ ಪರಸಣ್ಣ ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಗ್ರಾ.ಪಂ. ಚುನಾವಣಾ ಕಣದಲ್ಲಿ BE, MBA ಪದವೀಧರರು.. ಅಭ್ಯರ್ಥಿಗಳಾಗಲು ಉದ್ಯೋಗವನ್ನೇ ತೊರೆದರು..

Published On - 2:14 pm, Mon, 21 December 20

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ