ಪರಂಗಿ ಹಣ್ಣು ತುಂಬಿಕೊಂಡು.. ಮಂಗಳಮುಖಿಯರ ಬಳಿ‌ ಹೋದ ಬೊಲೇರೋ ಚಾಲಕ ನಿಗೂಢ ಸಾವು!

ಬೊಲೇರೋ ಗಾಡಿಯಲ್ಲಿ ಪರಂಗಿಹಣ್ಣು ತುಂಬಿಕೊಂಡು ನಗರದ ಬಳಿ ಬಂದಿದ್ದ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಮಧ್ಯರಾತ್ರಿ ನಡೆದಿದೆ. ಚಳ್ಳಕೆರೆ ಮೂಲದ ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್(26) ಮೃತ ದುರ್ದೈವಿ.

ಪರಂಗಿ ಹಣ್ಣು ತುಂಬಿಕೊಂಡು.. ಮಂಗಳಮುಖಿಯರ ಬಳಿ‌ ಹೋದ ಬೊಲೇರೋ ಚಾಲಕ ನಿಗೂಢ ಸಾವು!
ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್
Follow us
|

Updated on: Dec 21, 2020 | 2:29 PM

ದೇವನಹಳ್ಳಿ: ಬೊಲೇರೋ ಗಾಡಿಯಲ್ಲಿ ಪರಂಗಿ ಹಣ್ಣು ತುಂಬಿಕೊಂಡು ನಗರದ ಬಳಿ ಬಂದಿದ್ದ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಚಳ್ಳಕೆರೆ ಮೂಲದ ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್ (26) ಮೃತ ದುರ್ದೈವಿ.

ಬಸವರಾಜ್​ ಮಂಗಳಮುಖಿಯರ ಬಳಿ‌ ಹೋಗಿದ್ದ ವೇಳೆ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಹೀಗಾಗಿ, ಹಣಕ್ಕಾಗಿ ಮಂಗಳಮುಖಿಯರೇ ಆತನನ್ನು ಹೊಡೆದು ಸಾಯಿಸಿರೋ ಶಂಕೆ ವ್ಯಕ್ತವಾಗಿದೆ. ಅಂದ ಹಾಗೆ, ರಾತ್ರಿ ವೇಳೆ ಹೆದ್ದಾರಿಯಲ್ಲಿ ನಿಂತು ಜನರನ್ನ ಸೆಳೆಯುಯುವ ಮಂಗಳಮುಖಿಯರು, ಕಳೆದ ರಾತ್ರಿ ಅದೇ ರೀತಿಯಲ್ಲಿ ಬಸವರಾಜ್​ನನ್ನು ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಬಳಿಕ, ಗಂಭೀರ ಸ್ಥಿತಿಯಲ್ಲಿದ್ದ ಚಾಲಕನನ್ನ ಆಸ್ವತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಬಸವರಾಜ್​ ಸಾವನ್ನಪಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್ ದುರಸ್ತಿ ವೇಳೆ ಅವಘಡ: ತೋಟದ ಮಾಲೀಕನ ಮಾತು ಕೇಳಿ ಕಂಬವೇರಿದ ಯುವಕ ಕರೆಂಟ್​ ಶಾಕ್​ಗೆ ಬಲಿ