AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸಿಬಿ ದಾಳಿ ನಂತರ.. 13 ದಿನದಿಂದ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ನಾಪತ್ತೆ!

ಎಸಿಬಿ ದಾಳಿ ಮಾಹಿತಿ ತಿಳಿದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ನಾಪತ್ತೆಯಾಗಿದ್ದಾರೆ.

ಎಸಿಬಿ ದಾಳಿ ನಂತರ.. 13 ದಿನದಿಂದ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ನಾಪತ್ತೆ!
ಎಸಿಬಿ ದಾಳಿ
shruti hegde
| Edited By: |

Updated on: Mar 17, 2021 | 3:04 PM

Share

ಕೊಪ್ಪಳ: ಎಸಿಬಿ ದಾಳಿ ಮಾಹಿತಿ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ನಾಪತ್ತೆಯಾಗಿದ್ದಾರೆ. ಕಳೆದ 13 ದಿನದಿಂದ ಉಮಾದೇವಿ ಸೊನ್ನದ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಮಾರ್ಚ್‌ 3 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ದಾಳಿಯಾಗಿತ್ತು. ಬಂದ್ ಆಗಿರೋ ಖಾಸಗಿ ಶಾಲೆಯ ಡಿಪಾಸಿಟ್ ಹಣ ವಾಪಸ್ ನೀಡಲು ಎಸ್​ಡಿಎ ಅರುಂಧತಿ ಬಳಿ ಹಣ ಕೊಡುವಂತೆ ಲಂಚ ಕೇಳಿದ್ದರು. ಈ ಸಮಯದಲ್ಲಿ ಎಸ್​ಡಿಎ ಅರುಂಧತಿ ಎಸಿಬಿ ಬಲೆಗೆ ಬಿದ್ದಿದ್ದರು. ಈ ವಿಷಯ ತಿಳಿದ ಉಮಾದೇವಿ ಪರಾರಿಯಾಗಿದ್ದಾರೆ. ಸರ್ಕಾರ ನೀಡಿರುವ ಸಿಮ್​ಕಾರ್ಡ್​ನೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ನಾಪತ್ತೆಯಾಗಿದ್ದಾರೆ. ಎಸಿಬಿ ಅಧಿಕಾರಿಗಳು ಉಮಾದೇವಿ ಸೊನ್ನದ ಅವರನ್ನು ಹುಡುಕುತ್ತಿದ್ದಾರೆ. ಇದುವರೆಗೂ ಪ್ರಕರಣಕ್ಕೆ ಸಂಭಂದಿಸಿದಂತೆ 48 ಜನರನ್ನ ವಿಚಾರಣೆ ಮಾಡಲಾಗಿದೆ.

ಇದನ್ನೂ ಓದಿ: ರೇಷ್ಮೆ ಇಲಾಖೆ ಅಧಿಕಾರಿಯಿಂದ ಲಂಚ ಸ್ವೀಕಾರ: ಎಸಿಬಿ ದಾಳಿ ವೇಳೆ ಸತ್ಯ ಬಯಲು

ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ಮಂಡ್ಯ, ಯಾದಗಿರಿಯಲ್ಲಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ