5 ದಿನಗಳ ಹಿಂದೆಯೇ ಚಂದ್ರಶೇಖರ್ ಗುರೂಜಿ ಕೊಲೆಯ ಸುಳಿವು ನೀಡಿದ್ದ ಆರೋಪಿ! ಫೇಸ್​​ಬುಕ್​ ಪೋಸ್ಟ್​​ನಲ್ಲಿ ಏನಿದೆ?

ಕೊಲೆ ಆರೋಪಿ ಮಹಾಂತೇಶ್ ಐದು ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ. ಆ ಪೋಸ್ಟ್​ನಲ್ಲಿ ಗುರೂಜಿಯನ್ನು ಕೊಲ್ಲುವ ಸುಳಿವು ಕೊಟ್ಟಿದ್ದ ಎಂದು ತಿಳಿದುಬಂದಿದೆ.

5 ದಿನಗಳ ಹಿಂದೆಯೇ ಚಂದ್ರಶೇಖರ್ ಗುರೂಜಿ ಕೊಲೆಯ ಸುಳಿವು ನೀಡಿದ್ದ ಆರೋಪಿ! ಫೇಸ್​​ಬುಕ್​ ಪೋಸ್ಟ್​​ನಲ್ಲಿ ಏನಿದೆ?
ಚಂದ್ರಶೇಖರ್ ಗುರೂಜಿ ಜೊತೆ ಇರುವ ಮಹಾಂತೇಶ್
Edited By:

Updated on: Jul 06, 2022 | 12:24 PM

ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್ನಲ್ಲಿ ನಿನ್ನೆ (ಜುಲೈ 6) ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ (Chandrashekhar Guruji) ಕೊಲೆ (Murder) ನಡೆದಿದೆ. ಈಗಾಗಲೇ ಕೊಲೆಗಾರರು ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ನಡೆಯುತ್ತಿದೆ. ಆರೋಪಿ ಮಹಾಂತೇಶ್ ಚಂದ್ರಶೇಖರ್ ಗುರೂಜಿ ಜೊತೆ ಕೆಲಸ ಮಾಡಿದವನು. ಅಪಾರ್ಟ್ಮೆಂಟ್ ವಿಚಾರಕ್ಕೆ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೊಲೆ ಆರೋಪಿ ಮಹಾಂತೇಶ್ ಐದು ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ. ಆ ಪೋಸ್ಟ್​ನಲ್ಲಿ ಗುರೂಜಿಯನ್ನು ಕೊಲ್ಲುವ ಸುಳಿವು ಕೊಟ್ಟಿದ್ದ ಎಂದು ತಿಳಿದುಬಂದಿದೆ.

ಐದು ದಿನಗಳ ಹಿಂದೆ ಆರೋಪಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಹಾಕಿದ್ದ. ಭಗವದ್ಗೀತೆಯ ಶ್ಲೋಕವನ್ನು ಪೋಸ್ಟ್ ಮಾಡಿದ್ದ ಆರೋಪಿ, ಕೊಲೆಗೆ ಮೊದಲೇ ನಿರ್ಧರಿಸಿದ್ದ. ‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ‌ ನೀಡಿರುವೆ ಪ್ರಭು. ಇನ್ನು ವಿಳಂಬವೇಕೆ ಪ್ರಭುವೇ? ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇ ಯುಗೇ…’ ಎಂದು ಬರೆದುಕೊಂಡಿದ್ದ.

ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದ ಮಹಾಂತೇಶ್

ಇದನ್ನೂ ಓದಿ
Agra Jama Masjid: ಆಗ್ರಾದ ಜಾಮಾ ಮಸೀದಿ ಮೆಟ್ಟಿಲಿನಡಿ ವಿಗ್ರಹವಿರುವ ಶಂಕೆ; ಉತ್ಖನನಕ್ಕೆ ವಿನಂತಿಸಿ ಹೈಕೋರ್ಟ್​ಗೆ ಅರ್ಜಿ
ತಮಿಳುನಾಡಿಗೆ ಆಡಿದ ಮಾತಿನಂತೆ ನಡೆದುಕೊಳ್ಳುವ ನಾಯಕನ ಅಗತ್ಯವಿದೆ: ವಿಕೆ ಶಶಿಕಲಾ
ಚಂದ್ರಶೇಖರ್ ಗುರೂಜಿಯವ ಅಂತ್ಯಕ್ರಿಯೆ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ
Covid 19: ಈ ನಗರದಲ್ಲಿ ಮಾಸ್ಕ್​ ಇಲ್ಲದೆ ಎಲ್ಲೆಂದರಲ್ಲಿ ಓಡಾಡಿದ್ರೆ 500 ರೂ. ದಂಡ

ಇದನ್ನೂ ಓದಿ: ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ: 5 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳು ವಶ

ಹೋಟೆಲ್​ನಲ್ಲಿ ಸುರಕ್ಷತೆ ಕೊರತೆ?
ಸ್ವಾಮೀಜಿ ಹತ್ಯೆಗೆ ಹೋಟೆಲ್ ಭದ್ರತಾ ಲೋಪ ಕಾರಣವಾಯ್ತಾ ಎಂಬ ಅನುಮಾನ ಮೂಡಿದೆ. ವಿಐಪಿ ಮುವೆಮೆಂಟ್ ಇದ್ದ ಹೋಟೆಲ್​ನಲ್ಲಿ ಸುರಕ್ಷತೆಯೇ ಇಲ್ಲ. ಮೆಟಲ್ ಡಿಟೆಕ್ಟರ್ ಇಲ್ಲದೇ ಆಡಳಿತ ಮಂಡಳಿ ಹೋಟೆಲ್ ನಡೆಸುದೆ. ಮೆಟಲ್ ಡಿಟೆಕ್ಟರ್ ಇದ್ದಿದ್ದರೆ ಸ್ವಾಮೀಜಿ ಬದುಕುತ್ತಿದ್ದರು ಎಂದು ಸ್ವಾಮೀಜಿ ಆಪ್ತರು ಹೇಳಿದರು.

ವೀರಶೈವ ಲಿಂಗಾಯತ ಧರ್ಮದ ಪ್ರಕಾರ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಮೂರು ಸಾವಿರ ಮಠದ ಸ್ವಾಮೀಜಿಗಳಿಂದ ಅಂತ್ಯಕ್ರಿಯೆ ಕಾರ್ಯ ನಡೆಯುತ್ತದೆ. 12 ಜನರ ತಂಡದಿಂದ ಅಂತ್ಯಕ್ರಿಯೆ ಕಾರ್ಯ ನಡೆಯಲಿದೆ ಎಂದು ಟಿವಿ9ಗೆ ಅರ್ಚಕರು ಮಾಹಿತಿ ನೀಡಿದ್ದಾರೆ‌. ಸ್ವಾಮೀಜಿ ಕೊಲೆಯಿಂದ ನಮಗೆಲ್ಲ ಭಯ ಆಗಿದೆ. ಸ್ವಾಮೀಜಿಗಳು ಗನ್ ಮ್ಯಾನ್ ಇಟ್ಟುಕೊಳ್ಳಬೇಕಿತ್ತು ಎಂದು ಹೇಳಿದರು.

Published On - 10:57 am, Wed, 6 July 22

Follow Us