AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPA ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆ ಟಾರ್ಗೆಟ್ ಮಾಡಿ ವಂಚನೆ: ಕೇರಳ ಮೂಲದ ಇಬ್ಬರ ಬಂಧನ

ನಂಬಿ ಬಂದವರಿಂದ ಲಕ್ಷಾಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ನಂತರ ಲೋನ್​ನ ಕಂತನ್ನು ಸರಿಯಾಗಿ ಕಟ್ಟದ ಕಾರಣ ಎನ್​ಪಿಎ ಪಟ್ಟಿಗೆ ಸೇರಿಸಲಾಗಿತ್ತು.

NPA ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆ ಟಾರ್ಗೆಟ್ ಮಾಡಿ ವಂಚನೆ: ಕೇರಳ ಮೂಲದ ಇಬ್ಬರ ಬಂಧನ
ಬಂಧಿತ ಆರೋಪಿಗಳು.
TV9 Web
| Edited By: |

Updated on: Jul 06, 2022 | 10:02 AM

Share

ಬೆಂಗಳೂರು: ಎನ್​​ಪಿಎ (NPA) ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆಗಳ (Bank Accounts) ಟಾರ್ಗೆಟ್ ಮಾಡಿ ವಂಚಿಸುತಿದ್ದ ಕೇರಳ ಮೂಲದ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಘವ್ ಲಾಲ್, ಪಿಳ್ಳೆ ಬಂಧಿತ ಆರೋಪಿಗಳು. ತಮ್ಮದೇ ಆದ ಬ್ಯಾಂಕ್​​ನ ಕೆಲ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದು, ಈ ವೇಳೆ ಎನ್​ಪಿ ಪಟ್ಟಿಯಲ್ಲಿರುವ ಅಕೌಂಟ್​ಗಳನ್ನ ಆರೋಪಿಗಳು ಪತ್ತೆ ಮಾಡುತ್ತಿದ್ದು, 5 ಕೋಟಿಗೂ ಅಧಿಕ ಲೋನ್ ಪಡೆದ ಖಾತೆಗಳೇ ಇವರ ಟಾರ್ಗೆಟ್. ನಂತರ ಖಾತೆಯ ಹೊಲ್ಡರ್​ಗೆ ಕಾಲ್ ಮಾಡಿ ಆಮಿಷ ಒಡ್ಡುತ್ತಿದ್ದರು. ಕಡಿಮೆ ಹಣಕ್ಕೆ ಎಲ್ಲವನ್ನೂ ಕ್ಲಿಯರ್ ಮಾಡಿಸೊದಾಗಿ ಹೇಳಿ, ನಂಬಿ ಬಂದವರಿಂದ ಲಕ್ಷಾಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ನಂತರ ಲೋನ್​ನ ಕಂತನ್ನು ಸರಿಯಾಗಿ ಕಟ್ಟದ ಕಾರಣ ಎನ್​ಪಿಎ ಪಟ್ಟಿಗೆ ಸೇರಿಸಲಾಗಿತ್ತು.

ಇದನ್ನೂ ಓದಿ: ನಾಸಿಕ್​ನಲ್ಲಿ ಅಫ್ಘಾನಿಸ್ತಾನದ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನಿಗೆ ಗುಂಡಿಕ್ಕಿ ಹತ್ಯೆ

ಈ ವೇಳೆ ಪರಿಚಯವಾದ ಇಬ್ಬರಿಂದ ವಂಚನೆ ಮಾಡಿದ್ದಾರೆ. ಬ್ಯಾಂಕ್​ನ ಉದ್ಯೋಗಿಗಳ ಜೊತೆ ಸಂಬಂಧವಿದ್ದು, ಹಣ ಕೊಟ್ಟರೆ ಕೆಲಸ ಆಗತ್ತೆ ಎಂದು ನಂಬಿಸಿ ವಂಚಿಸಿದ್ದಾರೆ. ವಂಚನೆಗೊಳಗಾದ ಸತೀಶನ್​ ಬಳಿಕ ಜಯನಗರ ಪೊಲೀಸ್ ಠಾಣೆಗೆ ವಂಚನೆ ಬಗ್ಗೆ ದೂರು ನೀಡಿದ್ದು, ಜಯನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಮತ್ತಷ್ಟು ಮಂದಿಗೆ ಇದೇ ಮಾದರಿ ವಂಚನೆಯ ಅನುಮಾನ ವ್ಯಕ್ತವಾಗಿದೆ. ಸದ್ಯ ಜಯನಗರ ಪೊಲೀಸರಿಂದ ತನಿಖೆ ನಡೆಯುತ್ತಿದೆ.

 3 ಜನ ಗಾಂಜಾ ಮಾರಾಟಗಾರರ ಬಂಧನ:

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸರಿಂದ 3 ಜನ ಗಾಂಜಾ ಮಾರಾಟಗಾರರ ಬಂಧಿಸಿರುವಂತಹ ಘಟನೆ ನಡೆದಿದೆ. ಸೈಯದ್ ನೂರ್, ಅಬ್ಬಲ್ ಖಾನ್, ಇರ್ಪಾನ್ ಖಾನ್ ಬಂಧಿತ ಆರೋಪಿ. 10ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 51ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ. ನೈಸ್​ಗೆ ಸಂಸ್ಥೆಗೆ ಸೇರಿದ ನವಿಲೆ ಲೇಔಟ್ ನಲ್ಲಿ ಆರೋಪಿಗಳು ಬಲೆಗೆ ಬಿದಿದ್ದಾರೆ. ಇನ್ನೋರ್ವ ಪ್ರಮುಖ  ಆರೋಪಿ ಆಂದ್ರ ಪ್ರದೇಶದ ದೇವುಗಾಗಿ ಪೊಲೀಸರ ಶೋಧ ನಡೆಯುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ; India Covid Updates: ಭಾರತದಲ್ಲಿ ಹೊಸದಾಗಿ 16,159 ಮಂದಿಗೆ ಕೊರೊನಾ ಸೋಂಕು, 28 ಸಾವು

Follow Us
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ