AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPA ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆ ಟಾರ್ಗೆಟ್ ಮಾಡಿ ವಂಚನೆ: ಕೇರಳ ಮೂಲದ ಇಬ್ಬರ ಬಂಧನ

ನಂಬಿ ಬಂದವರಿಂದ ಲಕ್ಷಾಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ನಂತರ ಲೋನ್​ನ ಕಂತನ್ನು ಸರಿಯಾಗಿ ಕಟ್ಟದ ಕಾರಣ ಎನ್​ಪಿಎ ಪಟ್ಟಿಗೆ ಸೇರಿಸಲಾಗಿತ್ತು.

NPA ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆ ಟಾರ್ಗೆಟ್ ಮಾಡಿ ವಂಚನೆ: ಕೇರಳ ಮೂಲದ ಇಬ್ಬರ ಬಂಧನ
ಬಂಧಿತ ಆರೋಪಿಗಳು.
TV9 Web
| Edited By: |

Updated on: Jul 06, 2022 | 10:02 AM

Share

ಬೆಂಗಳೂರು: ಎನ್​​ಪಿಎ (NPA) ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆಗಳ (Bank Accounts) ಟಾರ್ಗೆಟ್ ಮಾಡಿ ವಂಚಿಸುತಿದ್ದ ಕೇರಳ ಮೂಲದ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಘವ್ ಲಾಲ್, ಪಿಳ್ಳೆ ಬಂಧಿತ ಆರೋಪಿಗಳು. ತಮ್ಮದೇ ಆದ ಬ್ಯಾಂಕ್​​ನ ಕೆಲ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದು, ಈ ವೇಳೆ ಎನ್​ಪಿ ಪಟ್ಟಿಯಲ್ಲಿರುವ ಅಕೌಂಟ್​ಗಳನ್ನ ಆರೋಪಿಗಳು ಪತ್ತೆ ಮಾಡುತ್ತಿದ್ದು, 5 ಕೋಟಿಗೂ ಅಧಿಕ ಲೋನ್ ಪಡೆದ ಖಾತೆಗಳೇ ಇವರ ಟಾರ್ಗೆಟ್. ನಂತರ ಖಾತೆಯ ಹೊಲ್ಡರ್​ಗೆ ಕಾಲ್ ಮಾಡಿ ಆಮಿಷ ಒಡ್ಡುತ್ತಿದ್ದರು. ಕಡಿಮೆ ಹಣಕ್ಕೆ ಎಲ್ಲವನ್ನೂ ಕ್ಲಿಯರ್ ಮಾಡಿಸೊದಾಗಿ ಹೇಳಿ, ನಂಬಿ ಬಂದವರಿಂದ ಲಕ್ಷಾಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ನಂತರ ಲೋನ್​ನ ಕಂತನ್ನು ಸರಿಯಾಗಿ ಕಟ್ಟದ ಕಾರಣ ಎನ್​ಪಿಎ ಪಟ್ಟಿಗೆ ಸೇರಿಸಲಾಗಿತ್ತು.

ಇದನ್ನೂ ಓದಿ: ನಾಸಿಕ್​ನಲ್ಲಿ ಅಫ್ಘಾನಿಸ್ತಾನದ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನಿಗೆ ಗುಂಡಿಕ್ಕಿ ಹತ್ಯೆ

ಈ ವೇಳೆ ಪರಿಚಯವಾದ ಇಬ್ಬರಿಂದ ವಂಚನೆ ಮಾಡಿದ್ದಾರೆ. ಬ್ಯಾಂಕ್​ನ ಉದ್ಯೋಗಿಗಳ ಜೊತೆ ಸಂಬಂಧವಿದ್ದು, ಹಣ ಕೊಟ್ಟರೆ ಕೆಲಸ ಆಗತ್ತೆ ಎಂದು ನಂಬಿಸಿ ವಂಚಿಸಿದ್ದಾರೆ. ವಂಚನೆಗೊಳಗಾದ ಸತೀಶನ್​ ಬಳಿಕ ಜಯನಗರ ಪೊಲೀಸ್ ಠಾಣೆಗೆ ವಂಚನೆ ಬಗ್ಗೆ ದೂರು ನೀಡಿದ್ದು, ಜಯನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಮತ್ತಷ್ಟು ಮಂದಿಗೆ ಇದೇ ಮಾದರಿ ವಂಚನೆಯ ಅನುಮಾನ ವ್ಯಕ್ತವಾಗಿದೆ. ಸದ್ಯ ಜಯನಗರ ಪೊಲೀಸರಿಂದ ತನಿಖೆ ನಡೆಯುತ್ತಿದೆ.

 3 ಜನ ಗಾಂಜಾ ಮಾರಾಟಗಾರರ ಬಂಧನ:

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸರಿಂದ 3 ಜನ ಗಾಂಜಾ ಮಾರಾಟಗಾರರ ಬಂಧಿಸಿರುವಂತಹ ಘಟನೆ ನಡೆದಿದೆ. ಸೈಯದ್ ನೂರ್, ಅಬ್ಬಲ್ ಖಾನ್, ಇರ್ಪಾನ್ ಖಾನ್ ಬಂಧಿತ ಆರೋಪಿ. 10ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 51ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ. ನೈಸ್​ಗೆ ಸಂಸ್ಥೆಗೆ ಸೇರಿದ ನವಿಲೆ ಲೇಔಟ್ ನಲ್ಲಿ ಆರೋಪಿಗಳು ಬಲೆಗೆ ಬಿದಿದ್ದಾರೆ. ಇನ್ನೋರ್ವ ಪ್ರಮುಖ  ಆರೋಪಿ ಆಂದ್ರ ಪ್ರದೇಶದ ದೇವುಗಾಗಿ ಪೊಲೀಸರ ಶೋಧ ನಡೆಯುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ; India Covid Updates: ಭಾರತದಲ್ಲಿ ಹೊಸದಾಗಿ 16,159 ಮಂದಿಗೆ ಕೊರೊನಾ ಸೋಂಕು, 28 ಸಾವು

Follow Us
Web contact
Web contact

TV9 Kannada

Read More
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ