AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೆಶ್ ಫಿಶ್‌ ತಿಂತಾ ಇದ್ದ ಜನರಿಗೆ ಆತಂಕ.. ಮೀನುಗಳ ಸಂರಕ್ಷಣೆಗೆ ಫಾರ್ಮಾಲಿನ್ ಬಳಕೆ?

ಫ್ರೆಶ್ ಫಿಶ್‌ ತಿಂತಾ ಇದೀವಿ ಅನ್ನೋ ಜನರಿಗೆ ಆತಂಕ ಎದುರಾಗಿದೆ. ಮೀನು ಕೆಡದಂತೆ ಫಾರ್ಮಾಲಿನ್ ಹಾಕ್ತಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಶವ ಕೆಡದಂತೆ ಹಾಕುವ ಈ ಕೆಮಿಕಲ್ ಮಿಶ್ರಿತ ಮೀನು ತಿಂದ್ರೆ ದೇಹಕ್ಕೆ ಹಾನಿಯಾಗುತ್ತೆ ಅನ್ನೋ ಭಯ ಜನರಲ್ಲಿ ಉಂಟಾಗಿದೆ.

ಫ್ರೆಶ್ ಫಿಶ್‌ ತಿಂತಾ ಇದ್ದ ಜನರಿಗೆ ಆತಂಕ.. ಮೀನುಗಳ ಸಂರಕ್ಷಣೆಗೆ ಫಾರ್ಮಾಲಿನ್ ಬಳಕೆ?
ಆಯೇಷಾ ಬಾನು
| Edited By: |

Updated on: Dec 18, 2020 | 2:37 PM

Share

ಉಡುಪಿ: ಬಂಗುಡೆ ತವಾ ಫ್ರೈ.. ಬೂತಾಯ್ ರವಾ ಫ್ರೈ.. ಫಿಶ್ ಮಸಾಲಾ.. ಕೆಂಪ್ ಕೆಂಪ್‌ ಆಗಿ ಮಸಾಲ ಹಚ್ಚಿ, ಅದಕ್ಕೊಂದ್‌ ಸ್ವಲ್ಪ ನಿಂಬೆ ಹುಳಿ ಹಾಕಿ ಹಸಿ ಹಸಿ ಮೀನನ್ನ ಬಾಣಲೆಯಲ್ಲಿ ಹಾಕಿ ಫ್ರೈ ಮಾಡಿದ್ರೆ ಎಂಥಾ ಟೇಸ್ಟ್ ಮಾರಾಯ್ರೇ..

ಕರಾವಳಿಯ ಮೀನಿನ ಟೆಸ್ಟ್‌ ಮುಂದೆ ಯಾವ್‌ ಟೆಸ್ಟ್‌ ಇಲ್ಲ ಬಿಡಿ. ರುಚಿ ರುಚಿಯಾದ ಮೀನು ಸಿಕ್ರೆ ಯಾರ್ ಬಿಡ್ತಾರೆ ಹೇಳಿ. ಇಂತಹ ಮೀನುಗಳನ್ನ ಆರ್ಭಟಿಸೋ ಸಮುದ್ರದಲ್ಲಿ ಕಡಲ ಮಕ್ಕಳು ಹಿಡ್ಕೊಂಡು ಬರ್ತಾರೆ. ಆದ್ರೆ ಈ ಕರಾವಳಿಯ ಮೀನಿಗೆ ಕಳಂಕ ಮೆತ್ತಿಕೊಂಡಿದೆ.

ಫ್ರೆಶ್ ಫಿಶ್‌ ತಿಂತಾ ಇದೀವಿ ಅನ್ನೋ ಜನರಿಗೆ ಆತಂಕ ಎದುರಾಗಿದೆ. ಮೀನು ಕೆಡದಂತೆ ಫಾರ್ಮಾಲಿನ್ ಹಾಕ್ತಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಶವ ಕೆಡದಂತೆ ಹಾಕುವ ಈ ಕೆಮಿಕಲ್ ಮಿಶ್ರಿತ ಮೀನು ತಿಂದ್ರೆ ದೇಹಕ್ಕೆ ಹಾನಿಯಾಗುತ್ತೆ ಅನ್ನೋ ಭಯ ಜನರಲ್ಲಿ ಉಂಟಾಗಿದೆ. ಅಪಾಯಕಾರಿ ಕೆಮಿಕಲ್‌ ಅನ್ನ ಕರಾವಳಿಯ ಮೀನುಗಾರರು ಬಳಸುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದ್ದು, ಡಿಸಿಗೆ ದೂರು ನೀಡಲಾಗಿದೆ.

ಆರೋಪಗಳನ್ನು ತಳ್ಳಿ ಹಾಕಿದ ಮೀನುಗಾರರ ಮುಖಂಡರು: ಆಳ ಸಮುದ್ರದ ಮೀನುಗಾರಿಕೆಗೆ ತೆರಳುವ ಬೋಟುಗಳು ಎರಡು ವಾರ ಕಡಲಿನಲ್ಲೇ ಇರುತ್ತವೆ. ಈ ಸಂದರ್ಭದಲ್ಲಿ ಹಿಡಿದ ಮೀನು ಹಾಳಾಗಬಾರದು ಅಂತಾ ಅದಕ್ಕೆ ಮಂಜುಗಡ್ಡೆ ಹಾಕುತ್ತಾರೆ. ಆದರೆ ಮಲ್ಪೆಯಲ್ಲಿ ಫಾರ್ಮಾಲಿನ್ ಬಳಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಹೊರ ಜಿಲ್ಲೆಗಳಿಂದ ಅನೇಕ ಬೋಟುಗಳು ಮಲ್ಪೆ, ಮಂಗಳೂರು, ಕಾರವಾರ ಬಂದರುಗಳಿಗೆ ಬಂದು ಮೀನು ಮಾರಾಟ ಮಾಡುತ್ತಿದ್ದು, ಇವರಲ್ಲಿ ಕೆಲವರು ಕೆಮಿಕಲ್ ಬಳಸಿ ಸಂಸ್ಕರಣೆ ಮಾಡುತ್ತಾರೆ ಅನ್ನೋ ಆರೋಪ ಕೇಳಿಬಂದಿದೆ. ಆದ್ರೆ ಮೀನುಗಾರರ ಮುಖಂಡರು ಆರೋಪವನ್ನ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸರಿಯಾದ ತನಿಖೆ ನಡೆಸದೆ ಸುಖಾಸುಮ್ಮನೆ ಆರೋಪ ಮಾಡಬಾರದು ಅಂತಾ ಮೀನುಗಾರ ಮುಖಂಡರು ಹೇಳಿದ್ದಾರೆ.

ತಪ್ಪು ಕಂಡು ಬಂದ್ರೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮೊದಲೇ ಮೀನುಗಾರ ಸಮುದಾಯದ್ದು ಹಗ್ಗದ ಮೇಲಿನ ನಡುಗೆ, ಸ್ವಲ್ಪ ಆಯ ತಪ್ಪಿದರೂ ಬೀಳೋದು ಖಚಿತ. ಸದ್ಯ ವೈಜ್ಞಾನಿಕ ರೀತಿಯಲ್ಲಿ ಪರಿಶೀಲನೆ ನಡೆಸಿ ಮೀನುಗಾರರ ಜೊತೆಗೆ ಗ್ರಾಹಕರ ಹಿತವನ್ನೂ ಕಾಯಬೇಕಿದೆ.

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ