AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಭಾಗ್ಯ ಯೋಜನೆ: ಆಹಾರ ಇಲಾಖೆಗೆ 200 ಕೋಟಿ ಉಳಿತಾಯ ಮಾಡಿದ ‘5 ಕೆಜಿ ಅಕ್ಕಿ ಹಣ’

ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ಹಣ ನೀಡಲಾಗುತ್ತಿದೆ. ಇದು ಪಡಿತರ ವಿತರಕರ ಕಮಿಷನ್, ಸಾರಿಗೆ ವೆಚ್ಚ ಉಳಿತಾಯಕ್ಕೆ ಸಹಕಾರಿಯಾಗಿದೆ. ಆಹಾರ ಇಲಾಖೆಗೆ ಪ್ರತಿ ತಿಂಗಳಿಗೆ ಬರೋಬ್ಬರಿ 200 ಕೋಟಿ ಉಳಿತಾಯವಾಗುತ್ತಿದೆ. ಈ ಪ್ಲಾನ್​ನಿಂದ ಲಾಭವಾಗಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕರು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆ: ಆಹಾರ ಇಲಾಖೆಗೆ 200 ಕೋಟಿ ಉಳಿತಾಯ ಮಾಡಿದ '5 ಕೆಜಿ ಅಕ್ಕಿ ಹಣ'
ಅನ್ನಭಾಗ್ಯ ಯೋಜನೆ: ಆಹಾರ ಇಲಾಖೆಗೆ 200 ಕೋಟಿ ಉಳಿತಾಯ ಮಾಡಿದ '5 ಕೆಜಿ ಅಕ್ಕಿ ಹಣ'
TV9 Web
| Updated By: Rakesh Nayak Manchi|

Updated on:Jan 05, 2024 | 2:23 PM

Share

ಬೆಂಗಳೂರು, ಜ.5: ಅನ್ನಭಾಗ್ಯ ಯೋಜನೆಯಡಿ (Anna Bhagya) ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ಹಣ ನೀಡುತ್ತಿರುವುದು ಆಹಾರ ಇಲಾಖೆಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಡಿಬಿಟಿ ಮೂಲಕ ಪಡಿತರ ಫಲಾನುಭವಿಗೆ ನೇರ ಹಣ ವರ್ಗಾವಣೆ ಆಗುತ್ತಿರುವುದರಿಂದ ಪಡಿತರ ವಿತರಕರ ಕಮಿಷನ್, ಸಾರಿಗೆ ವೆಚ್ಚ ಉಳಿತಾಯವಾಗುತ್ತಿದೆ. ಇದರಿಂದಾಗಿ ಇಲಾಖೆಗೆ ಪ್ರತಿ ತಿಂಗಳು ಬರೋಬ್ಬರಿ 200 ಕೋಟಿ ರೂ. ಉಳಿತಾಯವಾಗುತ್ತಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕರು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಇನ್ನೊಂದೆಡೆ, ಕೇಂದ್ರ ಸರ್ಕಾರವು ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಅಕ್ಕಿಯ ಬದಲು ರಾಜ್ಯ ಸರ್ಕಾರ ಹಣ ನೀಡುತ್ತಿದ್ದು, ಇದನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ.

ಇದನ್ನೂ ಓದಿ: ಯಾದಗಿರಿ: ಬಿಜೆಪಿ ಮುಖಂಡನ ಸೋದರನ ರೈಸ್ ಮಿಲ್​ನಲ್ಲಿ 700 ಕ್ವಿಂಟಾಲ್ ಅಕ್ಕಿ ಜಪ್ತಿ

ಈ ಪ್ಲಾನ್​ನಿಂದ ಲಾಭವಾಗಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಗ್ಯಾನೇಂದ್ರ ಕುಮಾರ್ ಹೇಳಿದ್ದಾರೆ. ಸದ್ಯ ಎಪಿಎಲ್ ಕಾರ್ಡ್​ದಾರರು ಪಡಿತರ ತೆಗೆದುಕೊಳ್ಳುವ ಪ್ರಮಾಣ ಕೂಡ ಕುಸಿತವಾಗಿದೆ. ಈಗ ಇರುವ ಬಿಪಿಎಲ್ ಕಾರ್ಡ್​ದಾರರಿಗೆ ಪಡಿತರ ತಲುಪುತ್ತಿದೆ ಎಂದರು.

ವರದಿ: ಶಾಂತ್​ಕುಮಾರ್ ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Fri, 5 January 24