Sign In

By signing in or creating an account, you agree with Associated Broadcasting Company's Terms & Conditions and Privacy Policy.

Bagalkot century school: ಶತಮಾನೋತ್ಸವದ ಅಂಚಿನಲ್ಲಿ ಮೇಲ್ಛಾವಣಿ ಕುಸಿದು, ಮಕ್ಕಳಿಗೆ ಆಕಾಶ ದರ್ಶನ ಭಾಗ್ಯ! ಇದು ಸರಕಾರಿ ಮಾದರಿ ಶಾಲೆ

ಮೇಲ್ಛಾವಣಿ ಕುಸಿದು ಆಕಾಶ ದರ್ಶನ ಭಾಗ್ಯ! ಕೊಠಡಿಯೊಳಗೆ ವಿದ್ಯಾರ್ಥಿಗಳ ಬದಲು ಹಂಚು ಕಟ್ಟಿಗೆ. ಇದು ಬಾಗಲಕೋಟೆ ‌ಜಿಲ್ಲೆ ಇಳಕಲ್ ತಾಲ್ಲೂಕಿನ ಗುಡೂರು ಸರಕಾರಿ ಗಂಡು ಮಕ್ಕಳ‌ ಮಾದರಿ ಶಾಲೆ! ಸರಕಾರಿ ಶಾಲೆ ಅಂದರೆ ಯಾಕೆ ಜನ ನಿರ್ಲಕ್ಷ್ಯ ಮಾಡ್ತಾರೆ ಅನ್ನೋದಕ್ಕೆ ಇಂತಹ ಸ್ಥಿತಿಯೇ ಕಾರಣ ಅಂದರೆ ತಪ್ಪಿಲ್ಲ.

Bagalkot century school: ಶತಮಾನೋತ್ಸವದ ಅಂಚಿನಲ್ಲಿ ಮೇಲ್ಛಾವಣಿ ಕುಸಿದು, ಮಕ್ಕಳಿಗೆ ಆಕಾಶ ದರ್ಶನ ಭಾಗ್ಯ! ಇದು ಸರಕಾರಿ ಮಾದರಿ ಶಾಲೆ
ಬಾಗಲಕೋಟೆ ‌ಜಿಲ್ಲೆ: ಇದು ಸರಕಾರಿ ಮಾದರಿ ಶಾಲೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on:Aug 02, 2023 | 9:55 AM

ಅದು ಸುಮಾರು ೧೫೬ ವರ್ಷದ ಹಳೆ ಶಾಲೆ. ಶತಮಾನೋತ್ಸವ ಶಾಲೆ ಆದ ಕಾರಣ ಆ ಶಾಲೆ‌ ಮೇಲೆ ಜನರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಅಭಿಮಾನ. ಆದರೆ ಅಂತಹ ಶಾಲೆಯ ಐದು ಕೊಠಡಿಗಳ‌ ಮೇಲ್ಛಾವಣಿ ನೆಲಕಚ್ಚಿದೆ. ಇತ್ತೀಚೆಗೆ ನಿರಂತರ ಸುರಿದ ಮಳೆ ಗಾಳಿಗೆ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, ಆಕಾಶ ಕಾಣುತ್ತಿದೆ. ಕೊಠಡಿಗಳು, ಮೂಲಭೂತ ಸೌಲಭ್ಯ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಮೇಲ್ಛಾವಣಿ ಸಂಪೂರ್ಣ ಕುಸಿದು (roof collapse) ಆಕಾಶ ದರ್ಶನ, ಕೊಠಡಿಯೊಳಗೆ ವಿದ್ಯಾರ್ಥಿಗಳ (students) ಬದಲು ಹಂಚು ಕಟ್ಟಿಗೆ. ಹೊರಗಡೆ ವಿದ್ಯಾರ್ಥಿಗಳಿಗೆ ಪಾಠ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ‌ಜಿಲ್ಲೆ ಇಳಕಲ್ ತಾಲ್ಲೂಕಿನ ಗುಡೂರು (ilkal, gudur) ಸರಕಾರಿ ಗಂಡು ಮಕ್ಕಳ‌ ಶಾಲೆಯಲ್ಲಿ. ಸರಕಾರಿ ಶಾಲೆ (Bagalkot century school) ಅಂದರೆ ಯಾಕೆ ಜನರು ನಿರ್ಲಕ್ಷ್ಯ ಮಾಡ್ತಾರೆ ಅನ್ನೋದಕ್ಕೆ ಇಂತಹ ಸ್ಥಿತಿಯೇ ಕಾರಣ ಅಂದರೆ ತಪ್ಪಿಲ್ಲ.

ಇದು ಗೂಡೂರು ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ‌ ಮಾದರಿ ಶಾಲೆ. ೧೮೬೭ ರಲ್ಲಿ ನಿರ್ಮಾಣವಾದ ಶತಮಾನೋತ್ಸವ ಶಾಲೆ. ಶಾಲೆಯ ಐದು ಕೊಠಡಿಗಳ ಸ್ಥಿತಿ ನೋಡಿದರೆ ಸರಕಾರಿ ಶಾಲೆಯ ದುಃಸ್ಥಿತಿ ಅರ್ಥವಾಗುತ್ತದೆ. ಶತಮಾನದ ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳಿದ್ದುಎಲ್ಲವೂ ಶಿಥಿಲಾವಸ್ಥೆಗೆ ತಲುಪಿವೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಸುರಿದ ಮಳೆ ಗಾಳಿಗೆ ಎಲ್ಲ ಕೊಠಡಿಗಳ‌ ಮೇಲ್ಛಾವಣಿಯೇ ಕುಸಿದು ಬಿದ್ದಿದೆ.

ಹಂಚು ಕಟ್ಟಿಗೆಗಳು ಎಲ್ಲವೂ ಕೊಠಡಿಗಳಲ್ಲಿ ತುಂಬಿಕೊಂಡಿವೆ. ಅಂದು ಅದೃಷ್ಟವಶಾತ್ ವಿದ್ಯಾರ್ಥಿಗಳು ಪಕ್ಕದ ಬೇರೆ ಕೊಠಡಿಯಲ್ಲಿ ಇದ್ದ ಕಾರಣ ಆಗುವ ಅನಾಹುತ ತಪ್ಪಿದೆ. ಹಳೆ ಕೊಠಡಿಗಳ ಭಯದಲ್ಲಿರುವ ವಿದ್ಯಾರ್ಥಿಗಳು ಅಂದು ನಾವು ಆ ಕೊಠಡಿಯಲ್ಲಿಯೇ ಇದ್ದಿದ್ದರೆ ಉಳಿಯುತ್ತಾನೇ ಇರಲಿಲ್ಲ. ಈಗಲೂ ಆಟ ಆಡೋದಕ್ಕೆ ಭಯ ಆಗ್ತಿದೆ. ಜೊತೆಗೆ ಕಂಬೈಂಡ್ ಆಗಿ ಕೂರಿಸಿ ಪಾಠ ಮಾಡೋದರಿಂದ ಪಾಠ ಅರ್ಥ ಆಗ್ತಿಲ್ಲ. ನಮಗೆ ಹೊಸ ಕಟ್ಟಡ ಕಟ್ಟಿಸಿ ಕೊಡಿ ಅಂತಿದ್ದಾರೆ.

ಗೂಡೂರು ಗ್ರಾಮದ ಈ ಶಾಲೆ ೧೮೬೭ ರಲ್ಲಿ ನಿರ್ಮಾಣವಾಗಿದೆ. ಇಲ್ಲಿ ೧ ರಿಂದ ೮ ನೇ ತರಗತಿ ಇದ್ದು ೩೧೦ ವಿದ್ಯಾರ್ಥಿಗಳು ಕನ್ನಡ ಮಾದ್ಯಮದಲ್ಲಿ ಓದುತ್ತಿದ್ದಾರೆ. ಇನ್ನು ಇಲ್ಲಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ ಕೂಡ ಇದ್ದು, ಒಂದರಿಂದ ಮೂರರವರೆಗೆ ಇಂಗ್ಲೀಷ್ ಮಾಧ್ಯಮದಲ್ಲಿ ೮೫ ಜನ ವಿದ್ಯಾರ್ಥಿಗಳಿದ್ದಾರೆ. ಇಂತಹ ಮಾದರಿ ಶಾಲೆಯಲ್ಲಿ ಕೊಠಡಿ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ: Karnataka Gruha Jyothi Scheme: ಗೃಹ ಜ್ಯೋತಿ ಯೋಜನೆಯಡಿ ಸೊನ್ನೆ ಕರೆಂಟ್ ಬಿಲ್ ಕೊಟ್ಟಿದ್ದಕ್ಕೆ ಬೆಳಗಾವಿ ಮಹಿಳೆ ಫುಲ್ ಖುಷ್!

ಶಾಲೆಗೆ ಒಟ್ಟು ಹದಿನಾಲ್ಕು ಕೊಠಡಿಗಳ ಅವಶ್ಯಕತೆಯಿದೆ. ಆದರೆ ಒಂಬತ್ತು ಕೊಠಡಿ ಮಾತ್ರವಿದ್ದು ಇನ್ನು ಐದು ಕೊಠಡಿಗಳ ಅವಶ್ಯವಿದೆ. ಕೊಠಡಿ ಕೊರತೆ ಕಾರಣ ಕಂಬೈಂಡ್ ಹಾಗೂ ಮೈದಾನದಲ್ಲಿ ವೇದಿಕೆಯಲ್ಲಿ ಪಾಠ ಮಾಡಲಾಗುತ್ತಿದೆ. ಶಾಲೆಗೆ ಶಿಕ್ಷಕರು ಕೂಡ ಬೇಕಾಗಿದೆ. ಇದೆಲ್ಲದರ ಜೊತೆಗೆ ಶೌಚಾಲಯ, ಕಂಪೌಂಡ್ ಅಗತ್ಯವಿದ್ದು ಶತಮಾನೋತ್ಸವ ಶಾಲೆಗೆ ಕಾಯಕಲ್ಪ ಕಲ್ಪಿಸಬೇಕಿದೆ. ಕೊಠಡಿ ಬಗ್ಗೆ ಶಿಕ್ಷಕರು ‌ಮೇಲಾಧಿಕಾರಿಗಳ‌ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ಹೊಸ ಕೊಠಡಿ, ಕಂಪೌಂಡ್, ಶೌಚಾಲಯ ನಿರ್ಮಿಸಿಕೊಡಬೇಕೆಂದು ಶಿಕ್ಷಕರು ಕೂಡ ಮನವಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಶತಮಾನೋತ್ಸವ ಶಾಲೆ ಸ್ಥಿತಿ ಅಧೋಗತಿಗೆ ತಲುಪಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಸುಸಜ್ಜಿತ ಕೊಠಡಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕಿದೆ.

ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:54 am, Wed, 2 August 23

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು