AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್.ಸಿ ಎಸ್.​ಟಿ ಕುಟುಂಬಗಳಿಗೆ 75 ಯುನಿಟ್ ಫ್ರೀ ಪವರ್ ಗಿಫ್ಟ್​ ​ಕೊಟ್ಟ ಸಿಎಂ ಬೊಮ್ಮಾಯಿ

ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಹೋಗಿದೆ, ಮುಂದೆ ಗುಜರಾತ್ ಹಾಗೂ ಕರ್ನಾಟಕದಲ್ಲೂ ಮುಳುಗೋ ಸರದಿ ಬಂದಿದೆ. ಪ್ರಶ್ನೆನೇ ಇಲ್ಲ ಎನ್ನುವ ಮೂಲಕ ಕಾರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರ್ತವೆಂಬ ಭರವಸೆ ನೀಡಿದ ಸಿಎಂ.

ಎಸ್.ಸಿ ಎಸ್.​ಟಿ ಕುಟುಂಬಗಳಿಗೆ 75 ಯುನಿಟ್ ಫ್ರೀ ಪವರ್ ಗಿಫ್ಟ್​ ​ಕೊಟ್ಟ ಸಿಎಂ ಬೊಮ್ಮಾಯಿ
ಏತ ನೀರಾವರಿ ಯೋಜನೆ ಸೇರಿದಂತೆ ಮುಧೋಳ ತಾಲೂಕಿನ 758ಕೋಟಿ ರೂ ಯೋಜನೆಗೆ ಶಂಕುಸ್ಥಾಪನಾ ಸಮಾರಂಭ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Apr 22, 2022 | 9:52 PM

Share

ಬಾಗಲಕೋಟೆ: ಎಸಿ, ಎಸ್​ಟಿ (SC,ST) ಕುಟುಂಬಗಳಿಗೆ 75 ಯುನಿಟ್ ಫ್ರೀ ವಿದ್ಯುತ್ ಕೊಡುತ್ತೇವೆ ಎಂದು ಜಿಲ್ಲೆಯ ಮುಧೋಳ ನಗರದ ಆರ್.ಎಂ.ಜೆ ಕಾಲೇಜ್ ಮೈದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಏತ ನೀರಾವರಿ ಯೋಜನೆ ಸೇರಿದಂತೆ ಮುಧೋಳ ತಾಲೂಕಿನ 758ಕೋಟಿ ರೂ ಯೋಜನೆಗೆ ಶಂಕುಸ್ಥಾಪನಾ ಸಮಾರಂಭ ನೆರವೇರಿಸಿ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬಜೆಟ್ ಬಳಿಕ ಈ ಕುರಿತು ತೀರ್ಮಾನವನ್ನು ಮಾಡಿದ್ದೇವೆ. ಜಮೀನು ಖರೀದಿಗೆ 15-20 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ. ನಮ್ಮ ಸರ್ಕಾರ ಪ್ರಗತಿಪರವಾಗಿರುವ ಸರ್ಕಾರ. ಕರ್ನಾಟಕದ ಆದಾಯ ಹೆಚ್ಚಿಸಿ ನಂಬರ್ 1 ಸ್ಥಾನಕ್ಕೆ ಬರ್ತೇವೆ. ದೇಶದಲ್ಲಿ ನಂ.1 ಸ್ಥಾನಕ್ಕೆ ಬರಬೇಕೆಂಬ ಛಲದಿಂದ ಕೆಲಸ ಮಾಡುತ್ತೇವೆ. ಕಾಂಗ್ರೆಸ್​ನವರಿಗೆ ಕಷ್ಟ ಆಗುತ್ತೆ. ಇಷ್ಟು ಕೆಲಸ‌ ಮಾಡಿಬಿಟ್ಟರೆ ಜನ ನಮ್ಮ ಮರೆಯುತ್ತರಂತೆ. ಜನ ಕಾಂಗ್ರೆಸ್​ ಮರೆಯುವುದು ಗ್ಯಾರಂಟಿ. ಕರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಹೋಗಿದೆ, ಮುಂದೆ ಗುಜರಾತ್ ಹಾಗೂ ಕರ್ನಾಟಕದಲ್ಲೂ ಮುಳುಗೋ ಸರದಿ ಬಂದಿದೆ. ಪ್ರಶ್ನೆನೇ ಇಲ್ಲ ಎನ್ನುವ ಮೂಲಕ ಕಾರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರ್ತವೆಂಬ ಭರವಸೆ ನೀಡಿದ ಸಿಎಂ. ಪ್ರಶಾಂತ್ ಕಿಶೋರ್ ಎಂಬ ಅಡ್ವೈಸರ್​ರನ್ನ ತಗೊಂಡಿದ್ದಾರೆ. ಅವರನ್ನು ತಗೊಂಡ ಮರುದಿನ, ಅವರು ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರಿಗೆ ನೀವು ಯಾರೂ ಕಾಂಗ್ರೆಸ್​ ಅಧ್ಯಕ್ಷರಾಗಬಾರದು ಎಂದು ಸಲಹೆ ಕೊಟ್ಟಿದ್ದಾರೆ. ಅವರನ್ನು ತಗೊಂಡ್ ಮರುದಿನವೇ, ಪ್ರಶಾಂತ್ ಕಿಶೋರ್ ಈ ಬಾಂಬ್ ಹಾಕಿದ್ದಾರೆ. ಅಂದ್ರೆ ಉದ್ದಾರ ಆಗುತ್ತೆ ಕಾಂಗ್ರೆಸ್. ಪ್ರಶ್ನೆ ಏನು ಅಂದ್ರೆ ಆ ಗಾಂಧಿ ಪರಿವಾರ ಬಿಟ್ಟು ಇನ್ನೊಬ್ಬರು ಯಾರಾದ್ರೂ ಆದ್ರೆ ಅದು (ಕಾಂಗ್ರೆಸ್) ಉಳಿಯಲ್ಲ. ಇವರಿಬ್ಬರು (ಸೋನಿಯಾ ಹಾಗೂ ರಾಹುಲ್) ಉಳಿಯಲ್ಲ ಎಂದು ಸಿಎಂ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಹೀಗಾಗಿ 23ರ ಚುನಾವಣೆಯಲ್ಲಿ ನಮ್ಮ ಸರ್ಕಾರ ಬರುತ್ತೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಪೊಲೀಸರು ವಸಾಹತುಶಾಹಿ ಯುಗದ ಲಾಠಿ ಬಳಸುವುದನ್ನು ಬಿಟ್ಟು ತಂತ್ರಜ್ಞಾನ ಬಳಸಿ: ಅಮಿತ್ ಶಾ

India GDP: ಜಿಡಿಪಿ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಭಾರತ ಇದನ್ನು ಮಾಡಬೇಕು ಎಂದ ಐಎಂಎಫ್

Published On - 9:42 pm, Fri, 22 April 22

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?