AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಸರಿಗಷ್ಟೇ ಉಚಿತ ವಿದ್ಯುತ್ – ಆ ಕಡೆ ಮಳೆಯೂ ಇಲ್ಲ, ಈ ಕಡೆ ಬೋರ್​ವೆಲ್​ಗೆ ವಿದ್ಯುತ್​​​ ಕನೆಕ್ಷನ್ನೂ ಕೊಡುತ್ತಿಲ್ಲ- ಸರ್ಕಾರದ ವಿರುದ್ಧ ರೈತರು ಗರಂ​

500 ಮೀಟರ್ ಒಳಗೆ ವಿದ್ಯುತ್ ಕಲ್ಪಿಸಿಕೊಳ್ಳೋದಾದರೆ ರೈತರೆ ವಿದ್ಯುತ್ ಕಂಬ ಟಿಸಿಗೆ ಖುದ್ದಾಗಿ ಹಣ ಖರ್ಚು ಕಟ್ಟಬೇಕು. ಅದೇ 500 ಮೀಟರ್ ದಾಟಿದರೆ ಅಲ್ಲಿ ಉಚಿತವಾಗಿ ಸೋಲಾರ್ ಸೌಲಭ್ಯ ಕಲ್ಪಿಸಿಕೊಡೋದಾಗಿ ಹೇಳಿದೆ. ಇದು ರೈತವಿರೋಧಿಯಾಗಿದೆ. ಇದನ್ನು ಹಿಂಪಡೆಯಬೇಕು. ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಇದು ರೈತರಿಗೆ ಹೊರೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಸರಿಗಷ್ಟೇ ಉಚಿತ ವಿದ್ಯುತ್ - ಆ ಕಡೆ ಮಳೆಯೂ ಇಲ್ಲ, ಈ ಕಡೆ ಬೋರ್​ವೆಲ್​ಗೆ ವಿದ್ಯುತ್​​​ ಕನೆಕ್ಷನ್ನೂ ಕೊಡುತ್ತಿಲ್ಲ- ಸರ್ಕಾರದ ವಿರುದ್ಧ ರೈತರು ಗರಂ​
ಆ ಕಡೆ ಮಳೆಯೂ ಇಲ್ಲ, ಈ ಕಡೆ ಬೋರ್​ವೆಲ್​ಗೆ ವಿದ್ಯುತ್​​​ ಕನೆಕ್ಷನ್ನೂ ಕೊಡುತ್ತಿಲ್ಲ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Nov 16, 2023 | 10:58 AM

Share

ಸರಕಾರ ರಾಜ್ಯದ ಜನರಿಗೆ 200 ಯುನಿಟ್ ಉಚಿತ ವಿದ್ಯುತ್ (electricity) ನೀಡುತ್ತಿದೆ.ನಾವು ಮನೆಗೆ ಬೆಳಕನ್ನು ನೀಡಿದ್ದೇವೆ ಎಂದು ಸರಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.ಆದರೆ ರೈತರ ಬೋರವೆಲ್ ಗಳಿಗೆ ಸಮರ್ಪಕ ವಿದ್ಯುತ್ ನೀಡದೆ ಕೃಷಿಗೆ ಕಂಟಕ ತಂದಿದೆ.ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರೈತರ ಬೋರ್ ವೆಲ್ ವಿದ್ಯುತ್ನ ಕನೆಕ್ಷನ್ ಗೂ ಕಂಟಕ ತಂದಿದೆ.ಬೋರವೆಲ್ (borewell) ಗಳಿಗೆ ವಿದ್ಯುತ್ ಕನೆಕ್ಷನ್ ಗೆ ಇದ್ದ ಆಕ್ರಮ ಸಕ್ರಮ, ಶೀಘ್ರ ಸಂಪರ್ಕ ಸೌಲಭ್ಯವನ್ನೇ ತಡೆ ಹಿಡಿದಿದೆ. ಇದರಿಂದ ಬೊರವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರು ಲಕ್ಷಾಂತರ ರೂ ಖರ್ಚು ಮಾಡಬೇಕಾಗಿದೆ. ಹಚ್ಚ ಹಸಿರಾದ ಕಬ್ಬಿನ ಬೆಳೆ ,ಹೊಲದಲ್ಲಿ ನೀರಾವರಿಗೆ ಅಂತ ಕೊರೆಸಿರುವ ಬೋರವೆಲ್ ಗಳು,ಮೋಟರ್. ಇನ್ನೊಂದು ಕಡೆ ಬೋರ್ ವೆಲ್ ಕೊರೆಸಿ ಕರೆಂಟ್ ಸೌಲಭ್ಯ ಕಲ್ಪಿಸದೆ ಹಾಗೆ ಬಿಟ್ಟಿರುವ ರೈತರು.ಅಂದ ಹಾಗೆ ಈ ದೃಶ್ಯಗಳು ಕಂಡುಬಂದ್ದು ಬಾಗಲಕೋಟೆ (Bagalkot) ಜಿಲ್ಲೆಯ ರೈತರ ಹೊಲದಲ್ಲಿ.

ಪ್ರಸ್ತುತ ಬರಗಾಲದ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲೂ ಮುಂಗಾರು ಹಿಂಗಾರು ಮಳೆ ಎರಡೂ ಕಾಲದ ಮಳೆ ಕೈಕೊಟ್ಟು ರೈತರು ಕಂಗಾಲಾಗಿದ್ದಾರೆ.ಜಿಲ್ಲಾದ್ಯಂತ ಬರಗಾಲ ತಾಂಡವವಾಡುತ್ತಿದೆ.ರೈತರ ಜೀವನ ಅಧೋಗತಿಗೆ ತಲುಪಿದೆ.ಈ ವೇಳೆ ಸರಕಾರ ರೈತರಿಗೆ ಮತ್ತೊಂದು ಶಾಕ್ ನೀಡಿ ಗಾಯದ ಮೇಲೆ ಬರೆ ಎಳೆದರು ಎಂಬಂತೆ ಮಾಡಿದೆ.ಹೌದು ನೂತನವಾಗಿ ಬೋರ್ವೆಲ್ ಕೊರೆಸಿದ ರೈತರಿಗೆ ಕರೆಂಟ್ ಸೌಲಭ್ಯ ಕಲ್ಪಿಸಲು ಬಾರದ ಸ್ಥಿತಿ ರೈತರಿಗೆ ಬಂದಿದೆ.

ಸರರಕಾರ ಆಕ್ರಮ ಸಕ್ರಮ ಶೀಘ್ರ ಸಂಪರ್ಕ ಸೌಲಭ್ಯ ಎರಡನ್ನು ಸ್ಥಗಿತಗೊಳಿಸಿದೆ. ಇದರಿಂದ ರೈತರಿಗೆ ಬೋರ್ವೆಲ್ ವಿದ್ಯುತ್ ಸಂಪರ್ಕ ಕಲ್ಪಿಸಲು ಎರಡುವರೆ ಲಕ್ಷದಷ್ಟು ಖರ್ಚು ಮಾಡಬೇಕಾಗಿದೆ.ಸರಕಾರ ಐದುನೂರು ಮೀಟರ್ ಒಳಗೆ ವಿದ್ಯುತ್ ಕಲ್ಪಿಸಿಕೊಳ್ಳೋದಾದರೆ ರೈತರೆ ವಿದ್ಯುತ್ ಕಂಬ ಟಿಸಿಗೆ ಖುದ್ದಾಗಿ ಹಣ ಖರ್ಚು ಮಾಡಬೇಕು .ಐದು ನೂರು ಮೀಟರ್ ದಾಟಿದರೆ ಅಲ್ಲಿ ಉಚಿತವಾಗಿ ಸೋಲಾರ್ ಸೌಲಭ್ಯ ಕಲ್ಪಿಸಿಕೊಡೋದಾಗಿ ಹೇಳಿದೆ.ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು ಇದು ರೈತವಿರೋಧಿಯಾಗಿದೆ. ಇದನ್ನು ಹಿಂಪಡೆಯಬೇಕು. ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಇದು ರೈತರಿಗೆ ಹೊರೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೊದಲೇ ಸರಿಯಾಗಿ ರೈತರ ಪಂಪ್ಸೆಟ್ ಗಳಿಗೆ ವಿದ್ಯುತ್ ಸಿಗುತ್ತಿಲ್ಲ.ಮಳೆ ಬೇರೆ ಇಲ್ಲ ಇದರಿಂದ ಕೃಷಿಗೆ ನೀರಿಲ್ಲದೆ ರೈತರು ತೊಂದರೆಗೆ ಸಿಲುಕಿದ್ದಾರೆ.ಈ ಮಧ್ಯೆ ನೂತನವಾಗಿ ಬೋರವೆಲ್ ಕೊರೆಸಿಕೊಳ್ಳಬೇಕೆಂದರೆ ಇದೊಂದು ಸಂಕಟ ಶುರುವಾಗಿದೆ.ಮೊದಲು ಬೋರವೆಲ್ ಕನೆಕ್ಷನ್ ಗೆ ಹೆಚ್ ಪಿ ಸಾಮರ್ಥ್ಯದಂತೆ ಒಂದು ಹೆಚ್ ಪಿ ಗೆ 1400 ರೂ. ನಂತರ ಅಭಿವೃದ್ದಿ ಚಾರ್ಜ್ ಅಂತ ಹತ್ತು ಸಾವಿರ ಪೀಜ್ ಕಟ್ಟಿದರೆ ಹೆಸ್ಕಾಮ್ ನವರು ಬೋರವೆಲ್ ವಿದ್ಯುತ್ ಕನೆಕ್ಷನ ಕೊಡುತ್ತಿದ್ದರು.

also read: ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್: ಹಲವು ಸಚಿವರ ಕೆಂಗಣ್ಣಿಗೂ ಗುರಿಯಾದ ಈ ಮಹದೇವ್ ಯಾರು?

ವಿದ್ಯುತ್ ಕಂಬ ಟಿಸಿ ಎಲ್ಲವನ್ನೂ ಅವರೆ ಅಳವಡಿಸುತ್ತಿದ್ದರು.ಆಕ್ರಮ ಸಕ್ರಮ ಯೋಜನೆಯಡಿ ಈ ಸೌಲಭ್ಯವಿತ್ತು.ಇನ್ನು ತ್ವರಿತ ಸಂಪರ್ಕದ ಮೂಲಕ ರೈತರು ತಾವೆ ಕಂಬ ಅಳವಡಿಸಿಕೊಂಡರೆ ಅದಕ್ಕೆ ಹೆಸ್ಕಾಮ್ ಟಿಸಿಯ್ನು ಅಳವಡಿಸಿಕೊಡುತ್ತಿತ್ತು.ಆದರೆ ಈಗ ಆ ಎರಡೂ ಸೌಲಭ್ಯವನ್ನು ಬಂದ್​ ಮಾಡಿದ್ದು, ರೈತರು ಬೋರ್ವೆಲ್ ಗೆ ಕನೆಕ್ಷನ್ ಪಡೆದುಕೊಳ್ಳಬೇಕಾದರೆ ತಾವೇ ಹಣ ಖರ್ಚು ಮಾಡಬೇಕಾಗಿದೆ.

ವಿದ್ಯುತ್ ಕಂಬ, ಟಿಸಿ ಎಲ್ಲ ಅಳವಡಿಸಿಕೊಂಡರೆ ಹೆಸ್ಕಾಮ್ ನಿಂದ ನೊಂದಣಿ ಮಾಡಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸುತ್ತಾರಂತೆ.ಇನ್ನು ಈ ಬಗ್ಗೆ ಹೆಸ್ಕಾಮ್ ಅಧಿಕಾರಿಗಳನ್ನು ಕೇಳಿದರೆ ಈ ಮೊದಲಿದ್ದ ಆಕ್ರಮ ಸಕ್ರಮ,ಶೀಘ್ರ ಸಂಪರ್ಕ ಸೌಲಭ್ಯ ಬಂದ್ ಆಗಿದೆ.ಹೊಸದಾಗಿ ಕನೆಕ್ಷನ್ ಮಾಡಿಕೊಳ್ಳುವವರು ಹಾಗೂ ಆಕ್ರಮ ಸಕ್ರಮದ ವ್ಯಾಪ್ತಿಗೆ ಬರುವವರು ನಿಮ್ಮ ದಾಖಲಾತಿ ರೆಡಿ ಮಾಡಿಟ್ಟುಕೊಂಡು ನಿಗಮದ ಸುತ್ತೋಲೆ ಬರುವವರೆಗೂ ಕಾಯಿರಿ.ಅವಶ್ಯ ಅವಸರ ಇರುವವರು ನೀವೆ ಖುದ್ದಾಗಿ ಹಣ ಖರ್ಚು ಮಾಡಿ ವಿದ್ಯುತ್ ಕಂಬ ಟಿಸಿ ಎಲ್ಲ ಅಳವಡಿಸಿಕೊಂಡರೆ ನಾವು ಕನೆಕ್ಷನ್ ಕೊಡುತ್ತೇವೆ.ನಾವು ನಿಗಮದ ಸುತ್ತೋಲೆಗಾಗಿ ಕಾಯುತ್ತಿದ್ದೇವೆ. ಸುತ್ತೋಲೆ ಆದೇಶ ಯಾವ ಪ್ರಕಾರ ಬರುತ್ತೋ ಆ ಪ್ರಕಾರ ನೂತನ ಬೋರ್ವೆಲ್ ಗಳಿಗೆ ಹೊಸ ಕನೆಕ್ಷನ್ ಕೊಡುತ್ತೇವೆ ಅಂತಾರೆ.

ಒಟ್ಟಿನಲ್ಲಿ ಬರಗಾಲದ ಮಧ್ಯೆ ರೈತರಿಗೆ ಹೆಸ್ಕಾಮ್ ಮತ್ತೊಂದ ಬರೆ ಎಳೆದಿದೆ.ಇದು ರೈತವಿರೋಧಿ ಅಂತ ರೈತರು ಹೇಳುತ್ತಿದ್ದಾರೆ.ಹೆಸ್ಕಾಮ್ ಅಧಿಕಾರಿಗಳು ನಿಗಮದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಸುತ್ತೋಲೆ ಪ್ರಕಾರ ಕ್ರಮ ಅಂತಿದ್ದಾರೆ.ಸುತ್ತೋಲೆ ರೈತಪರ ಇರುತ್ತೋ ಕಣ್ಣೊರೆಸುವ ತಂತ್ರದ ರೀತಿ ಇರುತ್ತೋ ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 am, Thu, 16 November 23

Follow Us
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ