Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಅಪಘಾತದಲ್ಲಿ ವೃದ್ಧೆ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮೊಮ್ಮಗನ ಕರಾಳ ಮುಖ ಬಯಲು

ಬಾಗಲಕೋಟೆಯ ಚಿಕ್ಕೂರು ಕ್ರಾಸ್ ಬಳಿ ಆಗಷ್ಟ್ 20ರ ರಾತ್ರಿ 8 ಗಂಟೆ ಸುಮಾರಿಗೆ ಮೃತ ವೃದ್ಧೆ ಹಾಗೂ ಆಕೆಯ ಮಗ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಆರೋಪಿ ಕಾರ್​ನಲ್ಲಿ ಬಂದು ಅಪಘಾತ ಮಾಡಿದ್ದ. ಕೊಲೆಯನ್ನು ಅಪಘಾತವೆಂದು ಬಿಂಬಿಸಲಾಗಿತ್ತು. ಸದ್ಯ ಸತ್ಯ ಬಯಲಾಗಿದೆ.

ಬಾಗಲಕೋಟೆ: ಅಪಘಾತದಲ್ಲಿ ವೃದ್ಧೆ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮೊಮ್ಮಗನ ಕರಾಳ ಮುಖ ಬಯಲು
ಮೃತ ವೃದ್ದೆ ತಾಯವ್ವ ಅರಕೇರಿ, ಆರೋಪಿ ದುಂಡಪ್ಪ ಅರಕೇರಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಆಯೇಷಾ ಬಾನು

Updated on: Sep 13, 2023 | 12:22 PM

ಬಾಗಲಕೋಟೆ, ಸೆ.13: ಬೈಕ್​ಗೆ ಕಾರು ಡಿಕ್ಕಿ ಹೊಡೆದು ಬೈಕ್ ಹಿಂಬದಿ ಕೂತಿದ್ದ ವೃದ್ದೆ ಮೃತಪಟ್ಟ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮೃತ ವೃದ್ದೆಯ ಮೊಮ್ಮಗನೇ(ಮಗನ ಮಗ) ಕಾರು ಡಿಕ್ಕಿ ಹೊಡೆಸಿ ವೃದ್ಧೆಯನ್ನು ಕೊಲೆ ಮಾಡಿದ್ದು ಎಂಬ ಭಯಾನಕ ಸತ್ಯ ಬಯಲಾಗಿದೆ. ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಸದ್ಯ ಈಗ ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಾಯವ್ವ ಅರಕೇರಿ(68)ಕೊಲೆಯಾದ ವೃದ್ದೆ, ದುಂಡಪ್ಪ ಅರಕೇರಿ(25) ಕೊಲೆ ಮಾಡಿದ ಮೊಮ್ಮಗ. ವೃದ್ದೆ ಹಾಗೂ ಮೊಮ್ಮಗ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದವರು.

ಚಿಕ್ಕೂರು ಕ್ರಾಸ್ ಬಳಿ ಆಗಷ್ಟ್ 20ರ ರಾತ್ರಿ 8 ಗಂಟೆ ಸುಮಾರಿಗೆ ಮೃತ ವೃದ್ಧೆ ಹಾಗೂ ಆಕೆಯ ಮಗ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಆರೋಪಿ ಕಾರ್​ನಲ್ಲಿ ಬಂದು ಅಪಘಾತ ಮಾಡಿದ್ದ. ಕೊಲೆಯನ್ನು ಅಪಘಾತವೆಂದು ಬಿಂಬಿಸಲಾಗಿತ್ತು. ಸದ್ಯ ಸತ್ಯ ಬಯಲಾಗಿದೆ.

ಇದನ್ನೂ ಓದಿ: ಹೆಂಡತಿಯ ಹತ್ಯೆ ಮಾಡಿ ಅತ್ತೆ-ಮಾವನಿಗೆ ಮಚ್ಚಿನೇಟು ಕೊಟ್ಟ ಗಂಡ: ಆರೋಪಿಗೆ ಪೊಲೀಸರಿಂದ ಗುಂಡೇಟಿನ ರುಚಿ, ಆಸ್ಪತ್ರೆ ಪಾಲು – ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಭೇಟಿ

ಮೊಮ್ಮಗನಿಂದ ಅಜ್ಜಿ ಕೊಲೆಗೆ ಕಾರಣವೇನು?

ಈ ಕುಟುಂಬದ ಬೋರ್ವೆಲ್ ಮೋಟಾರ್ ವಿವಾದ ಕೋರ್ಟ್​ನಲ್ಲಿತ್ತು. ಕೋರ್ಟ್​ನಲ್ಲಿ ತಾಯವ್ವ ಪರ ತೀರ್ಪು ಬಂದಿತ್ತು. ಆದರೆ ಮೊಮ್ಮಗ ದುಂಡಪ್ಪ, ಅಜ್ಜಿ ತಾಯವ್ವಗೆ ಬೋರ್ವೆಲ್ ಮೋಟಾರು ವೈರ್ ಕೊಟ್ಟಿರಲಿಲ್ಲ. ಮೋಟಾರು ವೈರ್ ಕೊಡದ ಹಿನ್ನೆಲೆ ಅಜ್ಜಿ ತನ್ನ ಮೊಮ್ಮಗನ ವಿರುದ್ದವೇ ಲೋಕಾಪುರ ಠಾಣೆಗೆ ದೂರು ನೀಡಿದರು. ಈ ಹಿನ್ನೆಲೆ ಪೊಲೀಸರು ದುಂಡಪ್ಪನನ್ನು‌ ಕರೆದು ಮೋಟಾರು ವೈರ್ ಕೊಡಲು ಹೇಳಿದ್ದರು. ಆಗ ವೈರ್ ಕೊಡುವುದಾಗಿ ಒಪ್ಪಿಕೊಂಡಿದ್ದ ದುಂಡಪ್ಪ ನಂತರ ತಾಯವ್ವ ಹಾಗೂ ಆಕೆಯ ಮಗ ಬೈಕ್​ನಲ್ಲಿ ಊರಿಗೆ ಬರುವಾಗ ಕಾರಿನಲ್ಲಿ ಫಾಲೋ ಮಾಡಿದ್ದಾನೆ. ತಾಯವ್ವ ಹಾಗೂ ಮಗ ಶ್ರೀಧರ ಬೈಕ್ ಮೇಲೆ ಹೋಗುವಾಗ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ದೆ ತಾಯವ್ವಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 28ರಂದು ಚಿಕಿತ್ಸೆ ಫಲಿಸದೆ ಅಜ್ಜಿ ತಾಯವ್ವ ಮೃತಪಟ್ಟಿದ್ಧಾರೆ. ಅಪಘಾತದಲ್ಲಿ‌ ಸಂಶಯ ಎಂದು ಸೆಪ್ಟೆಂಬರ್ 5ರಂದು ತಾಯವ್ವನ ಸಂಬಂಧಿಕ ಮಂಜುನಾಥ್ ಉದಗಟ್ಟಿ ಅವರು ದುಂಡಪ್ಪನ ವಿರುದ್ಧ ಲೋಕಾಪುರ ಠಾಣೆಗೆ ದೂರು ನೀಡಿದ್ದರು. ದುಂಡಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಸದ್ಯ ದುಂಡಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು