AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟ್ಟಣ ಪಂಚಾಯಿತಿ ಸದಸ್ಯನ ವಿರುದ್ಧ ಮದುವೆ ಮಾಡಿಸೋದಾಗಿ ವಂಚನೆ, ಲೈಂಗಿಕ ಕಿರುಕುಳ ಆರೋಪ; ಕಟ್ಟುಕಥೆ ಎಂದ ಸದಸ್ಯ

ಹುನಗುಂದ(Hunagunda) ತಾಲ್ಲೂಕಿನ ಅಮೀನಗಢ ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಐಹೊಳಿ ವಿರುದ್ಧ ಮದುವೆ ಮಾಡಿಸುವುದಾಗಿ ವಂಚನೆ ಹಾಗೂ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಆದರೆ, ಇದಕ್ಕೆ ಆರೋಪಕ್ಕೆ ಗುರಿಯಾದ ವೃತ್ತಿಯಲ್ಲಿ ವಕೀಲ, ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಜಯಕರ್ನಾಟಕ ಸಂಘಟನೆ ಹುನಗುಂದ ತಾಲ್ಲೂಕಾಧ್ಯಕ್ಷ ಆಗಿರುವ ಸಂಜು ಐಹೊಳಿ ಅಲ್ಲಗಳೆದಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯನ ವಿರುದ್ಧ ಮದುವೆ ಮಾಡಿಸೋದಾಗಿ ವಂಚನೆ, ಲೈಂಗಿಕ ಕಿರುಕುಳ ಆರೋಪ; ಕಟ್ಟುಕಥೆ ಎಂದ ಸದಸ್ಯ
ಅಮೀನಗಢ ಪಟ್ಟಣ ಪಂಚಾಯಿತಿ ಸದಸ್ಯನ ವಿರುದ್ಧ ಮದುವೆ ಮಾಡಿಸುವುದಾಗಿ ವಂಚನೆ ಹಾಗೂ ಲೈಂಗಿಕ ಕಿರುಕುಳದ ಆರೋಪ
ರವಿ ಹೆಚ್ ಮೂಕಿ, ಕಲಘಟಗಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Jan 07, 2024 | 3:25 PM

Share

ಬಾಗಲಕೋಟೆ, ಜ.07: ಜಿಲ್ಲೆಯ ಹುನಗುಂದ(Hunagunda) ತಾಲ್ಲೂಕಿನ ಅಮೀನಗಢ ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಐಹೊಳಿ ವಿರುದ್ಧ ಮದುವೆ ಮಾಡಿಸುವುದಾಗಿ ವಂಚನೆ ಹಾಗೂ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಅಮೀನಗಢ ಪಟ್ಟಣದ ಯುವತಿ ಭಾಗ್ಯಲಕ್ಷ್ಮಿ ಯಂಕಂಚಿ ಎಂಬ ಯುವತಿ, ತನ್ನ ಪ್ರಿಯಕರನೊಂದಿಗೆ ಮದುವೆ ಮಾಡಿಸುವುದಾಗಿ ಬರೊಬ್ಬರಿ 9 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇದಕ್ಕೆ ಆರೋಪಕ್ಕೆ ಗುರಿಯಾದ ವೃತ್ತಿಯಲ್ಲಿ ವಕೀಲ, ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಜಯಕರ್ನಾಟಕ ಸಂಘಟನೆ ಹುನಗುಂದ ತಾಲ್ಲೂಕಾಧ್ಯಕ್ಷ ಆಗಿರುವ ಸಂಜು ಐಹೊಳಿ ಅಲ್ಲಗಳೆದಿದ್ದಾರೆ.

ಇದೆಲ್ಲ ಕಟ್ಟುಕಥೆ ಶುದ್ದು ಸುಳ್ಳು ಎಂದ ಆರೋಪಕ್ಕೆ ಗುರಿಯಾದ ಸಂಜು ಐಹೊಳಿ

ಇನ್ನು ಘಟನೆ ಕುರಿತು ಆರೋಪಕ್ಕೆ ಗುರಿಯಾದ ವಕೀಲ ಸಂಜು ಐಹೊಳಿ ಮಾತನಾಡಿ ‘ಇದೆಲ್ಲ ಕಟ್ಟುಕಥೆ, ಶುದ್ದು ಸುಳ್ಳು. ಆಕೆಯ ಲವರ್ ಸಾಗರ್​ ಎಂಬಾತ ಲವ್ ಮಾಡಿ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂದು ಭಾಗ್ಯಲಕ್ಷ್ಮಿ ಹಾಗೂ ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ನಾನೇ ನಮ್ಮ ಜಯಕರ್ನಾಟಕ ಸಂಘಟನೆ ಮೂಲಕ ಇಬ್ಬರ ಮದುವೆಯನ್ನು ಮಾಡಿಸಿದ್ದೇನೆ.

ಇದನ್ನೂ ಓದಿ:ಟಿವಿ9 ವರದಿ ಫಲಶ್ರುತಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಹಾಸ್ಟೆಲ್ ವಾರ್ಡನ್ ಅಮಾನತು

ಆಕೆಯ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ

ನಂತರ ಸಾಗರ ಅವಳನ್ನು ತನ್ನ ಮನೆಗೆ ಕರೆದೊಯ್ಯಲಿಲ್ಲ. ಅವಳಿಗೆ ಐದು ಲಕ್ಷ ಕೊಡುತ್ತೇನೆ ಅವಳ ಪಾಡಿಗೆ ಅವಳು ಇರಲಿ ಎಂದು ಹೇಳಿದ. ಇದಕ್ಕೆ ಒಪ್ಪಿದ ಭಾಗ್ಯಲಕ್ಷ್ಮಿ ಕುಟುಂಬ 5 ಲಕ್ಷ ಹಣ ಪಡೆದಿದೆ. ನಾವೇ ಮುಂದೆ ನಿಂತು ಹಣ ಕೊಡಿಸಿದ್ದೇವೆ. ಅವಳು ತಂಗಿ ಸಮಾನ, ಅತ್ಯಾಚಾರ ಆರೋಪ ಹಣ ವಂಚನೆ ಎಲ್ಲವೂ ಸುಳ್ಳು. ಅತ್ಯಾಚಾರ ಯತ್ನ ಮಾಡಿದ್ದೇ ಆದರೆ ಆಗಲೇ ದೂರು ಕೊಡಬಹುದಿತ್ತು. ಒಂದು ತಿಂಗಳ ನಂತರ ಯಾಕೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಂಜು ಐಹೊಳಿ ಹೇಳಿದರು.

ಇಂಜಿನಿಯರಿಂಗ್ ಓದುವಾಗ ಅರಳಿದ ಪ್ರೇಮ

ಬೆಳಗಾವಿ ಅಂಗಡಿ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಇಬ್ಬರು ಇಂಜಿನಿಯರ್ಸ್ ಓದುತ್ತಿದ್ದರು. ಇಂಜಿನಿಯರಿಂಗ್ ಓದುವಾಗ 2019 ರಲ್ಲಿ ಇಬ್ಬರಲ್ಲಿ ಪ್ರೇಮ ಹುಟ್ಟಿದೆ. ನಂತರ ಮದುವೆಯಾಗಲು ಸಾಗರ್ ನಿರಾಕರಿಸಿದ್ದ. ಈ ಪ್ರಕರಣ ಬಾಗಲಕೋಟೆ ಮಹಿಳಾ ಠಾಣೆ ಮೆಟ್ಟಿಲೇರಿತ್ತು. ಬಳಿಕ 2023 ನವೆಂಬರ್​ 17 ರಂದು ಬಾಗಲಕೋಟೆ ಮಹಿಳಾ ಠಾಣೆ ಎದುರು ಅರಿಶಿಣ ಕೊಂಬು ಕಟ್ಟಿಸಿ‌ ಮದುವೆ ಮಾಡಿಸಿದ್ದರು. ಮದುವೆ ನಂತರ ಭಾಗ್ಯಲಕ್ಷ್ಮಿಯನ್ನು ಸಾಗರ್ ದೂರ ಮಾಡಿದ್ದ. ಈ ವೇಳೆ‌ ಇಬ್ಬರನ್ನು ಒಂದು ಮಾಡೋದಾಗಿ ಬಂದಿದ್ದ ಸಂಜು ಐಹೊಳಿ 9 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಬೆಳಗಾವಿ ಲಾಡ್ಜ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವನ್ನು ಯುವತಿ ಮಾಡಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ