AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತರಕಾರಿ ರೇಟ್ ಗಗನಕ್ಕೆ ಏರಿದ ಬೆನ್ನಲ್ಲೇ ಇದೀಗ ವೀಳ್ಯ, ‌ಕಪ್ಪು ಎಲೆ ರೇಟೂ ದುಬಾರಿ

ರಾಜ್ಯದ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈಗಾಗಲೆ ತರಕಾರಿ ಮತ್ತು ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಅದರಲ್ಲಂತು ಟೊಮೇಟೊಗೆ ಚಿನ್ನದ ಬೆಲೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ವೀಳ್ಯದ ಎಲೆ ಹಾಗೂ ‌ಕಪ್ಪು ಎಲೆ ಬೆಲೆ ಕೂಡ ದುಬಾರಿಯಾಗಿದೆ.

ತರಕಾರಿ ರೇಟ್ ಗಗನಕ್ಕೆ ಏರಿದ ಬೆನ್ನಲ್ಲೇ ಇದೀಗ ವೀಳ್ಯ, ‌ಕಪ್ಪು ಎಲೆ ರೇಟೂ ದುಬಾರಿ
ವೀಳ್ಯದೆಲೆ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jul 12, 2023 | 7:34 AM

Share

ಬಾಗಲಕೋಟ: ರಾಜ್ಯದ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈಗಾಗಲೆ ತರಕಾರಿ (Vegitable) ಮತ್ತು ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಅದರಲ್ಲಂತು ಟೊಮೇಟೊಗೆ (Tomato) ಚಿನ್ನದ ಬೆಲೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ವೀಳ್ಯದೆಲೆ ಹಾಗೂ ‌ಕಪ್ಪು ಎಲೆ ಬೆಲೆ ಕೂಡ ದುಬಾರಿಯಾಗಿದೆ. ಎಲೆ ಅಡಿಕೆ ತಿನ್ನುವವರು ಒಂದು ಎಲೆಯಲ್ಲಿ ಒಂದು ಸಾರಿ ಅರ್ಧ ಎಲೆ ಮಾತ್ರ ತಿನ್ನವಂತಹ ಪರಿಸ್ಥಿತಿ ಉದ್ಭವವಾಗಿದೆ.

ಮಳೆ ಕೊರತೆ ಇಳುವರಿ ಕಡಿಮೆ ಹಿನ್ನೆಲೆ ಎಲೆಗಳ ಬೆಲೆ ಏರಿಕೆಯಾಗಿದೆ. ಎಲೆ‌ ಬೆಳೆಗಾರರ ಸಂಖ್ಯೆಯೂ ಕಡಿಮೆಯಾದ ಹಿನ್ನೆಲೆ ಬೆಲೆ‌ ಏರಿಕೆಯಾಗಿದೆ. ಸದ್ಯ 12 ಸಾವಿರ ವೀಳ್ಯದೆಲೆಯ ಒಂದು ಬಂಡಲ್‌ ಬೆಲೆ 6 ಸಾವಿರಕ್ಕೆ ಏರಿಕೆಯಾಗಿದೆ. ತಿಂಗಳ ಹಿಂದೆ 2500 ರೂ. ಬೆಲೆ‌ ಇತ್ತು. 6 ಸಾವಿರ ಎಲೆಗಳಿರುವ ಕಪ್ಪು ಎಲೆಗಳ ಒಂದು ಬಂಡ‌ಲ್​​ಗೆ 6 ಸಾವಿರ ರೂ. ಆಗಿದೆ. ತಿಂಗಳ ಹಿಂದೆ 3 ಸಾವಿರ ರೂ. ಬೆಲೆ ಇತ್ತು.

ಇದರಿಂದ ಗ್ರಾಹಕರು ಮಾರುಕಟ್ಟೆಯಲ್ಲಿ ನೂರು ಕಪ್ಪು ಎಲೆಯ ಒಂದು ಕಟ್​​ಗೆ 60 ರೂ. ಕೊಡಬೇಕು. ವೀಳ್ಯದೆಲೆ ನೂರರ ಕಟ್​​ಗೆ 40 ರೂ. ಈ‌ ಮೊದಲಿಗಿಂತ ಎರಡು ಎಲೆಗಳ ನೂರರ ಕಟ್ ಬೆಲೆ 20-30 ರೂ. ಏರಿಕೆಯಾಗಿದೆ. ಬೆಲೆ ಏರಿದರೂ ಎಲೆ ಬೆಳೆಗಾರರಿಗೆ ಹೆಚ್ಚು ಅನುಕೂಲ‌ ಇಲ್ಲ. ಇಳಿವರಿಯೇ ಹೆಚ್ಚಿಲ್ಲ ಇನ್ನು ಹೆಚ್ಚು ಲಾಭ ಎಲ್ಲಿ ಎಂದು ಬಾದಾಮಿ ಹಾಗೂ ಬದಾಮಿ ಸುತ್ತಲಿನ ಚೊಳಚಗುಡ್ಡ, ಹಿರೆನಸಬಿ ಗ್ರಾಮದ ಎಲೆ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Tomato: ಟೊಮೆಟೋ ಕಾಯಲೆಂದೇ ಬೌನ್ಸರ್​​​ ನೇಮಿಸಿದ ತರಕಾರಿ ವ್ಯಾಪಾರಿ!

ಇನ್ನು ಬಾದಾಮಿ ಭಾಗದಲ್ಲಿ ಎಲೆ ಬೆಳೆಗಾರರ ಸಂಖ್ಯೆ ಕಡಿಮೆ ಆಗುತ್ತಿದೆ. ಮೊದಲು ಬಾದಾಮಿ ಭಾಗದಲ್ಲಿ 150 ಎಲೆ ತೋಟಗಳಿದ್ದವು. ಇದೀಗ 50 ತೋಟಗಳು ಮಾತ್ರ ಇದ್ದು, ಇದು ಕೂಡ ಎಲೆ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ರೈತರ ಟೊಮೇಟೊ ತೋಟದ ಮೇಲೆ ಕಳ್ಳರ ಕಣ್ಣು

ಚಿಕ್ಕಬಳ್ಳಾಪುರ: 14 ಕೆ.ಜಿ ಯ ಟೊಮೇಟೊ ಬಾಕ್ಸ್ ಬೆಲೆ 2000 ರೂಪಾಯಿ ಆಗಿದೆ. ಟೊಮ್ಯಾಟೊಗೆ ಚಿನ್ನದ ಬೆಲೆ ಹಿನ್ನಲೆ ರಾತ್ರೊ ರಾತ್ರಿ ಕಳ್ಳರು ಟೊಮೇಟೊ ಕೀಳುತ್ತಿದ್ದಾರೆ. ಟೊಮೇಟೊಗೆ ಇಷ್ಟೊಂದು ಡಿಮ್ಯಾಂಡ್ ಯಾವತ್ತು ಬಂದಿಲ್ಲ. ಬಕ್ರಿದ್ ಹಬ್ಬದ ಸಮಯದಲ್ಲೂ 14 ಕೆ.ಜಿ ಟೊಮೇಟೊ ಬಾಕ್ಸ್ 1600 ರೂಪಾಯಿ ಮಾರಾಟವಾಗಿತ್ತು ಎಂದು ಟೊಮೇಟೊ ಬೆಳಗಾರರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?