AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾಥ ಗೋವುಗಳಿಗೆ ಆಪ್ತರಕ್ಷಕರಾದ ಕುಟುಂಬ; ತಂದೆಯ ಕೊನೆಯ ಆಸೆ ಈಡೇರಿಸಲು ಗೋವುಗಳ ಆರೈಕೆ

ಬಾಗಮಾರ ಅವರು ಸಾಕುತ್ತಿರುವ ಹಸುಗಳ ಹಾಲು ಹಿಂಡುವುದಿಲ್ಲ. ಎಲ್ಲಾ ಹಾಲನ್ನು ಕರುಗಳಿಗೆ ಕುಡಿಸಲಾಗುತ್ತದೆ. ಕೆಲ ರೈತರು ವಯಸ್ಸಾದ ನಂತರ ಗೋವುಗಳನ್ನು ಮಾರಾಟ ಮಾಡುತ್ತಾರೆ. ಇಂತಹ ಹಸುಗಳನ್ನು ಜಾನುವಾರು ಸಂತೆ ಮಾರುಕಟ್ಟೆಯಲ್ಲಿ ಖರೀದಿಸಿ ತಂದು ಈ ಗೋಶಾಲೆಯಲ್ಲಿ ಪಾಲನೆ ಪೋಷಣೆ ಮಾಡುತ್ತಿರುವುದು ಬಾಗಮಾರ ಕುಟುಂಬದ ವಿಶೇಷ.

ಅನಾಥ ಗೋವುಗಳಿಗೆ ಆಪ್ತರಕ್ಷಕರಾದ ಕುಟುಂಬ; ತಂದೆಯ ಕೊನೆಯ ಆಸೆ ಈಡೇರಿಸಲು ಗೋವುಗಳ ಆರೈಕೆ
ಭಗವಾನ ಮಹಾವೀರ ಜೈನ್ ಗೋಶಾಲೆ
Follow us
preethi shettigar
| Updated By: Skanda

Updated on: Apr 09, 2021 | 9:32 AM

ಗದಗ: ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ‌ಗೆ ತಂದಿದೆಯಾದರೂ ಅದು ಯಾವ ಮಟ್ಟಿಗೆ ಪಾಲನೆ ಆಗುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಗದಗ ಜಿಲ್ಲೆಯ ಕುಟುಂಬ ಮಾತ್ರ ಸದ್ದಿಲ್ಲದೇ ಕಸಾಯಿಖಾನೆ ಪಾಲಾಗುವ ಗೋವುಗಳ ರಕ್ಷಣೆ ಮಾಡಿ ಸಾಕಿ ಸಲಹುತ್ತಿದೆ. ಈ ಕುಟುಂಬದ ಸದಸ್ಯರು ಯಾವುದೇ ಫಲಾಪೇಕ್ಷೆ ಇಲ್ಲದೇ ನೂರಾರು ಗೋವುಗಳನ್ನು ಸಾಕುವ ಮೂಲಕ ಸದ್ದಿಲ್ಲದೇ ಗೋ ಸೇವೆಯ ಮೌನ ಕ್ರಾಂತಿ ಮಾಡುತ್ತಿದ್ದಾರೆ.

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿನ ಬಾಗಮಾರ ಎನ್ನುವವರು ಈ ಭಗವಾನ ಮಹಾವೀರ ಜೈನ್ ಗೋಶಾಲೆಯನ್ನು ನಡೆಸುತ್ತಿದ್ದಾರೆ. ಕುಟುಂಬದ ಮಗುವಿನಂತೆ ಗೋವುಗಳನ್ನು ನೋಡಿಕೊಳ್ಳುತ್ತಿದ್ದು, ಪ್ರತಿ ವರ್ಷ 10 ರಿಂದ12 ಲಕ್ಷ ರೂಪಾಯಿ ಗೋವುಗಳ ಪಾಲನೆಗೆ ಖರ್ಚು ಮಾಡುತ್ತಿದ್ದಾರೆ. ಮೂಲತಃ ಬಟ್ಟೆ ವ್ಯಾಪಾರಿಯಾದ ಬಾಗಮಾರ ಕುಟುಂಬ ಹಲವು ವರ್ಷಗಳಿಂದ ಗೋವುಗಳ ರಕ್ಷಣೆ ಮಾಡುತ್ತಿದೆ. ವಿಶೇಷ ಎಂದರೆ ಕಸಾಯಿಖಾನೆಗೆ ಹೋಗುವ ಹಸುಗಳ ರಕ್ಷಣೆ ಮಾಡುವುದೇ ಈ ಕುಟುಂಬದ ಗುರಿ.

ಬಾಗಮಾರ ಅವರು ಸಾಕುತ್ತಿರುವ ಹಸುಗಳ ಹಾಲು ಹಿಂಡುವುದಿಲ್ಲ. ಎಲ್ಲಾ ಹಾಲನ್ನು ಕರುಗಳಿಗೆ ಕುಡಿಸಲಾಗುತ್ತದೆ. ಕೆಲ ರೈತರು ವಯಸ್ಸಾದ ನಂತರ ಗೋವುಗಳನ್ನು ಮಾರಾಟ ಮಾಡುತ್ತಾರೆ. ಇಂತಹ ಹಸುಗಳನ್ನು ಜಾನುವಾರು ಸಂತೆ ಮಾರುಕಟ್ಟೆಯಲ್ಲಿ ಖರೀದಿಸಿ ತಂದು ಈ ಗೋಶಾಲೆಯಲ್ಲಿ ಪಾಲನೆ ಪೋಷಣೆ ಮಾಡುತ್ತಿರುವುದು ಬಾಗಮಾರ ಕುಟುಂಬದ ವಿಶೇಷ. ಈ ಗೋ ಶಾಲೆಯಲ್ಲಿ 150 ಕ್ಕೂ ಹೆಚ್ಚು ಜಾನುವಾರುಗಳು ಇದ್ದು, ಬಾಗಮಾರ ಕುಟುಂಬದವರು ಈ ಗೋವುಗಳನ್ನು ಆರೈಕೆ ಮಾಡುತ್ತಿದ್ದಾರೆ.

cow shed

ಅನಾಥ ಗೋವುಗಳ ರಕ್ಷಣೆಗೆ ಮುಂದಾದ ಕುಟುಂಬ

ರಿಕಬ್ ಚಂದ್ ಬಾಗಮಾರ ಪ್ರತಿ ನಿತ್ಯ ಬೆಳಗ್ಗೆ 6 ಗಂಟೆಗೆ ಗೋಶಾಲೆಗೆ ಭೇಟಿ ನೀಡುತ್ತಾರೆ. ಗೋಶಾಲೆಯಲ್ಲಿ ನಿಂತು ಎಲ್ಲ ಜಾನುವಾರಗಳಿಗೆ ಜೈನ್ ಮಂತ್ರ ಪಠಣೆ ಮಾಡುತ್ತಾರೆ. ಈ ಮಂತ್ರದ ಉದ್ದೇಶ ಎಲ್ಲಾ ಗೋವುಗಳಿಗೆ ಮಂಗಳವಾಗಲಿ ಎನ್ನುವುದಾಗಿದ್ದು, ಸುಖ, ಶಾಂತಿ ನೀಡಲಿ ಎನ್ನುವ ಅರ್ಥ ಮಂತ್ರಕ್ಕಿದೆ. ಹೀಗಾಗಿ ನಿತ್ಯ ಮಂತ್ರ ಪಠಣ ಆದ ಮೇಲೆ ಮೇವು, ನೀರು ನೀಡಲಾಗುತ್ತದೆ. ಎರಡು ಎಕರೆ ಪ್ರದೇಶದಲ್ಲಿ ತಗಡು ಚಾವಣಿ ಹಾಕಿದ್ದು, ಮೂರು ಶೆಡ್ಡಿನಲ್ಲಿ ಹಸುಗಳನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ.

cow shed

ಗೋವುಗಳ ರಕ್ಷಣೆಗೆ ಮುಂದಾದ ರಿಕಬ್ ಚಂದ್ ಬಾಗಮಾರ

ಹಸುಗಳು ವಾಸಿಸುವ ಸ್ಥಳವನ್ನು ಸ್ವಚ್ಛ ಮತ್ತು ಸುವ್ಯವಸ್ಥಿತವಾಗಿಡಲು ಗೋಪಾಲಕರನ್ನು ನೇಮಿಸಲಾಗಿದೆ. ಹಸುಗಳಿಗೆ ನಿತ್ಯ ಸ್ನಾನ ಮಾಡಿಸಲಾಗುತ್ತಿದೆ. ಅವುಗಳಿಗೆ ಮುಕ್ತವಾಗಿ ಅಡ್ಡಾಡಲು ಮತ್ತು ಶರೀರಕ್ಕೆ ವ್ಯಾಯಾಮ ಸಿಗುವಂತೆ ಪ್ರತಿದಿನ ಅವುಗಳನ್ನು ತಿರುಗಾಡಲು ಬಿಡಲಾಗುತ್ತದೆ. ಈ ಗೋಶಾಲೆಯನ್ನು 1997ರಲ್ಲಿ ಸ್ಥಾಪಿಸಲಾಗಿದೆ. 100 ಗೋಶಾಲೆ ಮಾಡಬೇಕು ಎನ್ನುವುದು ನಮ್ಮ ಆಸೆ. ಆ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿದ್ದೇವೆ. ನಮ್ಮ ತಂದೆಯ ಕೊನೆ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ಗೋಶಾಲೆ ನಿರ್ಮಾಣ ಮಾಡಿದ್ದೇವೆ ಎಂದು ಗೋಶಾಲೆ ಮಾಲೀಕ ಶೀತಲ್ ಬಾಗಮಾರ್ ಹೇಳಿದ್ದಾರೆ.

ಗೋವುಗಳನ್ನು ಪ್ರೀತಿಸುವವರು ಅವುಗಳ ರಕ್ಷಣೆ ಮಾಡುವವರು ಇಂದಿನ ಕಾಲದಲ್ಲಿ ಸಿಗುವುದು ವಿರಳ ಅಂತಹದರಲ್ಲಿ ಆದಾಯ ರಹಿತವಾದರೂ ಗೋವುಗಳ ರಕ್ಷಣೆ ಮಾಡುವಲ್ಲಿ ಮುಂದಾಗಿರುವ ಬಾಗಮಾರ್ ನಿಜಕ್ಕೂ ಇತರರಿಗೆ ಸ್ಪೂರ್ತಿ.

ಇದನ್ನೂ ಓದಿ: 

ಜಿಲ್ಲೆಯ ಕಾವಿಧಾರಿಯೊಬ್ಬರು ದೇಶಿ ಗೋವುಗಳನ್ನ ಸಾಕಿ, ಅವುಗಳ ಮಹತ್ವವನ್ನ ತಿಳಿಸಿ ಕೊಡುತ್ತಿದ್ದಾರೆ

ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್​ ದರ್ಶನ್​! ವಿಡಿಯೋ ವೈರಲ್​

(Baghmara family in gajendragad town of gadag is sheltering cattle of cow)

ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ