AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂದಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ

Kodi Mutt Seer: ನಾನು 3 ತಿಂಗಳ ಹಿಂದೆಯೆ ಹೇಳಿದ್ದೆ. ಏನೆಂದರೆ ಮತ್ತೆ ಕೊವಿಡ್ ಬರುತ್ತೆ ಅಂತಾ ಹೇಳಿದ್ದೆ. ಒಂದೂವರೆ ವರ್ಷದ ನಂತರ ಸಂಪೂರ್ಣವಾಗಿ ಜಗತ್ತಿನಿಂದ ಬಿಡುಗಡೆ ಆಗುತ್ತೆ. ಕೊವಿಡ್ ಸೇರಿದಂತೆ ಮನುಷ್ಯ ಕಷ್ಟ ಬಂದಾಗ ದೇವರು ಅಂತಾನೆ. ಧರ್ಮ ಅಂತಾನೆ. ದೈವ ಪ್ರಾರ್ಥನೆ ಮಾಡುತ್ತಾನೆ. ಕೊವಿಡ್ ದೇವರನ್ನೇ ಹಿಡಿದುಕೊಂಡಿತು.

ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂದಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ
ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ
TV9 Web
| Edited By: |

Updated on:Jun 11, 2022 | 2:16 PM

Share

ಬಳ್ಳಾರಿ: ಹಾಸನ ಜಿಲ್ಲೆಯ ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ (Prediction). ಈ ಬಾರಿ ಬಳ್ಳಾರಿಗೆ ಕಾರ್ತಯನಿಮಿತ್ತ ಭೇಟಿ ಕೊಟ್ಟು ಅಲ್ಲಿ ಕೋಡಿಮಠದ ಸ್ವಾಮೀಜಿ (Kodi Mutt Seer) ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮಳೆ – ಬೆಳೆ ವಿಚಾರ ಕಂಡ ಮಂಡಲ ಆಗುತ್ತೆ ಅಂತಾ ಹೇಳಿದ್ದೆ. ಗುಡುಗು ಸಿಡಿಲು ಮಿಂಚು ಬರುತ್ತೆ, ಪ್ರಕೃತಿ ಮೇಲೆ ಹಾವಳಿ ಮಾಡುತ್ತೆ, ಮಲೆನಾಡು ಬಯಲು ಆಗುತ್ತೆ. ಬಯಲು ಮಲೆನಾಡು ಆಗುತ್ತೆ ಅಂತಾ ಹೇಳಿದ್ದೆ. ದೊಡ್ಡ ದೊಡ್ಡ ನಗರಕ್ಕೆ ಮಳೆಯಿಂದ ಹಾನಿಯಾಗುತ್ತೆ ಎಂದೆಲ್ಲಾ ಹೇಳಿದ್ದೆ ಅವೆಲ್ಲಾ ಜರುಗುತ್ತಿವೆ. ಮುಂಗಾರು ಇನ್ನೂ ಹೆಚ್ಚಳವಾಗುತ್ತೆ. ಹಿಂಗಾರಿನಲ್ಲಿ ಅಕಾಲಿಕ‌ ಮಳೆ ಆಗುವ ಲಕ್ಷಣಗಳಿವೆ ಎಂದು ಅವರು ಹೇಳಿದ್ದಾರೆ (Sri Shivananda Shivayogi Rajendra Swamiji).

ಇನ್ನು, ರಾಜಕೀಯದಲ್ಲಿ ಅಸ್ಥಿರತೆ ಅಂತಾ ಹೇಳಿದ್ದೆ. ಗುಂಪುಗಳು ಆಗುತ್ತೆ ಅಂತಾನೂ ಹೇಳಿದ್ದೆ. ಅದನ್ನ ನೀವೇ ಕಂಡುಕೊಂಡಿದ್ದೀರಾ.. ನಾನು ಯುಗಾದಿ ವೇಳೆ ಇದನ್ನೆಲ್ಲಾ ಹೇಳಿದ್ದೆ‌. ದೇಶದಲ್ಲಿ ಅವಘಡ ಆಗುತ್ತೆ ಅಂತಾ ಹೇಳಿದ್ದೆ. ಈಗ ಆರಂಭವಾಗಿದೆ. ಪೈಗಂಬರ್ ರ ಬಗ್ಗೆ ಅವಹೇಳನ ಮಾಡಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಅದರ ಮುಂದುವರಿದ ಭಾಗವಾಗಿ ಅಪಾಯವಿದೆ. ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ. ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆ ಅದೂ ಆಗ್ತಿದೆ.

Also Read:

ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಘೋರ ಭವಿಷ್ಯ ನುಡಿದ ಕೋಡಿಮಠ ಶ್ರೀ

ನಾನು 3 ತಿಂಗಳ ಹಿಂದೆಯೆ ಹೇಳಿದ್ದೆ. ಏನೆಂದರೆ ಮತ್ತೆ ಕೊವಿಡ್ ಬರುತ್ತೆ ಅಂತಾ ಹೇಳಿದ್ದೆ. ಒಂದೂವರೆ ವರ್ಷದ ನಂತರ ಸಂಪೂರ್ಣವಾಗಿ ಜಗತ್ತಿನಿಂದ ಬಿಡುಗಡೆ ಆಗುತ್ತೆ. ಕೊವಿಡ್ ಸೇರಿದಂತೆ ಮನುಷ್ಯ ಕಷ್ಟ ಬಂದಾಗ ದೇವರು ಅಂತಾನೆ. ಧರ್ಮ ಅಂತಾನೆ. ದೈವ ಪ್ರಾರ್ಥನೆ ಮಾಡುತ್ತಾನೆ. ಕೊವಿಡ್ ದೇವರನ್ನೇ ಹಿಡಿದುಕೊಂಡಿತು. ದೇವಸ್ಥಾನ ಮಠಗಳನ್ನ ಬಾಗಿಲು ಹಾಕಿಸ್ತು. ಆಮೇಲೆ ಜನರ ಮೇಲೆಯೂ ಬಂತೂ. ಹಿಂಗಾಗಿ ಸಾವು ನೋವುಗಳು ಸಂಭವಿಸಿತು. ಇನ್ನೂ ಒಂದೂವರೆ ವರ್ಷದ ನಂತರ ಬಿಡುಗಡೆ ಆಗುತ್ತೆ. ಹೋಗುವಾಗ ವಿಪರೀತ ಕಷ್ಟ ಕೊಟ್ಟು ಹೋಗುತ್ತೆ. ಈಗಿನಿಂದಲೇ ಎಚ್ಚರ ವಹಿಸಬೇಕು. ನಾನು ಮೊದಲೇ ಹೇಳಿದ್ದೆ‌. ಮದ್ದಿಲ್ಲದ ಕಾಯಿಲೆ ಬರುತ್ತೆ ಅಂತಾ ಹೇಳಿದ್ದೆ. ಜನರು ನಡುಗಿ ಹೋಗ್ತಾರೆ ಅಂತಾನೂ ಹೇಳಿದ್ದೆ ಎಂದು ಕೋಡಿಮಠದ ಸ್ವಾಮೀಜಿ ಎಚ್ಚರಿಕೆ ಮಿಶ್ರಿತ ಭವಿಷ್ಯ ನುಡಿದಿದ್ದಾರೆ.

ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ

Published On - 2:12 pm, Sat, 11 June 22

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ