AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಂಧೆ, ಭ್ರಷ್ಟಾಚಾರ ಆರೋಪ: ಕೊಡಿಗೇಹಳ್ಳಿ ಠಾಣೆ ಇನ್​ಸ್ಪೆಕ್ಟರ್ ವಿರುದ್ಧ ದೂರು ನೀಡಿದ ಠಾಣೆ ಸಿಬ್ಬಂದಿ

ತನ್ನ ವಿರುದ್ಧ ಡಿಸಿಪಿಗೆ ದೂರು ನೀಡಿದ ಠಾಣೆ ಸಿಬ್ಬಂದಿಗಳ ಬಳಿ ಕೊಡಿಗೆಹಳ್ಳಿ ಇನ್​ಸ್ಪೆಕ್ಟರ್, ಡಿಸಿಪಿಯನ್ನೇ ಎತ್ತಂಗಡಿ ಮಾಡಿಸುವುದಾಗಿ ಸವಾಲು ಹಾಕಿದ್ದಾರೆ.

ದಂಧೆ, ಭ್ರಷ್ಟಾಚಾರ ಆರೋಪ: ಕೊಡಿಗೇಹಳ್ಳಿ ಠಾಣೆ ಇನ್​ಸ್ಪೆಕ್ಟರ್ ವಿರುದ್ಧ ದೂರು ನೀಡಿದ ಠಾಣೆ ಸಿಬ್ಬಂದಿ
ಇಸ್ಪೀಟ್​ ಅಡ್ಡೆ ನಡೆಸುತ್ತಿದ್ದವನಿಂದ 2 ಲಕ್ಷ ವಸೂಲಿ ಕೊಡಿಗೆಹಳ್ಳಿ ಠಾಣೆ ಇನ್​ಸ್ಪೆಕ್ಟರ್ ವಿರುದ್ಧ ದೂರು ನೀಡಿದ ಸಿಬ್ಬಂದಿ
TV9 Web
| Edited By: Rakesh Nayak Manchi|

Updated on: Nov 04, 2022 | 12:43 PM

Share

ಬೆಂಗಳೂರು: ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ರಾಜಣ್ಣನವರು ನಡೆಸುತ್ತಿರುವ ದಂಧೆಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಅದೇ ಠಾಣೆಯ ಸಿಬ್ಬಂದಿಯೊಬ್ಬರು ಡಿಸಿಪಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದ ರಾಜಣ್ಣ, ಡಿಸಿಪಿಯನ್ನೇ ಎತ್ತಂಗಡಿ ಮಾಡಿಸುವುದಾಗಿ ಸವಾಲು ಹಾಕಿದ್ದಾರೆ. ಡಿಸಿಪಿ ಅನೂಪ್ ಶೆಟ್ಟಿ ಎತ್ತಂಗಡಿ ಮಾಡಿಸಿ ಅವರ ಸ್ಥಾನಕ್ಕೆ ಸಾರಾ ಫಾತಿಮಾ ಅವರನ್ನು ಕೂರಿಸುವುದಾಗಿ ಸವಾಲು ಹಾಕಿದ್ದಾರೆ. ಸದ್ಯದಲ್ಲೇ ಡಿಸಿಪಿ ಅನೂಪ್ ಶೆಟ್ಟಿ ವರ್ಗಾವಣೆ ಆಗುತ್ತದೆ, ನಂತರ ನಾನು ಹೇಗೆ ಬೇಕಾದರೂ ಇರಬಹುದು, ಡಿಸಿಪಿ ವರ್ಗಾವಣೆ ಮಾಡಿಸುತ್ತಿರುವುದು ನಾನೇ ಎಂದು ರಾಜಣ್ಣ ಹೇಳಿರುವುದಾಗಿ ಹೆಸರು ಹೇಳಲಿಚ್ಚಿಸದ ಪೊಲೀಸ್ ಠಾಣಾ ಸಿಬ್ಬಂದಿಗಳಿಂದಲೇ ಮಾಹಿತಿ ಹೊರಬಿದ್ದಿದೆ.

ಬೆಂಗಳೂರಿನ ಕೆನರಾ ಬ್ಯಾಂಕ್​ ಲೇಔಟ್​ನಲ್ಲಿರುವ ಇಸ್ಪೀಟ್​ ಅಡ್ಡೆ ನಡೆಸುತ್ತಿದ್ದ ವೆಂಕಟೇಶ್​ನಿಂದ ರಾಜಣ್ಣ 2ಲಕ್ಷ ಪಡೆದ ಆರೋಪವಿದೆ. ಅಲ್ಲದೆ ಕೇಬಲ್ ತಗುಲಿ ವ್ಯಕ್ತಿ ಮೃತಪಟ್ಟಿದ್ದ ಪ್ರಕರಣದಲ್ಲಿ ಏರ್​ಟೆಲ್​ ಬ್ರಾಡ್​ಬ್ಯಾಂಡ್​ ಉಸ್ತುವಾರಿ ಸುರೇಶ್​ಗೆ ಬೆದರಿಕೆ ಹಾಕಿದ್ದಲ್ಲದೆ 15 ಲಕ್ಷ ಹಣ ಕೊಡದಿದ್ದರೆ ಕೊಲೆ ಕೇಸ್ ದಾಖಲಿಸುವುದಾಗಿ ಧಮ್ಕಿ ಹಾಕಿದ್ದಾರೆ. ಈ ವೇಳೆ ಮೃತನ ಕುಟುಂಬಕ್ಕೆ 10 ಲಕ್ಷ, ನಿಮಗೆ 5 ಲಕ್ಷ ಕೊಡುವೆ ಎಂದು ಸುರೇಶ್ ಹೇಳಿದ್ದಾರೆ. ಇದಕ್ಕೆ ನನಗೆ 10 ಲಕ್ಷ, ಮೃತನ ಕುಟುಂಬಕ್ಕೆ 5 ಲಕ್ಷ ಕೊಡು ಎಂದು ರಾಜಣ್ಣ ಹೇಳಿದ್ದಾನೆ. ಇದರಿಂದ ಬೇಸತ್ತ ಸುರೇಶ್, ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದಾಳಿ ನಡೆಸುವ ದಿನ ಲೋಕಾಯುಕ್ತ ಸಂಸ್ಥೆಯಿಂದ ಯಾರೋ ಒಬ್ಬರು ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆ ರಾಜಣ್ಣ, ಸುರೇಶ್​ನನ್ನು ಯಾರು ಕೂಡ ಮಾತನಾಡಿಸಬಾರದು ಎಂದು ಠಾಣೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ವಿಚಾರವಾಗಿ ಠಾಣೆ ಸಿಬ್ಬಂದಿಯೊಬ್ಬರು ಡಿಸಿಪಿ ಅನೂಪ್​ ಶೆಟ್ಟಿಗೆ ದೂರು ನೀಡಿದ್ದಾರೆ.

ದೂರು ನೀಡಿದ ವಿಚಾರ ತಿಳಿದ ರಾಜಣ್ಣ, ಡಿಸಿಪಿ ಅನೂಪ್​ ಶೆಟ್ಟಿಯನ್ನು ಎತ್ತಂಗಡಿ ಮಾಡಿಸುತ್ತೇನೆ, ಅವರ ಜಾಗಕ್ಕೆ ಸಾರಾ ಫಾತಿಮಾರನ್ನು ಕೂರಿಸುತ್ತೇವೆ. ಸದ್ಯದಲ್ಲೇ ಡಿಸಿಪಿ ಅನೂಪ್ ಶೆಟ್ಟಿ ವರ್ಗಾವಣೆ ಆಗುತ್ತದೆ. ವರ್ಗಾವಣೆ ಮಾಡಿಸುವುದೇ ನಾನು, ನಂತರ ನಾನು ಹೇಗೆ ಬೇಕಾದರೂ ಇರಬಹುದು ಎಂದು ರಾಜಣ್ಣ ಹೇಳಿದ್ದಾರೆ. ಸದ್ಯ ರಾಜಣ್ಣ ವಿರುದ್ಧ ದೂರು ಡಿಸಿಪಿ ಅನೂಪ್ ಶೆಟ್ಟಿ ಕೈ ಸೇರಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್