AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಪುಷ್ಪ ರಿಯಲ್ ಸ್ಟೋರಿ! ಸಿನಿಮಾದ ಮಾದರಿಯಲ್ಲೇ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್

ಅಂದಹಾಗೆ ಸಿಕ್ಕಿಬಿದ್ದ ಆರೋಪಿ ಹೆಸರು ಯಾಸಿನ್ ಇನಾಯತ್. ಆನೇಕಲ್ ಮೂಲದವನು. ಈತ ಕೂಡ ಪುಷ್ಪ ಸಿನಿಮಾದಲ್ಲಿರುವಂತೆ 407 ವಾಹನ ರೆಡಿ ಮಾಡಿಕೊಂಡಿದ್ದಾನೆ. ಮೊದಲಿಗೆ ರಕ್ತ ಚಂದನದ ತುಂಡುಗಳನ್ನು ಲೋಡ್ ಮಾಡಿದ್ದಾನೆ.

ಇದು ಪುಷ್ಪ ರಿಯಲ್ ಸ್ಟೋರಿ! ಸಿನಿಮಾದ ಮಾದರಿಯಲ್ಲೇ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್
ಇದು ಪುಷ್ಪ ರಿಯಲ್ ಸ್ಟೋರಿ! ಸಿನಿಮಾದ ಮಾದರಿಯಲ್ಲೇ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್
TV9 Web
| Edited By: |

Updated on: Feb 01, 2022 | 7:34 AM

Share

ಬೆಳಗಾವಿ: ಪುಷ್ಪ ಸಿನಿಮಾದ ಮಾದರಿಯಲ್ಲೇ ಖತರ್ನಾಕ್ ಕಳ್ಳನೊಬ್ಬ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಆಸಾಮಿ ರಕ್ತ ಚಂದನ ಸಾಗಿಸಲು ಮಾಡಿದ ಮಾಸ್ಟರ್ ಪ್ಲ್ಯಾನ್ ಹೇಗಿತ್ತು? ರಾಜ್ಯದ ಗಡಿ ದಾಟಿದ್ದ ಕಳ್ಳ ಮಹಾರಾಷ್ಟ್ರ ಪೊಲೀಸರ ಕೈಯಲ್ಲಿ ತಗ್ಲಾಕ್ಕೊಂಡಿದ್ದು ಹೇಗೆ ರಿಯಲ್ ಪುಷ್ಪನ ಸಂಪೂರ್ಣ ಪಿಕ್ಚರ್ ಇಲ್ಲಿ ಓದಿ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ನೀವು ನೋಡಿರ್ತೀರಾ. ಅದರಲ್ಲಿ ಹಾಲಿನ ಟ್ಯಾಂಕ್‌.. ಟ್ಯಾಂಕ್‌ನ ಕೆಳಗೆ ರಕ್ತ ಚಂದನದ ತುಂಡುಗಳಿದ್ರೆ ಮೇಲೆ ಹಾಲಿನ ಟ್ಯಾಂಕ್ ದೃಶ್ಯ ನೋಡಿರ್ತೀರಾ. ಸೇಮ್ ಅದೇ ಮಾದರಿಯಲ್ಲಿ ಇಲ್ಲೊಬ್ಬ ಭೂಪ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

ಈ ದೃಶ್ಯವನ್ನ ಈ ಭೂಪ ಅದೆಷ್ಟು ಬಾರಿ ನೋಡಿದ್ನೋ ಗೊತ್ತಿಲ್ಲ. ಈ ಸಿನಿಮಾದಲ್ಲಿ ಹೀರೋ ರಕ್ತ ಚಂದನ ಸಾಗಿಸಲು ಮಾಡೋ ಪ್ಲ್ಯಾನ್‌ಗಳನ್ನೆಲ್ಲಾ ನೋಡಿದ್ದ ಈತ. ರಿಯಲ್ ಲೈಫ್‌ನಲ್ಲೂ ರಕ್ತ ಚಂದನ ಸಾಗಿಸಲು ಖತರ್ನಾಕ್ ಪ್ಲ್ಯಾನ್‌ ಮಾಡಿಕೊಂಡಿದ್ದಾನೆ. ಪುಷ್ಪ ಸಿನಿಮಾದಿಂದ ಇನ್ಸ್‌ಫಿರೇಷನ್ ಪಡೆದ ಈತ, ಹೀರೋ ರೀತಿ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

real life pushpa movie smuggling 1

ರಕ್ತ ಚಂದನ

ಮೇಲೆ ಅಗತ್ಯ ಸಾಮಗ್ರಿ ಬೋರ್ಡ್‌.. ಒಳಗೆ ರಕ್ತ ಚಂದನ..! ಅಂದಹಾಗೆ ಸಿಕ್ಕಿಬಿದ್ದ ಆರೋಪಿ ಹೆಸರು ಯಾಸಿನ್ ಇನಾಯತ್. ಆನೇಕಲ್ ಮೂಲದವನು. ಈತ ಕೂಡ ಪುಷ್ಪ ಸಿನಿಮಾದಲ್ಲಿರುವಂತೆ 407 ವಾಹನ ರೆಡಿ ಮಾಡಿಕೊಂಡಿದ್ದಾನೆ. ಮೊದಲಿಗೆ ರಕ್ತ ಚಂದನದ ತುಂಡುಗಳನ್ನು ಲೋಡ್ ಮಾಡಿದ್ದಾನೆ. ಬಳಿಕ ಅದರ ಮೇಲೆ ಹಣ್ಣು, ತರಕಾರಿ ಬಾಕ್ಸ್‌ಗಳನ್ನಿಟ್ಟು ಕವರ್ ಮಾಡಿ, ವಾಹನದ ಮೇಲೆ ಕೊವಿಡ್ 19 ಅಗತ್ಯ ಸಾಮಾಗ್ರಿಗಳು ಅಂತಾ ಬೋರ್ಡ್ ಹಾಕ್ಕೊಂಡು ಬೆಂಗಳೂರಿನಿಂದ ಮಹಾರಾಷ್ಟ್ರದತ್ತ ತೆರಳಿದ್ದಾನೆ. ರಾಜ್ಯದಲ್ಲಿ ಎಲ್ಲೂ ತಗ್ಲಾಕಿಕೊಳ್ಳದ ಈತ ಬಾರ್ಡರ್ ದಾಟುತ್ತಿದ್ದಂತೆ ಬ್ಯಾಡ್ ಟೈಮ್ ಶುರುವಾಗಿದೆ. ಮಹಾರಾಷ್ಟ್ರದ ಮಿರಜ್ ಬಳಿ ಈತನ ವಾಹನ ತಡೆದ ಪೊಲೀಸರು ಇಂಚಿಂಚೂ ಜಾಲಾಡಿದ್ದಾರೆ. ಹಣ್ಣು ಹಾಗೂ ತರಕಾರಿ ಟ್ರೇಗಳನ್ನ ಕೆಳಗೆ ಇಳಿಸಿ ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಕೆಳಗೆ ಇದ್ದ ರಕ್ತ ಚಂದನದ ತುಂಡುಗಳನ್ನ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಯಾಸಿನ್‌ನನ್ನು ಬಂಧಿಸಿ, ಸುಮಾರು 2ಕೋಟಿ 45ಲಕ್ಷ ಮೌಲ್ಯದ ರಕ್ತ ಚಂದನವನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಂದಹಾಗೆ ಕರ್ನಾಟಕದಲ್ಲಿ ಬೆಳೆಯುವ ರಕ್ತ ಚಂದನವನ್ನ ಕೆಲ ಖದೀಮರು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಆದ್ರೆ ರಾಜ್ಯದಲ್ಲಿರುವ ಎಲ್ಲಾ ಚೆಕ್‌ ಪೋಸ್ಟ್‌ಗಳನ್ನ ತಪ್ಪಿಸಿಕೊಂಡು ಬಂದಿದಾದ್ರೂ ಹೇಗೆ ಅನ್ನೋ ಅನುಮಾನ ಮೂಡಿದ್ದು, ಕರ್ನಾಟಕ ಪೊಲೀಸರು ಸಹ ಅಲರ್ಟ್ ಆಗ್ಬೇಕಿದೆ.

ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಜೊತೆ ಸಭೆ ಎಫೆಕ್ಸ್: ಬೆಂಗಳೂರಿನಲ್ಲಿ ಸದ್ಯಕ್ಕೆ ವಾಹನ ಟೋಯಿಂಗ್‌ ಕ್ಯಾನ್ಸಲ್ ಎಂದ ಆಯುಕ್ತ ಕಮಲ್ ಪಂತ್

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ