AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆಯಾಗಲಿದೆ: ಈಶ್ವರಪ್ಪ ಗುಟುರು

ಬೆಳಗಾವಿ: ಉಪಚುನಾವಣೆ ಸಮಯದಲ್ಲಿ ಇಬ್ಬರು ಮಹಾಪುರುಷರು ಹೇಳಿಕೆ‌ ಕೊಟ್ಟಿದ್ದಾರೆ. ಒಬ್ಬರು ಚುನಾವಣೆ ಮುಗಿದ ಮೇಲೆ ಸರ್ಕಾರ ಬೀಳುತ್ತೆ ಅಂದಿದ್ದಾರೆ. ಮತ್ತೊಬ್ಬರು ಅನರ್ಹರನ್ನ ಸೋಲಿಸುವುದೇ ನನ್ನ ಗುರಿ ಅಂದಿದ್ದಾರೆ. ಅನರ್ಹರನ್ನ ಸೋಲಿಸುತ್ತೇನೆ ಅಂದವರಿಗೆ ಅಪ್ಪ ಮತ್ತು‌ ಮಗನನ್ನೇ ಗೆಲ್ಲಿಸಲು ಆಗಲಿಲ್ಲ. ಇವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಕುಮಾರಸ್ವಾಮಿಗೆ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಆಗುತ್ತೆ ಅಂದಿದ್ದು ಆಗಲ್ಲ: ಸಿದ್ದರಾಮಯ್ಯ ಹೆಸರು ಹೇಳಲು ನನಗೆ ಮನಸ್ಸು ಬರುವುದಿಲ್ಲ. ಅವರು ಬರೀ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಕೆಡವಿ 78ಕ್ಕೆ […]

ಈ ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆಯಾಗಲಿದೆ: ಈಶ್ವರಪ್ಪ ಗುಟುರು
ಸಾಧು ಶ್ರೀನಾಥ್​
|

Updated on: Nov 23, 2019 | 3:13 PM

Share

ಬೆಳಗಾವಿ: ಉಪಚುನಾವಣೆ ಸಮಯದಲ್ಲಿ ಇಬ್ಬರು ಮಹಾಪುರುಷರು ಹೇಳಿಕೆ‌ ಕೊಟ್ಟಿದ್ದಾರೆ. ಒಬ್ಬರು ಚುನಾವಣೆ ಮುಗಿದ ಮೇಲೆ ಸರ್ಕಾರ ಬೀಳುತ್ತೆ ಅಂದಿದ್ದಾರೆ. ಮತ್ತೊಬ್ಬರು ಅನರ್ಹರನ್ನ ಸೋಲಿಸುವುದೇ ನನ್ನ ಗುರಿ ಅಂದಿದ್ದಾರೆ. ಅನರ್ಹರನ್ನ ಸೋಲಿಸುತ್ತೇನೆ ಅಂದವರಿಗೆ ಅಪ್ಪ ಮತ್ತು‌ ಮಗನನ್ನೇ ಗೆಲ್ಲಿಸಲು ಆಗಲಿಲ್ಲ. ಇವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಕುಮಾರಸ್ವಾಮಿಗೆ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಆಗುತ್ತೆ ಅಂದಿದ್ದು ಆಗಲ್ಲ: ಸಿದ್ದರಾಮಯ್ಯ ಹೆಸರು ಹೇಳಲು ನನಗೆ ಮನಸ್ಸು ಬರುವುದಿಲ್ಲ. ಅವರು ಬರೀ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಕೆಡವಿ 78ಕ್ಕೆ ತಂದು ನಿಲ್ಲಿಸುವ ಮಹಾನುಭಾವ ಅವರು. ಕುಮಾರಸ್ವಾಮಿ ಅವರಪ್ಪನ ಆಣೆಗೂ ಸಿಎಂ ಆಗಲ್ಲ ಅಂದರು. ಬಳಿಕ ಕುಮಾರಸ್ವಾಮಿ ಕಾಲು ಹಿಡಿದು ಸಿಎಂ ಮಾಡಿದರು. ಯಡಿಯೂರಪ್ಪ ಸಿಎಂ ಆಗಲ್ಲ ಅಂದ್ರು, ಈಗ ಪೂರ್ಣ ಪ್ರಮಾಣದ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಆಗುತ್ತೆ ಅಂದಿದ್ದು ಆಗಲ್ಲ, ಆಗಲ್ಲ ಅಂದಿದ್ದು ಆಗುತ್ತೆ ಎಂದು ವ್ಯಂಗ್ಯವಾಡಿದರು.

ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆ:  ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಮನೆ ಬಿಟ್ಟು ಬರುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್​ ಮನೆ ಬಿಟ್ಟು ಬಂದಿಲ್ಲ. ಜಮೀರ್ ಅಹಮದ್ ಎಲ್ಲಿದ್ದಾರೋ ಗೊತ್ತಿಲ್ಲ. ಈ ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆಯಾಗಲಿದೆ. ವಿರೋಧ ಪಕ್ಷದಲ್ಲಿ ಸಿದ್ದರಾಮಯ್ಯ ಕೂರಲು‌ ಲಾಯಕ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸವದಿ, ಯಡಿಯೂರಪ್ಪ ರಾಮ ಲಕ್ಷ್ಮಣರಂತೆ: ರಾಮ, ಲಕ್ಷ್ಮಣರಂತೆ ಲಕ್ಷ್ಮಣ ಸವದಿ ಮತ್ತು ಯಡಿಯೂರಪ್ಪ. ಈ  ರಾಮ, ಲಕ್ಷ್ಮಣರು ಯುದ್ಧಕ್ಕೆ ಹೊರಟಿದ್ದಾರೆ. ಕಾರ್ಯಕರ್ತರೆನೂ ಕಮ್ಮಿಯಿಲ್ಲ, ಸೈನಿಕರಂತೆ ಹೋರಾಡಿ 25 ಸಾವಿರ ಮತಗಳ ಅಂತರದಿಂದ ಮಹೇಶ್ ಕುಮಟ್ಟಳ್ಳಿ ಅವರನ್ನು ಗೆಲ್ಲಿಸೋಣ. ಚುನಾವಣೆ ಮುಗಿದ ಮೇಲೆ ಅಥಣಿಗೆ ಇಬ್ಬಿಬ್ಬರು ಮಂತ್ರಿ ಆಗುತ್ತಾರೆ. ನೀವು ಗೆಲ್ಲಿಸುತ್ತಿರುವುದು ಶಾಸಕರನ್ನಲ್ಲ ಮಂತ್ರಿಯನ್ನ. ನನಗೆ ಹೊಟ್ಟೆ ಉರಿ.. ಶಿವಮೊಗ್ಗಕ್ಕೆ ನಾನು ಒಬ್ಬನೇ ಮಂತ್ರಿ ಅಂತಾ ಎಂದು ಇದೇ ವೇಳೆ ಅಥಣಿಯಲ್ಲಿ ಮಾತನಾಡಿದರು.

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​