AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi News: ಚಿರತೆ ಹಿಡಿಯಲು ಮುಧೋಳ ನಾಯಿ; ಸಚಿವ ಗೋವಿಂದ ಕಾರಜೋಳ

ಬೆಳಗಾವಿ ಗಾಲ್ಫ್​ ಮೈದಾನದ 8 ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಪಂಜರ ಇರಿಸಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಗಾಗಿ 50 ಸಿಬ್ಬಂದಿಯನ್ನು, ಪರಿಣಿತರನ್ನು ನಿಯೋಜಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

Belagavi News: ಚಿರತೆ ಹಿಡಿಯಲು ಮುಧೋಳ ನಾಯಿ; ಸಚಿವ ಗೋವಿಂದ ಕಾರಜೋಳ
ಸಚಿವ ಗೋವಿಂದ ಕಾರಜೋಳ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Aug 15, 2022 | 2:04 PM

Share

ಬೆಳಗಾವಿ: ಜಿಲ್ಲೆಯಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು, ಅವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ (Forest Department) ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಬೆಳಗಾವಿ ಗಾಲ್ಫ್​ ಮೈದಾನದ 8 ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಪಂಜರ ಇರಿಸಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಗಾಗಿ 50 ಸಿಬ್ಬಂದಿಯನ್ನು, ಪರಿಣಿತರನ್ನು ನಿಯೋಜಿಸಲಾಗಿದೆ. ಒಂದು ವೇಳೆ ಚಿರತೆ ಬೋನಿಗೆ (Leopard) ಬೀಳದಿದ್ದರೆ ಕೊನೆಯ ಪ್ರಯತ್ನವಾಗಿ ಮುಧೋಳ ನಾಯಿಗಳನ್ನು (Mudhol Hounds) ತರಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಧೋಳ ನಾಯಿಗಳು ವಾಸನೆಯ ಮೇಲೆ ಚಿರತೆಯನ್ನು ಪತ್ತೆ ಮಾಡುತ್ತವೆ. ಚಿರತೆಯಷ್ಟೇ ಅಲ್ಲ ಯಾವುದನ್ನು ಬೇಕಾದರೂ ಪತ್ತೆ ಹಚ್ಚುವ ಸಾಮರ್ಥ್ಯ ಮುಧೋಳ ನಾಯಿಗಳಿಗೆ ಇವೆ. ಮಿಲಿಟರಿಗೂ ನಮ್ಮ ಮುಧೋಳ ನಾಯಿಗಳನ್ನು ಒಯ್ಯುತ್ತಾರೆ. ವೈರಿಗಳು ಎಲ್ಲಿಯೇ ಅಡಗಿ ಕುಳಿತಿದ್ರೆ ಹುಡುಕಿ ಕೊಡುತ್ತವೆ ಎಂದು ಅವರು ತಿಳಿಸಿದರು.

ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮುನಿಸು ಮುಂದುವರಿದಿದೆ. ಬೆಳಗಾವಿಯಲ್ಲಿಯೇ ಇದ್ದರೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಅಭಯ್ ಪಾಟೀಲ್ ಗೈರು ಹಾಜರಾಗಿದ್ದರು. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಧ್ವಜಾರೋಹಣ ನೆರವೇರಿಸಿದರು.

ಮುಂದುವರಿದ ಮುನಿಸು

ಬೆಳಗಾವಿಯಲ್ಲಿರುವ ಬಳ್ಳಾರಿ ನಾಲಾ ಸಮಸ್ಯೆ ನಿವಾರಿಸಲು ನಾಳೆ (ಆಗಸ್ಟ್ 16) ಸಭೆ ನಿಗದಿಪಡಿಸಲಾಗಿದೆ. ಸಭೆ ಬಗ್ಗೆ ಶಾಸಕ ಅಭಯ್ ಪಾಟೀಲ್‌ಗೆ ಮಾಹಿತಿ ನೀಡದಿದ್ದಕ್ಕೆ ಗೋವಿಂದ್ ಕಾರಜೋಳ ವಿರುದ್ಧ ಶಾಸಕ ಅಭಯ್ ಪಾಟೀಲ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕ ಅಭಯ್ ಪಾಟೀಲ್ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಗೋವಿಂದ್ ಕಾರಜೋಳ ಸಿಟ್ಟಾದರು.

ಸ್ಥಳೀಯ ಶಾಸಕರ ಗಮನಕ್ಕೆ ತರದೇ ಸಭೆ ಕರೆದಿದ್ದೇಕೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ನಾನು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದಾಗ ಕೆಲವರು ಬಂದು ಅರ್ಜಿ ಕೊಟ್ಟರು. ನಾನು ಬೆಳಗಾವಿ ಧಾರವಾಡ ರೈಲ್ವೆ ಯೋಜನೆ, ಸಾಂಬ್ರಾ ಬಳಿ ಚತುಷ್ಪಥ ಹೆದ್ದಾರಿ ಕುರಿತು ಸಭೆ ಮಾಡಿದ್ದೇನೆ. ಇದೆ ಸಂದರ್ಭದಲ್ಲಿ ಬಳ್ಳಾರಿ ನಾಲಾ ಸಮಸ್ಯೆ ಬಗ್ಗೆ ಅರ್ಜಿ ಕೊಟ್ಟರು. ಹೀಗಾಗಿ ಈ ಸಭೆಯಲ್ಲಿ ಬಳ್ಳಾರಿ ನಾಲಾ ವಿಷಯ ಸೇರಿಸಿಕೊಳ್ಳಲು ತಿಳಿಸಿದೆ. ಇದರಲ್ಲಿ ನನ್ನದು ಏನಾದರೂ ತಪ್ಪು ಇದೆಯೇ ಎಂದು ಗೋವಿಂದ ಕಾರಜೋಳ ಮರು ಪ್ರಶ್ನಿಸಿದರು.

ಜನರ ಸಂಕಷ್ಟ ಚರ್ಚೆ ಮಾಡುವುದು ತಪ್ಪೇ ಎಂದು ಕೇಳಿದರು. ರೈತರು, ಸಾರ್ವಜನಿಕರು ಬಂದು ಅರ್ಜಿ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಈ ಬಗ್ಗೆ ಪರಿಶೀಲನೆ ನಡೆಸಬೇಕಲ್ಲವೇ? ಸ್ಥಳೀಯ ಶಾಸಕರನ್ನು ಮೀಟಿಂಗ್‌ಗೆ ಕರೆಯದಿದ್ದರೆ ಹೇಳಿ. ಸಭೆಯಲ್ಲಿ ಶಾಸಕ ಅಭಯ್ ಪಾಟೀಲ ‌ಬೇಕಾದ್ದು ಹೇಳಲಿ. ಈಗ ಸಭೆ ಆಗಿದೆಯೇ? ಮೀಟಿಂಗ್ ಟೈಮ್‌ವರೆಗೆ ವೇಟ್ ಮಾಡಿ ಗೊತ್ತಾಗಲಿದೆ. ಈ ಮನಸ್ಥಿತಿ ಇರಬಾರದು ಎಂದು ಶಾಸಕ ಅಭಯ್ ಪಾಟೀಲ್ ವಿರುದ್ಧ ಕಾರಜೋಳ ಅಸಮಾಧಾನ ಹೊರ ಹಾಕಿದರು.

ಮಹದಾಯಿ ಜಾರಿ ಭರವಸೆ

ಚುನಾವಣೆಗೆ ಮೊದಲೇ ಮಹದಾಯಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಮಹದಾಯಿ ಯೋಜನೆ ಬೇಗ ಜಾರಿಯಾಗುವ ಸಾಧ್ಯತೆ ಇದೆ. ನಾವು ಒಂದು ಹಂತಕ್ಕೆ ತಲುಪಿದ್ದೇವೆ ಅಂತಾ ಹೇಳಿದ್ದೇನೆ. ಮಹದಾಯಿಯಲ್ಲಿ 3.9 ಟಿಎಂಸಿ ಕುಡಿಯುವ ನೀರಿಗೆ ಸಿಕ್ಕಿದೆ. ಮಹದಾಯಿ ಯೋಜನೆಯ ಕಾರ್ಯಸಾಧ್ಯತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕೆಲವೇ ದಿನಗಳಲ್ಲಿ ಒಪ್ಪಿಗೆ ಸಿಗಬಹುದು ಎಂಬ ಆಶಾಭಾವನೆ ಇದೆ. ಇದರ ಬಗ್ಗೆ ಕಾಂಟ್ರಾವರ್ಸಿ ಬೇಡ ಎಂದು ಕಾರಜೋಳ ವಿನಂತಿಸಿದರು.

ನಾವು ಕೇವಲ ಭರವಸೆಗಳಿಗಷ್ಟೇ ಸೀಮಿತವಾಗಿಲ್ಲ. ಬಜೆಟ್‌ನಲ್ಲಿ ಹಣವನ್ನೂ ಇಟ್ಟಿದ್ದೇವೆ. ಹಿಂದೆ ಅಧಿಕಾರದಲ್ಲಿದ್ದವರು ಯೋಜನೆ ಮಾಡುವುದಾಗಿ ಕೇವಲ ಭರವಸೆಯನ್ನಷ್ಟೇ ಕೊಟ್ಟಿದ್ದರು. ನಾವು ಯೋಜನೆ ಮಾಡಬೇಕೆಂಬ ಕಾರಣಕ್ಕೆ ಬಜೆಟ್‌ನಲ್ಲಿ ಒಂದು ಕೋಟಿ ಇಟ್ಟಿದ್ದೇವೆ. ಇನ್ನು ಇದಕ್ಕೆ ಯಾರೂ ತಕರಾರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಕೃಷಿಗೆ ನೀರು ಕೊಡುವ ಯೋಜನೆ ಅಲ್ಲ, ಕೇವಲ ಕುಡಿಯುವ ನೀರಿಗಾಗಿ ಇರುವ ಯೋಜನೆ ಎಂದು ಅವರು ಹೇಳಿದರು.

ಯೋಜನೆಗೆ ಈ ಬಾರಿ ಕೇಂದ್ರದ ಅನುಮೋದನೆ ಸಿಗುವ ಬಗ್ಗೆ ನಮಗೆ ಆತ್ಮವಿಶ್ವಾಸ ಇದೆ. ಬಜೆಟ್‌ನಲ್ಲಿ ಹಣ ಇಡುವುದು ಚುನಾವಣೆ ವಿಷಯ ಅಲ್ಲ. ನಾವು ಯೋಜನೆ ಅನುಷ್ಠಾನ ಮಾಡಬೇಕೆಂಬ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಯೋಜನೆ ಮಾರ್ಪಾಡು ಮಾಡಿದ್ದೇವೆ, ಅದರ ಬಗ್ಗೆ ಹೆಚ್ಚಿನ ವ್ಯಾಖ್ಯಾನ ಬೇಡ. ನೂರಕ್ಕೆ ನೂರು ಯೋಜನೆ ಜಾರಿ ಆಗುತ್ತೆ. ಚುನಾವಣೆ ಹೋಗುವ ಮೊದಲೇ ಆ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ಕಾರಜೋಳ ಭರವಸೆ ನೀಡಿದರು.

Published On - 2:04 pm, Mon, 15 August 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ