AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devanahalli: ದೇವನಹಳ್ಳಿ ಬಳಿ ನಕಲಿ ದಾಖಲೆಗಳ ಸೃಷ್ಟಿಸಿ ಭೂ ಕಬಳಿಕೆಗೆ ಯತ್ನ -ಪ್ರಭಾವಿಗಳು, ಮಾಜಿ ರೌಡಿಶೀಟರ್ ವಿರುದ್ಧ ಗಂಭೀರ ಆರೋಪ

Land Encroachment: ಗ್ರಾಮ ಪಂಚಾಯಿತಿ ಖಾತೆಯನ್ನಿಟ್ಟುಕೊಂಡು ನಿವೇಶನ ಕಬಳಿಸಿದ್ದಾರೆ ಎಂದು ರೌಡಿಶೀಟರ್ ನಾರಾಯಣಸ್ವಾಮಿ ವಿರುದ್ಧ ದ್ಯಾವರಹಳ್ಳಿಯ 8 ಕುಟುಂಬದವರು ಆರೋಪ ಮಾಡಿದ್ದಾರೆ. ನಮ್ಮ ನಿವೇಶನ ಹಿಂದಿರುಗಿಸಿ ಅಥವಾ ವಿಷ ಕೊಡಿ ಎಂದು ನೊಂದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಜನರನ್ನು ಕಾಯುವ ಪೊಲೀಸ್​ ಠಾಣೆಗೆ ದೂರು ನೀಡಲು ಹೋದರೆ ಆರಕ್ಷಕ ಪೊಲೀಸರಿಂದಲೂ ದಬ್ಬಾಳಿಕೆ ನಡೆಯಿತು ಎಂಬ ಆರೋಪ ಬಂದಿದೆ.

Devanahalli: ದೇವನಹಳ್ಳಿ ಬಳಿ ನಕಲಿ ದಾಖಲೆಗಳ ಸೃಷ್ಟಿಸಿ ಭೂ ಕಬಳಿಕೆಗೆ ಯತ್ನ -ಪ್ರಭಾವಿಗಳು, ಮಾಜಿ ರೌಡಿಶೀಟರ್ ವಿರುದ್ಧ ಗಂಭೀರ ಆರೋಪ
ದೇವನಹಳ್ಳಿ: ನಕಲಿ ದಾಖಲೆಗಳ ಸೃಷ್ಟಿಸಿ ಭೂ ಕಬಳಿಕೆಗೆ ಯತ್ನ -ಪ್ರಭಾವಿ ಮಾಜಿ ರೌಡಿಶೀಟರ್ ವಿರುದ್ಧ ಗಂಭೀರ ಆರೋಪ
TV9 Web
| Edited By: ಸಾಧು ಶ್ರೀನಾಥ್​|

Updated on:May 14, 2022 | 2:50 PM

Share

ದೇವನಹಳ್ಳಿ: ದೇವನಹಳ್ಳಿ ಹೆಸರು ಹೇಳಿದರೆ ಸಾಕು ಅದು ವಿಶ್ವವಿಖ್ಯಾತ ಎನಿಸಿದೆ. ಅಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾನ ಬಂದ ಮೇಲಂತೂ ದೇವನಹಳ್ಳಿ ಆಸುಪಾಸಿನ ಜಮೀನುಗಳು ಸೈಟುಗಳಾಗಿ ಪರಿವರ್ತನೆಗೊಂಡು ಅಲ್ಲಿನ ಕೃಷಿ ಜಮೀನಿಗೆ ಬಂಗಾರದಂತಹ ಬೆಲೆ ಬಂದಿದೆ. ದೇವನಹಳ್ಳಿ ಸುತ್ತಮುತ್ತಲ ಜಾಗ (Devanahalli Dyavarahalli ) ಹೀಗೆ ವಿಪರೀತ ಎನಿಸುವಷ್ಟು ರೇಟು ಪಡೆದಿದ್ದೇ ಭೂಗಳ್ಳರು, ರೌಡಿ ಪಟಾಲಂ, ಭೂಮಿಗೆ ಭೂಮಿಯನ್ನೇ ಸ್ವಾಹಾ ಮಾಡುವವರು ನಾಯಿಕೊಡಗಳಂತೆ ಇಲ್ಲಿಗೆ ಬಂದು ಟೆಂಟು ಹಾಕತೊಡಗಿದರು. ಅದರಲ್ಲಿ ನಿಜಕ್ಕೂ ನರಳಿದವರು ಇಲ್ಲಿನ ನೈಜ ರೈತಾಪಿ ಜನರು. ಅವರಿವರ ಕೈ-ಬಾಯಿಗೆ ಸಿಕ್ಕಿ ತಮ್ಮ ಅಮೂಲ್ಯ ಸ್ಥಿರಾಸ್ತಿಯನ್ನೂ ಕಳೆದುಕೊಂಡ ಮಂದಿ ಸುತ್ತಮುತ್ತಲ ಹಳ್ಳಿಗಳಲ್ಲಿ ಬೀದಿಬೀದಿಯಲ್ಲಿ ಸಿಗುತ್ತಾರೆ. ತಾಜಾ ಪ್ರಕರಣವೊಂದರಲ್ಲಿ (Land Encroachment) ಸಮೀಪದ ಗ್ರಾಮವೊಂದರ ಪ್ರಭಾವಿಗಳು ಮತ್ತು ರೌಡಿಶೀಟರ್ (Rowdy Sheeter) ವಿರುದ್ಧ ಇಂತಹುದೇ ಅಮಾಯಕರ ಜಾಗ ಕಬಳಿಸುವ ಯತ್ನ ನಡೆಸಿದ್ದಾನೆ ಎಂದು ನೊಂದ ರೈತಾಪಿ ಜನ ಗಂಭೀರ ಆರೋಪ ಮಾಡಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಕೆಗೆ ಯತ್ನ ಆರೋಪ ಕೇಳಿಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದ್ಯಾವರಹಳ್ಳಿಯಲ್ಲಿ ಅನೇಕ ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಿಸುತ್ತಿವೆ. ಸ್ಥಳೀಯ ಗ್ರಾಮಸ್ಥರು ವಾಸವಿರುವ ಹಲವಾರು ಮನೆಗಳಿಗೇ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಕೇಳಿಬಂದಿದೆ. ಗ್ರಾಮದ ಪ್ರಭಾವಿಗಳು ಮತ್ತು ರೌಡಿಶೀಟರ್ ವಿರುದ್ಧ ಗ್ರಾಮಸ್ಥರು ಈ ಆರೋಪ ಮಾಡಿದ್ದಾರೆ.’

ಗ್ರಾಮ ಪಂಚಾಯಿತಿ ಖಾತೆಯನ್ನಿಟ್ಟುಕೊಂಡು ನಿವೇಶನ ಕಬಳಿಸಿದ್ದಾರೆ ಎಂದು ರೌಡಿಶೀಟರ್ ನಾರಾಯಣಸ್ವಾಮಿ ವಿರುದ್ಧ ದ್ಯಾವರಹಳ್ಳಿಯ 8 ಕುಟುಂಬದವರು ಆರೋಪ ಮಾಡಿದ್ದಾರೆ. ನಮ್ಮ ನಿವೇಶನ ಹಿಂದಿರುಗಿಸಿ ಅಥವಾ ವಿಷ ಕೊಡಿ ಎಂದು ನೊಂದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ನಮ್ಮ ಸೈಟ್​ ಬಗ್ಗೆ ಕೇಳಲು ಹೋದರೆ ಹಲ್ಲೆ ಮಾಡುತ್ತಾರೆಂದು ಸಂತ್ರಸ್ಥ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಇನ್ನು ಜನರನ್ನು ಕಾಯುವ ಪೊಲೀಸ್​ ಠಾಣೆಗೆ ದೂರು ನೀಡಲು ಹೋದರೆ ಆರಕ್ಷಕ ಪೊಲೀಸರಿಂದಲೂ ದಬ್ಬಾಳಿಕೆ ನಡೆಯಿತು ಎಂಬ ಆರೋಪ ಬಂದಿದೆ. ವಿಶ್ವನಾಥಪುರ ಪೊಲೀಸರ ವಿರುದ್ಧ ದ್ಯಾವರಹಳ್ಳಿ ನಿವಾಸಿಗಳು ಈ ಆರೋಪ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Sat, 14 May 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್