ದೇವನಹಳ್ಳಿ: ಅವ್ಯವಸ್ಥೆಗಳ ಆಗರವಾದ ಸರ್ಕಾರಿ ಹಾಸ್ಟೇಲ್​ಗಳು; ಹಳೆ ಬೆಡ್, ಚಾಪೆ ಮೇಲೆಯೇ ಮಕ್ಕಳ ನಿದ್ದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 18, 2023 | 7:24 PM

ಅದು ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಸರ್ಕಾರವೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ವಸತಿ ನಿಲಯಗಳು. ಪ್ರತಿವರ್ಷ ಇಲಾಖೆಗೆ ಎಂದು ಕೋಟಿ ಕೋಟಿ ಹಣ ಮೀಸಲಿಡುತ್ತಿದ್ದರು. ಆದ್ರೆ, ವರ್ಷಗಳಿಂದ ಸೌಲತ್ತುಗಳೇ ಆ ಹಾಸ್ಟೇಲ್​ಗಳಿಂದ ದೂರವಾಗಿದ್ದು, ಹಾಸ್ಟೇಲ್ ಅವ್ಯವಸ್ಥೆಯ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

 ದೇವನಹಳ್ಳಿ: ಅವ್ಯವಸ್ಥೆಗಳ ಆಗರವಾದ ಸರ್ಕಾರಿ ಹಾಸ್ಟೇಲ್​ಗಳು; ಹಳೆ ಬೆಡ್, ಚಾಪೆ ಮೇಲೆಯೇ ಮಕ್ಕಳ ನಿದ್ದೆ
ಸರ್ಕಾರಿ ಹಾಸ್ಟೇಲ್​ಗಳ ಅವ್ಯವಸ್ಥೆ
Follow us on

ಬೆಂಗಳೂರು ಗ್ರಾಮಾಂತರ, ನ.18: ಹೊರಗಿನಿಂದ ಕಟ್ಟಡ ಸುಸಜ್ಜಿತವಾಗಿದ್ದು, ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಇಷ್ಟೆಲ್ಲ ಚೆನ್ನಾಗಿರಬೇಕಾದರೆ, ಒಳಗಡೆಯೂ ಉತ್ತಮವಾಗೆ ಇರುತ್ತದೆ ಎಂದು ಎಲ್ಲರೂ ಅಂದುಕೊಳ್ಳುವುದು ಸಹಜ. ಆದ್ರೆ, ಮಕ್ಕಳು ಆಟ-ಪಾಠ ಮಾಡಿ ಮಲಗಬೇಕಾದರೆ, ಬೇಕಾದ ಸುಸಜ್ಜಿತ ಬೇಡ್(Bed)​ಗಳ ವ್ಯವಸ್ಥೆಯೇ ಇಲ್ಲವಾಗಿದೆ. ತಿಗಣೆ ಹಾಗೂ ದುರ್ವಾಸನೆ ಬೀರುವ ಇದೇ ಬೆಡ್​ಗಳಲ್ಲಿ ಅವಸ್ಥೆ ಪಡುತ್ತಿದ್ದಾರೆ. ದೇವನಹಳ್ಳಿ(Devanahalli) ತಾಲೂಕಿನ ವಿಜಯಪುರ ಸೇರಿದಂತೆ ಬಹುತೇಕ ಹಾಸ್ಟೇಲ್​ಗಳಲ್ಲಿ ಇದೇ ಪರಿಸ್ಥಿತಿ ಇದೆಯಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಬಿಸಿಎಂ ಹಾಸ್ಟೇಲ್​ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಹೊಸ ಬೆಡ್​ಗಳನ್ನು ನೀಡುತ್ತಿತ್ತು. ಆದ್ರೆ, ಕೊರೊನಾ ಕಾರಣದಿಂದಾಗಿ ಕಳೆದ ಐದು ವರ್ಷದಿಂದ ಬೆಡ್​ಗಳನ್ನು ನೀಡಿದ್ದು, ಬಿಟ್ಟರೆ ಈವರೆಗೂ ಹೊಸ ಹಾಸಿಗೆಗೆಳನ್ನು ನೀಡಿಲ್ಲ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಹಾಸ್ಟೇಲ್​ಗಳಿಗೆ ಬೆಡ್​ಗಳು ಬಾರದ ಹಿನ್ನೆಲೆಯಲ್ಲಿ ಬೆಡ್​ಗಳಿಲ್ಲದೆ ಚಾಪೆಗಳನ್ನು ಹಾಸಿಕೊಂಡು ವಿದ್ಯಾರ್ಥಿಗಳು ಮಲಗುವ ದುಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ಬಿಸಿಎಂ ಹಾಸ್ಟೇಲ್​ಗಳ ರೇಷನ್​ ದುರ್ಬಳಕೆ, ಟ್ಯೂಷನ್​ನಲ್ಲಿ ಗೋಲ್​ಮಾಲ್; ಹೇಳೋರು ಇಲ್ಲ, ಕೇಳೋರು ಇಲ್ಲ

ಅಲ್ಲದೆ ಇರುವ ಹಳೆ ಹಾಸಿಗೆಗೆಳಿಂದ ದುರ್ವಾಸನೆ ಹಾಗೂ ತಿಗಣೆಗಳು ಬರುತ್ತಿದ್ದು, ಸರಿಯಾಗಿ ನಿದ್ದೆ ಮಾಡುವುದಕ್ಕೂ ಹಾಸ್ಟೇಲ್ ವಿದ್ಯಾರ್ಥಿಗಳಿಂದ ಆಗುತ್ತಿಲ್ಲ ಎಂದು ಪೋಷಕರು ಹಾಗೂ ಸಾರ್ವಜನಿಕರು ಅಸಮಧಾನ ಹೊರ ಹಾಕಿದ್ದಾರೆ. ಕಳೆದ ಕೋವಿಡ್ ಸಂಧರ್ಭದಲ್ಲಿ ಹಾಸ್ಟೆಲ್​ಗಳನ್ನು ಕ್ವಾರಂಟೈನ್ ಸೆಂಟರ್​ಗಳಾಗಿ ಮಾಡಿ ಮಕ್ಕಳ ಬೆಡ್​ಗಳನ್ನೆ ಬಳಸಿದ್ದು, ನಂತರ ಅದೇ ಬೆಡ್ಗ​ಳನ್ನು ಮಕ್ಕಳಿಗೆ ನೀಡಿದ್ದಾರಂತೆ. ಜೊತೆಗೆ ಹಲವು ಭಾರಿ ಬೆಡ್, ಲೈಬ್ರೇರಿ ಪಿರೋಪಕರಣ ಹಾಗೂ ಕ್ರೀಡಾ ಸಾಮಾಗ್ರಿಗಳನ್ನ ನೀಡಿ ಎಂದು ಕಳೆದ ಎರಡು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಸೌಕರ್ಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಈ ಕುರಿತು ಬೆಂಗಳೂರು ಗ್ರಾಮಾಂತರ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪ್ರೇಮ ಅವರನ್ನ ಕೇಳಿದ್ರೆ ‘ನಾವು ಈಗಾಗಲೇ ಇಲಾಖೆ ವತಿಯಿಂದ ಪತ್ರ ಬರೆದಿದ್ದು, ಟೆಂಡರ್ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಬೆಡ್​ಗಳನ್ನು ಬೇರೆಡೆ ಶಿಪ್ಟ್ ಮಾಡಿದ್ದ ಕಾರಣ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಎಲ್ಲೆಡೆ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆ ಹರಿಸುವ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಪ್ರತಿವರ್ಷ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆಗಳಿಗೆ ಎಂದು ಕೋಟಿ ಕೋಟಿ ಹಣ ಬಜೆಟ್​ನಲ್ಲಿ ಮೀಸಲಿಡುತ್ತಿದ್ದರೂ ಸಮರ್ಪಕ ಮೂಲ ಸೌಕರ್ಯ ಬಡ ವಿದ್ಯಾರ್ಥಿಗಳಿಗೆ ಸಿಗದಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಎಚ್ಚೆತ್ತು ಹಾಸ್ಟೇಲ್​ಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ