AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಜಿ, ಪೇಯಿಂಗ್​ ಹಾಸ್ಟೆಲ್​ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್​ಟಿ ಅನ್ವಯ

ಬಟ್ಟೆ, ಊಟ ಸೇರಿದಂತೆ ಇತರೆ ವಸ್ತುಗಳನ್ನು ಕೊಳ್ಳಲು ಮೂಲ ಬೆಲೆಯ ಜೊತೆಗೆ ಜಿಎಸ್​ಟಿ ಪಾವತಿಸಬೇಕಿದೆ. ಇದೀಗ ಹಾಸ್ಟೆಲ್‌, ಪಿಜಿಗಳಿಗೂ ಜಿಎಸ್​ಟಿ ವಿಧಿಸಲಾಗಿದೆ. ಇದರಿಂದ ಹಾಸ್ಟೆಲ್, ಪಿಜಿ ರೆಂಟ್​ ದುಬಾರಿಯಾಗಲಿದೆ.

ಪಿಜಿ, ಪೇಯಿಂಗ್​ ಹಾಸ್ಟೆಲ್​ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್​ಟಿ ಅನ್ವಯ
ಜಿಎಸ್​ಟಿ
ರಮೇಶ್ ಬಿ. ಜವಳಗೇರಾ
| Updated By: Digi Tech Desk|

Updated on:Jul 31, 2023 | 10:45 AM

Share

ಬೆಂಗಳೂರು, (ಜುಲೈ 31): ಖಾಸಗಿ ಹಾಸ್ಟೆಲ್(Hostel) ಹಾಗೂ ಪಿಜಿಗಳಗೆ(paying guest) ಶೇ.12ರಷ್ಟು ಜಿಎಸ್​ಟಿ (GST) ಅನ್ವಯವಾಗಲಿದೆ ಎಂದು ಬೆಂಗಳೂರಿನ ಜಿಎಸ್​ಟಿ ಅಡ್ವಾನ್ಸ್ ರೂಲಿಂಗ್ (ಎಎಆರ್) ಪೀಠ ಆದೇಶಿಸಿದೆ. ಹಾಸ್ಟೆಲ್​ಗಳನ್ನು ವಸತಿ ಕಟ್ಟಡಗಳಿಗೆ ಹೋಲಿಸಲಾಗದು ಮತ್ತು ಅವುಗಳಿಗೆ ತೆರಿಗೆ ವಿನಾಯಿತಿಯನ್ನೂ ನೀಡಲಾಗದು ಎಂದು ತಿಳಿಸಿದೆ. ಹೀಗಾಗಿ ಪಿಜಿ, ಹಾಸ್ಟೇಲ್​ಗಳ ತಿಂಗಳ ಬಾಡಿಗೆ ಇನ್ನಷ್ಟು ಏರಿಕೆಯಾಗಲಿದೆ. ಮನೆ ಬಾಡಿಗೆ ಮಾಡಲಾಗದೇ ಬೆಂಗಳೂರಿನಂತ ನಗರಗಳಲ್ಲಿ ಹಾಸ್ಟೇಲ್-ಪಿಜಿಗಳನ್ನೇ ಅವಲಂಬಿಸಿದವರಿಗೆ ಹೊರೆಯಾಗಲಿದೆ.

ಇದನ್ನೂ ಓದಿ: Karnataka News Live Updates: ಚಿಕ್ಕಮಗಳೂರಲ್ಲಿ 200 ರೂ. ಗಡಿ ತಲುಪಿದ ಟೊಮೇಟೊ ಬೆಲೆ

ಪಿಜಿ ರೆಂಟ್ ಅಥವಾ ಹಾಸ್ಟೆಲ್ ಶುಲ್ಕಗಳಿಗೆ ಜಿಎಸ್​ಟಿ ವಿನಾಯಿತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಮನವಿಗಳನ್ನು ಆಲಿಸಿದ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್ (ಎಎಆರ್) ಈ ಆದೇಶ ನೀಡಿದೆ. ಇದರೊಂದಿಗೆ ಇನ್ಮುಂದೆ ನೋಂದಾಯಿತ ಹಾಸ್ಟೆಲ್‌ಗಳು ಮತ್ತು ಪಿಜಿಗಳು ತಿಂಗಳ ಬಾಡಿಗೆಯ ಮೇಲೆ 12% ತೆರಿಗೆಯನ್ನು ಹೇರಲು ಆರಂಭಿಸಲಿವೆ.

ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ (ಎಎಆರ್), ವಸತಿ ಘಟಕಗಳ ಬಾಡಿಗೆ ಮಾತ್ರ ಜಿಎಸ್​ಟಿಯಿಂದ ವಿನಾಯಿತಿಗೆ ಅರ್ಹವಾಗಿವೆ. ಹಾಸ್ಟೆಲ್‌ಗಳು ವಸತಿ ಘಟಕಗಳು ಅಲ್ಲ. ದಿನಕ್ಕೆ 1,000 ರೂ.ವರೆಗೆ ಬಾಡಿಗೆ ಇರುವ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು 2022ರ ಜುಲೈ 17ರಂದು ಸರ್ಕಾರ ತೆಗೆದು ಹಾಕಿದೆ. ಆದ್ದರಿಂದ ಹಾಸ್ಟೆಲ್ ಬಾಡಿಗೆಯು ಅಂದಿನಿಂದ ಜಿಎಸ್​ಟಿ ವ್ಯಾಪ್ತಿಗೆ ಒಳಪಡುತ್ತದೆ ಎಂದಿದೆ.

ಈಗಾಗಲೇ ದಿನ ನಿತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬೆಂಗಳುರಿನಲ್ಲಿ ಹಲವು ಪಿಜಿಗಳ ರೆಂಟ್ ಹೆಚ್ಚಳ ಮಾಡಲಾಗಿದೆ. ಇದೀಗ ಜಿಎಸ್​ಟಿ ಒಂದು ಸೇರಿಕೊಂಡಿದೆ. ಇದರಿಂದ ಪಿಜಿ ರೆಂಟ್​ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೇ ಬೇರೆ ರಾಜ್ಯಗಳಿಂದ ಬಂದವರು ಚಿಕ್ಕ ಉದ್ಯೋಗ ಮಾಡಿಕೊಂಡೋ ಅಥವಾ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿ ಪಿಜಿನಲ್ಲಿ ತಂಗಿದ್ದಾರೆ. ಮನೆ ಬಾಡಿಗೆ ಮಾಡಲು ಆರ್ಥಿಕ ಹೊರೆ ಬೀಳುವುದರಿಂದ ಪಿಜಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೀಗ ಅವರಿಗೂ ಜಿಎಸ್​ಟಿ ಬರೆ ಬೀಳಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:04 am, Mon, 31 July 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ