AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ನೆ ವರ್ಷವೇ ತವರಿಗೆ ಬಂದ ಅಕ್ಕ: ತಮ್ಮನಿಂದ‌ ಪೊಲೀಸರಿಗೆ ದೂರು, ಭಾವನ ಕಡೆಯ‌ ಮಂಗಳಮುಖಿಯರಿಂದ ಹಲ್ಲೆ

ಶಶಿಕಲಾ ಎಂಬುವವರನ್ನ ದೇವನಹಳ್ಳಿಯ ಗೋಪಾಲ್ ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಗೋಪಾಲ್ ಮನೆಯವರು ವರದಕ್ಷಿಣೆ ಕಿರುಕುಳ‌ ನೀಡುತ್ತಿರುವ ಆರೋಪ ಕೇಳಿಬಂದಿತ್ತು. ಇದರಿಂದ ಶಶಿಕಲಾ ಮನನೊಂದು ತವರಿಗೆ ವಾಪಸ್ ಆಗಿದ್ದರು.

2ನೆ ವರ್ಷವೇ ತವರಿಗೆ ಬಂದ ಅಕ್ಕ: ತಮ್ಮನಿಂದ‌ ಪೊಲೀಸರಿಗೆ ದೂರು, ಭಾವನ ಕಡೆಯ‌ ಮಂಗಳಮುಖಿಯರಿಂದ ಹಲ್ಲೆ
ಎರಡನೆ ವರ್ಷವೇ ತವರು ಮನೆಗೆ ಬಂದ ಅಕ್ಕ, ತಮ್ಮನಿಂದ‌ ಪೊಲೀಸರಿಗೆ ದೂರು, ಭಾವನ ಕಡೆಯ‌ ಮಂಗಳಮುಖಿಯರಿಂದ ಹಲ್ಲೆ
TV9 Web
| Edited By: ಸಾಧು ಶ್ರೀನಾಥ್​|

Updated on:Sep 26, 2022 | 5:27 PM

Share

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮದುವೆಯಾದ ಎರಡನೆ ವರ್ಷವೇ ಗಂಡನ ಕಿರುಕುಳ ತಾಳಲಾರದೆ ವಿವಾಹಿತ ಮಹಿಳೆಯೊಬ್ಬರು ತವರು ಮನೆಗೆ ವಾಪಸಾಗಿದ್ದಾರೆ. ಹೀಗೆ ಮಾವನ ಮನೆಯಿಂದ ಬಂದ ಅಕ್ಕನ ಬಗ್ಗೆ ಕನಿಕರಗೊಂಡ ಆಕೆಯ ತಮ್ಮ ಅಕ್ಕ‌ನ ಜೀವನ ಸರಿಯಾಗಲಿ ಅಂತಾ ಭಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಭಾವನ ಕಡೆಯ ಮಹಿಳೆಯರು ತಮ್ಮನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಕ್ಲೆ ಮಲ್ಲೆನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಶಶಿಕಲಾ ಎಂಬುವವರನ್ನ ದೇವನಹಳ್ಳಿಯ ಗೋಪಾಲ್ ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಗೋಪಾಲ್ ಮನೆಯವರು ವರದಕ್ಷಿಣೆ ಕಿರುಕುಳ‌ ನೀಡುತ್ತಿರುವ ಆರೋಪ ಕೇಳಿಬಂದಿತ್ತು. ಇದರಿಂದ ಶಶಿಕಲಾ ಮನನೊಂದು ತವರಿಗೆ ವಾಪಸ್ ಆಗಿದ್ದರು. ಇದರಿಂದಾಗಿ ಬೇಸತ್ತ ಶಶಿಕಲಾ ತಮ್ಮ ದೇವರಾಜ್ ತನ್ನ ಅಕ್ಕನಿಗೆ ನ್ಯಾಯ ಸಿಗಲಿ ಅಂತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ, ನಮ್ಮ ಮೇಲೆಯೇ ದೂರು ಕೊಡ್ತಿರಾ ಅಂತಾ ಭಾವನ ಕಡೆಯವರಿಂದ ಬಂದಿದ್ದ ಮಹಿಳೆಯರು ಶಶಿಕಲಾ ತಮ್ಮ ದೇವರಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಮತ್ತು ಮಂಗಳಮುಖಿಯರು, ಶಶಿಕಲಾ ತವರು ಮನೆ ಬಳಿ ರಾತ್ರಿ ವೇಳೆ‌ ಬಂದು ಗಲಾಟೆ ಮಾಡಿದ್ದಾರೆ. ಏರ್ಪೊಟ್ನಲ್ಲಿ ಕೆಲಸ ಮಾಡೋ ಹುಡುಗಿಯನ್ನ ರೇಗಿಸ್ತಿಯಾ ಅಂತಾ ದೇವರಾಜ್ ಮೇಲೆ ಕ್ಯಾತೇ ತೆಗೆದು‌ ಗಲಾಟೆ ಶುರುವಚ್ಚಿಕೊಂಡಿದ್ದಾರೆ.

ಶಶಿಕಲಾ ತಮ್ಮ ದೇವರಾಜ್ ಮೇಲೆ 15 ಕ್ಕೂ‌‌ ಹೆಚ್ಚು ಮಹಿಳೆಯರು ಹಾಗೂ ಮಂಗಳಮುಖಿಯರು ಮುಗಿಬಿದ್ದಿದ್ದಾರೆ. ಮಹಿಳೆಯರು ಹಲ್ಲೆ ನಡೆಸುವುದು ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಹಲ್ಲೆ‌ ನಡೆಸಿ ಪರಾರಿಯಾಗ್ತಿದ್ದ ಮಹಿಳೆಯರು ಹಾಗೂ ಮಂಗಳಮುಖಿಯರನ್ನ ಗ್ರಾಮಸ್ಥರು ಠಾಣೆಗೆ ಹಿಡಿದುಕೊಟ್ಟಿದ್ದಾರೆ. ಕೆಂಪೇಗೌಡ ಏರ್ಪೊಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 5:27 pm, Mon, 26 September 22

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ