AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ನೆ ವರ್ಷವೇ ತವರಿಗೆ ಬಂದ ಅಕ್ಕ: ತಮ್ಮನಿಂದ‌ ಪೊಲೀಸರಿಗೆ ದೂರು, ಭಾವನ ಕಡೆಯ‌ ಮಂಗಳಮುಖಿಯರಿಂದ ಹಲ್ಲೆ

ಶಶಿಕಲಾ ಎಂಬುವವರನ್ನ ದೇವನಹಳ್ಳಿಯ ಗೋಪಾಲ್ ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಗೋಪಾಲ್ ಮನೆಯವರು ವರದಕ್ಷಿಣೆ ಕಿರುಕುಳ‌ ನೀಡುತ್ತಿರುವ ಆರೋಪ ಕೇಳಿಬಂದಿತ್ತು. ಇದರಿಂದ ಶಶಿಕಲಾ ಮನನೊಂದು ತವರಿಗೆ ವಾಪಸ್ ಆಗಿದ್ದರು.

2ನೆ ವರ್ಷವೇ ತವರಿಗೆ ಬಂದ ಅಕ್ಕ: ತಮ್ಮನಿಂದ‌ ಪೊಲೀಸರಿಗೆ ದೂರು, ಭಾವನ ಕಡೆಯ‌ ಮಂಗಳಮುಖಿಯರಿಂದ ಹಲ್ಲೆ
ಎರಡನೆ ವರ್ಷವೇ ತವರು ಮನೆಗೆ ಬಂದ ಅಕ್ಕ, ತಮ್ಮನಿಂದ‌ ಪೊಲೀಸರಿಗೆ ದೂರು, ಭಾವನ ಕಡೆಯ‌ ಮಂಗಳಮುಖಿಯರಿಂದ ಹಲ್ಲೆ
TV9 Web
| Updated By: ಸಾಧು ಶ್ರೀನಾಥ್​|

Updated on:Sep 26, 2022 | 5:27 PM

Share

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮದುವೆಯಾದ ಎರಡನೆ ವರ್ಷವೇ ಗಂಡನ ಕಿರುಕುಳ ತಾಳಲಾರದೆ ವಿವಾಹಿತ ಮಹಿಳೆಯೊಬ್ಬರು ತವರು ಮನೆಗೆ ವಾಪಸಾಗಿದ್ದಾರೆ. ಹೀಗೆ ಮಾವನ ಮನೆಯಿಂದ ಬಂದ ಅಕ್ಕನ ಬಗ್ಗೆ ಕನಿಕರಗೊಂಡ ಆಕೆಯ ತಮ್ಮ ಅಕ್ಕ‌ನ ಜೀವನ ಸರಿಯಾಗಲಿ ಅಂತಾ ಭಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಭಾವನ ಕಡೆಯ ಮಹಿಳೆಯರು ತಮ್ಮನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಕ್ಲೆ ಮಲ್ಲೆನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಶಶಿಕಲಾ ಎಂಬುವವರನ್ನ ದೇವನಹಳ್ಳಿಯ ಗೋಪಾಲ್ ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಗೋಪಾಲ್ ಮನೆಯವರು ವರದಕ್ಷಿಣೆ ಕಿರುಕುಳ‌ ನೀಡುತ್ತಿರುವ ಆರೋಪ ಕೇಳಿಬಂದಿತ್ತು. ಇದರಿಂದ ಶಶಿಕಲಾ ಮನನೊಂದು ತವರಿಗೆ ವಾಪಸ್ ಆಗಿದ್ದರು. ಇದರಿಂದಾಗಿ ಬೇಸತ್ತ ಶಶಿಕಲಾ ತಮ್ಮ ದೇವರಾಜ್ ತನ್ನ ಅಕ್ಕನಿಗೆ ನ್ಯಾಯ ಸಿಗಲಿ ಅಂತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ, ನಮ್ಮ ಮೇಲೆಯೇ ದೂರು ಕೊಡ್ತಿರಾ ಅಂತಾ ಭಾವನ ಕಡೆಯವರಿಂದ ಬಂದಿದ್ದ ಮಹಿಳೆಯರು ಶಶಿಕಲಾ ತಮ್ಮ ದೇವರಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಮತ್ತು ಮಂಗಳಮುಖಿಯರು, ಶಶಿಕಲಾ ತವರು ಮನೆ ಬಳಿ ರಾತ್ರಿ ವೇಳೆ‌ ಬಂದು ಗಲಾಟೆ ಮಾಡಿದ್ದಾರೆ. ಏರ್ಪೊಟ್ನಲ್ಲಿ ಕೆಲಸ ಮಾಡೋ ಹುಡುಗಿಯನ್ನ ರೇಗಿಸ್ತಿಯಾ ಅಂತಾ ದೇವರಾಜ್ ಮೇಲೆ ಕ್ಯಾತೇ ತೆಗೆದು‌ ಗಲಾಟೆ ಶುರುವಚ್ಚಿಕೊಂಡಿದ್ದಾರೆ.

ಶಶಿಕಲಾ ತಮ್ಮ ದೇವರಾಜ್ ಮೇಲೆ 15 ಕ್ಕೂ‌‌ ಹೆಚ್ಚು ಮಹಿಳೆಯರು ಹಾಗೂ ಮಂಗಳಮುಖಿಯರು ಮುಗಿಬಿದ್ದಿದ್ದಾರೆ. ಮಹಿಳೆಯರು ಹಲ್ಲೆ ನಡೆಸುವುದು ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಹಲ್ಲೆ‌ ನಡೆಸಿ ಪರಾರಿಯಾಗ್ತಿದ್ದ ಮಹಿಳೆಯರು ಹಾಗೂ ಮಂಗಳಮುಖಿಯರನ್ನ ಗ್ರಾಮಸ್ಥರು ಠಾಣೆಗೆ ಹಿಡಿದುಕೊಟ್ಟಿದ್ದಾರೆ. ಕೆಂಪೇಗೌಡ ಏರ್ಪೊಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 5:27 pm, Mon, 26 September 22

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​