AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ರೈತ ಸಂಘ, ಹಸಿರು ಸೇನೆ; ಸ್ವಚ್ಛತಾ ಅಭಿಯಾನ ಶುರು

ರೈತ ಸಂಘ ಮತ್ತು ಹಸಿರು ಸೇನೆ ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ಯಲಹಂಕ ರೈತ ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹೆಸರಘಟ್ಟ ಕೆರೆ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೂ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ಕೆರೆ ವ್ಯಾಪ್ತಿಯಲ್ಲಿ ಪರಿಸರ‌ ಸಂರಕ್ಷಣೆಗಾಗಿ ಅಧಿಕಾರಿಗಳಿಗೆ ಮನವಿ ಪತ್ರ ಬರೆಯಲಾಗಿದೆ.

ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ರೈತ ಸಂಘ, ಹಸಿರು ಸೇನೆ; ಸ್ವಚ್ಛತಾ ಅಭಿಯಾನ ಶುರು
ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯ
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು|

Updated on: May 15, 2024 | 9:51 AM

Share

ನೆಲಮಂಗಲ, ಮೇ.15: ಮನುಷ್ಯನ‌ ನಾಗರೀಕತೆ, ಬೆಳವಣಿಗೆ, ಅಭಿವೃದ್ಧಿಗೆ ಪೂರಕ ನೀರಾವರಿ ಮೂಲಾಧಾರ. ಅರ್ಕಾವತಿ ನದಿಪಾತ್ರದ ಅತ್ಯಂತ ಪ್ರಮುಖ ಕೆರೆ ಬೆಂಗಳೂರಿನ ಹೆಸರಘಟ್ಟಕೆರೆ (Hesaraghatta Lake). ಹೆಸರಘಟ್ಟ ಕೆರೆ ವ್ಯಾಪ್ತಿಯಲ್ಲಿ ನಲ್ವತ್ತರಿಂದ ಐವತ್ತು ಹಳ್ಳಿಗಳಿವೆ. ನಂದಿಬೆಟ್ಟದಲ್ಲಿ (Nandi Hills) ಹುಟ್ಟುವ ಅರ್ಕಾವತಿ ನದಿ ದೊಡ್ಡಬಳ್ಳಾಪುರ-ದೇವನಹಳ್ಳಿ ಮಾರ್ಗವಾಗಿ ಹರಿಯುತ್ತದೆ. ಕೆರೆಯಿಂದ ಕೆರೆಗೆ ಕೊಡಿ ರೂಪದಲ್ಲಿ ಹರಿದು ಹೆಸರಘಟ್ಟ- ತಿಪ್ಪಗೊಂಡನಹಳ್ಳಿ ಕೆರೆ ಮಾರ್ಗವಾಗಿ ಹರಿಯುತ್ತದೆ. ಅರ್ಕಾವತಿ (Arkavathi River) ಮಾಗಡಿಯ ತಿಪ್ಪಗೊಂಡನಹಳ್ಳಿ, ರಾಮನಗರದ ಮಂಚನಬೆಲೆ ಜಲಾಶಯ ಮೂಲಕ ಹರಿಯುತ್ತಾಳೆ. ಚನ್ನಪಟ್ಟಣದ ಕಣ್ವಾ ಜಲಾಶಯದ ಮೂಲಕ ಸಂಗಮದಲ್ಲಿ ಕಾವೇರಿ ನದಿ ಸೇರ್ತಾಳೆ. ಅರ್ಕಾವತಿ ನದಿ ಕಾವೇರಿ ನದಿಯ ಉಪನದಿ. ಹೀಗೆ ಕೆರೆಯಿಂದ ಕೆರೆಗೆ ಹರಿಯುವ ಅರ್ಕಾವತಿ ನದಿಪಾತ್ರದ ‌ಹೆಸರಘಟ್ಟ ಕೆರೆ‌ ಪರಿಸರ ನಾಶವಾಗ್ತಿದೆ.

ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೆಸರಘಟ್ಟ ಕೆರೆ ವ್ಯಾಪಿಸಿದೆ. ಈ ಹೆಸರಘಟ್ಟ ಕೆರೆ ಪ್ರದೇಶವನ್ನು ವ್ಯಾಸರಘಟ್ಟ ಎಂದು ಕರೆಯುತ್ತಿದ್ದರು. ವ್ಯಾಸ ಮಹರ್ಷಿ ವಾಸದಿಂದ ಈ ಪ್ರದೇಶ ವ್ಯಾಸರಘಟ್ಟವಾಗಿ ನಂತರ ಹೆಸರಘಟ್ಟ ಆಗಿದೆ ಎನ್ನಲಾಗುತ್ತೆ. ಇಂತಹ ಹಿನ್ನಲೆಯ ಹೆಸರಘಟ್ಟ ಕೆರೆ ನೀರನ್ನು 1886ರಲ್ಲಿ ಬೆಂಗಳೂರಿನ 10ಲಕ್ಷ ಜನತೆಯ ಕುಡಿಯುವ ನೀರಿಗೆ ಬಳಸಲಾಗ್ತಿತ್ತು. ಜನಸಂಖ್ಯೆ ಹೆಚ್ಚಾದಂತೆ ಸರ್ಕಾರ ಕಾವೇರಿ ನೀರಿನತ್ತ ಗಮನ ಹರಿಸಿತು. ದಶಕಗಳ ಕಾಲ ಬೆಂಗಳೂರಿನ ದಾಹದ ದಣಿವೂ‌ ನೀಗಿಸಿದ ಹೆಸರಘಟ್ಟ ಕೆರೆ ಪರಿಸರ ಇಂದು‌ ನಾಶವಾಗ್ತಿದೆ. ಸದ್ಯ ಕೆರೆಯಲ್ಲಿರುವ ಅಲ್ಪ ಸ್ವಲ್ಪ ನೀರು ಕೃಷಿ, ಹೈನುಗಾರಿಕೆಗೆ ಸಹಾಯಕವಾಗಿದೆ. ಇಂತಹ‌ ಹೆಸರಘಟ್ಟ ಕೆರೆ ಪಾತ್ರದ ಪರಿಸರವನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಸರ್ಕಾರ ತಂತಿ ಬೇಲಿ ಹಾಕಿ ಲಕ್ಷಾಂತರ ವೆಚ್ಚದಲ್ಲಿ ಕೆರೆ ಪರಿಸರ ಸಂರಕ್ಷಣೆಗೆ ಮುಂದಾಗಿದೆ. ಆದರೆ ಈಗ ಕೆರೆ ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಹಾಳಾದ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್​ನಿಂದ ನೀರು ಪೋಲು; ಬೆಳೆ ಬೆಳೆಯಲಾಗದೆ ಅನ್ನದಾತನ ಸಂಕಷ್ಟ

ಒಂದು ದಿನದ ಪ್ರವಾಸಕ್ಕೆ ಬಂದು ಹೋಗುವ ಬೆಂಗಳೂರಿಗರ ಪ್ರವಾಸಿ ತಾಣವಾಗಿದೆ. ಆದರೆ ಸೂಕ್ತ ನಿರ್ವಹಣೆ ಮತ್ತು ಜನತೆಗೆ ಪರಿಸರ ಕಾಳಜಿ‌ ಇಲ್ಲದೆ ಸೊರಗುತ್ತಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಕೆರೆ ಅಂಗಳದಲ್ಲಿ ಸ್ವಚ್ಛತೆಯೇ ಕಣ್ಮರೆಯಾಗಿದೆ. ಪ್ರತಿದಿನ‌ ಸಾವಿರಾರು ಜನ ಪ್ರೇಮಿಗಳು ಬಂದೋಗುವ ಇಲ್ಲಿ ಪರಿಸರದ ರಕ್ಷಣೆ ಆಗಬೇಕಿದೆ. ಎಲ್ಲೆಂದರಲ್ಲಿ ಕುಡಿದು ಬಿಸಾಕಿರುವ ಪ್ಲಾಸ್ಟಿಕ್ ಬಾಟಲ್ ಮತ್ತು ಮದ್ಯದ ಬಾಟಲಿಗಳು ಕಾಣಿಸುತ್ತವೆ. ಕೆರೆಗೆ ತಂತಿ ಬೇಲಿ‌ ಹಾಕಿದ್ದರೂ ಕೆರೆ ಕಟ್ಟೆ ಸುತ್ತಾಮುತ್ತಾ ಬಿಸಾಕಿರುವ ಪ್ಲಾಸ್ಟಿಕ್ ಮತ್ತಿತರ ವಸ್ತು ಜಾಸ್ತಿ ಆಗ್ತಿವೆ. ಏಳೋರಿಲ್ಲ ಕೇಳೋರಿಲ್ಲದಂತಾಗಿ ಪ್ರೇಮಿಗಳಿಗೆ ಆಡಿದ್ದೇ ಆಟದಂತಾಗಿದೆ. ಈ ಹಿನ್ನಲೆ ರೈತ ಸಂಘ ಮತ್ತು ಹಸಿರು ಸೇನೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ರೈತ ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹೆಸರಘಟ್ಟ ಕೆರೆ ವ್ಯಾಪ್ತಿಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ.

ಹೆಸರಘಟ್ಟ ಕೆರೆ ವ್ಯಾಪ್ತಿಲಿ ಪರಿಸರ‌ ಸಂರಕ್ಷಣೆಗಾಗಿ ಅಧಿಕಾರಿಗಳಿಗೆ ಮನವಿ ಪತ್ರ ಬರೆಯಲಾಗಿದೆ. ಕೆರೆ ಉಳಿದರೆ ನಾಡು ಉಳಿಯುತ್ತದೆ, ಬೆಳೆಯುತ್ತದೆ. ಕೆರೆಯಿಂದ‌ ನಾವು- ನೀವು. ಕೆರೆಯಿಂದ ‌ಜೀವಜಲ- ಕೆರೆಯಿಂದ ಮಾನವಕುಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ