ಪಿಯುಸಿ ವಿದ್ಯಾರ್ಥಿಗಳ ನಡುವೆ ಗಲಾಟೆ; ಊರಿಂದ ಬಂದವನಿಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಹಲ್ಲೆ

ಕಾಲೇಜಿಗೆ ಹೋಗಿ ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಬೇಕಾದ ವಿದ್ಯಾರ್ಥಿಗಳು ಬೇಡದ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಅದರಂತೆ ಟಿ.ದಾಸರಹಳ್ಳಿ(T. Dasarahalli)ಯ ಸೌಂದರ್ಯ ಪಿಯು ಕಾಲೇಜ್ ಬಳಿ ವಿದ್ಯಾರ್ಥಿಗಳ(Students) ನಡುವೆ ಗಲಾಟೆ ನಡೆದಿದೆ. ಊರಿಂದ ಬಂದವನಿಗೆ ಸ್ಥಳೀಯ ವಿದ್ಯಾರ್ಥಿಗಳು ಸೇರಿ ಹಲ್ಲೆ ನಡೆಸಿದ್ದಾರೆ. ಹೌದು, ಊರಿಂದ ಬಂದು ಸ್ಥಳೀಯರಿಗೆ ಅವಾಜ್ ಹಾಕುತ್ತೀಯಾ ಎಂದು ಪ್ರಶ್ನಿಸಿ, ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಪಿಯುಸಿ ವಿದ್ಯಾರ್ಥಿಗಳ ನಡುವೆ ಗಲಾಟೆ; ಊರಿಂದ ಬಂದವನಿಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಹಲ್ಲೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 23, 2024 | 3:05 PM

ಬೆಂಗಳೂರು ಗ್ರಾಮಾಂತರ, ಏ.23: ಜಿಲ್ಲೆಯ ಟಿ.ದಾಸರಹಳ್ಳಿ(T. Dasarahalli)ಯ ಸೌಂದರ್ಯ ಪಿಯು ಕಾಲೇಜ್ ಬಳಿ ವಿದ್ಯಾರ್ಥಿಗಳ(Students) ನಡುವೆ ಗಲಾಟೆ ನಡೆದಿದೆ. ಊರಿಂದ ಬಂದವನಿಗೆ ಸ್ಥಳೀಯ ವಿದ್ಯಾರ್ಥಿಗಳು ಸೇರಿ ಹಲ್ಲೆ ನಡೆಸಿದ್ದಾರೆ. ಹೌದು, ಊರಿಂದ ಬಂದು ಸ್ಥಳೀಯರಿಗೆ ಅವಾಜ್ ಹಾಕುತ್ತೀಯಾ ಎಂದು ಪ್ರಶ್ನಿಸಿ, ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಸ್ಥಳೀಯರು ಪ್ರಶ್ನೆ ಮಾಡುತ್ತಲೇ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಎಚ್ಚೆತ್ತ ಆಡಳಿತ ಮಂಡಳಿ, ಹಲ್ಲೆಗೈದ ಪೋಷಕರನ್ನ ಕಾಲೇಜಿಗೆ ಕರೆಸಿ ವಿದ್ಯಾರ್ಥಿಗಳಿಗೆ ವಾರ್ನ್ ಮಾಡಿದ್ದಾರೆ. ಇನ್ನು ಘಟನೆಯ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us