AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಹಣ ಕೇಳಿದ್ದಕ್ಕೆ ಪಾನಿಪುರಿ ಅಂಗಡಿ ಧ್ವಂಸ ಪ್ರಕರಣ; ಆರೋಪಿ ವಿರುದ್ದ ರೌಡಿಶೀಟ್‌ ಓಪನ್‌ ಮಾಡಲು ಸೂಚಿಸಿದ ಎಸ್ಪಿ

ನೆಲಮಂಗಲದ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದಿದ್ದ ಆರೋಪಿ ರಂಜಿತ್‌, ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ದರ್ಪ ತೋರಿ, ಪುಡಿರೌಡಿ ರಂಜಿತ್‌ ಪಾನಿಪುರಿ ಅಂಗಡಿ ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದ. ಈ ಹಿನ್ನಲೆ ಇದೀಗ ಆತನ ವಿರುದ್ಧ ರೌಡಿಶೀಟ್‌ ಓಪನ್‌ ಮಾಡಲು ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದಾರೆ.

ನೆಲಮಂಗಲ: ಹಣ ಕೇಳಿದ್ದಕ್ಕೆ ಪಾನಿಪುರಿ ಅಂಗಡಿ ಧ್ವಂಸ ಪ್ರಕರಣ; ಆರೋಪಿ ವಿರುದ್ದ ರೌಡಿಶೀಟ್‌ ಓಪನ್‌ ಮಾಡಲು ಸೂಚಿಸಿದ ಎಸ್ಪಿ
ಆರೋಪಿ ಅರೆಸ್ಟ್​
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Aug 29, 2023 | 5:26 PM

Share

ಬೆಂಗಳೂರು ಗ್ರಾಮಾಂತರ, ಆ.29: ಹಣ ಕೇಳಿದ್ದಕ್ಕೆ ಪಾನಿಪೂರಿ(panipuri) ಅಂಗಡಿ ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಂಜಿತ್‌ ವಿರುದ್ಧ ರೌಡಿಶೀಟ್‌ ಓಪನ್‌ ಮಾಡಲು ಬೆಂಗಳೂರು ಗ್ರಾಮಾಂತರ (Bengaluru Rural) ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದಾರೆ. 2 ಕೊಲೆ ಯತ್ನ, ಸುಲಿಗೆ ಕೇಸ್‌ನಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಎಸ್‌ಪಿ ಸೂಚಿಸಿದ್ದಾರೆ. ನೆಲಮಂಗಲದ (Nelamangala) ಅಂಗಡಿಯೊಂದರಲ್ಲಿ ಪಾನಿಪುರಿ ತಿಂದಿದ್ದ ಆರೋಪಿ ರಂಜಿತ್‌, ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ದರ್ಪ ತೋರಿ, ಪುಡಿರೌಡಿ ರಂಜಿತ್‌ ಪಾನಿಪುರಿ ಅಂಗಡಿ ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದ.

ಘಟನೆ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪಾನಿಪೂರಿ ತಿಂದು ಹಣ ಕೇಳಿದ್ದಕ್ಕೆ ಜೈಲಿನಿಂದ ಆಚೆ ಬಂದಿದ್ದ ದುಷ್ಕರ್ಮಿಯೊಬ್ಬ ಅವಾಜ್ ಹಾಕಿ, ಏಯ್ ನಾನ್ಯಾರು ಗೊತ್ತಾ? ನನ್ನ ಬಳಿಯೇ ಹಣ ಕೇಳುತ್ತೀಯಾ ಎಂದು ಪುಡಿ ರೌಡಿ ಅವಾಜ್ ಹಾಕಿದ್ದ. ಪ್ರಶ್ನೆ ಮಾಡಿದ ಜನರ ಎದುರು ಷರ್ಟ್ ಬಿಚ್ಚಿ ದರ್ಪ ತೋರಿಸಿದ್ದ ರಂಜಿತ್ ಎಂಬಾತ ಪುನೀತ್ ಅವರ ಪಾನಿಪೂರಿ ಅಂಗಡಿಯನ್ನೇ ಧ್ವಂಸ ಮಾಡಿದ್ದ.

ಇದನ್ನೂ ಓದಿ:ಪಾನಿಪುರಿ ತಿಂದು ಹಣ ಕೇಳಿದ್ದಕ್ಕೆ ನೆಲಮಂಗಲದಲ್ಲಿ ಪುಡಿ ರೌಡಿಯ ಆವಾಜ್, ಜನರ ಎದುರು ಷರ್ಟ್ ಬಿಚ್ಚಿ ದರ್ಪ!

ಹೌದು, ವಾಜರಹಳ್ಳಿಯ ರಂಜಿತ್ ಇತ್ತೀಚೆಗೆ ರಾಬರಿ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಅದ್ರೂ ಬುದ್ಧಿ ಕಲಿಯದೆ ಪುಂಡಾಟಿಕೆ ಮೆ್ರೆದಿದ್ದ. ಅರೋಪಿಯ ಈ ಕೃತ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಬಳಿಕ ನೆಲಮಂಗಲ ಪೊಲೀಸರು ಅರೋಪಿ ಪತ್ತೆಗಾಗಿ ಶೋಧ ನಡೆಸಿದ್ದರು. ಇದೀಗ ಆರೋಪಿ ವಿರುದ್ಧ ರೌಡಿಶೀಟ್​ ಓಪನ್​ ಮಾಡಲು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:26 pm, Tue, 29 August 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!