AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುಧ ಪೂಜೆಗಾಗಿ ಲಾರಿ ಚಾಲಕರಿಂದ 25 ಸಾವಿರ ರೂ. ವಸೂಲಿ; ತ್ಯಾಮಗೊಂಡ್ಲು ಪೊಲೀಸರ ವಿರುದ್ಧ ದೂರು

ದಸರಾ ಆಯುಧ ಪೂಜೆಗೆ ನೀವು ಕೊಡುವ ಮಾಮುಲಿ ಹಣ ಸಾಲುವುದಿಲ್ಲವಂದು ದರ್ಪ ತೋರಿಸಿ ಕಲ್ಲು ಲಾರಿ ಚಾಲಕರಿಂದ ಒಟ್ಟು 25 ಸಾವಿರ ರೂಪಾಯಿ ವಸೂಲಿ ಮಾಡಿದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಠಾಣೆ ಪಿಎಸ್ಐ, ಕಾನ್ಸ್​ಟೇಬಲ್​ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಎಸ್​ಪಿಗೆ ದೂರು ನೀಡಲಾಗಿದೆ.

ಆಯುಧ ಪೂಜೆಗಾಗಿ ಲಾರಿ ಚಾಲಕರಿಂದ 25 ಸಾವಿರ ರೂ. ವಸೂಲಿ; ತ್ಯಾಮಗೊಂಡ್ಲು ಪೊಲೀಸರ ವಿರುದ್ಧ ದೂರು
ಕಾನ್​ಸ್ಟೇಬಲ್ ಶ್ರೀನಿವಾಸ್, ಪಿಎಸ್ಐ ದಿವ್ಯ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 19, 2023 | 6:22 PM

ನೆಲಮಂಗಲ, ಅ.19: ದಸರಾ ಆಯುಧ ಪೂಜೆಗೆ ನೀವು ಕೊಡುವ ಮಾಮುಲಿ ಹಣ ಸಾಲುವುದಿಲ್ಲವಂದು ದರ್ಪ ತೋರಿಸಿ ಕಲ್ಲು ಲಾರಿ ಚಾಲಕರಿಂದ ಒಟ್ಟು 25 ಸಾವಿರ ರೂಪಾಯಿ ವಸೂಲಿ ಮಾಡಿದ ಆರೋಪ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ತ್ಯಾಮಗೊಂಡ್ಲು ಠಾಣೆ ಪಿಎಸ್ಐ, ಕಾನ್ಸ್​ಟೇಬಲ್​ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಎಸ್​ಪಿಗೆ ದೂರು ನೀಡಲಾಗಿದೆ.

ಪಿಎಸ್ಐ ದಿವ್ಯ, ಕಾನ್​ಸ್ಟೇಬಲ್ ಶ್ರೀನಿವಾಸ್ ವಿರುದ್ಧ ಲಾರಿ ಮಾಲಿಕ ನವೀದ್ ಎಂಬವರು ದೂರು ನೀಡಿದ್ದಾರೆ. ಆಯುಧ ಪೂಜೆಗೆ ಠಾಣೆ ಸಾಮಾಗ್ರಿಗಳನ್ನು ಇಟ್ಟು ಪೂಜೆ ಸಲ್ಲಿಸಲು ಹೆಚ್ಚು ಹಣ ಖರ್ಚು ಆಗುತ್ತದೆ. ಹೀಗಾಗಿ ಮಾಮೂಲು 100 ಕೊಟ್ಟರೆ ಸಾಲುವುದಿಲ್ಲ ಎಂದು ಕಾನ್ಸ್‌ಟೇಬಲ್ ದರ್ಪ ತೋರಿಸಿದ್ದಾಗಿ ಅರೋಪಿಸಿದ್ದಾರೆ.

ಇದನ್ನೂ ಓದಿ: ಒಂಟಿ ಮನೆಯನ್ನೇ ಟಾರ್ಗೆಟ್​ ಮಾಡಿ ಲೂಟಿ ಮಾಡ್ತಿದ್ದವರ ಬಂಧನ; 50 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ರಸ್ತೆಯಲ್ಲಿ ಕಾನ್​ಸ್ಟೇಬಲ್ ಲಾರಿಯನ್ನ ತಡೆಯುವ ಅಧಿಕಾರ ಇಲ್ಲದಿದ್ದರೂ ಠಾಣೆ ಬಳಿ ಕರತಂದು ಹಬ್ಬದ ನೆಪದಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ನಿಯಮ ಉಲ್ಲಂಘನೆ ಮಾಡುತ್ತಿರುವ ಆರೋಪ ಮಾಡಲಾಗಿದೆ. ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಕ್ಷೇತ್ರ ಕೊರಟಗೆರೆಯಿಂದ ನೆಲಮಂಗಲ ರಾಮೇನಹಳ್ಳಿ ರೈತ ಮನೆಗೆ ದನದ ಕೊಟ್ಟಿಗೆಗೆಂದು ಕಲ್ಲು ಚಪ್ಪಡಿಗಳನ್ನು ಕೊಡೊಯ್ಯಲಾಗುತ್ತಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 am, Thu, 19 October 23

73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್
ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್
ನೆಲಮಂಗಲ: ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿ, 5-6 ಕಿ.ಮೀ ಟ್ರಾಫಿಕ್ ಜಾಮ್
ನೆಲಮಂಗಲ: ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿ, 5-6 ಕಿ.ಮೀ ಟ್ರಾಫಿಕ್ ಜಾಮ್