ಹೊಸಕೋಟೆಯಲ್ಲಿ ದೇವಸ್ಥಾನ‌ ವಿಚಾರದಲ್ಲಿ ಪಾಲಿಟಿಕ್ಸ್: ಸಚಿವರ ಪುತ್ರ ಹೋಗ್ತಾನೆಂದು ದೇವಸ್ಥಾನಕ್ಕೆ ಬೀಗ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ‌ ಗ್ರಾಮದ ದೇವಸ್ಥಾನಕ್ಕೆ ಸಚಿವ ಎಂಟಿಬಿ ನಾಗರಾಜ್ ಪುತ್ರ ರಾಜೇಶ್ ಭೇಟಿ ನೀಡುತ್ತಾರೆಂದು ಶಾಸಕ ಶರತ್ ಬಚ್ಚೇಗೌಡ ಕಡೆಯವರು ದೇವಸ್ಥಾನಕ್ಕೆ ಬೀಗ ಹಾಕಿಸಿದ್ದಾರೆ.

ಹೊಸಕೋಟೆಯಲ್ಲಿ ದೇವಸ್ಥಾನ‌ ವಿಚಾರದಲ್ಲಿ ಪಾಲಿಟಿಕ್ಸ್: ಸಚಿವರ ಪುತ್ರ ಹೋಗ್ತಾನೆಂದು ದೇವಸ್ಥಾನಕ್ಕೆ ಬೀಗ
ಸಚಿವರ ಪುತ್ರ ಹೋಗ್ತಾನೆಂದು ದೇವಸ್ಥಾನಕ್ಕೆ ಬೀಗ
Updated By: ಆಯೇಷಾ ಬಾನು

Updated on: Dec 16, 2022 | 1:01 PM

ದೇವನಹಳ್ಳಿ: ಪದೇ ಪದೇ ಪ್ರೋಟೋಕಾಲ್ ವಿಚಾರಕ್ಕೆ ಸುದ್ದಿಯಾಗ್ತಿದ್ದ ಹೊಸಕೋಟೆಯಲ್ಲಿ ಇದೀಗ ದೇವಸ್ಥಾನ ವಿಚಾರಕ್ಕೆ ರಾಜಕೀಯ ಶುರುವಾಗಿದೆ(Temple Politics in Hoskote). ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ‌ ಗ್ರಾಮದಲ್ಲಿ ದೇವಾಲಯಕ್ಕೆ ಸಚಿವರ ಪುತ್ರ ಹೋಗ್ತಾನೆ ಎಂದು ಶಾಸಕ ಶರತ್ ಬಚ್ಚೇಗೌಡ(Sharath Bachegowda) ಕಡೆಯವರು ದೇವಸ್ಥಾನಕ್ಕೆ ಬೀಗ ಹಾಕಿಸಿರುವ ಆರೋಪ ಕೇಳಿ ಬಂದಿದೆ.

ಪರಸ್ಪರ ಶಾಸಕ ಮತ್ತು ಸಚಿವರ ಬೆಂಬಲಿಗರ ನಡುವೆ ಶೀತಲ‌ ಸಮರ ಶುರುವಾಗಿದೆ. ಶಾಸಕ ಶರತ್ ಬಚ್ಚೇಗೌಡ ತವರೂರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ನೆನ್ನೆ(ಡಿ.15) ಸಂಜೆ ಸಚಿವ ಎಂಟಿಬಿ ನಾಗರಾಜ್ ಪುತ್ರ ರಾಜೇಶ್ ಭೇಟಿ ನೀಡುವುದಾಗಿ ತಿಳಿಸಿದ್ರಂತೆ. ಆದ್ರೆ ಈ ವೇಳೆ ಸಚಿವರ ಪುತ್ರ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ ಅಂತ ತಿಳಿದು ದೇವಸ್ಥಾನಕ್ಕೆ ಬೀಗ ಹಾಕಿಸಿದ್ದಾರೆ‌ ಅಂತ ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ‌.

ಇದನ್ನೂ ಓದಿ: ಮಂಗಳೂರಿನಲ್ಲಿ ಹೆಚ್ಚಾದ ನೈತಿಕ ಪೊಲೀಸ್ ಗಿರಿ: ಹಿಂದೂ ಯುವತಿ- ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಬಸ್ ತಡೆದು ಭಜರಂಗದಳ ಕಾರ್ಯಕರ್ತರ ಗಲಾಟೆ

ಗ್ರಾಮದ ದೇವಸ್ಥಾನಕ್ಕೆ‌ ಬೀಗ ಹಾಕಿರುವ ಪೊಟೋಗಳನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿರುವ ಎಂಟಿಬಿ ಬೆಂಬಲಿಗರು ಶಾಸಕ ಶರತ್ ಬಚ್ಚೆಗೌಡ ಕಡೆಯವರು ದೇವಸ್ಥಾನದ ವಿಚಾರದಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ ದೇವಸ್ಥಾನಕ್ಕೆ ಬರುವುದನ್ನ ತಡೆಯಬಹುದು. ಆದ್ರೆ ಮತದಾರರ ಮನಸ್ಸಿಗೆ ಬರೂದನ್ನ ತಡೆಯಲು ಸಾಧ್ಯವಿಲ್ಲ ಅಂತ ಶಾಸಕ ಶರತ್ ಬಚ್ಚೇಗೌಡ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ