AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ ಪಾರ್ಕ್​ನಲ್ಲಿ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿವೆ ಹುಲಿಗಳು

ಒಂದು ಕಡೆ ಮಿತಿ ಮೀರಿದ ಚಿರತೆ ಹಾವಳಿ, ಇನ್ನೊಂದೆಡೆ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿರುವ ಹುಲಿಗಳು, ಗ್ರಾಮಗಳಿಗೆ ಉಪಟಳ ಕೊಟ್ಟ ಚಿರತೆಗಳು ಬನ್ನೇರುಘಟ್ಟ ಉದ್ಯಾನವನ ಸೇರಿಕೊಳ್ಳುತ್ತಿದ್ದರೆ. ಅತ್ತ ಪಾರ್ಕ್​ನ ಹುಲಿಗಳು ಒಂದೊಂದಾಗಿ ಅನಾರೋಗ್ಯಗೊಳ್ಳುತ್ತಿವೆ.

ಬನ್ನೇರುಘಟ್ಟ ಪಾರ್ಕ್​ನಲ್ಲಿ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿವೆ ಹುಲಿಗಳು
ಬನ್ನೇರುಘಟ್ಟ ಪಾರ್ಕ್​ನಲ್ಲಿ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿರುವ ಹುಲಿಗಳು
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 25, 2023 | 1:06 PM

ಬೆಂಗಳೂರು: ಒಂದು ಕಾಲದಲ್ಲಿ ಅತಿ ಹೆಚ್ಚು ಹುಲಿಗಳಿದ್ದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಈಗ ಅತಿ ಹೆಚ್ಚು ಚಿರತೆಗಳನ್ನು ಪಾಲನೆ‌ ಮಾಡುವ ಪಾರ್ಕ್‌ ಆಗಿ ಹೊರಹೊಮ್ಮಿದೆ. ಚಿರತೆಗಳನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯವಸ್ಥೆ ಇದೆ ಎನ್ನುವ ಸಮಾಧಾನ ಒಂದು ಕಡೆ ಆದರೆ, ಕಳೆದ‌ ವರ್ಷ ಅತಿ ಹೆಚ್ಚು ಹುಲಿಗಳನ್ನು ಬನ್ನೇರುಘಟ್ಟ ಪಾರ್ಕ್ ಕಳೆದುಕೊಂಡಿದೆ ಎನ್ನುವುದು ದುರಂತ. ಹೌದು ಕಳೆದ ಒಂದೂವರೆ ವರ್ಷದಲ್ಲಿ ಸಫಾರಿ ಮತ್ತು ‘ಜೂ’ ನಲ್ಲಿದ್ದ ಆರಕ್ಕೂ ಹೆಚ್ಚು ಹುಲಿಗಳು ಅಸುನೀಗಿವೆ.‌ ಅದಕ್ಕೆ ಕಾರಣ ವಿಚಿತ್ರ ವೈರಸ್, ಇದು ಹುಲಿಗಳ ದೇಹ ಮತ್ತು ರಕ್ತದೊಳಗೆ ಸೇರಿ ಹಿಂಡಿ ಹಿಪ್ಪೆ ಮಾಡಿವೆ. ಹೀಗಾಗಿ ಬನ್ನೇರುಘಟ್ಟ ಸಿಬ್ಬಂದಿ ಹುಲಿಗಳನ್ನ ಸಧ್ಯ ಬಹಳ ಕೇರ್​ಫುಲ್ ಆಗಿ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ 26‌ಕ್ಕಿದ್ದ ಹುಲಿಗಳ ಸಂಖ್ಯೆ ಈಗ ಬರೀ 16‌ಕ್ಕೆ ಇಳಿದಿದೆ. ಅದರಲ್ಲೂ ಎರಡು ಹುಲಿಗಳು ಸಾಯುವ ಸ್ಥಿತಿಗೆ ತಲುಪಿವೆ.

ಇನ್ನು ಇದಕ್ಕೆ ತದ್ವಿರುದ್ಧವಾಗಿ ಬನ್ನೇರುಘಟ್ಟ ‌ಪಾರ್ಕ್​ನಲ್ಲಿ ಚಿರತೆಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕಾರಣ ಬೆಂಗಳೂರು ಸುತ್ತಾಮುತ್ತ ಅನೇಕ ಗ್ರಾಮಗಳಿಗೆ ಉಪಟಳ ಕೊಟ್ಟ ಹಲವು ಚಿರತೆಗಳನ್ನು ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್‌‌ ಸಿಬ್ಬಂದಿಯೇ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿರತೆಗಳನ್ನು ರೆಸ್ಕ್ಯೂ ಮಾಡಿ ಕಾಡಿಗೆ ಬಿಡಲಾಗುತ್ತಿತ್ತು. ಆದರೆ ಈಗ ಚಿರತೆಗಳ‌ ಸಂರಕ್ಷಣೆಗಾಗಿಯೇ ಹೊಸ ಬ್ಯಾರೆಕ್ ತಯಾರಿಸಿ ಅವುಗಳ ಪಾಲನೆ‌ ಮಾಡಲಾಗುತ್ತಿದೆ. ಅವುಗಳಿಗೆ ತಗಲುವ ಖರ್ಚಿಗಾಗಿ 6 ಕೋಟಿ ಹಣವನ್ನು ಅರಣ್ಯ ಇಲಾಖೆ ಭರಿಸಲು ಮುಂದಾಗಿದೆ.

ಇದನ್ನೂ ಓದಿ:ಲಾಕ್​ಡೌನ್​ ನಡುವೆಯೂ ಲಾಭ ಗಳಿಸಿದ ಪ್ರವಾಸಿ ತಾಣ; ಬನ್ನೇರುಘಟ್ಟ ಉದ್ಯಾನವನ‌ದಲ್ಲಿ ಕೋಟ್ಯಾಂತರ ರೂ. ಹಣ ಸಂಗ್ರಹ

ಅದೇನೆ ಇರಲಿ ಜಾಗತಿಕವಾಗಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ವರದಿಗಳು ದೇಶದ ಇತರ ‘ಜೂ’ ಗಳಲ್ಲಿ ಚರ್ಚೆ ಆಗುತ್ತಿದ್ದರೆ. ಇತ್ತ ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಆಗುತ್ತಿರೋದು ಪ್ರಾಣಿಪ್ರಿಯರಿಗೆ ಬೇಜಾರುಂಟು ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಹುಲಿ ‌ಆರೋಗ್ಯ ಕೆಡದಂತೆ ಬಹಳ ಎಚ್ಚರವಾಗಿ ನೋಡಿಕೊಳ್ಳತ್ತೇವೆ ಬಾಕಿ ಭಗವಂತನ ಇಚ್ಛೆ ಎನ್ನುತ್ತಾರೆ ಪಾರ್ಕ್​ನ ಸಿಬ್ಬಂದಿಗಳು

ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Sat, 25 March 23

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ