Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: 37 ಸಾವಿರ ರೂ. ಮೌಲ್ಯದ 550 ಕೆಜಿ ಟೊಮೆಟೋ ಕಳುವು

ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಟೊಮೆಟೋ ಕಳ್ಳತನ ಪ್ರಕರಣ ವರದಿಯಾಗುತ್ತಿವೆ. ಬೆಂಗಳೂರಿನ ಹಲಸೂರಿನ ಮರ್ಫಿ ಟೌನ್‌ನಲ್ಲಿಯ ತರಕಾರಿ ಅಂಗಡಿಯಿಂದ 37,500 ರೂ. ಮೌಲ್ಯದ ಸುಮಾರು 550 ಕೆಜಿ ಟೊಮೆಟೋವನ್ನು ಕದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು: 37 ಸಾವಿರ ರೂ. ಮೌಲ್ಯದ 550 ಕೆಜಿ ಟೊಮೆಟೋ ಕಳುವು
ಟೊಮೆಟೋ
Follow us
ವಿವೇಕ ಬಿರಾದಾರ
|

Updated on: Aug 18, 2023 | 12:06 PM

ಬೆಂಗಳೂರು: ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಟೊಮೆಟೋ (Tomato) ಕಳ್ಳತನ ಪ್ರಕರಣ ವರದಿಯಾಗುತ್ತಿವೆ. ಬೆಂಗಳೂರಿನ (Bengaluru) ಹಲಸೂರಿನ ಮರ್ಫಿ ಟೌನ್‌ನಲ್ಲಿಯ ತರಕಾರಿ ಅಂಗಡಿಯಿಂದ 37,500 ರೂ. ಮೌಲ್ಯದ ಸುಮಾರು 550 ಕೆಜಿ ಟೊಮೆಟೋವನ್ನು ಕದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮರ್ಫಿ ಟೌನ್ ನಿವಾಸಿ, ಟೊಮೆಟೋ ವ್ಯಾಪಾರಿ ಪ್ರಶಾಂತ್ ಟಿ ಅವರ ಅಂಗಡಿಯಿಂದ ಟೊಮೆಟೋ ಕಳ್ಳತನವಾಗಿದ್ದು ಹಲೂಸೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಪ್ರಶಾಂತ್ ಟಿ ಅವರು ಆಗಸ್ಟ್ 11 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿವಾಜಿನಗರ ಮಾರುಕಟ್ಟೆಯಿಂದ ತಲಾ 22 ಕೆಜಿ ತೂಕದ 30 ಟ್ರೆ ಬಾಕ್ಸ್​ ಟೊಮೆಟೋ ಖರೀದಿಸಿದ್ದರು. ನಂತರ ಟೊಮೆಟೋಗಳನ್ನು ಮರ್ಫಿ ಟೌನ್ ಮಾರುಕಟ್ಟೆಯಲ್ಲಿರುವ ತಮ್ಮ ಅಂಗಡಿಯಲ್ಲಿ ಇಟ್ಟಿದ್ದರು. ಅದೇ ದಿನ ಐದು ಟ್ರೆ ಟೊಮ್ಯಾಟೊ ಮಾರಾಟ ಮಾಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಹೋಗುತ್ತಿದ್ದಾಗ ಟ್ರೆಗಳನ್ನು ಟಾರ್ಪಲಿನಿಂದ ಮುಚ್ಚಿ, ಹಗ್ಗ ಕಟ್ಟಿ ಹೋಗಿದ್ದರು. ಮರುದಿನ ಬೆಳಗ್ಗೆ 7 ಗಂಟೆ ಸುಮಾರಿಗೆ ಅಂಗಡಿಗೆ ಬಂದು ನೋಡಿದಾಗ ಉಳಿದ 25 ಟೊಮೆಟೋ ಟ್ರೆ ಬಾಕ್ಸ್​ಗಳು ಕಳ್ಳತನವಾಗಿದ್ದವು.

ಇದನ್ನೂ ಓದಿ: Tomato: ಟೊಮೆಟೋ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಿಂದ ಖರೀದಿಸಿ ಬೇರೆ ರಾಜ್ಯಗಳಿಗೆ ವಿತರಣೆ

ನಂತರ ಯಾರು ಕದ್ದಿರಬಹುದೆಂದು ವಿಚಾರ ಮಾಡುತ್ತಿರುವಾಗ ಪಕ್ಕದ ಅಂಗಡಿಯೊಂದರಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಗಸ್ಟ್ 12 ರಂದು ಬೆಳಿಗ್ಗೆ 4.30 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ಬಂದು ಅಂಗಡಿ ಮುಂದೆ ವಾಹನವನ್ನು ನಿಲ್ಲಿಸಿ ಟೊಮೆಟೋ ಕದ್ದು ಪರಾರಿಯಾಗಿದ್ದರು.

ಈ ಟೊಮೆಟೋ ಖದೀಮರಲ್ಲಿದ್ದ ಓರ್ವ ಬಾಲಕ ಎರಡು ದಿನಗಳ ಬಳಿಕ ಆಗಸ್ಟ್ 15 ರಂದು ಮರ್ಫಿ ಟೌನ್ ನಿವಾಸಿ ಹಾದು ಹೋಗುತ್ತಿದ್ದನು. ಇವನನ್ನು ಬೇರೆ ಅಂಗಡಿ ಮಾಲಿಕರು ಈತನೇ ಕದ್ದವನೆಂದು ಗುರುತಿಸಿ ಆತನನ್ನು ಹಿಡಿದು ಪ್ರಶಾಂತನಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪ್ರಶಾಂತ ಬಾಲಕನನ್ನು ವಿಚಾರಿಸಿದಾಗ ಟೊಮೆಟೋ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಸ್ಥಳೀಯರು ಹುಡುಗನನ್ನು ಹಲಸೂರು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕನನ್ನು ವಿಚಾರಣೆಗೊಳಪಡಿಸಿದಾಗ, 15 ವರ್ಷದ ಬಾಲಕ ಹಾಸ್ಟೆಲ್​​​ನಿಂದ ತಪ್ಪಿಸಿಕೊಂಡು ತನ್ನ ತಾಯಿಯನ್ನು ಹುಡುಕಿಕೊಂಡು ಬಂದಿದ್ದಾನೆ ಬೆಂಗಳೂರಿಗೆ ಬಂದಿದ್ದಾನೆ. ಬಾಲಕ ಆಗಸ್ಟ್ 14 ರಂದು ಟೊಮೆಟೊ ಕಳ್ಳತನಕ್ಕೂ ಅವನಿಗೆ ಯಾವುದೇ ಸಂಬಂಧವಿಲ್ಲ. ನಾವು ಅವನನ್ನು ಮಡಿವಾಳ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಹಲಸೂರು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು