AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಕರೆಸಿ ಉದ್ಯಮಿ ಪುತ್ರನ ಸುಲಿಗೆ: 4 ಕೋಟಿ ರೂ. ಡಿಮ್ಯಾಂಡ್​, ಮಹಿಳೆ ಸೇರಿದಂತೆ ನಾಲ್ವರ ಬಂಧನ

ಸರ್ಕಾರದ ಟೆಂಡರ್ ಕೊಡಿಸುವುದಾಗಿ ಕರೆಸಿ ಮಹಿಳೆಯ ಗ್ಯಾಂಗ್​​ನಿಂದ ನಗರದ ಉದ್ಯಮಿ ಪುತ್ರನನ್ನು ಟ್ರಾಪ್ ಮಾಡಲಾಗಿದೆ. ಮಹಿಳೆ ಸೇರಿ ನಾಲ್ವರಿಂದ ಪಿಸ್ತೂಲ್ ತೋರಿಸಿ ಉದ್ಯಮಿ ಪುತ್ರನಿಗೆ ಬ್ಲಾಕ್ ಮೇಲ್ ಮಾಡಲಾಗಿದೆ.

ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಕರೆಸಿ ಉದ್ಯಮಿ ಪುತ್ರನ ಸುಲಿಗೆ: 4 ಕೋಟಿ ರೂ. ಡಿಮ್ಯಾಂಡ್​, ಮಹಿಳೆ ಸೇರಿದಂತೆ ನಾಲ್ವರ ಬಂಧನ
ಉದ್ಯಮಿಯ ಪುತ್ರ ಸೂರಜ್, ಆರೋಪಿ ಮಹಿಳೆ ಪುಷ್ಪಾ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 24, 2022 | 8:44 AM

ಬೆಂಗಳೂರು: ಸರ್ಕಾರದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಪುತ್ರನಿಂದ 25 ಲಕ್ಷ ರೂ. ಸುಲಿಗೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಉದ್ಯಮಿ ರವಿ ಎಂಬುವವರ ಪುತ್ರ ಸೂರಜ್ ಮೇಲೆ ಪಿಸ್ತೂಲ್ ತೋರಿಸಿ ಖತರ್ನಾಕ್ ಗ್ಯಾಂಗ್​​ನಿಂದ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಉದ್ಯಮಿ ಬ್ಯಾಟರಾಯನಪುರ ಪೊಲೀಸ ಠಾಣೆಗೆ ದೂರು ನೀಡಿದ್ದು, ಸದ್ಯ ಮಹಿಳೆ ಪುಷ್ಪಾ, ಅಯ್ಯಪ್ಪ@ ಅರ್ಜುನ್, ರಾಕೇಶ್ ಹಾಗೂ ಸಂತೋಷ್​ನನ್ನು ಬಂಧಿಸಲಾಗಿದೆ. ಸರ್ಕಾರದ ಟೆಂಡರ್ ಕೊಡಿಸುವುದಾಗಿ ಕರೆಸಿ ಮಹಿಳೆಯ ಗ್ಯಾಂಗ್​​ನಿಂದ ನಗರದ ಉದ್ಯಮಿ ಪುತ್ರನನ್ನು ಟ್ರಾಪ್ ಮಾಡಲಾಗಿದೆ. ಮಹಿಳೆ ಸೇರಿ ನಾಲ್ವರಿಂದ ಪಿಸ್ತೂಲ್ ತೋರಿಸಿ ಉದ್ಯಮಿ ಪುತ್ರನಿಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಉದ್ಯಮಿ ರವಿ ಇಂಡಸ್ಟ್ರೀಯಲ್ ಸಪ್ಲೈ ನಲ್ಲಿ ಮಾಲೀಕರಾಗಿದ್ದಾರೆ. ಹಾಗಾಗಿ ಆತನ ಮಗನಾದ ಸೂರಜ್​ನನ್ನು ಕಿಡ್ನಾಪ್ ಮಾಡಲಾಗಿದೆ.

ಇದನ್ನೂ ಓದಿ:ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯನ್ನೇ ಕೊಲೆಗೈದ ಪತಿಯ ಬಂಧನ

4 ಕೋಟಿ ಹಣಕ್ಕೆ ಡಿಮ್ಯಾಂಡ್:

ಸರ್ಕಾರದ ಟೆಂಡರ್ ಕೊಡುಸ್ತಿನಿ ಎಂದು ನಾಲ್ಕೈದು ಬಾರಿ ಮಹಿಳೆ ಪುಷ್ಪಾ ಭೇಟಿಯಾಗಿದ್ದು, ಹೀಗಾಗಿ ಸಂತೋಷ್ ಎಂಬುವವರನ್ನ ಭೇಟಿ ಮಾಡಿಸಿದ್ದಳು. ಸಂತೋಷ್ ಐಎಎಸ್ ಅಧಿಕಾರಿಯ ಪಿಎ ಎಂದಿದ್ದಳು. ಬಳಿಕ ಟೆಂಡರ್ ಕೊಡುಸ್ತಾರೆ ಎಂದು ಹೇಳಿ ಮಾತನಾಡುವ ವೇಳೆ ಗ್ಯಾಂಗಿನ ಇನ್ನಿಬ್ಬರೂ ನುಗ್ಗಿದ್ದು, 4 ಕೋಟಿ ಹಣ ಕೊಡದಿದ್ದರೆ ಬಿಡೊದಿಲ್ಲ ಎಂದು ಡಿಮ್ಯಾಂಡ್ ಮಾಡಿದ್ದಾರೆ. ನನ್ನ ಬಳಿ‌ ಅಷ್ಟು ದುಡ್ಡಿಲ್ಲ, ಮನೆ ಮಾರಿದರೂ ಅಷ್ಟು ದುಡ್ಡು ಸಿಗಲ್ಲ, ಬಿಟ್ಟು ಬಿಡಿ ಎಂದು ಸೂರಜ್ ಕೇಳಿಕೊಂಡಿದ್ದಾನೆ. ನಂತರ ಸೂರಜ್ ತನ್ನ ಸ್ನೇಹಿತ ಗುರುಮೂರ್ತಿಗೆ ಹೇಳಿ ಐದು ಗಂಟೆಯ ವೇಳೆ 25 ಲಕ್ಷ ತರುವಂತೆ ಹೇಳಿದ್ದಾನೆ. ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಬಳಿ 25 ಲಕ್ಷ ಹಣ ತಂದಿದ್ದ ಗುರುಮೂರ್ತಿ, ಸೂರಜ್ ಇಲ್ಲದ ಕಾರಣ ಪುಷ್ಪಾಳ ಕಡೆಯವರಿಗೆ ಹಣ ನೀಡದೆ ವಾಪಾಸಾಗಿದ್ದಾನೆ.

ರೇಪ್​ ಕೇಸ್​ ಹಾಕುವುದಾಗಿ ಬೆದರಿಕೆ:

ಆದರೆ ಈ ವೇಳೆ ಸೂರಜ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದ ಪುಷ್ಟ, ನಂತರ ಹಣ ಕೊಡಬೇಕು ಇಲ್ಲ ನನ್ನನ್ನ ರೇಪ್ ಮಾಡಿದ್ದೀಯಾ ಎಂದು ಹೇಳಿ ಕೇಸು ಹಾಕಿಸ್ತಿನಿ‌ ಎಂದು ಬೆದರಿಕೆ ಹಾಕಲಾಗಿದೆ. ಈ ವೇಳೆ ಮತ್ತೆ ಗುರುಮೂರ್ತಿಯನ್ನು ಆಕೆಯ ಮನೆಗೆ ಕರೆಸಿಕೊಂಡು ಹಣ ನೀಡಲಾಗಿತ್ತು. 25 ಲಕ್ಷ ಹಣ ಪುಷ್ಪಳಿಗೆ ನೀಡಿದ ಗುರುಮೂರ್ತಿ ಹೊರಟು ಹೊಗಿದ್ದ. ನಂತರ ರಾತ್ರಿ 9 ಗಂಟೆಗೆ ಸೂರಜ್ ಬಿಟ್ಟು ಕಳುಹಿಸಲಾಗಿತ್ತು. ಹೊರಗೆ ಹೇಳಿದರೆ ರೇಪ್ ಕೇಸ್ ಹಾಕುವುದಲ್ಲದೆ ಇಡೀ‌ ಕುಟುಂಬವನ್ನ ಹತ್ಯೆ ಮಾಡುತ್ತೆನೆಂದು ಮಹಿಳೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:38 am, Wed, 24 August 22

ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್