AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರದ್ದೋ ಆಟೋ ಮತ್ಯಾರದ್ದೋ ಹೆಸರಿಗೆ: ಬೆಂಗಳೂರಿನಲ್ಲಿ ವಿಚಿತ್ರ ಕೇಸ್ ಬೆಳಕಿಗೆ

ತನ್ನ ಸ್ವಂತ ಆಟೋವನ್ನ ಬಾಡಿಗೆಗೆಂದು ಚಾಲಕನಿಗೆ ನೀಡಲಾಗಿತ್ತು. ಆದರೆ, ಆಟೋ ಬಾಡಿಗೆಗೆ ಪಡೆದ ಕಿಲಾಡಿ, ಲಗ್ಗೆರೆಯ ಫೈ‌ನಾನ್ಸಿಯರ್ ಬಳಿ ಹಣ ತೆಗೆದುಕೊಂಡು ಅಡಮಾನ ‌ಇಟ್ಟಿದ್ದಾನೆ. ಆಟೋ ಮಾಲೀಕನ ಸಹಿ ನಕಲಿ ಮಾಡಿ ಫೈನಾನ್ಸಿಯರ್ ಹೆಂಡತಿ ಹೆಸರಿಗೆ ಆಟೋ ವರ್ಗಾವಣೆ ಮಾಡಿರುವ ಆರೋಪ ರಾಜಾಜಿನಗರ ಆರ್​ಟಿಓ ಅಧಿಕಾರಿಗಳ ಮೇಲೆ ಬಂದಿದ್ದು, ಈ ಕೇಸ್ ಬಸವೇಶ್ವರ ನಗರ ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದೆ.

ಯಾರದ್ದೋ ಆಟೋ ಮತ್ಯಾರದ್ದೋ ಹೆಸರಿಗೆ: ಬೆಂಗಳೂರಿನಲ್ಲಿ ವಿಚಿತ್ರ ಕೇಸ್ ಬೆಳಕಿಗೆ
ರಾಜಾಜಿನಗರ ಆರ್​ಟಿಓ ಅಧಿಕಾರಿ ಶ್ರೀನಿವಾಸ್
Kiran Surya
| Edited By: |

Updated on: Aug 28, 2024 | 9:06 PM

Share

ಬೆಂಗಳೂರು, ಆ.28: ಮೋಹನ್ ಎಂಬ ಬಸವೇಶ್ವರ ನಗರದ(Basaveshwar Nagar) ನಿವಾಸಿ, ಸಾಗರ್ ಎನ್ನುವ ಚಾಲಕನಿಗೆ ತನ್ನ ಸ್ವಂತ ಆಟೋವನ್ನು ಪ್ರತಿದಿನ 200 ರೂಪಾಯಿಯಂತೆ ಬಾಡಿಗೆಗೆ ನೀಡಿದ್ದಾನೆ. ಆದರೆ, ಆಟೋ ಬಾಡಿಗೆಗೆ ಪಡೆದ ಸಾಗರ್ ಲಗ್ಗೆರೆಯ ಆಟೋ ಫೈನಾನ್ಸಿಯರ್ ಚಂದ್ರೇಗೌಡ ಎಂಬಾತನ ಬಳಿ ಒಂದು ಲಕ್ಷ ಹಣಕ್ಕೆ ಅಡಮಾನ ಇಟ್ಟಿದ್ದಾನೆ. ನಂತರ ಫೈನಾನ್ಸಿಯರ್ ಚಂದ್ರೇಗೌಡ ರಾಜಾಜಿನಗರ ಆರ್​ಟಿಓ ಕಚೇರಿಯಲ್ಲಿ ಅಡಮಾನ ಇಟ್ಟಿದ್ದ ಆಟೋವನ್ನು, ತನ್ನ ಹೆಂಡತಿ ಸುಜತಾ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಈಗ ಆಟೋ ಬಾಡಿಗೆಗೆ ನೀಡಿದ್ದ ಆಟೋ ಮಾಲೀಕ ಮೋಹನ್, ಬಸವೇಶ್ವರ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ.

ಈಗಾಗಲೇ ಬಸವೇಶ್ವರ ನಗರ ಪೋಲಿಸ್ ಠಾಣೆಯಲ್ಲಿ ಈ ವಿಚಾರವಾಗಿ ಎಫ್ಐಆರ್ ದಾಖಲಾಗಿದ್ದು, ಪೋಲಿಸರು ಮೋಹನ್ ದಾಖಲೆಗಳೇ ಇಲ್ಲದೆ, ನಿನ್ನ ಹೆಂಡತಿ ಹೆಸರಿಗೆ ಹೇಗೆ ಆರ್​ಸಿ ವರ್ಗಾವಣೆ ಮಾಡಿಸಿಕೊಂಡೆ ಎಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಚಂದ್ರೇಗೌಡ ಮೋಹನ್ ಹೆಸರಲ್ಲಿದ್ದ ಆರ್​ಸಿ ಕಾರ್ಡ್​ನ್ನು ಈಗಾಗಲೇ ಸಾಗರ್ ನನಗೆ ನೀಡಿದ್ದ. ಆ ದಾಖಲೆಗಳನ್ನು ಮತ್ತು ನನ್ನ ಹೆಂಡತಿಯ ದಾಖಲೆಗಳನ್ನು ಬ್ರೋಕರ್​​ಗೆ ನೀಡಿದ್ವಿ, ನಂತರ ನನ್ನ ಹೆಂಡತಿ ಸುಜಾತ ಹೆಸರಿಗೆ ಆಟೋ ವರ್ಗಾವಣೆ ಮಾಡಿಸಿದರು ಎಂದು ಹೇಳಿದ್ದಾನೆ.

ಇದನ್ನೂ ಓದಿ: ಆಟೋ ಹತ್ತಿದ ನರ್ಸಿಂಗ್ ವಿದ್ಯಾರ್ಥಿನಿಗೆ ಅಮಲು ಬರುವ ನೀರು ಕುಡಿಸಿ ಅತ್ಯಾಚಾರವೆಸಗಿದ ಚಾಲಕ

ಸದ್ಯ ಪೋಲಿಸರು ಆಟೋವನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ರಾಜಾಜಿನಗರ ಆರ್​ಟಿಓ ಅಧಿಕಾರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಾಜಿನಗರ ಆರ್​ಟಿಓ ಅಧಿಕಾರಿ ಶ್ರೀನಿವಾಸ್, ‘ನಾನು ಈ ಕೂಡಲೇ ಕಡತಗಳನ್ನು ಪರಿಶೀಲಿಸಿ ದೂರುದಾರರಿಗೆ ನ್ಯಾಯವನ್ನು ಒದಗಿಸುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಯಾರದ್ದೋ ಆಟೋವನ್ನು ಮತ್ಯಾರದ್ದೋ ಹೆಸರಿಗೆ, ಆಟೋ ಮಾಲೀಕನ ದಾಖಲೆಗಳೇ ಇಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಆಟೋ ವರ್ಗಾವಣೆ ಮಾಡಿಸುತ್ತಿದ್ದು, ಈ ಬ್ರೋಕರ್​ಗಳ ಕಳ್ಳಾಟ ಎಷ್ಟಿರ ಮಟ್ಟಿಗೆ ನಡೆಯುತ್ತಿದೆ ಮತ್ತು ಇದನ್ನು ಪರಿಶೀಲನೆ ಮಾಡದೆ ವರ್ಗಾವಣೆ ಮಾಡಿದ ಆರ್​ಟಿಓ ಸಿಬ್ಬಂದಿಗಳ ಮೇಲೂ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ