Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಸದ್ಯಕ್ಕೆ ಕೊರೊನಾ ಆತಂಕ ಇಲ್ಲ: ನೆಮ್ಮದಿಯ ಫಲಿತಾಂಶ ಕೊಟ್ಟ ಒಳಚರಂಡಿ ನೀರಿನ ಮಾದರಿ ಪರಿಶೀಲನೆ

ಬೆಂಗಳೂರಲ್ಲಿ ಒಳಚರಂಡಿ ನೀರಿನ ಮಾದರಿಗಳ ಪರಿಶೀಲನೆ ನಂತರ ಕೊರೋನಾ ಸೋಂಕು ಹರಡುವಿಕೆಯ ತೀವ್ರತೆ ಕಡಿಮೆಯಾಗಿದೆ ಎಂದು ಇನ್​ಫೆಕ್ಸ್​ ಡಿಸಿಸ್​ ರಿಸರ್ಚ್ ಫೌಂಡೇಶನ್​​ ಸಿಇಒ ರೋಹನ ಪೈಸ್ ಹೇಳಿದ್ದಾರೆ

ಬೆಂಗಳೂರಿಗೆ ಸದ್ಯಕ್ಕೆ ಕೊರೊನಾ ಆತಂಕ ಇಲ್ಲ: ನೆಮ್ಮದಿಯ ಫಲಿತಾಂಶ ಕೊಟ್ಟ ಒಳಚರಂಡಿ ನೀರಿನ ಮಾದರಿ ಪರಿಶೀಲನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 15, 2023 | 1:02 PM

ಬೆಂಗಳೂರು: ಚೀನಾದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ನಿಯಮಿತ ತಪಾಸಣೆಯ ಭಾಗವಾಗಿ ಬೆಂಗಳೂರಿನಲ್ಲಿ ಒಳಚರಂಡಿ  ನೀರಿನಲ್ಲಿ ಸೂಕ್ಷ್ಮಜೀವಿಗಳನ್ನು ವಿಶ್ಲೇಷಿಸಿದಾಗ ನಗರದಲ್ಲಿ ಸದ್ಯಕ್ಕೆ ಕೊರೋನಾ ಸೋಂಕು ಹರಡುವಿಕೆಯ ತೀವ್ರತೆಯು ಆತಂಕಕಾರಿ ಮಟ್ಟದಲ್ಲಿ ಇಲ್ಲ ಎಂಬ ಸಂಗತಿ ಮನವರಿಕೆಯಾಗಿದೆ. ಈ ಸಂಬಂಧ ‘ಇನ್​ಫೆಕ್ಸ್​ ಡಿಸಿಸ್​ ರಿಸರ್ಚ್ ಫೌಂಡೇಶನ್​​’ನ ಸಿಇಒ ರೋಹನ ಪೈಸ್ ಹೇಳಿಕೆಯನ್ನು ಡೆಕ್ಕನ್​ ಹೆರಾಲ್ಡ್​  ಜಾಲತಾಣವು ವರದಿ ಮಾಡಿದೆ. ಒಳಚರಂಡಿ ಕಣ್ಗಾವಲು ಪರೀಕ್ಷೆಯಿಂದ ಸಮೂಹ ಮಟ್ಟದಲ್ಲಿ ಕೊರೋನಾ ಸೋಂಕು ಹರಡುವಿಕೆಯನ್ನು ಪತ್ತೆಹಚ್ಚಬಹುದಾಗಿದೆ. ಒಳಚರಂಡಿ ತಪಾಸಣಾ ವರದಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಡಿಸೆಂಬರ್​ಗಿಂತಲೂ ಜನವರಿಯಲ್ಲಿ ‘ಸಿಟಿ ವ್ಯಾಲ್ಯೂ’ ಶೇ 25ಕ್ಕಿಂತ ಕಡಿಮೆ ಇದೆ. ಮಾದರಿಗಳ ಸಿಟಿ ವ್ಯಾಲ್ಯೂ ಶೇ 25ಕ್ಕಿಂತ ಹೆಚ್ಚಿದ್ದರೇ ಅದನ್ನು ಸಾಮಾನ್ಯವಾಗಿದೆ ಅಥವಾ ಸೌಮ್ಯವಾಗಿದೆ ಎಂದು ಪರಿಣಗಿಸಲಾಗುತ್ತದೆ. ಇವುಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಒಳಪಡಿಸುವುದು ಅವಶ್ಯಕವಾಗಿರುವುದಿಲ್ಲ.

ಕಳೆದ ವರ್ಷ ಡಿಸೆಂಬರ್​ನಿಂದ ಐಡಿಆರ್​ಎಫ್​​ ಒಳಚರಂಡಿ ಕಣ್ಗಾವಲು ಮಾದರಿಗಳನ್ನು ರಾಜ್ಯದ ತಾಂತ್ರಿಕ ಸಲಹಾ ಸಮಿತಿ (TAC) ಗೆ ಕಳುಹಿಸುತ್ತಿದೆ. ಐಡಿಆರ್​ಎಫ್​​ ಪ್ರತಿವಾರ ವಿಮಾನ ನಿಲ್ದಾಣ, ಅಪಾರ್ಟ್​ಮೆಂಟ್​​, ಆಸ್ಪತ್ರೆಗಳು 16 ನಗರಗಳಲ್ಲಿ ಎರಡು ಆರ್​ಟಿಪಿಸಿಆರ್​​ ಪರೀಕ್ಷೆಗಳನ್ನು ಮಾಡುತ್ತಿದೆ. ಈ ಹಿಂದೆ ಕೊರೋನಾ ಸೋಂಕು ತಗುಲಿದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಸಿಟಿ ವ್ಯಾಲ್ಯೂ 30ಕ್ಕಿಂತ ಜಾಸ್ತಿ ಇದ್ದರು ಅದನ್ನು ಗಂಭೀರವಲ್ಲ ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಸಮೂಹದಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಹೆಚ್ಚಿದ್ದರೂ ಅದು ಸೋಂಕಿನ ತೀರ್ವತೆ ಎಂದು ಪರಿಗಣಿಸುವುದು ಅವಶ್ಯಕತಯಿಲ್ಲ.

ಸಿಟಿ ವ್ಯಾಲ್ಯೂ ಕಡಿಮೆ ಇದ್ದ ಕಾರಣ ಐಡಿಆರ್​ಎಫ್​​ ಡಿಸೆಂಬರ್ ಮತ್ತು ನವೆಂಬರ್​ ತಿಂಗಳಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿಲ್ಲ. ಅಕ್ಟೋಬರ್, ಅಗಸ್ಟ್​ ಮತ್ತು ಸೆಪ್ಟೆಂಬರ್​ನಲ್ಲಿ 1 ರಿಂದ 2 ಪರೀಕ್ಷಾ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಕಳೆದ ಜುಲೈ ತಿಂಗಳಲ್ಲಿ ಸೋಂಕಿನ ತೀವ್ರತೆ ಜಾಸ್ತಿ ಇತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Sun, 15 January 23

ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ