Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾದ ವಾಯುಮಾಲಿನ್ಯ! ಬೇಸಿಗೆಯಲ್ಲಿಯೂ ಮಂಜು ಕವಿದಂತಿರುವ ದಟ್ಟ ಹೊಗೆ

ಬೆಳಿಗ್ಗೆಯಿಂದಲೂ ದಟ್ಟ ಹೊಗೆ ಆವರಿಸಿಕೊಂಡು ಬೇಸಿಗೆ ಕಾಲದಲ್ಲೂ ಮಂಜು ಮುಸುಕಿದಂತೆ ಭಾಸವಾಗುತ್ತಿದೆ. ಘಟನಾ ಪ್ರದೇಶದಿಂದ ತೆರಳುವ ಜನರಿಗೆ ಉಸಿರು ತೆಗೆದುಕೊಳ್ಳಲೂ ಆಗದ ಸ್ಥಿತಿ ಇದೆ.

ಬೆಂಗಳೂರು ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾದ ವಾಯುಮಾಲಿನ್ಯ! ಬೇಸಿಗೆಯಲ್ಲಿಯೂ ಮಂಜು ಕವಿದಂತಿರುವ ದಟ್ಟ ಹೊಗೆ
ಬೇಸಿಗೆಯಲ್ಲಿಯೂ ಮಂಜು ಕವಿದಂತಿರುವ ದಟ್ಟ ಹೊಗೆ ಆವರಿಸಿದೆ
Follow us
TV9 Web
| Updated By: sandhya thejappa

Updated on:Mar 29, 2022 | 4:02 PM

ಆನೇಕಲ್: ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ (Industrial Area) ರಾಸಾಯನಿಕ ತಾಜ್ಯ ಹೊತ್ತಿ ಉರಿದ ಪರಿಣಾಮ ಬೊಮ್ಮಂಡಹಳ್ಳಿ ಸೇರಿದಂತೆ ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಾಮುತ್ತಾ ದಟ್ಟ ಹೊಗೆ ಆವರಿಸಿದೆ. ಕೈಗಾರಿಕಾ ಪ್ರದೇಶದ ಖಾಲಿ ಸ್ಥಳದಲ್ಲಿ ಹೋಟೆಲ್ (Hotel) ಸೇರಿದಂತೆ ಕಾರ್ಖಾನೆಗಳ ತ್ಯಾಜ್ಯ ಬಿಸಾಡಿರುವ ಪರಿಣಾಮ ಬಿಸಿಲಿಗೆ ಬೆಂಕಿ ಹೊತ್ತಿ ಅಲ್ಲಲ್ಲಿ ಬೆಂಕಿ ಅವಘಡ ಕೂಡ ನಡೆಯುತ್ತಿವೆ. ಬೊಮ್ಮಂಡಹಳ್ಳಿಯ ಸಮೀಪ ಹೊತ್ತಿ ಉರಿಯುತ್ತಿರುವ ತ್ಯಾಜ್ಯದ ಪರಿಣಾಮ ಇಡೀ ಪ್ರದೇಶದಲ್ಲಿ ಉಸಿರುಗಟ್ಟುವ ವಾತವರಣ ನಿರ್ಮಾಣವಾಗಿದೆ.

ಬೆಳಿಗ್ಗೆಯಿಂದಲೂ ದಟ್ಟ ಹೊಗೆ ಆವರಿಸಿಕೊಂಡು ಬೇಸಿಗೆ ಕಾಲದಲ್ಲೂ ಮಂಜು ಮುಸುಕಿದಂತೆ ಭಾಸವಾಗುತ್ತಿದೆ. ಘಟನಾ ಪ್ರದೇಶದಿಂದ ತೆರಳುವ ಜನರಿಗೆ ಉಸಿರು ತೆಗೆದುಕೊಳ್ಳಲೂ ಆಗದ ಸ್ಥಿತಿ ಇದೆ. ಜಿಗಣಿ ವ್ಯಾಪ್ತಿಯ ಅನೇಕ ಕಾರ್ಖಾನೆ ಹಾಗೂ ಹೋಟೆಲ್ ಸಿಬ್ಬಂದಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದರೂ, ಜಿಗಣಿ ಪುರಸಭೆ ಅಧಿಕಾರಿಗಳು ಕಣ್ಮುಚ್ಚಿ ಕೂತಿದ್ದಾರೆ. ಕಸ ಹಾಕುತ್ತಿರುವವ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ಭ್ರಷ್ಟಾಚಾರದ ಆರೋಪವೂ ಕೇಳಿ ಬಂದಿದೆ.

ದೆಹಲಿಯಂತಾಗುತ್ತಾ ಪರಿಸ್ಥಿತಿ?: ಬೆಂಗಳೂರು ನಗರದಲ್ಲಿ ಸದ್ಯ ಮಿತಿಮೀರಿದ ಟ್ರಾಫಿಕ್ ಕಾರಣದಿಂದ ಆಕ್ಸಿಜನ್ ಪ್ರಮಾಣ ಇಳಿತ ಕಂಡಿರುವುದು ಎಲ್ಲಾರಿಗೂ ತಿಳಿದಿರುವ ವಿಚಾರ. ಹೀಗಾಗಿ ಉದ್ಯಾನವನ ಹಾಗೂ ಪಾರ್ಕ್​ಗಳ ಅಭಿವೃದ್ಧಿಗೆ ಸರಕಾರ ಕೋಟ್ಯಾಂತರ ಹಣ ವ್ಯಯಿಸುತ್ತಿದೆ. ಬನ್ನೇರುಘಟ್ಟ ಉದ್ಯಾನವನ ಹಾಗೂ ನ್ಯಾಶನಲ್ ಪಾರ್ಕ್ ಬೆಂಗಳೂರು ನಗರಕ್ಕೆ ಶ್ವಾಸಕೋಶದ ರೀತಿ ಇದ್ದಂತೆ ಅಂತ ತಜ್ಞರು ಹಲವು ಬಾರಿ ಪ್ರಸ್ತಾಪ ಮಾಡಿದ್ದಾರೆ. ಹೀಗಿದ್ದಾಗ ಜಿಗಣಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಆಕ್ಸಿಜನ್ ಪ್ರಮಾಣ ಕುಗ್ಗಿಸುವ ಕೆಲಸ ಮಾಡುತ್ತಿವೆ ಅನ್ನೋದು ಪ್ರಮುಖ ಅಂಶ. ಅದಕ್ಕೆ ತಾಜ್ಯ ವಿಲೇವಾರಿ ಆಗದೇ ಇರುವ ಕಾರಣ ಬೆಂಕಿ ಹೊತ್ತಿ ಉರಿಯುವ ಘಟನೆ ನಡೆಯುತ್ತಿವೆ.

ಇದನ್ನೂ ಓದಿ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ಬೆಂಗಳೂರಿನ ಎನ್ಐಎ ಅಧಿಕೃತ ಕಚೇರಿಯಲ್ಲಿ ಕಾರ್ಯಾರಂಭ

ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ 2ನೇ ದಿನಕ್ಕೆ; ರೈತರು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಆಗ್ರಹ

Published On - 4:01 pm, Tue, 29 March 22

ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು