AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ಮಾಡಿದ್ದ ರಸ್ತೆ ಬಂದ್​ ಮಾಡಿರುವ ಆರೋಪ: ಡಿಕೆ ಶಿವಕುಮಾರ್​ಗೆ ಮನವಿ ಸಲ್ಲಿಸಿದ ಲೇಔಟ್​ ಜನರು

ಯಲಹಂಕ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬೆಳ್ಳಳ್ಳಿಯಲ್ಲಿರುವ ವಿಧಾನಸೌಧ ಲೇಔಟ್​ಗೆ ಬಿಬಿಎಂಪಿ ಮಾಡಿದ್ದ ಹೊಸ ರಸ್ತೆಯನ್ನ ಖಾಸಗಿ ವ್ಯಕ್ತಿ ಬಂದ್​ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಹೀಗಾಗಿ ಕೊಳಚೆ ರಸ್ತೆಯಲ್ಲಿ ಓಡಾಡಲು ಆಗಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ವಿವಾದಕ್ಕೆ ಅಂತ್ಯ ಹಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ ಮನವಿ ಸಲ್ಲಿಕೆ ಮಾಡಲಾಗಿದೆ.

ಬಿಬಿಎಂಪಿ ಮಾಡಿದ್ದ ರಸ್ತೆ ಬಂದ್​ ಮಾಡಿರುವ ಆರೋಪ: ಡಿಕೆ ಶಿವಕುಮಾರ್​ಗೆ ಮನವಿ ಸಲ್ಲಿಸಿದ ಲೇಔಟ್​ ಜನರು
ಲೇಔಟ್​ಗೆ ಮಾಡಿದ್ದ ರಸ್ತೆ, ಡಿಸಿಎಂ ಡಿ.ಕೆ.ಶಿವಕುಮಾರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 07, 2024 | 5:47 PM

ಬೆಂಗಳೂರು, ಜನವರಿ 07: ಡಿಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ನಗದರಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ’ ಕಾರ್ಯಕ್ರಮ ಮಾಡಲಾಗುತ್ತಿದೆ. ಸದ್ಯ ಈ ಕಾರ್ಯಕ್ರಮದಲ್ಲಿ ಲೇಔಟ್ (Layout) ಜನರು ತಮ್ಮ ಸಂಕಷ್ಟ ತೊಡಿಕೊಂಡಿದ್ದಾರೆ. ಯಲಹಂಕ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬೆಳ್ಳಳ್ಳಿಯಲ್ಲಿರುವ ವಿಧಾನಸೌಧ ಲೇಔಟ್​ಗೆ ಬಿಬಿಎಂಪಿ ಮಾಡಿದ್ದ ಹೊಸ ರಸ್ತೆಯನ್ನ ಖಾಸಗಿ ವ್ಯಕ್ತಿ ಬಂದ್​ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಹೀಗಾಗಿ ರಸ್ತೆ ವಿವಾದಕ್ಕೆ ಅಂತ್ಯ ಹಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ ಮನವಿ ಸಲ್ಲಿಸಿದ್ದಾರೆ.

ಕೊಳಚೆ ನೀರು ಹರಿಯುವ ರಸ್ತೆಯಲ್ಲೇ ಲೇಔಟ್​ ಜನರು ಓಡಾಟುವಂತಾಗಿದೆ. 2014 ರಲ್ಲಿ ಸೈಟ್​ಗಳಿಗೆ ಬಿಡಿಎ ಅನುಮತಿ ನೀಡಿತ್ತು. ಇದೀಗ ಬಿಡಿಎ ಮ್ಯಾಪ್ ಪ್ರಕಾರ ಇದ್ದ ರಸ್ತೆಯ ಜಾಗ ನಮ್ಮದು ಎಂದು ಖಾಸಗಿ ವ್ಯಕ್ತಿ ರಫಿಕ್ ಹೇಳುತ್ತಿದ್ದಾರೆ. ಜಾಗದ ಮೇಲೆ ಕೋರ್ಟ್ ಸ್ಟೇ ತಂದಿದ್ದೇನೆ, ಬೇಲಿ ಹಾಕುತ್ತೇನೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ, ಸರಳ ವಿಧಾನಕ್ಕೆ ಕಾನೂನು ತಿದ್ದುಪಡಿ: ಡಿಸಿಎಂ ಡಿಕೆ ಶಿವಕುಮಾರ್

ನಮಗೆ ಓಡಾಡಲು ರಸ್ತೆ ಬೇಕು ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಆಂಬುಲೆನ್ಸ್, ಸ್ಕೂಲ್ ವ್ಯಾನ್ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಕೊಳಚೆ ರಸ್ತೆಯಲ್ಲಿ ಓಡಾಡಲು ಆಗಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?

2014 ರಲ್ಲಿ ಬಿಡಿಎ ಅನುಮತಿ ಮೂಲಕ ವಿಧಾನಸೌಧದ 4ನೇ ದರ್ಜೆ ನೌಕರರಿಗೆ ಸೈಟ್ ಹಂಚಿಕೆ ಮಾಡಲಾಗಿದೆ. ಬಳಿಕ 2021 ರಲ್ಲಿ ಲೇ ಔಟ್​ಗೆ ಬಿಬಿಎಂಪಿ ರಸ್ತೆ ನಿರ್ಮಾಣ ಮಾಡಿ ವಿದ್ಯುತ್ ಕಂಬ ಅಳವಡಿಸಿತ್ತು. ಆದರೆ ರಸ್ತೆ ಮಾಡಿದ್ದ ಜಾಗ ನನ್ನದು ಎಂದು ರಫೀಕ್ ಎಂಬ ವ್ಯಕ್ತಿಯಿಂದ ಕಿರಿಕ್​ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಜನಸ್ಪಂದನಾ ಕಾರ್ಯಕ್ರಮ: ಅಂಧ ದಂಪತಿಯ ಮನವಿ ಆಲಿಸಿ ಅವರು ಹೊರಡುವಾಗ ನೋಟುಗಳನ್ನು ನೀಡಿದ ಡಿಕೆ ಶಿವಕುಮಾರ್

ರಸ್ತೆ ಬಂದ್ ಮಾಡಿ ವಿದ್ಯುತ್ ಕಂಬ ತೆರವು ಮಾಡಿರುವ ಆರೋಪ ಕೂಡ ಕೇಳಿಬಂದಿತ್ತು. ಅಧಿಕಾರಿಗಳ ಮೊರೆ ಹೋಗಿದ್ದ ಜನರು ಮತ್ತೆ ರಸ್ತೆ ತೆರೆಸಿದ್ದರು. ಇದೀಗ ಮತ್ತೆ ರಸ್ತೆಗೆ ಮಣ್ಣು ಸುರಿದು ಬಂದ್ ಮಾಡಲಾಗಿದೆ. ಹೈಕೋರ್ಟ್​ನಿಂದ ಸ್ಟೇ ತಂದಿದ್ದೇನೆ. ಬೇಲಿ ಹಾಕುತ್ತೇನೆ ಎನ್ನುತ್ತಿದ್ದಾನೆ. ರಫಿಕ್ ನಡೆಯಿಂದ ಲೇ ಔಟ್ ಜನರು ಕಂಗಾಲಾಗಿದ್ದಾರೆ. ನಮಗೆ ರಸ್ತೆ ಓಪನ್ ಮಾಡಿಸಿ ಎಂದು ಡಿಕೆ.ಶಿವಕುಮಾರ್​ಗೆ ಪತ್ರ ಬರೆಯಲಾಗಿದೆ.

ವರದಿ: ಶಾಂತಮೂರ್ತಿ ಎಂ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:45 pm, Sun, 7 January 24

ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು