AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ: ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್?

ಗುಜರಾತ್ ಮತ್ತು ದೆಹಲಿಯಲ್ಲಿ ಆರ್ಡಿಪಿಆರ್ ಸಿಸ್ಟರ್ ಕಮಿಟಿಗಳು ಇಲ್ಲ. ಸಿಸ್ಟರ್ ಕಮಿಟಿಗಳಿಲ್ಲದ ದೆಹಲಿಯಲ್ಲಿ ನಮ್ಮ ಶಾಸಕರ, ವಿಧಾನ ಪರಿಷತ್ ಸದಸ್ಯರ ನಿಯೋಗ ಏನು ಅಧ್ಯಯನ ಮಾಡಲಿದೆ.

ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ: ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್?
ಅಂತಾರಾಜ್ಯ ಪ್ರವಾಸಕ್ಕೆ ತೆರಳುತ್ತಿರುವವರ ಮಾಹಿತಿ
TV9 Web
| Edited By: |

Updated on:Jul 06, 2022 | 12:19 PM

Share

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಸಂಸ್ಥೆಗಳ ಅಧ್ಯಕ್ಷ, ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನೇತೃತ್ವದ ತಂಡ ನಾಲ್ಕು ದಿನಗಳ ಪ್ರವಾಸಕ್ಕೆ ತೆರಳುತ್ತಿದ್ದು, ಅರ್ಹತೆಯೇ ಇಲ್ಲದೇ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ. ಸಮಿತಿ ಸದಸ್ಯ ಶಾಸಕರ ಹೆಂಡತಿ ಮಕ್ಕಳಿಗೂ ಸರ್ಕಾರದ ದುಡ್ಡಲ್ಲೇ ಮೋಜು ಮಾಡುತ್ತಿದ್ದು, ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್ ಎನ್ನುವಂತ್ತಾಗಿದೆ. ಅಧ್ಯಯನದ ನೆಪದಲ್ಲಿ ಶಾಸಕರು, ಅವರ ಕುಟುಂಬಸ್ಥರು ಹಾಗೂ ನೌಕರರ ಅಂತಾರಾಜ್ಯ ಪ್ರವಾಸ ಮಾಡುತ್ತಿದ್ದು, ನಿನ್ನೆ ಬೆಳಗ್ಗೆ ಗುಜರಾತ್ ಹಾಗೂ ದೆಹಲಿ ರಾಜ್ಯಗಳಿಗೆ ಅಧ್ಯಯನಕ್ಕೆ ರಾಜ್ಯ ಶಾಸಕರ ಎರಡನೇ ತಂಡ ತೆರಳಿದ್ದು, ಅಧ್ಯಯನ ಪ್ರವಾಸದಲ್ಲಿ ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಧ್ಯಯನ ಪ್ರವಾಸ ಭಾಗ್ಯ ಸಿಕ್ಕೆದೆಯಾ ಎನ್ನುವಂತ್ತಾಗಿದೆ.

ಇದನ್ನೂ ಓದಿ; Crude Oil Price: ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಲ್ಲಿ ಬ್ಯಾರೆಲ್​ಗೆ 10 ಯುಎಸ್​ ಡಾಲರ್ ಇಳಿಕೆ ಕಂಡ ತೈಲ

ಶಾಸಕರಾದ ಶರಣು ಸಲಗಾರ್, ಪತ್ನಿ ಸಾವಿತ್ರಿ, ಪುತ್ರರಾದ ಕ್ರಿಷ್ ಹಾಗೂ ಆಶಿಶ್. ಜಿ. ಸೋಮಶೇಖರ್ ರೆಡ್ಡಿ ಅವರ ವಿಶೇಷ ಅಧಿಕಾರಿ ಟಿ. ಶ್ರೀನಿವಾಸ ಮೋಟಕಾರ್, ಶಾಸಕ ಅರುಣ್ ಕುಮಾರ್ ಗುತ್ತೂರ್ ಪತ್ನಿ ಮಂಗಳಗೌರಿ, ಪುತ್ರಿ ಹರ್ಷಿತಾ. ಪರಿಷತ್ ಸದಸ್ಯ ಆರ್. ಶಂಕರ್ ಅವರ ಪತ್ನಿ ಧನಲಕ್ಷ್ಮೀ ಗುಜರಾತ್​ನಿಂದ ಜುಲೈ 7 ರಂದು ದೆಹಲಿಗೆ ಅಧ್ಯಯನಕ್ಕೆ ತೆರಳಲಿದ್ದಾರೆ. ಗುಜರಾತ್ ಮತ್ತು ದೆಹಲಿಯಲ್ಲಿ ಆರ್ಡಿಪಿಆರ್ ಸಿಸ್ಟರ್ ಕಮಿಟಿಗಳು ಇಲ್ಲ. ಸಿಸ್ಟರ್ ಕಮಿಟಿಗಳಿಲ್ಲದ ದೆಹಲಿಯಲ್ಲಿ ನಮ್ಮ ಶಾಸಕರ, ವಿಧಾನ ಪರಿಷತ್ ಸದಸ್ಯರ ನಿಯೋಗ ಏನು ಅಧ್ಯಯನ ಮಾಡಲಿದೆ. ಹೀಗಾಗಿ ಯಾವ ಅಧ್ಯಯನ ಮಾಡಲಿದೆ ರಾಜ್ಯದ ಶಾಸಕರು, ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಎಂಬ ಪ್ರಶ್ನೆ ಉಂಟಾಗಿದೆ. ರಾಜ್ಯ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಸಂಸ್ಥೆಗಳ ಅಧ್ಯಕ್ಷ ಗಾಲಿ ಸೋಮಶೇಖರ್ ರೆಡ್ಡಿ ಪ್ರವಾಸಕ್ಕೆ ಹೊರಟಿದ್ದು, ಸಮಿತಿ ಅಧ್ಯಯನದ ವೇಳೆ ಹೆಂಡತಿ ಮಕ್ಕಳಿಗೆ ಏನು ಕೆಲಸ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: BazBall: ಟೆಸ್ಟ್ ಕ್ರಿಕೆಟ್ ಅನ್ನೇ ಉಡೀಸ್ ಮಾಡ್ತಾರಾ ಬಾಝ್: ಏನಿದು ಬಾಝ್​ಬಾಲ್?

Published On - 12:17 pm, Wed, 6 July 22

Follow Us
TV9 Web
TV9 Web

TV9 Kannada

Read More
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ