AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ: ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್?

ಗುಜರಾತ್ ಮತ್ತು ದೆಹಲಿಯಲ್ಲಿ ಆರ್ಡಿಪಿಆರ್ ಸಿಸ್ಟರ್ ಕಮಿಟಿಗಳು ಇಲ್ಲ. ಸಿಸ್ಟರ್ ಕಮಿಟಿಗಳಿಲ್ಲದ ದೆಹಲಿಯಲ್ಲಿ ನಮ್ಮ ಶಾಸಕರ, ವಿಧಾನ ಪರಿಷತ್ ಸದಸ್ಯರ ನಿಯೋಗ ಏನು ಅಧ್ಯಯನ ಮಾಡಲಿದೆ.

ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ: ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್?
ಅಂತಾರಾಜ್ಯ ಪ್ರವಾಸಕ್ಕೆ ತೆರಳುತ್ತಿರುವವರ ಮಾಹಿತಿ
TV9 Web
| Edited By: |

Updated on:Jul 06, 2022 | 12:19 PM

Share

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಸಂಸ್ಥೆಗಳ ಅಧ್ಯಕ್ಷ, ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನೇತೃತ್ವದ ತಂಡ ನಾಲ್ಕು ದಿನಗಳ ಪ್ರವಾಸಕ್ಕೆ ತೆರಳುತ್ತಿದ್ದು, ಅರ್ಹತೆಯೇ ಇಲ್ಲದೇ ಅಧಿಕಾರಿಗಳಿಗೆ ಅಂತಾರಾಜ್ಯ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ. ಸಮಿತಿ ಸದಸ್ಯ ಶಾಸಕರ ಹೆಂಡತಿ ಮಕ್ಕಳಿಗೂ ಸರ್ಕಾರದ ದುಡ್ಡಲ್ಲೇ ಮೋಜು ಮಾಡುತ್ತಿದ್ದು, ಸರ್ಕಾರದ ದುಡ್ಡಲ್ಲಿ ಶಾಸಕರ ಕುಟುಂಬಸ್ಥರ ಟೂರ್ ಎನ್ನುವಂತ್ತಾಗಿದೆ. ಅಧ್ಯಯನದ ನೆಪದಲ್ಲಿ ಶಾಸಕರು, ಅವರ ಕುಟುಂಬಸ್ಥರು ಹಾಗೂ ನೌಕರರ ಅಂತಾರಾಜ್ಯ ಪ್ರವಾಸ ಮಾಡುತ್ತಿದ್ದು, ನಿನ್ನೆ ಬೆಳಗ್ಗೆ ಗುಜರಾತ್ ಹಾಗೂ ದೆಹಲಿ ರಾಜ್ಯಗಳಿಗೆ ಅಧ್ಯಯನಕ್ಕೆ ರಾಜ್ಯ ಶಾಸಕರ ಎರಡನೇ ತಂಡ ತೆರಳಿದ್ದು, ಅಧ್ಯಯನ ಪ್ರವಾಸದಲ್ಲಿ ಅರ್ಹತೆಯೇ ಇಲ್ಲದ ಅಧಿಕಾರಿಗಳಿಗೆ ಅಧ್ಯಯನ ಪ್ರವಾಸ ಭಾಗ್ಯ ಸಿಕ್ಕೆದೆಯಾ ಎನ್ನುವಂತ್ತಾಗಿದೆ.

ಇದನ್ನೂ ಓದಿ; Crude Oil Price: ಜಾಗತಿಕ ಆರ್ಥಿಕ ಹಿಂಜರಿತದ ಆತಂಕದಲ್ಲಿ ಬ್ಯಾರೆಲ್​ಗೆ 10 ಯುಎಸ್​ ಡಾಲರ್ ಇಳಿಕೆ ಕಂಡ ತೈಲ

ಶಾಸಕರಾದ ಶರಣು ಸಲಗಾರ್, ಪತ್ನಿ ಸಾವಿತ್ರಿ, ಪುತ್ರರಾದ ಕ್ರಿಷ್ ಹಾಗೂ ಆಶಿಶ್. ಜಿ. ಸೋಮಶೇಖರ್ ರೆಡ್ಡಿ ಅವರ ವಿಶೇಷ ಅಧಿಕಾರಿ ಟಿ. ಶ್ರೀನಿವಾಸ ಮೋಟಕಾರ್, ಶಾಸಕ ಅರುಣ್ ಕುಮಾರ್ ಗುತ್ತೂರ್ ಪತ್ನಿ ಮಂಗಳಗೌರಿ, ಪುತ್ರಿ ಹರ್ಷಿತಾ. ಪರಿಷತ್ ಸದಸ್ಯ ಆರ್. ಶಂಕರ್ ಅವರ ಪತ್ನಿ ಧನಲಕ್ಷ್ಮೀ ಗುಜರಾತ್​ನಿಂದ ಜುಲೈ 7 ರಂದು ದೆಹಲಿಗೆ ಅಧ್ಯಯನಕ್ಕೆ ತೆರಳಲಿದ್ದಾರೆ. ಗುಜರಾತ್ ಮತ್ತು ದೆಹಲಿಯಲ್ಲಿ ಆರ್ಡಿಪಿಆರ್ ಸಿಸ್ಟರ್ ಕಮಿಟಿಗಳು ಇಲ್ಲ. ಸಿಸ್ಟರ್ ಕಮಿಟಿಗಳಿಲ್ಲದ ದೆಹಲಿಯಲ್ಲಿ ನಮ್ಮ ಶಾಸಕರ, ವಿಧಾನ ಪರಿಷತ್ ಸದಸ್ಯರ ನಿಯೋಗ ಏನು ಅಧ್ಯಯನ ಮಾಡಲಿದೆ. ಹೀಗಾಗಿ ಯಾವ ಅಧ್ಯಯನ ಮಾಡಲಿದೆ ರಾಜ್ಯದ ಶಾಸಕರು, ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಎಂಬ ಪ್ರಶ್ನೆ ಉಂಟಾಗಿದೆ. ರಾಜ್ಯ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಸಂಸ್ಥೆಗಳ ಅಧ್ಯಕ್ಷ ಗಾಲಿ ಸೋಮಶೇಖರ್ ರೆಡ್ಡಿ ಪ್ರವಾಸಕ್ಕೆ ಹೊರಟಿದ್ದು, ಸಮಿತಿ ಅಧ್ಯಯನದ ವೇಳೆ ಹೆಂಡತಿ ಮಕ್ಕಳಿಗೆ ಏನು ಕೆಲಸ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: BazBall: ಟೆಸ್ಟ್ ಕ್ರಿಕೆಟ್ ಅನ್ನೇ ಉಡೀಸ್ ಮಾಡ್ತಾರಾ ಬಾಝ್: ಏನಿದು ಬಾಝ್​ಬಾಲ್?

Published On - 12:17 pm, Wed, 6 July 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್