AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ, ಇಬ್ಬರ ಬಂಧನ: ಮಾದರಿಯಾಗಿ ಬದುಕು ಎಂದ ಪೊಲೀಸರು, ಅದು ಬಿಟ್ಟು ಗೆಳಯನನ್ನೂ ಕಳ್ಳನನ್ನಾಗಿಸಿದ ಖದೀಮ!

ಜೈಲ್​ ರಿಟರ್ನ್ಡ್​​ ಲೋಕೇಶ್ ಈ ಹಿಂದೆ ಜೈಲಿಂದ ಹೊರ ಬಂದವನೆ ಮತ್ತದೇ ಕುಕೃತ್ಯದಲ್ಲಿ ತೊಡಗಿದ್ದ. ಜೊತೆಗೆ ಗೆಳೆಯ ಹೇಮಂತನನ್ನೂ ಸೇರಿಸಿಕೊಂಡಿದ್ದಾನೆ ಲೋಕೇಶ. ಬೈಕ್ ನಲ್ಲಿ ಬಂದು ಮತ್ತದೇ ಸಾಲು ಸಾಲು ಕುಕೃತ್ಯ ನಡೆಸುವುದನ್ನೇ ರೂಢೀ ಮಾಡಿಕೊಂಡಿದ್ದಾನೆ. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಬೈಕ್ ನಂಬರ್ ನೋಡಿ, ಆರೋಪಿಗಳನ್ನು ಇದೀಗ ಲಾಕ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ, ಇಬ್ಬರ ಬಂಧನ: ಮಾದರಿಯಾಗಿ ಬದುಕು ಎಂದ ಪೊಲೀಸರು, ಅದು ಬಿಟ್ಟು ಗೆಳಯನನ್ನೂ ಕಳ್ಳನನ್ನಾಗಿಸಿದ ಖದೀಮ!
ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ: ಬಂಧಿತ ಲೋಕೇಶ್ ಮತ್ತು ಹೇಮಂತ್
ಜಗದೀಶ ಬಿ.
| Edited By: ಸಾಧು ಶ್ರೀನಾಥ್​|

Updated on: Aug 25, 2023 | 12:51 PM

Share

ಬೆಂಗಳೂರಿನಲ್ಲಿ (Bangalore) ಸಿಲಿಂಡರ್ ಕಳ್ಳತನ (cylinder thief) ಮಾಡುತ್ತಿದ್ದ ಲೋಕೇಶ್ ಮತ್ತು ಹೇಮಂತ್ ಎಂಬಿಬ್ಬರನ್ನು ಗೊವಿಂದರಾಜನಗರ ಪೊಲೀಸರು (Govindaraja nagar police) ಅರೆಸ್ಟ್ ಮಾಡಿದ್ದಾರೆ. ಮನೆಗಳ ಹೊರಭಾಗದಲ್ಲಿ ಅಳವಡಿಸಿದ್ದ ಸಿಲಿಂಡರ್ ಗಳನ್ನ ಈ ಇಬ್ಬರೂ ಕದಿಯುತ್ತಿದ್ದರು. ಬೆಂಗಳೂರಿನ ಗೊವಿಂದರಾಜನಗರ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆ ಆರೋಪಿಗಳು ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳಿಂದ 20 ಸಿಲಿಂಡರ್​ಗಳು ವಶಪಡಿಸಿಕೊಂಡಿದ್ದಾರೆ. ಮೊದಲು ಬೈಕ್​ನಲ್ಲಿ ಬಂದು, ಏರಿಯಾಗಳಲ್ಲಿ ಆರೋಪಿಗಳು ಓಡಾಡ್ತಿದ್ದರು. ಕೊನೆಗೆ, ಬೈಕ್ ನಂಬರ್ ಆಧರಿಸಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು ಬಂಧಿತರಲ್ಲಿ ಒಬ್ಬನಾದ ಲೋಕೇಶ್ ಈ ಹಿಂದೆ ಕಳ್ಳತನ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಮುಂದೆ, ಸ್ನೇಹಿತ ಹೇಮಂತನನ್ನೂ ಜತೆ ಸೇರಿಕೊಂಡು ಮತ್ತೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.

ಯಾರೂ ಇಲ್ಲದ ವೇಳೆ ಆರೋಪಿಗಳು ಸಿಲಿಂಡರ್ ಗಳ ಕದ್ದು ಎಸ್ಕೇಪ್ ಆಗುತಿದ್ದರು. ಈ ಬಗ್ಗೆ ಸಾಲು ಸಾಲಾಗಿ ದೂರುಗಳು ದಾಖಲಾಗಿದ್ದವು. ದೂರುಗಳು ಬಂದ ಹಿನ್ನೆಲೆ ಪೊಲೀಸರು ತನಿಖೆಗೆ ಇಳಿದಾಗ ಕಳ್ಳರ ಸಾಲು ಸಾಲು ಕೃತ್ಯ ಪತ್ತೆಯಾಗಿದೆ. ಸದ್ಯ ಇಬ್ಬರು ಆರೋಪಿಗಳ ಬಂಧಿಸಿ ೨೦ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಗೊವಿಂದರಾಜನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಮಿಸ್​ ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

ಈ ಹಿಂದೆ, ಏಕಾಂಗಿಯಾಗಿ ಕಳ್ಳತನ ನಡೆಸುತ್ತಿದ್ದ ಲೋಕೇಶನನ್ನು ಇದೇ ರೀತಿ ಸಿಲಿಂಡರ್ ಗಳ ಕಳ್ಳತನ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಈ ವೇಳೆ ಇದೆಲ್ಲ ಬಿಟ್ಟು ಬದಲಾಗು ಎಂದು ಲೋಕೇಶನಿಗೆ ಪೊಲೀಸರು ಬುದ್ಧಿವಾದ ಹೇಳಿದ್ದರು. ಇತರರಿಗೆ ಮಾದರಿಯಾಗುವಂತೆ ಬದುಕು ಎಂದು ಪೊಲೀಸರು ಕಿವಿಮಾತು ಹೇಳಿದ್ದರು. ಆದರೆ ಸಿಲಿಂಡರ್ ಕದಿಯೋದೆ ಕಾಯಕ ಮಾಡಿಕೊಂಡಿದ್ದ ಲೋಕೇಶ ತಾನು ಬದಲಾಗೊದು ಬಿಟ್ಟು ಗೆಳಯನೊಬ್ಬನನ್ನೂ ( ಹೇಮಂತ್ ) ಕಳ್ಳನಾಗಿ ಬದಲಾಯಿಸಿದ್ದಾನೆ.

ಈ ಹಿಂದೆ ಜೈಲಿನಿಂದ ಹೊರ ಬಂದವ ಮತ್ತದೇ ಕುಕೃತ್ಯದಲ್ಲಿ ತೊಡಗಿದ್ದ. ಜೊತೆಗೆ ಗೆಳೆಯ ಹೇಮಂತನನ್ನೂ ಸೇರಿಸಿಕೊಂಡಿದ್ದಾನೆ ಲೋಕೇಶ. ಬೈಕ್ ನಲ್ಲಿ ಬಂದು ಮತ್ತದೇ ಸಾಲು ಸಾಲು ಕುಕೃತ್ಯ ನಡೆಸುವುದನ್ನೇ ರೂಢೀ ಮಾಡಿಕೊಂಡಿದ್ದಾನೆ. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಬೈಕ್ ನಂಬರ್ ನೋಡಿ, ಆರೋಪಿಗಳನ್ನು ಇದೀಗ ಲಾಕ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ