AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ, ಇಬ್ಬರ ಬಂಧನ: ಮಾದರಿಯಾಗಿ ಬದುಕು ಎಂದ ಪೊಲೀಸರು, ಅದು ಬಿಟ್ಟು ಗೆಳಯನನ್ನೂ ಕಳ್ಳನನ್ನಾಗಿಸಿದ ಖದೀಮ!

ಜೈಲ್​ ರಿಟರ್ನ್ಡ್​​ ಲೋಕೇಶ್ ಈ ಹಿಂದೆ ಜೈಲಿಂದ ಹೊರ ಬಂದವನೆ ಮತ್ತದೇ ಕುಕೃತ್ಯದಲ್ಲಿ ತೊಡಗಿದ್ದ. ಜೊತೆಗೆ ಗೆಳೆಯ ಹೇಮಂತನನ್ನೂ ಸೇರಿಸಿಕೊಂಡಿದ್ದಾನೆ ಲೋಕೇಶ. ಬೈಕ್ ನಲ್ಲಿ ಬಂದು ಮತ್ತದೇ ಸಾಲು ಸಾಲು ಕುಕೃತ್ಯ ನಡೆಸುವುದನ್ನೇ ರೂಢೀ ಮಾಡಿಕೊಂಡಿದ್ದಾನೆ. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಬೈಕ್ ನಂಬರ್ ನೋಡಿ, ಆರೋಪಿಗಳನ್ನು ಇದೀಗ ಲಾಕ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ, ಇಬ್ಬರ ಬಂಧನ: ಮಾದರಿಯಾಗಿ ಬದುಕು ಎಂದ ಪೊಲೀಸರು, ಅದು ಬಿಟ್ಟು ಗೆಳಯನನ್ನೂ ಕಳ್ಳನನ್ನಾಗಿಸಿದ ಖದೀಮ!
ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ: ಬಂಧಿತ ಲೋಕೇಶ್ ಮತ್ತು ಹೇಮಂತ್
Jagadisha B
| Updated By: ಸಾಧು ಶ್ರೀನಾಥ್​|

Updated on: Aug 25, 2023 | 12:51 PM

Share

ಬೆಂಗಳೂರಿನಲ್ಲಿ (Bangalore) ಸಿಲಿಂಡರ್ ಕಳ್ಳತನ (cylinder thief) ಮಾಡುತ್ತಿದ್ದ ಲೋಕೇಶ್ ಮತ್ತು ಹೇಮಂತ್ ಎಂಬಿಬ್ಬರನ್ನು ಗೊವಿಂದರಾಜನಗರ ಪೊಲೀಸರು (Govindaraja nagar police) ಅರೆಸ್ಟ್ ಮಾಡಿದ್ದಾರೆ. ಮನೆಗಳ ಹೊರಭಾಗದಲ್ಲಿ ಅಳವಡಿಸಿದ್ದ ಸಿಲಿಂಡರ್ ಗಳನ್ನ ಈ ಇಬ್ಬರೂ ಕದಿಯುತ್ತಿದ್ದರು. ಬೆಂಗಳೂರಿನ ಗೊವಿಂದರಾಜನಗರ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆ ಆರೋಪಿಗಳು ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳಿಂದ 20 ಸಿಲಿಂಡರ್​ಗಳು ವಶಪಡಿಸಿಕೊಂಡಿದ್ದಾರೆ. ಮೊದಲು ಬೈಕ್​ನಲ್ಲಿ ಬಂದು, ಏರಿಯಾಗಳಲ್ಲಿ ಆರೋಪಿಗಳು ಓಡಾಡ್ತಿದ್ದರು. ಕೊನೆಗೆ, ಬೈಕ್ ನಂಬರ್ ಆಧರಿಸಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು ಬಂಧಿತರಲ್ಲಿ ಒಬ್ಬನಾದ ಲೋಕೇಶ್ ಈ ಹಿಂದೆ ಕಳ್ಳತನ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಮುಂದೆ, ಸ್ನೇಹಿತ ಹೇಮಂತನನ್ನೂ ಜತೆ ಸೇರಿಕೊಂಡು ಮತ್ತೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.

ಯಾರೂ ಇಲ್ಲದ ವೇಳೆ ಆರೋಪಿಗಳು ಸಿಲಿಂಡರ್ ಗಳ ಕದ್ದು ಎಸ್ಕೇಪ್ ಆಗುತಿದ್ದರು. ಈ ಬಗ್ಗೆ ಸಾಲು ಸಾಲಾಗಿ ದೂರುಗಳು ದಾಖಲಾಗಿದ್ದವು. ದೂರುಗಳು ಬಂದ ಹಿನ್ನೆಲೆ ಪೊಲೀಸರು ತನಿಖೆಗೆ ಇಳಿದಾಗ ಕಳ್ಳರ ಸಾಲು ಸಾಲು ಕೃತ್ಯ ಪತ್ತೆಯಾಗಿದೆ. ಸದ್ಯ ಇಬ್ಬರು ಆರೋಪಿಗಳ ಬಂಧಿಸಿ ೨೦ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಗೊವಿಂದರಾಜನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಮಿಸ್​ ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

ಈ ಹಿಂದೆ, ಏಕಾಂಗಿಯಾಗಿ ಕಳ್ಳತನ ನಡೆಸುತ್ತಿದ್ದ ಲೋಕೇಶನನ್ನು ಇದೇ ರೀತಿ ಸಿಲಿಂಡರ್ ಗಳ ಕಳ್ಳತನ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಈ ವೇಳೆ ಇದೆಲ್ಲ ಬಿಟ್ಟು ಬದಲಾಗು ಎಂದು ಲೋಕೇಶನಿಗೆ ಪೊಲೀಸರು ಬುದ್ಧಿವಾದ ಹೇಳಿದ್ದರು. ಇತರರಿಗೆ ಮಾದರಿಯಾಗುವಂತೆ ಬದುಕು ಎಂದು ಪೊಲೀಸರು ಕಿವಿಮಾತು ಹೇಳಿದ್ದರು. ಆದರೆ ಸಿಲಿಂಡರ್ ಕದಿಯೋದೆ ಕಾಯಕ ಮಾಡಿಕೊಂಡಿದ್ದ ಲೋಕೇಶ ತಾನು ಬದಲಾಗೊದು ಬಿಟ್ಟು ಗೆಳಯನೊಬ್ಬನನ್ನೂ ( ಹೇಮಂತ್ ) ಕಳ್ಳನಾಗಿ ಬದಲಾಯಿಸಿದ್ದಾನೆ.

ಈ ಹಿಂದೆ ಜೈಲಿನಿಂದ ಹೊರ ಬಂದವ ಮತ್ತದೇ ಕುಕೃತ್ಯದಲ್ಲಿ ತೊಡಗಿದ್ದ. ಜೊತೆಗೆ ಗೆಳೆಯ ಹೇಮಂತನನ್ನೂ ಸೇರಿಸಿಕೊಂಡಿದ್ದಾನೆ ಲೋಕೇಶ. ಬೈಕ್ ನಲ್ಲಿ ಬಂದು ಮತ್ತದೇ ಸಾಲು ಸಾಲು ಕುಕೃತ್ಯ ನಡೆಸುವುದನ್ನೇ ರೂಢೀ ಮಾಡಿಕೊಂಡಿದ್ದಾನೆ. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಬೈಕ್ ನಂಬರ್ ನೋಡಿ, ಆರೋಪಿಗಳನ್ನು ಇದೀಗ ಲಾಕ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?