AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಹೃದಯ ಭಾಗಬಿಟ್ಟು ಗಡಿ ಭಾಗದಲ್ಲೇ ಬಾಂಬ್ ಇಟ್ಟಿದ್ಯಾಕೆ? ಕೆಫೆ ಸ್ಫೋಟದ ಸಂಚಿನ ರಹಸ್ಯ ಬಯಲು!

ಬೆಂಗಳೂರು ನಗರದ ರಾಮೇಶ್ವರಂ ಕೆಫೆಯಲ್ಲಿ ಶಂಕಿತ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟ ಮಾಡಿದ್ದನು. ಆರೋಪಿಯು ಪಕ್ಕಾ ಪ್ಲಾನ್ ಮಾಡಿಕೊಂಡೇ ಈ ಸ್ಫೋಟ ಮಾಡಿದ್ದಾನೆ. ಹಾಗಾದರೆ ಶಂಕಿತ ವ್ಯಕ್ತಿ ನಗರ ಬಿಟ್ಟು, ಬೆಂಗಳೂರಿನ ಹೃದಯ ಭಾಗಬಿಟ್ಟು, ಗಡಿ ಭಾಗದಲ್ಲೇ ಪ್ಲಾನ್ ಮಾಡಿದ್ದು ಯಾಕೆ? ಬಾಂಬ್ ಇಟ್ಟು ಒಂದೂವರೆ ಗಂಟೆ ಬಳಿಕ ಬಾಂಬ್ ಸ್ಪೋಟ ಆಗುವಂತೆ ಟೈಮ್ ಫಿಕ್ಸ್ ಮಾಡಿದ್ದು ಯಾಕೆ? ಇಲ್ಲಿದೆ ಮಾಹಿತಿ.

ಬೆಂಗಳೂರಿನ ಹೃದಯ ಭಾಗಬಿಟ್ಟು ಗಡಿ ಭಾಗದಲ್ಲೇ ಬಾಂಬ್ ಇಟ್ಟಿದ್ಯಾಕೆ? ಕೆಫೆ ಸ್ಫೋಟದ ಸಂಚಿನ ರಹಸ್ಯ ಬಯಲು!
ಬೆಂಗಳೂರಿನ ಹೃದಯ ಭಾಗಬಿಟ್ಟು ಗಡಿ ಭಾಗದಲ್ಲೇ ಬಾಂಬ್ ಇಟ್ಟಿದ್ಯಾಕೆ? ಕೆಫೆ ಸ್ಫೋಟದ ಸಂಚಿನ ರಹಸ್ಯ ಬಯಲು!
ಜಗದೀಶ ಬಿ.
| Edited By: Rakesh Nayak Manchi|

Updated on: Mar 03, 2024 | 2:35 PM

Share

ಬೆಂಗಳೂರು, ಮಾ.3: ನಗರದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶಂಕಿತ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟ (Bomb Blast) ಮಾಡಿದ್ದನು. ಆರೋಪಿಯು ಪಕ್ಕಾ ಪ್ಲಾನ್ ಮಾಡಿಕೊಂಡೇ ಈ ಸ್ಫೋಟ ಮಾಡಿದ್ದಾನೆ. ಹಾಗಾದರೆ ಶಂಕಿತ ವ್ಯಕ್ತಿ ನಗರ ಬಿಟ್ಟು, ಬೆಂಗಳೂರಿನ (Bengaluru) ಹೃದಯ ಭಾಗಬಿಟ್ಟು, ಗಡಿ ಭಾಗದಲ್ಲೇ ಪ್ಲಾನ್ ಮಾಡಿದ್ದು ಯಾಕೆ? ಬಾಂಬ್ ಇಟ್ಟು ಒಂದೂವರೆ ಗಂಟೆ ಬಳಿಕ ಬಾಂಬ್ ಸ್ಪೋಟ ಆಗುವಂತೆ ಟೈಮ್ ಫಿಕ್ಸ್ ಮಾಡಿದ್ದು ಯಾಕೆ? ಒಂದೂವರೆ ಗಂಟೆಯಲ್ಲಿ ಆತನ ಫ್ಲಾನ್ ಏನಾಗಿತ್ತು ಗೊತ್ತಾ? ಇಲ್ಲಿದೆ ಮಾಹಿತಿ.

ರಾಮೇಶ್ವರಂ ಕೆಫೆಯಿಂದ ಹೊಸೂರು ಬಾರ್ಡರ್​ಗೆ ಹೋಗಲು 59 ನಿಮಿಷಗಳು ಬೇಕು. ಒಂದು ವೇಳೆ ಟ್ರಾಫಿಕ್ ಇದ್ದರೂ 1 ಗಂಟೆ 15 ನಿಮಿಷದಲ್ಲಿ ರೀಚ್ ಆಗಬಹುದು. ಹೀಗಾಗಿ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಬಿಟ್ಟು ಹೊರಹೋಗಲು ಶಂಕಿತ ಬಾಂಬರ್ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅದರಂತೆ ಒಂದೂವರೆ ಗಂಟೆ ಟೈಂ ಇಟ್ಟುಕೊಂಡು ಟೈಮರ್ ಫಿಕ್ಸ್ ಮಾಡಿರುವ ಸಾಧ್ಯತೆ ಇದೆ.

ಬ್ಲಾಸ್ಟ್ ಆದ ಬಳಿಕ ಪೊಲೀಸರ ಸ್ಥಳಕ್ಕೆ ಬರಲು ಕನಿಷ್ಟ 10 ನಿಮಿಷಗಳು ಬೇಕು. ಬಳಿಕ ಎಲ್ಲಾ ಕಡೆ ಅಲರ್ಟ್ ಮಾಡಲು ಅರ್ಧ ಗಂಟೆ ತೆಗೆದುಕೊಳ್ಳುತ್ತಾರೆ. ಪೊಲೀಸರು ನಗರದಾದ್ಯಂತ ಅಲರ್ಟ್ ಆಗುವಷ್ಟರಲ್ಲಿ ಗಡಿ ದಾಟುವ ಪ್ಲಾನ್ ಮಾಡಿರಬಹುದು. ಒಂದು ವೇಳೆ ಸಿಟಿ ಒಳಗೆ ಬ್ಲಾಸ್ಟ್ ಆಗಿದ್ದರೆ ಅಲ್ಲಿಂದ ಪರಾರಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಕಡೆ ಅಲರ್ಟ್ ಆಗಿ ಬಾರ್ಡರ್​ನಲ್ಲೂ ನಾಕಾಬಂದಿ ಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಗಡಿ ದಾಟಿದ ಬಳಿಕ ನಾಕಾಬಂದಿ ಹಾಕಿದರೂ ನಾನು ಸಿಗಲ್ಲ ಅನ್ನೋ ಪ್ಲಾನ್ ಆಗಿರಬಹುದು.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿ ಪ್ಲ್ಯಾನ್: FSL​ ​ವರದಿ ಬಹಿರಂಗ

ಶಂಕಿತ ಬಾಂಬರ್ ಪ್ರತಿ ಹೆಜ್ಜೆ ಹೆಜ್ಜೆಗೂ ಮಾಸ್ಟರ್ ಪ್ಲಾನ್ ಮಾಡಿರುವಂತಿದೆ. ಸದ್ಯ ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಬಾರ್ಡರ್​ವರೆಗಿನ ಎಲ್ಲಾ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಶಂಕಿತ ಬಾಂಬರ್ ಕೆಫೆಯಿಂದ ವೈಟ್ ಫೀಲ್ಡ್​ಗೆ ಹೋಗಿರುವ ಬಗ್ಗೆ ಮಾಹಿತಿ ಇದೆ. ಬಳಿಕ ಅಲ್ಲಿಂದ ಚೆನ್ನಸಂದ್ರ ಮೂಲಕ ಸರ್ಜಾಪುರ, ಅತ್ತಿಬೆಲೆ ಮೂಲಕ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಎಲ್ಲಾ ಮಾರ್ಗಗಳಲ್ಲಿನ ಸಿಸಿಟಿವಿ ಕ್ಯಾಮರಾಗಳ ಪತ್ತೆಗೆ ಮುಂದಾದ ಪೊಲೀಸರು, ತಮಿಳುನಾಡು, ಕೇರಳಾ ಪೊಲೀಸರ ಜೊತೆಯೂ ಸಂಪರ್ಕದಲ್ಲಿದ್ದಾರೆ.

ಕೆಫೆಗೆ ತಮಿಳುನಾಡು ಬಾಂಬ್ ನಿಷ್ಕ್ರಿಯ ದಳ ಭೇಟಿ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳಕ್ಕೆ ತಮಿಳುನಾಡು ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿದೆ. ಹಿಂದಿನ ಹಲವು ಬಾಂಬ್​ ಸ್ಫೋಟ, ಈಗಿನ ಸ್ಫೋಟದ ಸಾಮ್ಯತೆ ಹಿನ್ನೆಲೆ ಸ್ಫೋಟದ ತೀವ್ರತೆ ಕುರಿತು ಪರಿಶೀಲನೆ ನಡೆಸಿದೆ. ತಮಿಳುನಾಡಿನ ಕೊಯಮತ್ತೂರು ಕಾರ್​​ ಬಾಂಬ್ ಸ್ಫೋಟ ಪ್ರಕರಣವನ್ನು ಇದೇ ತಮಿಳುನಾಡು ಬಾಂಬ್ ನಿಷ್ಕ್ರಿಯ ದಳ ಬೇಧಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!